ದಿನದ ಸುದ್ದಿ

ಮುತ್ತಿಗೋಡು ಸಾಕಾನೆ ‘ರಂಗ’ ಇನ್ನಿಲ್ಲ..!

Published

on

ಸುದ್ದಿದಿನ ಡೆಸ್ಕ್ : ಕೊಡಗು-ಮೈಸೂರು ಗಡಿಯಲ್ಲಿರುವ ಮತ್ತಿಗೋಡು ಬಳಿ ಘಟನೆ ಖಾಸಗಿ ಬಸ್ ಡಿಕ್ಕಿ ಹೊಡೆದು ಮತ್ತಿಗೋಡು ಆನೆ ಶಿಬಿರಕ್ಕೆ ಸೇರಿದ ಆನೆ ರಂಗ(45) ಸಾವನ್ನಪ್ಪಿದ್ದಾನೆ.

ರಾತ್ರಿ ರಸ್ತೆ ಬದಿ ಮೇಯುತ್ತಿದ್ದ ಆನೆ ರಂಗ ರಾತ್ರಿ 2 ಗಂಟೆ ವೇಳೆಗೆ ಸಂಭವಿಸಿದ ಅಪಘಾತದಲ್ಲಿ
ತೀವ್ರ ಗಾಯಗೊಂಡ ಆನೆಗೆ ವೈದ್ಯರಿಂದ ಚಿಕಿತ್ಸೆ ನೀಡಲಾಗಿತ್ತು. ಆನೆಯನ್ನು ಎಂದಿನಂತೆ ಮೇಯಲು ಬಿಟ್ಟಿದ್ದ ಮಾವುತರು. ನಂತರ ಚಿಕಿತ್ಸೆ ಫಲಕಾರಿಯಾಗದೆ ಸಾಕಾನೆ ರಂಗ ಸಾವನ್ನಪ್ಪಿದ್ದಾನೆ.

ವಿರಾಜಪೇಟೆ ತಾ. ಮತ್ತಿಗೋಡು ಆನೆ ಶಿಬಿರದ ಬಳಿ ಘಟನೆ ನಡೆದಿತ್ತು. ಬನ್ನೇರುಘಟ್ಟದಿಂದ ಇತ್ತಿಚೆಗೆ ತರಲಾಗಿದ್ದ ಆನೆ ಇದು. ರಸ್ತೆ ಬದಿ ಮೇಯುತ್ತಿದ್ದ ಆನೆಗೆ ಡಿಕ್ಕಿಯಾದ ಬಸ್.ಮಂಜು ಕವಿದ ಹಿನ್ನೆಲೆ ಸಂಭವಿಸಿತು ಅಪಘಾತ.ರಾತ್ರಿ ಪೂರಾ ರಸ್ತೆ ಬದಿ ಬಿದ್ದು ನರಳಾಡಿದ್ದ ರಂಗ.ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version