ದಿನದ ಸುದ್ದಿ
ವನಿತಾ ಸಾಹಿತ್ಯ ವೇದಿಕೆಯಿಂದ ಬಸವ ಜಯಂತಿ ಹಾಗೂ ತಾಯಂದಿರ ದಿನ
ಸುದ್ದಿದಿನ, ದಾವಣಗೆರೆ : ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ದಾವಣಗೆರೆ ಮತ್ತು ಪ್ರಜ್ಞಾ ವೇದಿಕೆ ವನಿತಾ ಸಮಾಜ ದಾವಣಗೆರೆ ಮತ್ತು ವನಿತಾ ಸಾಹಿತ್ಯ ವೇದಿಕೆ ಹಾಗೂ ಹಿರಿಯ ನಾಗರೀಕರ ಸಹಾಯವಾಣಿ ದಾವಣಗೆರೆ ಇವರ ಸಹಯೋಗದಲ್ಲಿ ಬುಧವಾರ ದಂದು ವನಿತಾ ಹಿರಿಯ ವನಿತೆಯರ ಆನಂದಧಾಮ ಇಲ್ಲಿ ಬಸವಜಯಂತಿ, ತಾಯಂದಿರ ದಿನಾಚರಣೆ ಹಾಗೂ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಶ್ರೀಮತಿ ಉಷ.ಈ ರವರು “ವಿಶ್ವಗುರು ಬಸವಣ್ಣ” ಎಂಬ ವಿಷಯದ ಕುರಿತು ಉಪನ್ಯಾಸ ನೀಡುತ್ತಾ ಇಂದಿನ ಸಮಾಜಕ್ಕೆ ಬಸವಣ್ಣನವರ ತತ್ವ ವಿಚಾರಗಳ ಪ್ರಸ್ತುತತೆ ಬಗ್ಗೆ ಮಾತನಾಡಿದರು.
ದತ್ತಿ ಉಪನ್ಯಾಸಕರಾಗಿ ಆಗಮಿಸಿದ್ದ ಶ್ರೀಮತಿ ರಾಜೇಶ್ವರಿ ವೈ. ಎಂ. ರವರು ತಾಯಂದಿರ ದಿನದ ಬಗ್ಗೆ ಮಾತನಾಡುತ್ತಾ ತಾಯಂದಿರ ದಿನದ ಹಿನ್ನೆಲೆ ಹಾಗೂ ಭಾರತೀಯ ಪರಂಪರೆಯಲ್ಲಿ ತಾಯ್ತನದ ಮಹತ್ವದ ಕುರಿತು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀಮತಿ ಜಯಮ್ಮ ನೀಲಗುಂದ ರವರು ವನಿತ ಸಮಾಜದ ಸಂಸ್ಥಾಪಕರಲ್ಲಿ ಒಬ್ಬರಾದ ಶ್ರೀಮತಿ ನಾಗಮ್ಮ ಕೇಶವಮೂರ್ತಿ ಇವರನ್ನ ಸ್ಮರಿಸಿ ಅವರ ಬಗ್ಗೆ ಒಂದು ಸ್ವರಚಿತ ಕವನ ವಾಚನ ಮಾಡಿದರು.
ಕಾರ್ಯಕ್ರಮದಲ್ಲಿ ಶ್ರೀಮತಿ ಮಲ್ಲಮ್ಮ ನಾಗರಾಜ್ , ಶ್ರೀ ಷಡಕ್ಷರಪ್ಪ ಎಂ. ಬೇತೂರು ˌ ನಾಗರಾಜ್ ಸಿರಿಗೆರೆ ˌ ಬಾಗಿನಕಟ್ಟೆ ಪರಮೇಶ್ವರಪ್ಪˌ ಶ್ರೀ ಹೆಚ್.ಕೆ. ಪಾಲಾಕ್ಷಪ್ಪ ˌ ಶ್ರೀಮತಿ ಶೈಲಾ ˌ ಶ್ರೀಮತಿ ಶಿವರತ್ನಮ್ಮ ˌ ಮುಂತಾದವರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಶ್ರೀಮತಿ ಸುಶೀಲರವರು ನಿರೂಪಿಸಿದರು.
ಆನಂದಧಾಮದ ಹಿರಿಯ ಮಾತೆಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗೀತಗಾಯನ ಮಾಡಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243