/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ದಿನದ ಸುದ್ದಿ

ದಾವಣಗೆರೆ | ಡಿ. 22 ರಂದು ‘ಹಾದಿಯ ಹಂಗು’ ಕೃತಿ ಲೋಕಾರ್ಪಣೆ

Published

on

ಸುದ್ದಿದಿನ,ದಾವಣಗೆರೆ : ನಿಟ್ಟೂರು ಬಜ್ಜಿ ಹನುಮಂತಪ್ಪ ಚಾರಿಟಬಲ್ ಟ್ರಸ್ಟ್, ದಾವಣಗೆರೆ ವತಿಯಿಂದ ಡಿ. 22 ರ ಸಂಜೆ 6 ಗಂಟೆಗೆ ನಗರದ ಜಯದೇವ ವೃತ್ತದಲ್ಲಿರುವ ಶ್ರೀ ಶಿವಯೋಗಿ ಮಂದಿರದಲ್ಲಿ ಕವಿ ಮಹಾಂತೇಶ್ ಬಿ ನಿಟ್ಟೂರ್ ಅವರ ಹಾದಿಯ ಹಂಗು ಚುಟುಕು ( ಮುಕ್ತಕ ) ಕವನ ಸಂಕಲನ ಲೋಕಾರ್ಪಣೆ ನಡೆಯಲಿದೆ.

ನಿವೃತ್ತ ಪ್ರಾಧ್ಯಾಪಕರಾದ ಹರಪನಹಳ್ಳಿ ಪ್ರೊ. ತಿಮ್ಮಪ್ಪನವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಕ.ಸಾ.ಪ. ದಾವಣಗೆರೆ ಜಿಲ್ಲಾಧ್ಯಕ್ಷರಾದ ಡಾ. ಹೆಚ್.ಎಸ್ ಮಂಜುನಾಥ್ ಕುರ್ಕಿ ಉದ್ಘಾಟಿಸುವರು.

ಖ್ಯಾತ ಸಾಹಿತಿ ಹಾಗೂ ವಿಮರ್ಶಕರಾದ ಡಾ. ಲೋಕೇಶ್ ಅಗಸನಕಟ್ಟೆ ಕೃತಿ ಲೋಕಾರ್ಪಣೆ ಮಾಡುವರು. ರಾಣೆಬೆನ್ನೂರು ಜಿ.ಎಫ್.ಜಿ.ಸಿ ಕಾಲೇಜಿನ ಉಪನ್ಯಾಸಕರಾದ ಡಾ. ಹೊನ್ನಪ್ಪ ಹೊನ್ನಪ್ಪನವರ ಕೃತಿ ಅವಲೋಕನ ಮಾಡುವರು.

ಮುಖ್ಯ ಅತಿಥಿಗಳಾಗಿ ದಾವಣಗೆರೆ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಜಿ.ಸಿ ನಿರಂಜನ್‌ರವರು, ಜನಮಿಡಿತ ದಿನಪತ್ರಿಕೆಯ ಸಂಪಾದಕರಾದ ಜಿ.ಎಂ.ಆರ್ ಆರಾಧ್ಯ ಹಾಗೂ ಸಾಹಿತಿ ಹರಪನಹಳ್ಳಿಯ ಇಸ್ಮಾಯಿಲ್ ಎಲಿಗಾರ್ ಭಾಗವಹಿಸುವರು. ಕೃತಿ ಕರ್ತೃ ಹಿರೇಕೋಗಲೂರು ಎಸ್.ಟಿ.ಜೆ ಸರ್ಕಾರಿ ಪ. ಪೂ. ಕಾಲೇಜಿನ ಉಪನ್ಯಾಸಕರಾದ ಮಹಾಂತೇಶ್ ಬಿ ನಿಟ್ಟೂರ್, ಕವಿನುಡಿಯಾಡುವರು.

ಕಾವ್ಯ ಗಾಯನ : ಕವಿ ಮಹಾಂತೇಶ್ ಬಿ ನಿಟ್ಟೂರ್ ಅವರ ಕವನಗಳಿಗೆ ರಾಗ ಸಂಯೋಜನೆ ಮಾಡಿರುವ
ದಾವಣಗೆರೆ ವಾಯ್ಸ್ ಪುರಸ್ಕೃತ ಶ್ರೀಮತಿ ಸಂಗೀತ ರಾಘವೇಂದ್ರ , ಇಪ್ಟಾ ಕಲಾವಿದ ಐರಣಿ ಚಂದ್ರು , ಶ್ರೀಮತಿ ಉಮಾದೇವಿ ಹಾಗೂ ಯುವ ಗಾಯಕ ಆರ್ ಪ್ರಶಾಂತ್ ಅವರು ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಹಾಗೂ ನಂತರ ಕಾವ್ಯ ಗಾಯನ ಮಾಡಲಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version