ದಿನದ ಸುದ್ದಿ

ನಾವೇನು ಮೆಷಿನ್ ಇಟ್ಕೊಂಡಿದ್ದೀರಿ ಅಂದ್ವಾ? : ಯಡಿಯೂರಪ್ಪ

Published

on

ಸುದ್ದಿದಿನ, ಬೆಂಗಳೂರು : ಕಬ್ಬು ಬೆಳೆಗಾರರಿಗೆ 92 ಕೋಟಿ ಬಾಕಿ ಇದೆ. ಕಾರ್ಖಾನೆ ಮಾಲೀಕ ಯಾವುದೇ ಪಕ್ಷದವರು ಇರಲಿ ಕೂಡಲೇ ರೈತರಿಗೆ ಬಾಕಿ ಪಾವತಿ ಮಾಡಬೇಕು. ಕಬ್ಬು ಬಾಕಿ ಪಾವತಿ ಮಾಡದಿದ್ದರೇ ಬೆಳಗಾವಿ ಅಧಿವೇಶನದ ಒಳಗೆ, ಹೊರಗೆ ಹೋರಾಟ ಮಾಡ್ತೀವಿ ಎಂದು ಬಿಎಸ್‌ವೈ ಮೈತ್ರಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ರೈತ ಮಹಿಳೆಗೆ ಒಬ್ಬ ಸಿಎಂ ಆಗಿ ಎಲ್ಲಿ‌ ಮಲಗಿದ್ದೆ ಎಂದು ಸಿಎಂ ಕೇಳ್ತಾರೆ.ಈ ರೀತಿ ಮಾತಾಡಿರುವ ಸಿಎಂ ಕ್ಷಮೆಯಾಚ ಬೇಕು. ಮಾಜಿ ಪ್ರಧಾನಿ ದೇವೇಗೌಡರು ತಮ್ಮ ಮಗನನ್ನ ಸಮರ್ಥನೆ ಮಾಡಿಕೊಳ್ಳುವುದು ಬಿಟ್ಟು,ಮೊದಲು ರೈತರ ಪರ ಮಾತಾಡಲಿ. ರೇವಣ್ಣ ನೋಟಿನ ಮೆಷಿನ್ ಇದೆಯಾ ಅಂತಾರೆ, ನಾವೇನು ಮೆಷಿನ್ ಇಟ್ಕೊಂಡಿದ್ದೀರಿ ಅಂದ್ವಾ? ಮೊದಲು ರೈತರ ಸಮಸ್ಯೆ ಬಗೆಹರಿಸಿ, ಇಲ್ಲದೆ ಹೋದ್ರೆ ಉಗ್ರ ಹೋರಾಟ ಮಾಡ್ತೀವಿ ಎಂದು ಬಿಎಸ್ ಯಡಿಯೂರಪ್ಪ ಗುಡುಗಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version