ಲೈಫ್ ಸ್ಟೈಲ್

ಋತುಬಂಧದ ನಂತರ ರಕ್ತಸ್ರಾವವು ಎಂಡೊಮೆಟರಿ ಕ್ಯಾನ್ಸರ್ ಹೇಗೆ ಆಗತ್ತೆ ಗೊತ್ತಾ..?

Published

on

  • ಡಾ.ಗರೀಮಾ ಜೈನ್,ಎಂಬಿಬಿಎಸ್, DNB (OBG)ಕನ್ಸಲ್ಟೆಂಟ್, ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ,ಅಪೊಲೊ ಕ್ರೇಡಲ್ & ಮಕ್ಕಳ ಆಸ್ಪತ್ರೆ – ಬ್ರೂಕ್ ಫೀಲ್ಡ್, ಬೆಂಗಳೂರು.

ಇದು ಎಷ್ಟು ಸಾಮಾನ್ಯವಾಗಿವೆಯೆಂದರೆ, ಮಹಿಳೆಯರು ಋತುಬಂಧದ ನಂತರದ ರಕ್ತಸ್ರಾವವನ್ನು ವರ್ಷಂದಿನವರೆಗೆ ಅನುಭವಿಸುತ್ತಾರೆ ಆದರೆ ಇದರ ಬಗ್ಗೆ ಏನೂ ಯೋಚಿಸುವುದಿಲ್ಲ ಮತ್ತು ಇದು ಎಂಡೊಮೀಟ್ರಿಯಲ್ ಕ್ಯಾನ್ಸರ್ ನ ಲಕ್ಷಣವಾಗಿದೆ.

ಋತುಬಂಧವೆಂದರೆ ಮಹಿಳೆ ಸತತ ಹನ್ನೆರಡು ತಿಂಗಳು ಋತುಸ್ರಾವವನ್ನು ಹೊಂದದೇ ಇದ್ದಾಗ. ಆರಂಭದಲ್ಲಿ, ಋತುಬಂಧಕ್ಕೆ ಕಾರಣವಾಗುವ ಅನಿಯಮಿತ ರಕ್ತಸ್ರಾವವನ್ನು ನೀವು ಅನುಭವಿಸಬಹುದು. ಈ ಹಂತವನ್ನು ಪೆರಿಮೆನೋಪಾಸ್ ಎಂದು ಕರೆಯಲಾಗುತ್ತದೆ.

ಆದರೆ, ನೀವು ಋತುಬಂಧದಲ್ಲಿದ್ದ ನಂತರ ಯೋನಿಸ್ರಾವವನ್ನು ನಿಲ್ಲಿಸಬೇಕು. ಕೆಲವೊಮ್ಮೆ ಋತುಬಂಧದ ನಂತರ ರಕ್ತಸ್ರಾವಕ್ಕೆ ಕಾರಣವಾಗುವಂತಹ ಕೆಲವು ಕಾರಣಗಳಿರಬಹುದು. ಆದರೆ, ಎಂಡೋಮೀಟ್ರಿಯಲ್ ಕ್ಯಾನ್ಸರ್ ನಿಂದಾಗಿ ಶೇ.10ರಷ್ಟು ಮಹಿಳೆಯರು ಮುಟ್ಟಿನ ನಂತರದ ರಕ್ತಸ್ರಾವವನ್ನು ಹೊಂದಿದ್ದಾರೆ ಮತ್ತು ಎಂಡೋಮೆಟ್ರೈಯಲ್ ಕ್ಯಾನ್ಸರ್ ನಿಂದ ಬಳಲುತ್ತಿರುವ ಮಹಿಳೆಯರಲ್ಲಿ 90 ಪ್ರತಿಶತ ದಷ್ಟು ಮಹಿಳೆಯರು ಋತುಬಂಧದ ನಂತರ ರಕ್ತಸ್ರಾವವನ್ನು ಹೊಂದಿದ್ದಾರೆ ಎಂದು ವರದಿ ಮಾಡಲಾಗಿದೆ.

ಇದನ್ನೂ ಓದಿ | ವಯಸ್ಸು ಕೇವಲ ಒಂದು ಸಂಖ್ಯೆಯಷ್ಟೆ, ಮಹಿಳೆಯರು ಹೆಚ್ಚು ಕಾಲ ಫಿಟ್ ಅಂಡ್ ಹೆಲ್ತಿಯಾಗಿರಲು ನಿಮ್ಮಆಯ್ಕೆ ಹೀಗಿರಲಿ..!

ಎಂಡೋಮೀಟ್ರಿಯಲ್ ಕ್ಯಾನ್ಸರ್ ನ ಪ್ರಮಾಣ ವು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿದೆ ಮತ್ತು ಇದು ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಇದಕ್ಕೆ ಕಾರಣ ಬೊಜ್ಜು, ಹಾರ್ಮೋನ್ ಗಳ ಮೇಲೆ ಪರಿಣಾಮ ಬೀರುತ್ತದೆ. 60 ರ ಹರೆಯದ ಮಹಿಳೆಯರು ಎಂಡೋಮೀಟ್ರಿಯಲ್ ಕ್ಯಾನ್ಸರ್ ನಿಂದ ಸಾಮಾನ್ಯವಾಗಿ ಬಳಲುತ್ತಿದ್ದಾರೆ.

ಸಾಮಾನ್ಯವಾಗಿ ಋತುಚಕ್ರದ ನಂತರದ ಮಹಿಳೆಯ ಗರ್ಭಕೋಶದ ಒಳಪದರ ವು ತೆಳುವಾಗಿರುತ್ತದೆ, ಏಕೆಂದರೆ ಅವರು ಋತುಸ್ರಾವವನ್ನು ಹೊಂದಿರುವುದಿಲ್ಲ. ಆಕೆಗೆ ಎಂಡೋಮೆಟ್ರೈಲ್ ಕ್ಯಾನ್ಸರ್ ಇದ್ದರೆ, ಗರ್ಭಾಶಯದ ಒಳಪದರ ದಪ್ಪವಾಗಿ ಕಾಣುತ್ತದೆ.

ನಿಮ್ಮ ವೈದ್ಯರು ಗರ್ಭಾಶಯದ ಒಳಪದರವು ದಪ್ಪವಾಗಿದೆ ಎಂದು ಗಮನಿಸಿದಲ್ಲಿ, ಅವರು ಅಥವಾ ಆಕೆ ಬಯಾಪ್ಸಿಯನ್ನು ಶಿಫಾರಸು ಮಾಡಿದರೆ, ಅದರಲ್ಲಿ ಗರ್ಭಾಶಯದ ಲೈನಿಂಗ್ ನ ಮಾದರಿಯನ್ನು ತೆಗೆದುಕೊಂಡು ಮುಂದಿನ ಪರೀಕ್ಷೆಗೆ ಕಳುಹಿಸಲಾಗುತ್ತದೆ.

ಡಾ.ಗರೀಮಾ ಜೈನ್

ಎಂಡೋಮೆಟ್ರೈಯಲ್ ಅಥವಾ ಗರ್ಭಕೋಶದ ಕ್ಯಾನ್ಸರ್ ಅನ್ನು ಶಸ್ತ್ರಚಿಕಿತ್ಸೆಯ ಮೂಲಕ ಚಿಕಿತ್ಸೆ ಮಾಡಬಹುದು, ನಂತರ ಕಿಮೋಥೆರಪಿ ಮತ್ತು/ಅಥವಾ ವಿಕಿರಣದಿಂದ ಚಿಕಿತ್ಸೆ ಪಡೆಯಬಹುದು. ಸಾಮಾನ್ಯವಾಗಿ, ದ್ವಿಪಕ್ಷಿಯ ಸಾಲ್ಪಿಂಗೊ-ಊಫೋರೆಕ್ಟಮಿಯ ಜೊತೆಗೆ ಹಿಸ್ಟರೆಕ್ಟಮಿಯನ್ನು ಗರ್ಭಕೋಶದ ಕ್ಯಾನ್ಸರ್ ಗೆ ಚಿಕಿತ್ಸೆಯಾಗಿ ಮಾಡಲಾಗುತ್ತದೆ.

ಈ ಶಸ್ತ್ರಚಿಕಿತ್ಸೆಯಲ್ಲಿ ಗರ್ಭಕೋಶ, ಅಂಡಾಶಯ, ಗರ್ಭಕಂಠ ಮತ್ತು ಫಾಲೋಪಿಯನ್ ನಾಳಗಳನ್ನು ತೆಗೆದುಹಾಕಲಾಗುತ್ತದೆ. ಕ್ಯಾನ್ಸರ್ ಮರುಕಳಿಸುವುದನ್ನು ತಡೆಯಲು ಶಸ್ತ್ರಚಿಕಿತ್ಸೆ ಯು ಹೆಚ್ಚು ಸಹಾಯ ಮಾಡುತ್ತದೆ. ಗರ್ಭಕೋಶದಾಚೆಗೆ ಕ್ಯಾನ್ಸರ್ ಹರಡಿದರೆ ವಿಕಿರಣ ಮತ್ತು ಕೀಮೋಥೆರಪಿ ಯನ್ನು ಮಾಡಬಹುದು.

ಋತುಬಂಧದ ನಂತರ ರಕ್ತಸ್ರಾವ ಅಥವಾ ಗುರುತುಗಳು ಕಂಡುಬಂದರೆ, ನೀವು ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ನಿಮ್ಮ ಮುಂದಿನ ಯೋಜಿತ ತಪಾಸಣೆಯವರೆಗೆ ನೀವು ಕಾಯಬಾರದು, ಏಕೆಂದರೆ ಋತುಬಂಧದ ನಂತರ ಯೋನಿ ಸ್ರಾವವನ್ನು ಕಡೆಗಣಿಸಬಾರದು.

ಆರಂಭಿಕ ಹಂತದಲ್ಲೇ ಪತ್ತೆಯಾದರೆ, ಮಹಿಳೆಯರು ಕನಿಷ್ಠ 5 ವರ್ಷಗಳ ಕಾಲ ಎಂಡೋಮೆಟ್ರೈಲ್ ಕ್ಯಾನ್ಸರ್ ನಿಂದ ಬದುಕುಳಿಯುವ ಸಾಧ್ಯತೆ ಶೇ.95ರಷ್ಟು ಇದೆ. ಗರ್ಭಕೋಶದ ಹೊರಗೆ ಕ್ಯಾನ್ಸರ್ ಹರಡಿದರೆ, ಬದುಕುವ ಸಾಧ್ಯತೆ ಯು ಶೇಕಡಾ 16 ರಿಂದ 45 ರಷ್ಟು ಕಡಿಮೆಯಾಗುತ್ತದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version