ದಿನದ ಸುದ್ದಿ
ಬ್ರೇಕಿಂಗ್ | ಶಿಂಷಾ ನದಿಗೆ ಹೋಟೆಲ್ ತ್ಯಾಜ್ಯ; ಕಣ್ಮುಚ್ಚಿ ಕುಳಿತ ಅಧಿಕಾರಿಗಳು : ವಿಡಿಯೋ ನೋಡಿ..!
- ವರದಿ : ಗಿರೀಶ್ ರಾಜ್, ಮದ್ದೂರು
ಸುದ್ದಿದಿನ, ಮದ್ದೂರು : ತಾಲ್ಲೂಕಿನ ಸೋಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಇರುವ ಎಂಪೈರ್ ಹೋಟೆಲ್ ನವರು ಕೆ.ಕೋಡಿಹಳ್ಳಿ ಗ್ರಾಮದ ಶಿಂಷಾ ನದಿಯ ದಡದಲ್ಲಿ ಹೋಟೆಲ್ ನ ತ್ಯಾಜ್ಯ , ನೀರಿನ ಖಾಲಿ ಬಾಟಲಿ, ಮಧ್ಯಪಾನ ಬಾಟಲಿ, ಮತ್ತು ಆ ಜಾಗದಲ್ಲಿ ಹಂದಿ ಸಾಕಾಣಿಕೆಯನ್ನು ಮಾಡುತ್ತಿದ್ದು ಹಂದಿ ಗೂಡುಗಳಿಂದ ಬರುವ ಗಲೀಜು ನೀರು ಸಹ ಶಿಂಷಾ ನದಿಗೆ ಸೇರುತ್ತೀರುವುದರಿಂದ ಇಂದು ಗ್ರಾಮಸ್ಥರು ಸ್ಥಳದಲ್ಲಿ ಪ್ರತಿಭಟನೆ ನಡೆಸಿದರು.
ಈ ಶಿಂಷಾ ನದಿಯ ದಡಗಳಲ್ಲಿ ಪ್ರಸಿದ್ಧ ದೇವಾಲಯಗಳಾದ ಹೊಳೆ ಆಂಜನೇಯ ದೇವಸ್ಥಾನ , ವೈದ್ಯನಾಥೇಶ್ವರ ದೇವಾಲಯ, ಕೊಕ್ಕರೆ ಬೆಳ್ಳೂರು, ಮುತ್ತತ್ತಿ ಅರಣ್ಯ ಪ್ರದೇಶವಿದ್ದು ಈ ವ್ಯಾಪ್ತಿಯಲ್ಲಿ ಸಾರ್ವಜನಿಕರು ಪ್ರಾಣಿ ಪಕ್ಷಿಗಳು ಈ ನದಿಯ ನೀರನ್ನೆ ಬಳಸುತ್ತಿದ್ದಾರೆ.
ಕಳೆದ ಒಂದು ವರ್ಷದಿಂದ ಕೊಕ್ಕರೆ ಬೆಳ್ಳೂರು ವ್ಯಾಪ್ತಿಯ ಹಳ್ಳಿಗಳಲ್ಲಿ ಹೆರ್ಜಾಲೆ ಹಾಗೂ ವಿವಿಧ ಕೊಕ್ಕರೆಗಳು ಈ ಕಲುಷಿತ ನೀರನ್ನು ಸೇವಿಸಿ ಮೃತಪಟ್ಟಿವೆ ಎಂದು ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದರು.
ಗ್ರಾಮದ ರೈತ ಮುಖಂಡ ಭೈರೇಗೌಡ ಮಾತನಾಡಿ ಎಂಪೈರ್ ಹೋಟೆಲ್ ನವರು ಪ್ರತಿದಿನ ರಾತ್ರಿ ಹೋಟೆಲ್ ನ ತ್ಯಾಜ್ಯ ಇತರೆ ವಸ್ತುಗಳನ್ನು ದಡದಲ್ಲಿ ಹಾಕಿ ಬೆಂಕಿ ಹಚ್ಚಿ ಹೊರಟು ಹೋಗುತ್ತಾರೆ ಅದರಿಂದ ಬರುವ ದಟ್ಟ ಹೊಗೆ ಸುತ್ತ ಮುತ್ತ ಹತ್ತು ಎಕರೆ ಪ್ರದೇಶದಲ್ಲಿ ರೇಷ್ಮೆ ಬೆಳೆ ಇದ್ದು ಆ ಬೆಳೆಗಳಲ್ಲಿ ಹೊಗೆ ಬೆರೆತು ರೇಷ್ಮೆ ಬೆಳೆಯಲ್ಲ ಹಾಳಾಗಿ ಹೋಗಿದೆ.
ಇಲ್ಲಿ ಹಂದಿ ಸಾಕಾಣಿಕೆಯನ್ನು ಮಾಡಲು ಗ್ರಾಮ ಪಂಚಾಯಿತಿಯಿಂದ ಅನುಮತಿ ಪಡೆದಿಲ್ಲ ರಾಜ್ಯ ವ್ಯಾಪ್ತಿ ಹಂದಿ ಜ್ವರ ಕಾಣಿಸಿಕೊಂಡಿದ್ದು ಅಕ್ಕಪಕ್ಕದ ಜಮೀನಿನ ರೈತರು ತಮ್ಮ ಜಮೀನುಗಳಲ್ಲಿ ಕೆಲಸಮಾಡಲು ಬಾಯದ ವಾತಾವರಣ ನಿರ್ಮಾಣವಾಗಿದೆ ಎಂದರು.
ಆದ್ದರಿಂದ ಜಿಲ್ಲಾಡಳಿತ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಇಲ್ಲಿರುವ ತ್ಯಾಜ್ಯವನ್ನು ಅತೀ ಜರೂರಾಗಿ ವಿಲೇವಾರಿ ಮಾಡಬೇಕು ಮತ್ತು ಎಂಪೈರ್ ಹೋಟೆಲ್ ನವರ ಮೇಲೆ ಗ್ರಾಮ ಪಂಚಾಯಿತಿಯು ಹೋಟೆಲ್ ನ ಉದ್ದಿಮೆ ಪರವಾನಿಗೆಯನ್ನು ರದ್ದು ಮಾಡಬೇಕು ಮತ್ತು ಕಾನೂನು ಕ್ರಮ ಕೈಗೊಳ್ಳಬೇಕು ನದಿಯನ್ನು ಸಂರಕ್ಷಣೆ ಮಾಡಬೇಕು ಇಲ್ಲದಿದ್ದರೆ ಗ್ರಾಮ ಪಂಚಾಯಿತಿಗೆ ಬೀಗ ಜಡಿದು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ವಿಜಯ್ ,ರಾಮಣ್ಣ, ಪ್ರದೀಪ್, ರತ್ನಾಕರ,ಗಂಗಣ್ಣ, ಗಿರೀಶ್, ಮಹೇಶ್, ಶ್ರೀನಿವಾಸ್, ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401