ದಿನದ ಸುದ್ದಿ

ಆದಿಚುಂಚನಗಿರಿ ಶ್ರೀಗಳಿಗೆ ‘ಪಿಎಚ್​ಡಿ’ ಪದವಿ

Published

on

ಸುದ್ದಿದಿನ,ಬೆಂಗಳೂರು: ಆದಿಚುಂಚನಗಿರಿ ಮಠಾಧೀಶ ಶ್ರೀ ನಿರ್ಮಲಾನಂದ ನಾಥ ಸ್ವಾಮೀಜಿ ಅವರಿಗೆ ಗುಲ್ಬರ್ಗಾ ವಿಶ್ವವಿದ್ಯಾಲಯ ಪಿಎಚ್​ಡಿ ಪದವಿ ಪ್ರದಾನ ಮಾಡಿದೆ. ಶ್ರೀಗಳ ‘ನಾಥ ಸಂಪ್ರದಾಯ: ಒಂದು ಸಾಂಸ್ಕೃತಿಕ ಅಧ್ಯಯನ’ ಎಂಬ ವಿಷಯದ ಕುರಿತ ಮಹಾಪ್ರಬಂಧಕ್ಕೆ ಪಿಎಚ್​ಡಿ ದೊರೆತಿದೆ.

ಶ್ರೀಗಳ ಅಧ್ಯಯನ ಪ್ರವೃತ್ತಿ ಅನುಕರಣೀಯ:
ಈ ಹಿನ್ನೆಲೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಶ್ರೀಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಮಠಾಧೀಶರಾಗಿ ಜವಾಬ್ದಾರಿಯುತ ಸ್ಥಾನದಲ್ಲಿದ್ದೂ ಶ್ರೀಗಳು ಅಧ್ಯಯನ ಪ್ರವೃತ್ತಿಯನ್ನು ಮುಂದುವರಿಸಿರುವುದು ಅನುಕರಣೀಯ ಎಂದು ಪ್ರಕಟಣೆಯಲ್ಲಿ ಮುಖ್ಯಮಂತ್ರಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version