ದಿನದ ಸುದ್ದಿ
ದಾವಣಗೆರೆ | ಎಸ್ ಎಸ್ ಎಲ್ ಸಿ CBSC ಫಲಿತಾಂಶ : ಸ್ಪಂದನ 94% ಪಡೆದು ಸಾಧನೆ
ಸುದ್ದಿದಿನ, ದಾವಣಗೆರೆ : ಏಪ್ರಿಲ್ 6 ರಂದು ಪ್ರಕಟವಾದ CBSC 10ನೇ ತರಗತಿ ಫಲಿತಾಂಶದಲ್ಲಿ, ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಕಟ್ಟಿಗೆಹಳ್ಳಿ ಗ್ರಾಮದ ಕೆ.ಎನ್. ಸ್ಪಂದನ ಶೇ.94 ರಷ್ಟು ಅಂಕ ಗಳಿಸಿ ಸಾಧನೆ ಮಾಡಿದ್ದಾರೆ.
ಕೆ.ಎಸ್.ನಾಗರಾಜ್, ಕವಿತಾ ದಂಪತಿಯ ಪುತ್ರಿ ಸ್ಪಂದನ, ದಾವಣಗೆರೆ ಜಿಲ್ಲೆಯ ದೇವರಹಳ್ಳಿಯ ಜವಾಹರ್ ನವೋದಯ ವಿದ್ಯಾಲಯದ ವಿದ್ಯಾರ್ಥಿನಿ. ಕನ್ನಡ ಮತ್ತು ಇಂಗ್ಲೀಷ್ನಲ್ಲಿ ತಲಾ 93, ಹಿಂದಿಯಲ್ಲಿ 92, ಸಮಾಜ ಮತ್ತು ವಿಜ್ಞಾನದಲ್ಲಿ ತಲಾ 94 ಅಂಕ ಪಡೆದಿರೋ ಸ್ಪಂದನಾ, ಗಣಿತದಲ್ಲಿ 97 ಅಂಕ ಪಡೆಯೋ ಮೂಲಕ ಸಾಧನೆ ಮಾಡಿದ್ದಾರೆ. ಸ್ಪಂದನಾಗೆ ಸಾಧನೆಗೆ ಶಿಕ್ಷಕರು, ಸಂಬಂಧಿಕರು ಸಿಹಿ ತಿನಿಸುವ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243