ದಿನದ ಸುದ್ದಿ

ಕೇರಳದ ಪರಿಸ್ಥಿತಿ; ಶಬರಿಮಲೈನಲ್ಲಿ ಮಹಿಳೆಯರಿಗೆ ಪ್ರವೇಶ ನೀಡಿದ್ದೆ ಕಾರಣವಂತೆ; ಆರ್ಬಿಐ ನಿರ್ದೇಶಕ

Published

on

ಸುದ್ದಿದಿನ ಡೆಸ್ಕ್:  ಕೇರಳದ ಶತಮಾನದ ಕಂಡು ಕೇಳರಿಯದಂಥ ಭೀಕರ ಪ್ರವಾಹ ಉಂಟಾಗಿ ಜನರು ತತ್ತರಿಸಿ ಹೋಗಿದ್ದಾರೆ. ರಾಜ್ಯದಲ್ಲಿ ಜನ ಜೀವನವೇ ಅಹೋಮಯವಾಗಿದೆ. ಜನರ ಜೀವನ ಮತ್ತೆ ಸಹಜ ಸ್ಥಿತಿಗೆ ಬರಲು ಇನ್ನು ಅನೇಕ ವರ್ಷಗಳ ಬೇಕು. ಇಂತಹ ದೇಶದ ದೊಡ್ಡ ಬ್ಯಾಂಕ್ ವೊಂದರ ನೂತನ ಸದಸ್ಯರೊಬ್ಬರು ಮುಠ್ಠಲತನದ ಹೇಳಿಕೆ ನೀಡಿ ಟೀಕೇಗೆ ಗುರಿಯಾಗಿದ್ದಾರೆ. ಇಷ್ಟಕ್ಕೂ ಅವರು ಹೇಳಿರುವುದಾದರೂ ಏನು ಅಂತೀರಾ? ಇಲ್ಲಿದೆ ನೋಡಿ.

ಕೇರಳದಲ್ಲಿ ಪ್ರವಾಹ ಸ್ಥಿತಿ ಉಂಟಾಗಿದೆ. ರಾಜ್ಯದಲ್ಲಿ ಜನ ಜೀವನ ಕಷ್ಟಕರವಾಗಿದೆ. ಇಷ್ಟೆಲ್ಲಾ ಗಂಡಾಂತರಗಳಿಗೆ ಮಹಿಳೆಯರೇ ಕಾರಣ. ಮಹಿಳೆಯನ್ನು ಶಬರಿಮಲೈ ದೇಗುಲದ ಒಳಗೆ ಪ್ರವೇಶಕ್ಕೆ ಅವಕಾಶ ನೀಡಿದ್ದೇ ಮುಖ್ಯ ಕಾರಣ ಎಂದು ದಡ್ಡತನ ಹೇಳಿಕೆಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ನೂತನ ಸದಸ್ಯ ಸ್ವಾಮಿನಾಥನ್ ನೀಡಿದ್ದಾರೆ. ಈ ಪ್ರವೇಶ ಕುರಿತು ನೀಡಿರುವ ತೀರ್ಪನ್ನು ಮರುಪರಿಶೀಲಿಸುವಂತೆ ಸುಪ್ರೀಂ ಕೋರ್ಟಿಗೆ ಸಲಹೆ ನೀಡಿದ್ದಾರೆ.

ಚಾರ್ಟರ್ಡ್ ಅಕೌಂಟೆಂಟ್ ಗುರುಮೂರ್ತಿ ಆರ್ಬಿಐಗೆ ಅಧಿಕಾರೇತರ ನಿರ್ದೇಶಕರಾಗಿ ನಾಲ್ಕು ವರ್ಷಗಳ ಅವಧಿಗೆ ಆಗಸ್ಟ್ ನಲ್ಲಿ ನೇಮಕಗೊಂಡಿದ್ದಾರೆ. ಇವರು ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ಗುರುತಿಸಿಕೊಂಡಿದ್ದಾರೆ. ಇದರಿಂದಾಗಿ ಸರ್ಕಾರ ಟೀಕೆಗೆ ಗುರಿಯಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version