ದಿನದ ಸುದ್ದಿ
ಚನ್ನಗಿರಿ ಮನೆ ಮಗ ನಾನು, ನಿಮ್ಮ ಋಣ ತೀರಿಸುವೆ : ಬಸವರಾಜು ವಿ ಶಿವಗಾಂಗ
ಸುದ್ದಿದಿನ, ದಾವಣಗೆರೆ : ನಾನು ಕೋಗಲೂರು ಗ್ರಾಮದಲ್ಲಿ ಹುಟ್ಟಿ ಬೆಳೆದ ಈ ಚನ್ನಗಿರಿ ತಾಲೂಕಿನ ಮನೆ ಮಗ. ಕ್ಷೇತ್ರ ದ ಋಣ ತೀರಿಸುವ ಅವಕಾಶ ಸಿಕ್ಕಿದೆ ನಾನು ನಿಮ್ಮ ಸೇವೆ ಮಾಡುತ್ತಿದ್ದೇನೆ ಎಂದು ಕಾಂಗ್ರೆಸ್ ಜಿಲ್ಲಾ ಕಿಸಾನ್ ಮೋರ್ಚಾ ಅಧ್ಯಕ್ಷರಾದ ಬಸವರಾಜು ವಿ ಶಿವಗಂಗಾ ಹೇಳಿದರು.
ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಕಿಸಾನ್ ಮೋರ್ಚಾ ದಿಂದ ಬಡವರಿಗೆ ಆಹಾರ ಧಾನ್ಯ ಕಿಟ್ ನೀಡುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ . ನಲ್ಲೂರು ನಲ್ಲಿ 2 ಸಾವಿರ ಮಂದಿ ಬಡವರು, ಕಾರ್ಮಿಕರಿಗೆ ಆಹಾರ ಧಾನ್ಯ ಕಿಟ್ ವಿತರಣೆ ಮಾಡಿದರು. ವಿಶೇಷ ಎಂದರೆ ಸಾಮಾಜಿಕ ಅಂತರಕ್ಕೆ ಆದ್ಯತೆ ನೀಡಿ ಯಾವುದೇ ಗೊಂದಲ ಉಂಟಾಗದಂತೆ ಎಲ್ಲರಿಗೂ ಆಹಾರ ಧಾನ್ಯ ಕಿಟ್ ನೀಡಲಾಯಿತು.
ಸರ್ಕಾರಿ ಶಾಲೆ ಹಾಗೂ ಉರ್ದು ಸರ್ಕಾರಿ ಶಾಲೆ ಆವರಣದಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಂಡು ಕುರ್ಚಿ ವ್ಯವಸ್ಥೆ ಕಲ್ಪಿಸಿ ಆಹಾರ ಧಾನ್ಯ ಕಿಟ್ ನೀಡಲಾಯಿತು. ಕೊರೊನಾ ಹಿನ್ನೆಲೆ ಕೆಲಸವಿಲ್ಲದೆ ದುಡಿಮೆ ಇಲ್ಲದೆ ಮನೆಯಲ್ಲೇ ಇದ್ದ ಕೂಲಿ ಕಾರ್ಮಿಕರು ಸಂಕಷ್ಟದಲ್ಲಿದ್ದರು ಈ ಹಿನ್ನೆಲೆ ಚನ್ನಗಿರಿ ತಾಲೂಕ್ ಲ್ಲಿ ಈಗಾಗಲೇ ಹಲವೆಡೆ ಆಹಾರ ಧಾನ್ಯ ಕಿಟ್ ನೀಡಿದ್ದು ಇಂದು ನಲ್ಲೂರು ಗ್ರಾಮದಲ್ಲಿ ಆಹಾರ ಧಾನ್ಯ ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇದೇವೇಳೆ ಆಶಾ ಕಾರ್ಯಕರ್ತರನ್ನ ಸನ್ಮಾನಿಸಿ ಗೌರವಿಸಲಾಯಿತು. ರೈತ ಮಗನಾಗಿ ಅವರ ಸೇವೆಯನ್ನೂ ಮಾಡುತ್ತಿರುವೆ ಕಾಂಗ್ರೆಸ್ ಕಿಸಾನ್ ಅಧ್ಯಕ್ಷನಾಗಿದ್ದು ಅಳಿವು ಸೇವೆ ಮಾಡುವೆ ಜಿಲ್ಲೆಯ ರೈತರು ಯಾವ ಸಮಸ್ಯೆ ಬಂದರು ನನ್ನ ಸಂಪರ್ಕ ಮಾಡಿ ಬಿತ್ತನೆ ಬೀಜ, ಗೊಬ್ಬರ, ಕೀಟ ನಾಶಕ ಸೂಕ್ತವಾಗಿ ರೈತರಿಗೆ ಸಿಗುವಂತ ವ್ಯವಸ್ಥೆ ಮಾಡಲು ಪ್ರಯತ್ನಿಸುವೆ ಎಂದು ಭರವಸೆ ನೀಡಿದರು.
ಇನ್ನೂ ಭದ್ರ ನೀರನ್ನ ಕಾಲುವೆಗಳಿಗೆ ಹರಿಸುವ ಕುರಿತಂತೆ ಅಧಿಕಾರಿಗಳ ಜೊತೆ ಚರ್ಚೆ ಮಾಡುವೆ ರೈತರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳುತ್ತೇವೆ ಎಂದರು. ಇನ್ನೂ ನಾನು ರಾಜಕೀಯ ಉದ್ದೇಶದಿಂದ ಬಂದಿಲ್ಲ ನಾನು ಚುನಾವಣೆ ಗೆ ಸ್ಪರ್ಧೆ ಮಾಡುತ್ತೇನೋ ಇಲ್ಲವೋ ಗೊತ್ತಿಲ್ಲ ನಿಮ್ಮ ಸೇವೆಗೆ ನಾನು ಸದಾ ಸಿದ್ಧ ಎಂದರು. ನಾನು ಚನ್ನಗಿರಿ ಕ್ಷೇತ್ರದ ವ್ಯಕ್ತಿ ಎಂದು ಹೇಳಿಕೊಳ್ಳುಲು ಹೆಮ್ಮೆಯಾಗುತ್ತದೆ ನಾನು ಇಲ್ಲೇ ನಿಮ್ಮ ಸೇವೆ ಮಾಡುವೆ ನಿಮ್ಮ ಜೊತೆ ಯಾವಾಗಲು ಇರುವೆ ಎಂದು ಬಸವರಾಜು ವಿ ಶಿವಗಂಗಾ ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮೆದಿಕೆರೆ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕರಾದ ವಿಜಯ ಕುಮಾರ್, ಗ್ರಾ.ಪಂ ಮಾಜಿ ಅಧ್ಯಕ್ಷರಾದ ಅಬ್ದುಲ್ ರಜಾಕ್, ತಾ.ಪಂ. ಸದಸ್ಯರಾದ
ಇಮ್ತಿಯಾಜ್ ಬೇಗ್, ನಿಸಾರ್ ಅಹ್ಮದ್, ಕಾಂಗ್ರೆಸ್ ಮುಖಂಡರಾದ ರಾಮಣ್ಣ, ಸೈಫುಲ್ಲಾ, ಪಾಲಕ್ಷ ಅವರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243