ರಾಜಕೀಯ
ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರು ಶಿವಮೊಗ್ಗದಲ್ಲಿ ಒಂದಾಗಲು ಅಸಾಧ್ಯ : ಕುಮಾರ್ ಬಂಗಾರಪ್ಪ
ಸುದ್ದಿದಿನ,ಶಿವಮೊಗ್ಗ :ಜಾತಿಯ ಆಟಗಳು ಇಲ್ಲಿ ನಡೆಯೋದಿಲ್ಲ. ಸಂಸಾರ ಹೊಡೆದು ಹಾಳು ಮಾಡಿದವರಿಗೆ ಕಳೆದ ಬಾರಿಯೇ ತಕ್ಕ ಉತ್ತರ ಕೊಟ್ಟಿದ್ದಾರೆ ಎಂದು ಸೊರಬ ಬಿಜೆಪಿ ಶಾಸಕ ಕುಮಾರ್ ಬಂಗಾರಪ್ಪ ಆಕ್ರೋಶ ವ್ಯಕ್ತಪಡಿಸಿದರು.
ನಂತರ ಮಾತನಾಡಿದ ಅವರು, ಜೆಡಿಎಸ್ ಅಭ್ಯರ್ಥಿಗೆ ಸಮಾಜದ ಮೇಲೆ ಕಾಳಜಿ ಇದ್ರೆ ಶರಾವತಿ ಡೆಂಟಲ್ ಕಾಲೇಜು ಆಸ್ತಿ ವಾಪಸ್ ಸಮಾಜಕ್ಕೆ ಕೊಡಲಿ. 87 ಎಕರೆಯನ್ನು ರಿಯಲ್ ಎಸ್ಟೇಟ್ ದಂಧೆ ಮಾಡಿಕೊಂಡಿದ್ದಾರೆ.ಸಮಾಜದ ಆಸ್ತಿ ಮಾರಿಕೊಂಡು ತಿಂದು ಹಾಕಿದ್ದಾರೆ ಎಂದು ಕಿಡಿಕಾರಿದರು.
ಎಸ್. ಬಂಗಾರಪ್ಪ ಕೇವಲ ಜೆಡಿಎಸ್, ಕಾಂಗ್ರೆಸ್ ನವರಿಗೆ ಸೀಮಿತವಲ್ಲ. ಮೊದಲು ಬಂಗಾರಪ್ಪ ಸಮಾಧಿ ಅಭಿವೃದ್ಧಿ ಮಾಡಿ. ಕಾಂಗ್ರೆಸ್- ಜೆಡಿಎಸ್ ಕಾರ್ಯಕರ್ತರು ಶಿವಮೊಗ್ಗ ಜಿಲ್ಲೆಯಲ್ಲಿ ಒಂದಾಗಲು ಸಾಧ್ಯವಿಲ್ಲ ಎಂದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401