ದಿನದ ಸುದ್ದಿ
ಜಮೀನು ತೆರವುಗೊಳಿಸುವ ಕಾರ್ಯ ವಿರೋಧಿಸಿ, “ಶಿವಕುಳೆನೂರುನಿಂದ ಚನ್ನಗಿರಿಯವರೆಗೆ ಪಾದಯಾತ್ರೆ ನಡೆಸಲು ಕರ್ನಾಟಕ ರಣಧೀರ ಪಡೆ ನಿರ್ಧಾರ”
ಸುದ್ದಿದಿನ,ಚನ್ನಗಿರಿ : ಶಿವಕುಳೆನೂರು ಗ್ರಾಮದ ರೈತರಿಗೆ ನಾಯ್ಯ ಕೊಡಿಸಲು ಗ್ರಾಮದಿಂದ ಚನ್ನಗಿರಿಯವರೆಗೆ ಬೈಹತ್ ಪಾದಯಾತ್ರೆ ನಡೆಸಲು ಕರ್ನಾಟಕ ರಣಧೀರ ಪಡೆ ಸಮಿತಿ ತೀರ್ಮಾನಿಸಿದೆ ಎಂದು ಜಿಲ್ಲಾಧ್ಯಕ್ಷ ರಾಘು ದೊಡ್ಡಮನಿ ಹೇಳಿದರು.
ಸಂತೆಬೆನ್ನೂರು ಹೋಬಳಿ ವ್ಯಾಪ್ತಿಯಲ್ಲಿ ಬರುವಂತಹ ಶಿವಕುಳೆನೂರ ಗ್ರಾಮಕ್ಕೆ ಬೇಟಿ ನೀಡಿ ರೈತರ ಕಷ್ಟಸುಖಗಳನ್ನು ಗಮನಿಸಿ ಬಳಿಕ ಮಾತನಾಡಿದ ಅವರು, ಗ್ರಾಮದ ರೈತರು ಸುಮಾರು 70/80 ವರ್ಷಗಳ ಕಾಲ ಉಳುಮೆ ಮಾಡುತ್ತಾ ಜೀವನ ಸಾಗಿಸುತ್ತಿದ್ದ ಜಮೀನುಗಳನ್ನು ಅಮೃತ್ ಮಹಲ್ ಪಶು ಸಂಗೋಪನೆ ಸಂರ್ವಧನ ಸಮಿತಿಯವರಿಗೆ ಲೋಕಾಯುಕ್ತ ನ್ಯಾಯಾಲಯ ವಶಪಡಿಸಿಕೊಳ್ಳುವಂತೆ ಆದೇಶ ಮಾಡಿರುವ ಹಿನ್ನೆಲೆಯಲ್ಲಿ ಕಂದಾಯ ಅಧಿಕಾರಿಗಳು ನ್ಯಾಯಲಯದ ಆದೇಶದಂತೆ ಪೊಲೀಸ್ ಇಲಾಖೆ ಸಮ್ಮುಖದಲ್ಲಿ ಜಮೀನುಗಳನ್ನು ತೆರವುಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಿರುವುದು ಸರಿಯಾದ ಕ್ರಮವಲ್ಲ, ರೈತರ ಕಣ್ಣಿರಿಗಿಂತ ದೊಡ್ಡ ಕಾನೂನು ಯಾವುದು ಇಲ್ಲ, ಒಂದು ವೇಳೆ ಅವರ ಜಮೀನುಗಳನ್ನು ತೆರವುಗೊಳಿಸುವುದಾದರೆ ಮೊದಲು ಪರ್ಯಾಯವಾಗಿ ಅವರಿಗೆ ಭೂಮಿಯನ್ನು ನೀಡಿ ನಂತರ ತಮ್ಮ ಕಾರ್ಯಕ್ಕೆ ಚಾಲನೆ ನೀಡಬೇಕಾಗಿದೆ ಎಂದರು.
ಇಲ್ಲವಾದರೆ ಈ ವಾರದ ಅಂತ್ಯದೊಳಗೆ ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ವಿವಿಧ ಮಠಾಧೀಶರುಗಳು ಮತ್ತು ಹೋರಾಟಗಾರರುಗಳ ಚರ್ಚೆ ನಡೆಸಿ ಈ ವಾರದಲ್ಲೇ ಶಿವಕುಳೆನೂರು ಗ್ರಾಮದಿಂದ ಚನ್ನಗಿರಿ ತಾಲ್ಲೂಕು ಕಚೇರಿಯವರೆಗೆ ಬೃಹತ್ ಪಾದಯಾತ್ರೆ ನಡೆಸಿ ಬಳಿಕ ತಾಲ್ಲೂಕು ಕಚೇರಿಯನ್ನು ಮುತ್ತಿಗೆ ಹಾಕಲು ನಮ್ಮ ಕರ್ನಾಟಕ ರಣಧೀರ ಪಡೆ ನಿರ್ಣಯ ಮಾಡಿದ್ದು. ಅದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಮತ್ತೋಮ್ಮೆ ಸಭೆ ಕರೆದು ಗ್ರಾಮಸ್ಥರಿಗೆ ಅನುಕೂಲವಾಗುಂತೆ ಕ್ರಮ ಕೈಗೊಳ್ಳಬೇಕಾಗಿದೆ ಎಂದರು.
ತಾಲ್ಲೂಕು ಅದ್ಯಕ್ಷ ಟಿ.ರುದ್ರೇಶ್ ಮಾತನಾಡಿ ಕರ್ನಾಟಕ ರಣಧೀರ ಪಡೆ ಸಂಘಟನೆಯೂ ಶಿವಕುಳೆನೂರು ಗ್ರಾಮದ ರೈತರಿಗೆ ನ್ಯಾಯ ಸಿಗುವವರೆಗೂ ನಿಮ್ಮ ಜೊತೆ ಕೈ ಜೋಡಿಸುವತಹ ಕೆಲಸ ಮಾಡಲಿದ್ದು, ಯಾರು ಕೂಡ ಭಯ ಪಡುವ ಅಗತ್ಯವಿಲ್ಲ ಅಧಿಕಾರಿಗಳು ಸೂಕ್ತ ನ್ಯಾಯ ನೀಡದೆ ಹೊದರೆ ನಾವುಗಳು ಕಾನೂನು ಚೌಕಟ್ಟಿನಲ್ಲಿ ವಿವಿಧ ಸಂಘಸಂಸ್ಥೆಗಳು, ಮಠಾದೀಶರುಗಳ ಜೊತೆಗೂಡಿ ಬೃಹತ್ ಪಾದಯಾತ್ರೆ ಮಾಡುವ ಮುಖೇನಾ ತಾಲ್ಲೂಕು ಕಚೇರಿಗೆ ಮುತ್ತಿಗೆ ಹಾಕುವಂತಹ ಕೆಲಸ ಮಾಡಿದಾಗ ಮೂಲಕ ನ್ಯಾಯ ಪಡೆದುಕೊಳ್ಳೊಣ ಎಂದು ರೈತರಿಗೆ ಧೈರ್ಯ ತುಂಬಿದರು.
ಈ ವೇಳೆ ಗ್ರಾಮಸ್ಥರಾದ ಪ್ರಭು, ಕೃಷ್ಣಪ್ಪ, ಪರುಶುರಾಮ್, ಕುಬೇಂದ್ರಪ್ಪ, ಮಲಾತೇಶ್, ಹನುಮಂತಪ್ಪ, ನೂರಾರು ಮಹಿಳೆಯರು ಸೇರಿದಂತೆ ರಘುಪ್ರಸಾದ್. ಅರುಣ್, ಪ್ರದೀಪ್, ಚೇತನ್ ಸೇರಿದಂತೆ ಕರ್ನಾಟಕ ರಣಧೀರಪಡೆಯ ಜಿಲ್ಲಾ ಸಮಿತಿ ಮತ್ತು ತಾಲ್ಲೂಕು ಸಮಿತಿಯ ಪಧಾದಿಕಾರಿಗಳು ಪಾಲ್ಗೋಂಡಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243