ಲೋಕಾರೂಢಿ
ಗಣಿಗಾರಿಕೆಯ ಪ್ರಭಾವ
ಗಣಿಗಾರಿಕೆ ಅಂತ ಬಂದಾಗ ನಮಗೆ ನೆನಪಾಗುವುದು ವ್ಯಾಪಾರ. ಜಗತ್ತಿನಲ್ಲಿ ಅತ್ಯಂತ, ಬಹುದೊಡ್ಡ ಲಾಭವನ್ನು ಮಾಡಿಕೊಳ್ಳುವ ಕೆಲಸ. ನಾವು ದೇಶದಲ್ಲಿ ಅತಿದೊಡ್ಡ ಶ್ರೀಮಂತರು ಯಾರೆಂದು ಗೂಗಲ್ನಲ್ಲಿ ನೋಡಿದರೆ, ಒಂದು ಸಾಫ್ಟ್ವೇರ್ ಕಂಪನಿಯವರು ಇರುತ್ತಾರೆ ಅಥವಾ ಈ ಗಣಿಗಾರಿಕೆಯ ಮುಖ್ಯಸ್ಥ ಇರುತ್ತಾನೆ.
ಗಣಿ ಗಾರಿಕೆಎಂದರೆ ಭೂಮಿಯಲ್ಲಿ ಇರುವ ಬೆಲೆಬಾಳುವ ವಸ್ತುಗಳನ್ನು ಅಗಿದು ಅದನ್ನು ಅತಿಹೆಚ್ಚು ಲಾಭಕ್ಕೆ ಮಾರುವುದು. ಉದಾಹರಣೆಗೆ- ಕಬ್ಬಿಣ, ವಜ್ರ ಇತ್ಯಾದಿ ಇನ್ನು ಬಹಳ ಇತರೆ ವಸ್ತುಗಳನ್ನು ಅಗಿದು ತೆಗೆದು ಅದಕ್ಕೆ ಸೂಕ್ತವಾದ ಆಕಾರವನ್ನು ಕೊಟ್ಟು ಮಾರುಕಟ್ಟೆಯಲ್ಲಿ ಮಾರುವುದು.
ಗಣಿಗಾರಿಕೆಯಿಂದಾಗುವ ಉಪಯೋಗಗಳು
- ಗಣಿಗಾರಿಕೆಯಿಂದ ದೇಶದ ಆರ್ಥಿಕ ಸ್ಥಿತಿ ಹೆಚ್ಚಾಗುವ ಸಾಧ್ಯತೆ ತುಂಬಾ ಇರುತ್ತದೆ.
- ಗಣಿಗಾರಿಕೆಯು ಹಳ್ಳಿಯ ಕಡೆ ಹೆಚ್ಚಾಗಿರುವ ಕಾರಣ , ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುತ್ತಿದೆ.
ಇನ್ನು ಇತರೆ ಉಪಯೋಗಗಳು ತುಂಬಾ ಇವೆ. ನಮಗೆ ಗೋತ್ತೇಇದೆ, ಉಪಯೋಗಗಳಿಗಿಂತ ದುರುಪಯೋಗಗಳು ಜಾಸ್ತಿ ಇವೆ. ನಮಗೆ ಗೊತ್ತಿರುವುದರ ಹಾಗೆ ಕಳೆದ ಬಾರಿ ನಡೆದ ಕೇರಳ ಹಾಗೂ ನಮ್ಮ ರಾಜ್ಯದ ಕೊಡಗು ಜಿಲ್ಲೆಯಲ್ಲಿ ಮಣ್ಣಿನ ಶಿಖರ ಕುಸಿದು ಮಳೆ ಹೆಚ್ಚಾಗಿ ಫ್ಲಡ್ ಆಗಿರುವುದು ಹಾಗೂ ಈ ಬಾರಿ ಉತ್ತರಕನ್ನಡ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಿಂದಾಗುವಂತ ದುರಂತ ಘಟನೆಗಳು ರಾಜ್ಯದ ಜನರನ್ನು ಬೆಚ್ಚಿಬೀಳಿಸಿದೆ.
ಗಣಿ ಗಾರಿಕೆಯನ್ನು ಮಾಡುವಾಗ ಗುಡ್ಡ ಬೆಟ್ಟಗಳನ್ನು ಆಳವಾಗಿ ಅಗೆಯುತ್ತ ಹೋಗುತ್ತಾರೆ. ಆದರಿಂದ ಎಷ್ಟೋ ಮರ ಗಿಡಗಳನ್ನು ಕಡಿಯುತ್ತಾರೆ. ಆ ಜಾಗದಲ್ಲಿ ಇದ್ದಂತ ಕಾಡು ನಾಶವಾಗುತ್ತದೆ. ಗಿಡ ಮರಗಳನ್ನು ಕಡಿಯುವುದರಿಂದ ಕಾಡನ್ನು ನಾಶ ಮಾಡುವುದರಿಂದ ಗಣಿಗಾರಿಕೆಯನ್ನು ಹೆಚ್ಚು ಮಾಡುವುದರಿಂದ ನಮಗೆ ತುಂಬಾ ಅಪಾಯ ಉಂಟು ಮಾಡುತ್ತದೆ. ಮಾಲಿನ್ಯ ಹೆಚ್ಚಾಗುತ್ತದೆ, ಉಸಿರಾಟಕ್ಕೆ ಆಮ್ಲಜನಕ ಇಲ್ಲದಂತಾಗುತ್ತದೆ. ತಾಪಮಾನ ಹೆಚ್ಚಾಗುತ್ತದೆ, ಬರಗಾಲ ಬರುತ್ತದೆ.
ಈ ರೀತಿ ವಿಷಯವನ್ನು ತಿಳಿಸುತ್ತೀರಿವುದೇಕೆಂದರೆ ನಾವಾಗಿ ನಾವು ರೋಗಗಳಿಗೆ ತುತ್ತಾಗ ಬಾರದೆಂದು. ಒಂದು ವೇಳೆ ಆಮ್ಲಜನಕ ಇಲ್ಲದಂತಾಯಿತು ಅಥವಾ ಓಝೋನ್ ಪರದೆ ಪೂರ್ತಿಯಾಗಿ ನಾಶವಾಯಿತೆಂದರೆ ಅದರಿಂದ ಬರುವಂತ ರೋಗಗಳಿಗೆ ಮದ್ದುಗಳೇ ಇರುವುದಿಲ್ಲ. ಮಾನವ ಜೀವನ ಹೆಚ್ಚು ಬಿಸಿಲಿನಲ್ಲಿ ನರಕವನ್ನು ನೋಡಬೇಕಾಗುತ್ತದೆ.
ಇದರಿಂದ ನಾನು ನಿಮ್ಮಲ್ಲಿ ಕೇಳಿಕೊಳ್ಳುವುದೇನೆಂದರೆ, ನಾವು ಮರ ಗಿಡಗಳನ್ನು ಬೆಳೆಸಿದರೆ ಅವುಗಳು ನಮ್ಮನ್ನು ಬೆಳೆಸುತ್ತದೆ. ನಮ್ಮ್ ದೇಶದ ಒಟ್ಟು ಶಾಲಾ ಕಾಲೇಜುಗಳಿಂದ ಎಲ್ಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ರಾಷ್ಟ್ರಿಯ ಹಬ್ಬಗಳ ದಿನದಂದು ಒಂದೊಂದು ಗಿಡ ನೆಟ್ಟರೆ, ಸ್ವತಂತ್ರ ಭಾರತದ ಆಯಸ್ಸನ್ನು ಹೆಚ್ಚಿಸಿದಂತಾಗುತ್ತದೆ.
ನನ್ನ ಈ ಒಂದು ಕಳಕಳಿ ನಿಮಗೆ ಸರಿ ಎನಿಸಿದರೆ ಅಥವಾ ಇಷ್ಟವಾದರೆ ತಕ್ಷಣವೇ ಗಿಡಗಳನ್ನು ಬೆಳೆಸಲು ಆರಂಭಿಸಿ .
–ಅಂಕಿತ್.ಎಸ್
ದಾವಣಗೆರೆ
ಸುದ್ದಿದಿನ.ಕಾಂ|ವಾಟ್ಸಾಪ್|9980346243