ಲೋಕಾರೂಢಿ

ಕಾಶ್ಮೀರದ ಪ್ರಕೃತಿ ತಾಣಗಳು ನಾಶವಾದರೆ..!?

Published

on

ಸ್ನೇಹಿತರೆ,

ಜಮ್ಮು-ಕಾಶ್ಮೀರಕ್ಕೆ ಪ್ರತ್ಯೇಕ ಸ್ಥಾನಮಾನಗಳನ್ನು ಕೊಡುವ ಆರ್ಟಿಕಲ್ ತ್ರೀ ಸವೆಂಟಿ ಇನ್ ಮುಂದೆ ಕಾಶ್ಮೀರಕ್ಕೆ ಅಪ್ಲಯ್ ಆಗುವುದಿಲ್ಲ. ಈಗ ಯಾರು ಬೇಕಾದರೂ ಯಾವಾಗ ಬೇಕಾದರೂಹೋಗಬಹುದು,ನೆಲೆಸಬಹುದು ,ಆಸ್ತಿ ಖರೀದಿ ಮಾಡಬಹುದು ನಿಮ್ಮದಾಗಿಸಿಕೊಳ್ಳಬಹುದು. ಆದರೆ ಇದೆಲ್ಲರ ಮಧ್ಯ ನಮಿಗೆ ಹೊಳೆಯುವುದು ಕಾಶ್ಮೀರದ ಸುಂದರ ಪ್ರಕೃತಿ ಹಾಗೂ ಕೆಲವೇ ವರ್ಷಗಳಲ್ಲಿ ಅದು ಇನ್ನು ಯಾವ ಪರಿ ಹಾಳಾಗಬಹುದು ಎಂಬ ಆತಂಕ!

‘ನಮಸ್ತೆ ಶಾರದಾದೇವಿ
ಕಾಶ್ಮೀರ ಪುರ ವಾಸಿನಿ’ ಶ್ಲೋಕ ಕೇಳಿದ್ದೀವಿ ಸಾಕಷ್ಟು ಬಾರಿ. ಹೇಳಿ ಕೊಂಡಿದ್ದೇವೆ ಕೂಡ. ಕಾಶ್ಮೀರ ವ್ಯಾಕರಣಶಾಸ್ತ್ರದ ಊರು, ಕಾಶ್ಮೀರ ತಾಯಿ ಶಾರದೆಯ ನೆಲೆ ಕಾಶ್ಮೀರ ಭೂಲೋಕ ಸ್ವರ್ಗ ಅಲ್ಲಿನ ಹಿಮಾಚ್ಛಾದಿತ ಪರ್ವತ ಶ್ರೇಣಿಗಳು ಹಸಿರು ಹೊದ್ದು ಗಗನ ಚುಂಬಿಸುವ ಭಾರಿ ವೃಕ್ಷಗಳ ಕಾಡು ಬೆಟ್ಟಗಳಲ್ಲಿ ಬಾಸ್ಮತಿ ಅಕ್ಕಿ ಬೆಳೆಯುವ ಫಲವತ್ತಾದ ನೆಲ ಇದೆ ಹಾಗೆ ಏನೂ ಬೆಳೆಯಲಾಗದ ಬರಡುಭೂಮಿ ಕೂಡ ಇದೆ .
ಕಾಶ್ಮೀರದಲ್ಲಿ ಏನಿಲ್ಲ? ಅಲ್ಲಿ ಸುಂದರ ಆಪಲ್ ತೋಟಗಳಿವೆ, ಬಾಸುಮತಿ ಅಕ್ಕಿ ಬೆಳೆಯುವ ನೆಲೆಯಿದೆ

ಮೊದಲನೇದಾಗಿ ನಾವು ಲಡಾಖನ ವಿಷಯಕ್ಕೆ ಬರುವುದಾದರೆ , ಹಿಮಾಲಯದ ಕಣಿವೆಯಲ್ಲಿನ ಕೋಲ್ಡ್ ಡೆಸರ್ಟ್! ವಿಶ್ವದ ಅತ್ಯಂತ ಪ್ರಮುಖ ಹಾಗು ಅತ್ಯಂತ ಅದ್ಭುತ ಟ್ರೆಕಿಂಗ್ ಪಾಯಿಂಟ್ಗಳ್ಲಲಿ ಒಂದು ಅದರಲ್ಲೂ ನೀವು ಬೈಕ್ ಅಡ್ವೆಂಚರ್ ಬಗ್ಗೆ ಆಸಕ್ತಿ ಹೊಂದಿದ್ದರೆ ನಿಮಗೆ ಇಲ್ಲಿ ಸಿಗೋ ಥ್ರಿಲ್ಲಿಂಗ್ ಎಕ್ಸ್ಪೀರಿಯೆನ್ಸ್ ಬೇರೆಯಲ್ಲೂ ಸಿಗುವುದಿಲ್ಲ.
ಇಲ್ಲಿನ ಐಸ್ ಡೆಸರ್ಟ್ ನಡುವೆ ಒಂಟೆಗಳ ಮೇಲೆ ಕೂತು ಪ್ರಕೃತಿಯನ್ನ ಸವಿಯೋದಿದೆಯಲ್ಲಾ, ಅದು ನಿಜಕ್ಕೂ ಅದ್ಭುತವಾದ ಅನುಭವ.

ಇನ್ನು ಕಾಶ್ಮೀರದ ಕಣಿವೆ, ಅದನ್ನೊಂದು ಭೂಲೋಕದ ಸ್ವರ್ಗ ಅಂತಾನೇ ವರ್ಣಿಸುತ್ತಾರೆ. ನೀವು ಮಾರ್ತಾಂಡ ಸೂರ್ಯ ದೇವಾಲಯದ ಅವಶೇಷಗಳನ್ನುಕಣ್ಣುತುಂಬಾ ನೋಡಬಹುದು. ಇದು ಕೋನಾರ್ಕ್ ಸೂರ್ಯ ದೇವಾಲಯಕ್ಕಿಂತ ಹಳೆಯ ದೇವಾಲಯ.
ಇನ್ನು ದಾಲ್ ಲೇಕ್, ಮುಘಲ್ ಗಾರ್ಡನ್, ಪೆಹಲ್ಗಮ್,ಸೋನಾಮರ್ಗ್, ಅಂತ ಕರೆಸಿಕೊಳ್ಳುವ ಶಾಲಿಮಾರ್ ತೋಟಗಳು ಸದಾಕಾಲ ಜನರನ್ನ ಆಕರ್ಷಿಸುತ್ತವೆ. ಇನ್ನು ಅಮರನಾಥನ ದೇವಾಲಯ ಇಲ್ಲೇ ಇದೆ. ಕೇಸರಿ ಬೆಳೆಯುವ ವಿಶ್ವದ 3 ರಾಜ್ಯಗಳ ಪೈಕಿ ಈ ಕಾಶ್ಮೀರ ಕೂಡ ಒಂದು.

ಇನ್ನು ಕಾಶ್ಮೀರದ ಸ್ವಲ್ಪ ಕೆಳಕೆ ಬಂದರೆ ಜಮ್ಮು ಇದೆ. ಇಲ್ಲಿ ಮಾತ ವೈಶ್ನೋದೇವಿಯ ದೇವಾಲಯವಿದೆ. ಪ್ರತಿವರ್ಷ ಸುಮಾರು ೧ ಕೋಟಿ ಭಕ್ತರು ಮಾತ ವೈಷ್ಣದೇವಿಯ ದರ್ಶನಕ್ಕಾಗಿ ಬರುತ್ತಾರೆ. ಇಂಥ ಜಮ್ಮು ಕಾಶ್ಮೀರ ಲಡಾಖ್ ಪ್ರದೇಶಕ್ಕೆ ಇನ್ನು ಯಾರು ಬೇಕಾದರೂ ಹೋಗಿ ನೆಲೆ ನಿಲ್ಲಬಹುದು, ವ್ಯಾಪಾರ ಮಾಡಬಹುದು, ಬದುಕು ಕಟ್ಟಿಕೊಳ್ಳಬಹುದು. ಆದರೆ ಗೆಳೆಯರೇ, ಒಂದು ಸರಿ ಯೋಚನೆ ಮಾಡಿ! ಅಲ್ಲಿ ಕಡಿಮೆ ಬೆಲೆಗೆ ಭೂಮಿ ಸಿಗುತ್ತೆ, ಬಾಸುಮತಿ ಅಕ್ಕಿ ಬೆಳೆತಿವಿ ಅಂತ ನಮ್ಮ ಆಂಧ್ರದ ರೈತರೇನಾದ್ರೂ ಅಲ್ಲಿಗೆ ಹೋಗಿ ಬಿಟ್ಟರೆ, ಐದೇ-ಐದು ವರ್ಷಗಳಲ್ಲಿ ಅಲ್ಲಿನ ನೆಲಕ್ಕೆ ಕೆಮಿಕಲ್ ಅನ್ನುಹಾಕಿ ಆ ಫಲವತ್ತಾದ ಭೂಮಿಯನ್ನ ಬರಡು ಮಾಡಿ ಬಿಡುತ್ತಾರೆ. ಭಾರತದ ಉದ್ಯಮಿಗಳು ಅಲ್ಲಿನ ಭೂಮಿಯನ್ನ ಖರೀದಿಸಿ ಅಲ್ಲಿ ಇಂಡಸ್ಟ್ರಿ ಅನ್ನು ತೆರೆದು ಅಲ್ಲಿನ ಪರಿಸರದ ಮೇಲೆ ಅತ್ಯಾಚಾರ ನೆಡೆಯುತ್ತದೆ. ಇವತ್ತು ಹಿಮಾಚಲ್ ಪ್ರದೇಶ ಮತ್ತು ಗಂಗಾ ಕಿನಾರೆಯಲ್ಲಿ ಆಗಿರುವಂತೆ ಕಾಶ್ಮೀರದ ಪ್ರಕೃತಿ ತಾಣಗಳು ಕೂಡ ಮನುಷ್ಯರಿಂದ ನಾಶ ವಾದರೆ ಅದರ ಗತಿ ಏನು? ಅಲ್ಲಿಗೆ ಜನ ಹೋಗಿ ನೆಲಿಸಬೇಕು ಆದರೆ ಅದು ಅಲ್ಲಿನ ಜನರ ಮತ್ತು ಪ್ರಕೃತಿಯನ್ನು ದುರ್ಬಲಗೊಳಿಸ ಬಾರದು. ಹಾಗೆ ಪ್ರಕೃತಿಯನ್ನ ನಾಶ ಕೂಡ ಮಾಡಬಾರದು.

ಅಲ್ಲಿಗೆ ಹೋಗುವ ಜನ ಅಲ್ಲಿನ ಪರಿಸರವನ್ನು ಗೌರವಿಸದೆ ಇದ್ದರೆ, ಈಗಿನ ಸ್ವರ್ಗದಂತ ಕಾಶ್ಮೀರ ಕೆಲವೇ ವರ್ಷಗಳಲ್ಲಿ ನಾಶಮಾಡಿದಂತೆ ಆಗುತ್ತದೆ. ಆದರೆ ಮೊದಲು ಕಾಶ್ಮೀರವನ್ನು ನಾವು ನಮ್ಮದಾಗಿಸಬೇಕಾಗಿದೆ, ಅಲ್ಲಿನ ಜನರಿಗೆ ಕೆಲಸ ಕೊಟ್ಟು ಮುಕ್ತಗೊಳಿಸಬೇಕಿದೆ. ಆದರೂ ಸರ್ಕಾರ ಕಾಶ್ಮೀರದ ಪ್ರಕೃತಿಯನ್ನು ಉಳಿಸುವ ಬಗ್ಗೆ ಕೂಡಾ ಯೋಚನೆ ಮಾಡಬೇಕು.

ಮನನ್
ಪ್ರಥಮ ಪಿ.ಯು.ಸಿ.
ಸರ್ ಎಂ.ವಿ. ಕಾಲೇಜು
ದಾವಣಗೆರೆ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version