ಸಿನಿ ಸುದ್ದಿ
ಬೆಂಗಳೂರಿಗೆ ಬಂದಿಳಿದ ‘ನವಜೋಡಿ ದೀಪಿಕಾ ರಣವೀರ್’
ಸುದ್ದಿದಿನ,ಬೆಂಗಳೂರು : ಸಿನಿ ಪ್ರಿಯರ ರಸಿಕತೆಯ ಬಾಲಿವುಡ್ನ ಜನಪ್ರಿಯ ತಾರಾ ಜೋಡಿ ಕೆಎಐಎಲ್ ಗೆ ದೀಪಿಕಾ ರಣವೀರ್ ಬೆಂಗಳೂರಿಗೆ ಆಗಮಿಸಿದ್ದಾರೆ.
ಇಟಲಿಯಲ್ಲಿ ಸಪ್ತಪದಿತುಳಿದ ದಂಪತಿಗಳಿಗೆ ಈಗ ಬೆಂಗಳೂರಲ್ಲಿ ಆರತಕ್ಷತೆ ಕಾರ್ಯಕ್ರಮವನ್ನು ಕುಟುಂಬದವರು ಹಮ್ಮಿಕೊಂಡಿದ್ದಾರೆ. ಮದುವೆಯ ನಂತರ ಇದೇ ಮೊದಲ ಬಾರಿಗೆ ಬೆಂಗಳೂರಿಗೆ ಆಗಮಿಸಿದ ಜೋಡಿಗೆ, ಕರ್ನಾಟಕದ ಅಳಿಯನಿಗೆ ಏರ್ ಪೋರ್ಟನಲ್ಲಿ ಅಭಿಮಾನಿಗಳ ಅದ್ದೂರಿ ಸ್ವಾಗತಕೋರಲಾಯಿತು.
ಮುಂಬೈನಿಂದ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನವ ಜೋಡಿ ಕುಟುಂಬದೊಂದಿಗೆ ಬಂದಿಳಿದರು. ಇವರನ್ನು ಹಾಗೂ ಬಾಲಿವುಡ್ ಸ್ಟಾರ್ ನಟರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದರು.
ನವೆಂಬರ್ 21ರಂದು ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ನಲ್ಲಿ ನವ ದಂಪತಿಗಳ ಅರತಕ್ಷತೆ ಕಾರ್ಯಕ್ರಮಕ್ಕೆಬಾಲಿವುಡ್ ಮತ್ತು ದಕ್ಷಿಣ ಭಾರತದ ಸಿನಿಮಾ ತಾರೆಯರು ಮತ್ತು ಗಣ್ಯರು ಅರತಕ್ಷತೆ ಕಾರ್ಯಕ್ರಮದಲ್ಲಿ ಭಾಗಯಾಗಲಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401