ರಾಜಕೀಯ
ಯೋಗೇಶ್ವರ್ ಮತ್ತು ಬಿಎಸ್ ವೈ ಗೆ ಎಚ್.ಡಿ.ಕೆ ತಿರುಗೇಟು ; ಭಾರೀ ಘಾಟು..!?
ಸುದ್ದಿದಿನ, ಮೈಸೂರು : ಸಿ.ಪಿ. ಯೋಗೇಶ್ವರ್ ಟ್ರಾನ್ಸಫರ್ ಹಣದಲ್ಲಿ ಚುನಾವಣೆ ಮಾಡಲಾಗ್ತಿದೆ ಅನ್ನೋ ಆರೋಪ ಹೇಳಿಕೆ ಗೆ ಟಾಂಗ್ ನೀಡಿದ ಎಚ್.ಡಿ.ಕೆ “ಯೋಗೇಶ್ವರ್ ಯಾರು, ಹೂ ಈಸ್ ಯೋಗೇಶ್ವರ್”. ಈ ಹಿಂದೆ ಯೋಗೇಶ್ವರ್ ಅರಣ್ಯ ಸಚಿವರಾಗಿದ್ದಾಗ ವರ್ಗಾವಣೆ ತಂದು ಚುನಾವಣೆ ಮಾಡಿದ್ರಾ? ಬಡವರಿಗೆ ಸೈಟ್ ಕೊಡ್ತಿನಿ ಅಂತ ಹೇಳಿ ಹಣ ಪಡೆದು ಮೋಸ ಮಾಡಿರೋರು ಅಂತವರೆಲ್ಲ ಈಗ ನನ್ನ ಬಗ್ಗೆ ಮಾತಾಡೋಕೆ ಏನು ಅರ್ಹತೆಯಿದೆ ಅವರಿಗೆ?
ನಾನು ನನ್ನ ಕಚೇರಿಯಲ್ಲಿ ಮೆರಿಟ್ ಮೇಲೆ ಅಧಿಕಾರಿಗಳ ವರ್ಗಾವಣೆ ನಡೀತವೆ,ಆದರೆ ಹಣದ ಮೇಲೆ ಯಾವುದೇ ಟ್ರಾನ್ಸ್ಪರ್ ಗಳು ನಡೆಯೋಲ್ಲ. ವರ್ಗಾವಣೆ ಮಾಡಿ ಹಣಪಡೆದು ಚುನಾವಣೆ ಮಾಡೊಕ್ಕಾಗುತ್ತಾ.? ಯೋಗೇಶ್ವರ್ ಓಪನ್ ಡಿಬೆಟ್ ಗೆ ರೆಡಿಯಾಗಲಿ ಬೇಕಾದರೆ. ಸುಮ್ನೆ ಸುಳ್ಳು ಆರೋಪಗಳನ್ನು ಮಾಡೋದು ಸರಿಯಲ್ಲ ಸಿ.ಪಿ ಯೋಗೀಶ್ವರ್ ಗೆ ಎಚ್. ಡಿ. ಕೆ ತಿರುಗೆಟು ನೋಡಿದರು.
ವೆಂಕ ಸೀನಾ ನಾಣಿ ಅವರದ್ದೆ ಅಧಿಕಾರ ಅಂತ ಬಿಎಸ್ವೈ ಹೇಳಿಕೆಗೆ ಹೆಚ್ಡಿಕೆ ತಿರುಗೇಟು ನೀಡಿದ ಎಚ್.ಡಿ.ಕೆ,” ವೆಂಕಾ ಸೀನಾ ನಾಣಿ ಅವರು ನಾವಲ್ಲ, ಯಾವ ಪಕ್ಷದಲ್ಲಿ ಅಪ್ಪ ಮಕ್ಕಳು, ಅಣ್ಣ ತಮ್ಮಂದಿರು ಇಲ್ಲ ಹೇಳಿ.? ಯಡಿಯೂರಪ್ಪ ಏಕೆ ಶಿವಮೊಗ್ಗದಲ್ಲಿ ತಮ್ಮ ಮಗನನ್ನೇ ನಿಲ್ಲಿಸಿದ್ದಾರೆ, ಬೇರೆ ಯಾರು ಇರ್ಲಿಲ್ವಾ? ನಾವೇ ನೇರವಾಗಿ ವಿಧಾನಸಭೆ, ರಾಜ್ಯಸಭೆಗೆ ಹೋಗ್ತಿಲ್ಲ. ಜನರು ಮುಂದೆ ಹೋಗ್ತಿವಿ ಅವತು ಮತ ಹಾಕಿ ನಮ್ಮನ ಗೆಲ್ಲಿಸುತ್ತಾರೆ ಎಂದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401