ಲೈಫ್ ಸ್ಟೈಲ್
ಮೋಬೈಲ್ ಗೀಳು ನೆಮ್ಮದಿ ಹಾಳು..!
- ಹುಸೇನಸಾಬ ವಣಗೇರಿ,ಉಪನ್ಯಾಸಕರು
ಮೊಬೈಲ್ ಎಂಬುವುದು ಪ್ರತಿಯೊಬ್ಭರ ಜೀವನದಲ್ಲಿ ಹಾಸುಹೊಕ್ಕಾಗಿದೆ. ಹಸುಗೊಸಿನಿಂದ ಹಿಡಿದು ಎಲ್ಲಾ ವಯೋಮಾನದವರೂ ತಿಳಿದು ತಿಳಿಯದಂತೆ ಮಾಯಂಗೆಗೆ ಮಾರುಹೋಗಿ ಪ್ರಪಂಚವನ್ನೆ ಮರೆತು ಅಂಟುರೋಗಕ್ಕೆ ಗಂಟುಬಿದ್ದು ತಮ್ಮದೇಯಾದ ಕಾಲ್ಪನಿಕ ಲೋಕದಲ್ಲಿ ಕೈಗೆಟುಕದ ಹಾಗೇ ಲೀನವಾಗಿದ್ದಾರೆ. ಮಾತಿಲ್ಲ ಕಥೆಯಿಲ್ಲ, ಮಾನವೀಯ ಮೌಲ್ಯಗಳ ಸುಳಿವಿಲ್ಲ, ಭಾವನೆಗಳಿಗೆ ಬೆಲೆಯಿಲ್ಲ ಈ ಮೋಬೈಲ್ ಮಾಯೆಯ ಛಾಯೆಯಿಂದ.
ಅನ್ನ ನೀರು ಬಿಟ್ಟಾರು ಆದರೆ ಒಂದು ಕ್ಷಣ ಮೊಬೈಲ್ ಬಿಟ್ಟಿರಲಾರದ ಸಾಕ್ಷಸಂಗತಿಗಳನ್ನು ನೋಡಿದರೆ ನಮ್ಮ ಈ ಯುವ ಪೀಳಿಗೆಯ ಬಗ್ಗೆ ಭಯವಾಗುತ್ತದೆ. ನೋವು-ನಲಿವು, ಕಷ್ಟ-ಸು:ಖಗಳ ಸಮ್ಮಿಶ್ರಣದ ಈ ಜೀವನದಲ್ಲಿ ಮೋಬೈಲ್ ಬಳಕೆಗೆ ಅಂಟಿಕೊಂಡು ದಿನವೀಡಿ ಸ್ಕ್ರೀನಮೇಲೆ ಬೆರೆಳಾಡುಸುತ್ತಾ ಕಾಲಹರಣ ಮಾಡುತ್ತಾ ಉದ್ವೇಗ, ಒತ್ತಡ, ಖಿನ್ನತೆಯಂತ ಸಮಸ್ಯೆಗಳಿಗೆ ಆಹ್ವಾನ ನೀಡುತ್ತದ್ದೇವೆ.
ವಿಶ್ವವೇ ಮಾರು ಹೋಗಿರುವ ಈ ಮೊಬೈಲ್ ಅನುಕೂಲಕ್ಕಿಂತ ಅನಾನೂಕೂಲತೆಗಳಿಗೆ ಎಡೆಮಾಡಿಕೊಟ್ಟಿರುವುದು ಅಕ್ಷರಶ: ಸತ್ಯಸಂಗತಿ. ಅತಿಯಾದ ಮೊಬೈಲ್ ಬಳಕೆಯಿಂದ ಅದೆಷ್ಟೋ ತೊಂದರೆಗಳನ್ನು ಏದುರಿಸಿದ್ದೇನೆ ಅಂತಹ ಕಹಿ ಅನುಭವಗಳ ಗುಚ್ಛನನ್ನಲ್ಲಿದೆ. ಹಾಲಾದ ಈ ಮೊಬೈಲ್ ಸರಿಯಾಗಿ ಕಣ್ಣಿಗೆ ನಿದ್ದೆಯಿಲ್ಲ, ಮನಸ್ಸಿಗೆ ನೆಮ್ಮದಿಯಿಲ್ಲ ಬರೀ ಫೆಸ್ಬುಕ್, ವ್ಯಾಟ್ಸಪ್, ಯುಟ್ಯೂಬ್ಗಳಲ್ಲಿ ಮುಳುಗಿ ನಡುಗಿ ಹೋಗಿದ್ದೇನೆ.
ಅದೊಂದಿನ ಹುಡುಗಿಯೊರ್ವಳ ಪರಿಚಯವಾಗಿ, ಪರಿಚಯ ಸ್ನೇಹವಾಗಿ ಮಾರ್ಪಟ್ಟಿತ್ತು.. ಪ್ರತಿದಿನ 10ಘಂಟೆಯಾದರೆ ಸಾಕು ಮೊಬೈಲ್ ಬಾಯ್ ಹೇಳಿ ನಿದ್ದೆಗೆ ಹಾಯ್ ಅಂದು ನಿದ್ರೆಗೆ ಜಾರುತ್ತಿದ್ದೆ ಆದರೆ ಅಂದು ಮೋಬೈಲ್ ಮಾಯೆಯಲ್ಲಿ ಮುಳುಗಿದ ನನಗೆ ಹೊಟ್ಟೆ ಹಸಿದಿದ್ದರೂ ಊಟ ಸೇರಲಿಲ್ಲ, ಕುಳಿತ ಜಾಗ ಬಿಟ್ಟು ಕದಲಲು ಮನಸ್ಸು ಬರಲಿಲ್ಲ ಸಂದೇಶಗಳ ಮೇಲೆ ಸಂದೇಶ ಬರುತ್ತಲೇ ಇದ್ದವು ನಾನು ಪ್ರತಿಕ್ರಿಯಿಸುತ್ತಲೇ ಇದ್ದೆ.
ಅಲ್ಲಿಗೆ ಚಾಲುವ ಆಯ್ತುನೋಡಿ ನಮಗ ಅಂಟುರೋಗ ನಮ್ಗೆ ತಿಳಿಯದ ಹಾಗೇ ನಗು ಉಲ್ಬಣವಾಗಿ ಶಮನವಾಗುತ್ತಿತ್ತು. ಮೊಬೈಲ್ ನೋಡಿ ಸುಮ್ಮನೇ ನಗೋದು ನೋಡಿದ ನನ್ನ ಗೆಳೆಯರು ಬೇಸರವಾಗಿದ್ದೂ ಆಯ್ತು ಬೈಯ್ದಿದ್ದು ಆಯ್ತು. ಮಧ್ಯರಾತ್ರಿ 1ಘಂಟೆಯಾದ್ರು ನಿದ್ದೆ ಹತ್ತುತ್ತಿಲ್ಲ, ಇತ್ತ ಕಣ್ಗಗಳ ಉರಿ, ಮಲಗಬೇಕು ಅಂದುಕೊಂಡರೆ ಬೆಂಬಿಡದ ಮೋಬೈಲ್ ಮಾಯೆ ದೊಡ್ಡ ಮನಸ್ಸು ಮಾಡಿ ಮೊಬೈಲ್ ಸೈಡಿಗೆ ಇಟ್ಟು ನದ್ರೆಗೆ ಹೋದೆ ಕ್ಷಣಮಾತ್ರವೇನೋ ಮತ್ತ ಎಚ್ಚರವಾಯ್ತು ಮತ್ತದೇ ಮೊಬೈಲ್ ಬಳಕೆಯಲಿ ಮುಳುಗಿದೆ ಅದೇ ಸಮಯಕ್ಕೆ ಚಾರ್ಜಬೇರೆ ಕಾಲಿಯಾಗಬೇಕೆ ಆದರೂ ಬಿಡಲಿಲ್ಲ ಚಾರ್ಜ ಹಾಕಿಕೊಂಡು ಮೊಬೈಲ್ ಸ್ಕ್ರೀನ್ಮೇಲೆ ಬೆರೆಳಾಡಿಸುತ್ತಾ ನಿಂತುಕೊಂಡೆ ಮಧ್ಯರಾತ್ರಿಯಾದ್ರು ಅದೇ ಕಥೆ.
ಬೆಳಿಗ್ಗೆ ಎದ್ದು ಕೆಲಸಕ್ಕೆ ಹೋಗಬೇಕಾಗಿದ್ದರಿಂದ ಅನಿವಾರ್ಯವಾಗಿ 3ಗಂಟೆಗೆ ಕಣ್ಮುಚ್ಚಿಕೊಂಡೆ ಬೆಳಿಗ್ಗೆ ಎದ್ದು ಆತುರದಲ್ಲಿ ಮೊಬೈಲ್ ಹಿಡಿದುಕೊಂಡು ನಡೆಯುವಾಗ ದಾರಿಯಲ್ಲಿದ್ದ ಕಲ್ಲೆಗೆ ಎಡವಿ ಕಾಲಿಗೆ ಗಾಯಮಾಡಿಕೊಂಡು ಗದಗದಿಂದ ಹುಬ್ಬಳ್ಳಿಗೆ ಪ್ರಯಾಣ ಬೆಳೆಸಿದೆ ಮತ್ತದೇ ಚಾಳಿ ಮೊಬೈಲ್ ಮಗ್ನನಾಗಿ ಹುಬ್ಬಳ್ಳಿ ತಲುಪಿದೆ. ಹೊಸೂರ್ ಕ್ರಾಸ್ಗೆ ಹೋಗಬೇಕಾಗಿದ್ದರಿಂದ ಬಿ.ಆರ್.ಟಿ ಬಸ್ಸನ್ನೇರಿ ಕುಳಿತೆ ನೆಕ್ಟ ಸ್ಟಾಪ್ಗೆ ಇಳಿಯಬೇಕಾದವನು ಮೊಬೈಲ್ ಇಯರ್ಪೋನು ಸಿಕ್ಕಿಸಿಕೊಂಡು ಅದರಲ್ಲೆ ಕಳೆದು ಹೋಗಿದ್ದೆ. ಹೆಂಗೋ ಎಚ್ಚೆತ್ತುಕೊಂಡು ನೋಡಿದರೆ ತಲುಪಬೇಕಾದ ಸ್ಥಳಕ್ಕಿಂತ ನಾಲ್ಕು ಸ್ಟಾಪ್ ಮುಂದೆ ಬಂದಿದ್ದೇನೆ.
ಮೊಬೈಲ್ ಮುಳುಗಿದ್ದ ನನ್ನ ಗ್ರಹಚಾರ ಅಂದುಕೊಂಡು ತಿರುಗಿ ಬರುವಷ್ಟರಲ್ಲಿ ಸಮಯ ಇಮ್ಮಡಿಯಾಗಿತ್ತು. ಉಪನ್ಯಾಸಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ನನಗೆ ತರಗತಿಗೆ ತೊಂದರೆಯಾಗಿತು ಮತ್ತು ನನ್ನ ಮೂರ್ಖತನಕ್ಕೆ ಉದಾಹರಣೆಯಾಯಿತು. ತದನಂತರ ಅರ್ಥವಾಯಿತು ಮೊಬೈಲ್ ಮಾಯೆಯ ಮುಂದೆ ಮತ್ತಾವ ಮಾಯೆಯಿಲ್ಲ ಎಂಬುದು ಇದು ನಂದಷ್ಟೆ ಕಥೆಯಲ್ಲ ಮೊಬೈಲ್ ಮಾಯೆಗೆ ಮಾರು ಹೋದವರು ದಿನಂಪ್ರತಿ ಒಂದಿಲ್ಲೊಂದು ಸಮಸ್ಯೆಗೆ ಸಿಲುಕಿದ್ದಾರೆಂದು.
(ಹುಸೇನಸಾಬ ವಣಗೇರಿ
ಉಪನ್ಯಾಸಕರು
ಸ್ನಾತಕೋತ್ತರ ಸಮಾಜಕಾರ್ಯಅಧ್ಯಯನ ವಿಭಾಗ
ಮಹಿಳಾ ವಿದ್ಯಾಪೀಠ, ಹುಬ್ಬಳ್ಳಿ.
ಪೋನ್ ನಂ: 7829606194)
ಸುದ್ದಿದಿನ.ಕಾಂ|ವಾಟ್ಸಾಪ್|9980346243