ಲೈಫ್ ಸ್ಟೈಲ್
ಇದು ನಮ್ಮೂರು ‘ಅಥರ್ಗಾ’ ಹೋಳಿ ಹಬ್ಬದ ಸ್ಪೇಷಲ್…!
‘ಹೋಳಿ ಹೋಳಿ ಹೋಳಿ ಹೋಳಿ ಏಳೇಳು ಬಣ್ಣದ ರಂಗು ರಂಗೋಲಿ’ ಎಂದು ಕವಿ ಹೋಳಿ ಹಬ್ಬವನ್ನು ವಿಭಿನ್ನರೀತಿಯಲ್ಲಿ ವರ್ಣಿಸುತ್ತಾನೆ. ಹೋಳಿ ಹಬ್ಬ ರಾಷ್ಟ್ರೀಯ ಹಬ್ಬವಾಗಿದೆ. ಹೋಳಿ ಹಬ್ಬವು ದೇಶದ ವಿಧಿದ ಭಾಗಗಳಲ್ಲಿ ವಿಭೀನ್ನವಾಗಿ ಆಚರಣೆ ಮಾಡುತ್ತಾರೆ. ಇದು ಕೇವಲ ಪುರುಷರಿಗಾಗಿ ಇರುವ ಏಕೈಕ ಹಬ್ಬವೆಂದು ಹೇಳಬಹುದಾಗಿದೆ.
ನಮ್ಮೂರು ಅಥರ್ಗಾ. ಇದು ಇರೋದ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನಲ್ಲಿ. ಇದು ನೋಡದಿಕ್ಕೆ ಪುಟ್ಟು ಗ್ರಾಮವಾದರೂ ಬಹು ಹೆಸರುವಾಸಿ. ಅದೇ ರೀತಿ ಗಂಡ ಹುಡಗರ ಎಂದೇ ಹೆಸರುವಾಸಿಯಾಗಿರುವ ಹಬ್ಬ ಹೋಳಿ. ಈ ಹುಣ್ಣಿಮೆಯು ಈ ಊರಲ್ಲಿ ವಿಶಿಷ್ಠವಾಗಿ ಆಚರಿಸುತ್ತಾರೆ. ಅದೇನು ಹೇಗೆ ಅನ್ನುವ ಕುತೂಲಕ್ಕೆ ಇಲ್ಲದೇ ಉತ್ತರ…!
ಈ ಹಬ್ಬದ ವಿಶೇಷತೆಗಳು ಕೇಳಿದರೆ ಹುಡುಗರು ಬಾಯಿ ಬಡಕೊಳ್ಳುತ್ತಾ, ಹಲಗೆ ಬಾರಿಸುತ್ತಾರೆ. ಇದರ ಜೊತೆಗೆ ಕಾಮಣ್ಣನ ಮೂರ್ತಿ ಮಾಡುತ್ತಾರೆ. ಕಾಮಣನ ಮೇಲೆ ಗ್ರಾಮಿಣ ಪ್ರದೇಶದ ಜನರು ಸಣ್ಣ ಪದಗಳನ್ನು ಕಟ್ಟುತ್ತಾರೆ. ಕಾಮಣ್ಣನನ್ನು ಸುಡಲು ಓಣಿಗಳಲ್ಲಿರುವ ಮನೆಗಳಿಂದ ಕಟ್ಟಿಗೆ, ಕುಳ್ಳುಗಳನ್ನು ಕದಿಯುತ್ತಾರೆ ನಂತರ ಇವುಗಳನ್ನು ಹೋಳಿ ಹಬ್ಬದ ದಿನ ಓಣಿ ಮಧ್ಯದಲ್ಲಿ ಅಥವಾ ಊರ ಅಗಸಿ ಬಾಗಿಲ ಬಳಿ ಗುಡ್ಡೆ ಹಾಕಿ ಬೆಂಕಿ ಹಚ್ಚುತ್ತಾರೆ. ಇದು ಒಂದು ರೀತಿಯಾದರೆ ಉತ್ತರ ಕರ್ನಾಟಕದ ವಿಜಯಪುರ ಜಿಲ್ಲೆಯ ಅಥರ್ಗಾ ಗ್ರಾಮದಲ್ಲಿ ಈ ಹಬ್ಬವನ್ನು ಇನ್ನೂ ವಿಭಿನ್ನವಾಗಿ ಆಚರಿಸುತ್ತಾರೆ.
ಗ್ರಾಮದ ಕುಂಬಾರನ ಮನೆಯಲ್ಲಿ ಕಾಮಣ್ಣನ ಮುಖ ತಾಯಾರಾಗುತ್ತದೆ. ಓಣಿಯಲ್ಲಿ ಹುಡುಗರು ಶಿವರಾತ್ರಿ ಅಮವಾಸ್ಯೆಯ ಮಾರನೆ ದಿನದಿಂದ ಹಲಗೆ ಬಾರಿಸಲು ಶುರುಮಾಡುತ್ತಾರೆ. ಹುಡುಗರು ಮನೆ ಮನೆಗೂ ಹೂಗಿ ದೇಣಿಗೆ ಸಂಗ್ರಹಿಸುತ್ತಾರೆ. ಊರಿನ ಓಣಿಗಳಲ್ಲಿ ಕಾಮಣ್ಣನನ್ನು ಕುಡಿಸುವ ಕಟ್ಟೆಗಳನ್ನು ರೆಡಿ ಮಾಡುತ್ತಾರೆ. ಆ ಕಟ್ಟೆಗಳನ್ನು ತೊಳೆದು ಸುಣ್ಣ-ಬಣ್ಣ ಹಚ್ಚಿ, ಕಟ್ಟೆಗಳ ಬಳಿ ಪೇಂಡಾಲ ಹಾಕಲಾಗುತ್ತದೆ.
ಕಲರ್ ಪೇಪರ್ಗಳಿಂದ ಅಲಂಕಾರ ಮಾಡಿ, ಮೈಕ್ ಹಚ್ಚುತ್ತಾರೆ. ಇದಿಷ್ಟು ಕಾಮಣ್ಣನನ್ನು ಕುಡಿಸಲು ನಡೆಯುವ ಸಿದ್ಧತೆಗಳದರೆ, ಹುಣ್ಣಿಮೆ ನಾಳೆ ಅಂದರೆ ಹಿಂದಿನ ದಿನ ರಾತ್ರಿಯೇ ಸಾಂಪ್ರದಾಯಿಕವಾಗಿ ಗೋಧಿಹುಲ್ಲನ್ನು ಸಂಗ್ರಹಿಸುತ್ತಾರೆ. ಈತ್ತ ಹಿರಿಯರು ಗೋಧಿ ಹುಲ್ಲನ್ನು ಪ್ಯಾಂಟ್ ಶರ್ಟ್ನಲ್ಲಿ ತುಂಬಿ ಮನುಷ್ಯನ ರೂಪದಲ್ಲಿ ಸಿದ್ಧ ಪಡೆಸುತ್ತಾರೆ.
ಗುಂಪಿನ ಇತರ ಹುಡುಗರು ಸೇರಿ ಕುಂಬಾರನ ಮನೆಗೆ ಹೋಗಿ ಕಾಮಣ್ಣನ ಮುಖವನ್ನು ಮೆರವಣಿಗೆ ಮೂಲಕ ತರುತ್ತಾರೆ. ನಂತರ ಸಂಪೂರ್ಣವಾಗಿ ಮನುಷ್ಯನ ರೂಪ ಸಿದ್ಧಗೊಂಡ ಮೇಲೆ ಕಾಮಣ್ಣನ ಮುಖ ಇಟ್ಟು ಮತ್ತೋಮ್ಮೆ ಊರಲ್ಲಿ ಮೆರವಣಿಗೆ ತೆಗೆದುಕೊಂಡು ಹೋಗುತ್ತಾರೆ.
ಇದು ಊರಿನ ಹಿರಿಯ ಕಾಮಣ್ಣ. ಪ್ರತಿಯೊಂದು ಓಣಿಯಲ್ಲಿ ವಿವಿಧ ವೇಷದಲ್ಲಿ ಕಾಮಣ್ಣನನ್ನು ಪೂಜಿಸುತ್ತಾರೆ. ಈ ಮೆರವಣಿಗೆ ಮುಗಿಯಲು ಸುಮಾರು ಮಧ್ಯರಾತ್ರಿಯೇ ಆಗುತ್ತದೆ. ಆದರೂ ಪ್ರತಿ ಓಣಿ ಜನರು ಈ ಮೆರವಣಿಗೆ ನೋಡಲು ಕಾದು ಕುಳಿತಿರುತ್ತಾರೆ. ನಂತರ ಒಂದು ಕಟ್ಟೆಯ ಮೇಲೆ ತಂದು ಪ್ರತಿಷ್ಠಾನ ಮಾಡುತ್ತಾರೆ. ಹುಣ್ಣಿಮೆಯ ದಿನ ಬೆಳ್ಳಗ್ಗೆ ಓಣಿಯಲ್ಲಿರುವ ಮನೆಗಳಿಂದ ಹೋಳಿಗೆ ನೈವಿಧ್ಯ ಮಾಡುತ್ತಾರೆ. ಚಿಕ್ಕ ಮಕ್ಕಳ ಕೊರಳಲ್ಲಿ ಹಾಗೂ ಕಾಮಣ್ಣನ ಕೊರಳಲ್ಲಿ ಸಕ್ಕರೆಯ ಸರವನ್ನು ಹಾಕುತ್ತಾರೆ.
ಮಧ್ಯಾಹ್ನ ಪ್ರಸಾದ
ಪ್ರಸಾದವನ್ನು ತಾಯಾರಿಸಿ ಮನೆಮನೆಗಳಿಗೂ ಹಂಚುತ್ತಾರೆ. ಸಾಯಂಕಾಲ ಊರಲ್ಲಿರುವ ಚಿಕ್ಕ ಕಾಮಣ್ಣಗಳನ್ನು ತೆಗೆದುಕೊಂಡು ಹುಡುಗರೆಲ್ಲರೂ ಸೇರಿ ಮೆರವಣಿಗೆಯ ಮೂಲಕ ಹಿರಿಯ ಕಾಮಣ್ಣನನ್ನು ಭೇಟಿಯಾಗಲು ತರುತ್ತಾರೆ. ಇದಿಷ್ಟು ಕಾಮಣ್ಣನ ಸಂಭ್ರಮವಾದರೆ ಮರುದಿನ ಬೆಳಗ್ಗಿನ ಜಾವಾ ನಾಲ್ಕು ಗಂಟೆಗೆ ಸಂಗ್ರಹಿಸಿದ ಕಟ್ಟಿಗೆ ಕುಳ್ಳುಗಳನ್ನು ಕಾಮಣನ ಕಟ್ಟೆಯ ಎದುರಿಗೆ ಕುಡಿಹಾಕಿ ಬೆಂಕಿ ಹಚ್ಚುತ್ತಾರೆ.
ಈ ಬೆಂಕಿಯಲ್ಲಿ ಕಾಮಣ್ಣನ ಮುಖವನ್ನು ಸಹ ಹಾಕುತ್ತಾರೆ. ಈ ಬೆಂಕಿಗೆ ಊರಲ್ಲಿರುವ ಕಂಬಿಮಲ್ಲಯ್ಯ ಮೂರು ಸುತ್ತು ಹಾಕಿ ಹೊಗುವ ಪ್ರತೀತಿ ಇದೆ. ತದನಂತರ ಕಾಮಣ್ಣನಿಗೆ ಅಗ್ನಿ ಸ್ಪರ್ಷ ಮಾಡುತ್ತಾರೆ.
ಸಂಪ್ರದಾಯ
ಮುಂಜಾವಿನ ಕೋಳಿ ಕೂಗುವದರಲ್ಲಿ ಎದ್ದು, ಕಾಮಣ್ಣನ ಬೂದಿ ತಂದು ಓಲೆಗೆ ಹಾಕುವ ಸಂಪ್ರದಾಯ ಅಥರ್ಗಾದಲ್ಲಿದೆ. ಇದೇ ಬೆಂಕಿಯಲ್ಲಿ ಮೊದಲು ಅಡಗೆ ತಯಾರಗಬೇಕು ಎನ್ನುವುದು ಹಿರಿಯರ ಮಾತು. ಅಗಸಿ, ಹುಣಸೆ ಬೀಜಗಳನ್ನು ಹುರಿಯುವ ರೂಢಿ ಬೆಳೆದುಬಂದಿದೆ.
ಆಹಾರದಲ್ಲಿ ವೈವಿಧ್ಯ
ಹಬ್ಬಕ್ಕೆ ವಿಶೇಷವಾಗಿ ಮುದ್ದಿ ಹೋಳಿಗೆಯನ್ನು ತಯಾರಿಸುತ್ತಾರೆ. ಈ ಮುದ್ದಿಗಾಗಿ ಗಜ್ಜರಿ, ಗೆಣಸು, ಈರುಳ್ಳಿ, ಬೆಳ್ಳುಳ್ಳಿ, ಕೊತ್ತಂಬರಿ, ಶಿತ್ನಿ ಜ್ವಾಳ, ಗೋಧಿ, ಶೇಂಗಾ ಇದೆಲ್ಲವನ್ನು ಕುದಿಸಿ ನಂತರ ಹೋಳಿಗೆ, ಉಪ್ಪು, ಕಾರ, ಎಣ್ಣೆ ಹಾಕಿ ಮಿಶ್ರಣ ಮಾಡಿ ತಯಾರಿಸುತ್ತಾರೆ
–ಕಾಂಚನಾ ಪೂಜಾರಿ
ಸುದ್ದಿದಿನ.ಕಾಂ|ವಾಟ್ಸಾಪ್|9986715401