ದಿನದ ಸುದ್ದಿ
ಬಿಗ್ ಬ್ರೇಕಿಂಗ್ | ‘2000 ಕೋಟಿ GST ಹಗರಣ’ ಬಯಲಿಗೆ ; 14 ಕಂಪನಿಗಳ ಮೇಲೆ ರೇಡ್..!
ಸುದ್ದಿದಿನ,ಬೆಂಗಳೂರು : ಕರ್ನಾಟಕ ವಾಣಿಜ್ಯ ತೆರಿಗೆ ಅಧಿಕಾರಿಗಳ ಬೃಹತ್ ಕಾರ್ಯಾಚರಣೆ ನಡೆಸಿದ್ದು ಸುಮಾರು 2000ಕೋಟಿ ರೂ ಹಗರಣ ಬಯಲಿಗೆ ಬಂದಿ್ರದೆ. ಜಿಎಸ್ಟಿ ಜಾರಿ ನಂತರ ಇಡೀ ದೇಶದಲ್ಲೇ ಇದು ಬೃಹತ್ ರೇಡ್ ಆಗಿದ್ದು, 14 ಕಂಪನಿಗಳ ಮೇಲೆ ರಾಜ್ಯದ ವಿವಿಧೆಡೆ ಕಾರ್ಯಾಚರಣೆ ನಡೆಸಿ ಮೂವರನ್ನು ವಶಕ್ಕೆ ಪಡೆದು ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.
203 ಕೋಟಿ ಮೊತ್ತದ ಬೋಗಸ್ ಬಿಲ್ ನೀಡಿರುವ ಮೂವರು ಆರೋಪಿಗಳು, ನೂರಾರು ಜಿಎಸ್ಟಿ ಡೀಲರ್ಗಳಿಗೆ ಕೋಟಿ ಕೋಟಿ ರೂ ಬೋಗಸ್ ಬಿಲ್ ಕೊಟ್ಟಿದ್ದಾರೆ. ಲ್ಯಾಪ್ಟಾಪ್, ಕಂಪ್ಯೂಟರ್,ಡೈರಿ ಮತ್ತು ದಾಖಲೆಗಳು ವಶಕ್ಕೆ ಪಡೆದಿರುವ ಅಧಿಕಾರಿಗಳು, ಪ್ರಮುಖವಾಗಿ ತೆರಿಗೆ ವಂಚನೆ ಮಾಡಿರುವ ಕಂಪನಿ ರಾಯಲ್ ಎಂಟರ್ ಪ್ರೈಸಸ್, ರಾಜೀವ್ ಎಂಟರ್ ಪ್ರೈಸಸ್ ಈ ಎರಡು ಕಂಪನಿಗಳ ಮಾಲೀಕ ವಿಕ್ರಮ್ ದಗಲ್ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401