ರಾಜಕೀಯ
ಎಚ್.ಡಿ.ಕೆ ಸಂಪುಟ ಸೇರಲಿರುವ ಶಾಸಕರು..!
ಸುದ್ದಿದಿನ,ಬೆಂಗಳೂರು : ನೂತನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸಚಿವ ಸಂಪುಟ ವಿಸ್ತರಣೆ ಮಾಡಲಿದ್ದು, 20 ಶಾಸಕರು ಸಚಿವಸ್ಥಾನಗಿಟ್ಟಿಸಿಕೊಂಡಿದ್ದಾರೆ. ಅಂತೂ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟ ವಿಸ್ತರಣರಗೆ ಮಹೂರ್ತ ಕೂಡಿಬಂದಿದೆ.
ಶನಿವಾರ( ಜೂನ್ 02) ರಂದು ನೂತನ ಸಚಿವರ ಪ್ರಮಾಣ ವಚನ ಸಮಾರಂಭವು ರಾಜಭವನದಲ್ಲಿ ನಡೆಯಲಿದೆ. ಮೊದಲನೆಯ ಹಂತದಲ್ಲಿ ಕಾಂಗ್ರೆಸ್ ನ 12 ಶಾಸಕರು ಹಾಗೂ ಜೆಡಿಎಸ್ ನ 8 ಶಾಸಕರು ಕುಮಾರ ಸ್ವಾಮಿಯ ಸಂಪುಟವನ್ನು ಸೇರಲಿದ್ದಾರೆ.
ಸಚಿವರಾಗಲಿರುವ 20 ಶಾಸಕರು
- ಡಾ.ಜಿ. ಪರಮೇಶ್ವರ್ – ಕೊರಗೆರೆ ಕ್ಷೇತ್ರ- ಕಾಂಗ್ರೆಸ್
- ಡಿ.ಕೆ. ಶಿವಕುಮಾರ್ – ಕನಕಪುರ ಕ್ಷೇತ್ರ-ಕಾಂಗ್ರೆಸ್
- ರಾಮಲಿಂಗಾರೆಡ್ಡಿ – ಬಿ.ಟಿ.ಎಂ ಲೇಔಟ್ ಕ್ಚೇತ್ರ- ಕಾಂಗ್ರೆಸ್
- ದಿನೇಶ್ ಗುಂಡೂರಾವ್-ಗಾಂಧಿನಗರ ಕ್ಷೇತ್ರ- ಕಾಂಗ್ರೆಸ್
- ಎಂ.ಬಿ.ಪಾಟೀಲ್- ಬಬಲೇಶ್ವರ ಕ್ಷೇತ್ರ-ಕಾಂಗ್ರೆಸ್
- ಕೆ.ಜೆ.ಜಾರ್ಜ್-ಸರ್ವಜ್ಞ ನಗರ-ಕಾಂಗ್ರೆಸ್
- ಕೃಷ್ಟ ಭೈರೇಗೌಡ-ಬ್ಯಾಟರಾಯನಪುರ ಕ್ಷೇತ್ರ- ಕಾಂಗ್ರೆಸ್
- ಜಮೀರ್ ಅಹಮದ್ ಖಾನ್- ಚಾಮರಾಚಪೇಟೆ- ಕಾಂಗ್ರೆಸ್
- ಡಾ.ಕೆ.ಸುಧಾಕರ್-ಚಿಕ್ಕಬಳ್ಳಾಪುರ-ಕಾಂಗ್ರೆಸ್
- ರೂಪಾ ಶಶಿಧರ್-ಕೆಜಿಎಫ್ ಕ್ಷೇತ್ರ- ಕಾಂಗ್ರೆಸ್
- ಎ.ಕೃಷ್ಣಪ್ಪ-ವಿಜಯನಗರ-ಕಾಂಗ್ರೆಸ್
- ಶಂಕರ್-ರಾಣೇಬೆನ್ನೂರು ಕ್ಷೇತ್ರ- ಪಕ್ಷೇತರ
- ನಾಗೇಶ್-ಮುಳಬಾಗಿಲು-ಪಕ್ಷೇತರ
- ಸಿ.ಎಸ್. ಪುಟ್ಟರಾಜ-ಮೇಲುಕೋಟೆ-ಜೆಡಿಎಸ್
- ಎಚ್.ಡಿ.ರೇವಣ್ಣ-ಹೊಳೆನರಸೀಪುರ-ಜೆಡಿಎಸ್
- ಬಿ.ಎಂ.ಫಾರೂಕ್- ಮುಸ್ಲಿಂ ಕೋಟಾ
- ಜಿ.ಟಿ.ದೇವೇಗೌಡ-ಚಾಮುಂಡೇಶ್ವರಿಕ್ಷೇತ್ರ-ಜೆಡಿಎಸ್
- ಸಾ.ರಾ.ಮಹೇಶ-ಕೆ.ಆರ್.ನಗರ-ಜೆಡಿಎಸ್
- ಎನ್.ಮಹೇಶ್-ಕೊಳ್ಳೇಗಾಲ-ಬಿ.ಎಸ್.ಪಿ
- ಬಂಡೆಪ್ಪ ಕಾಶೆಂಪೂರ- ಬೀದರ್ ದಕ್ಷಿಣ-ಜೆಡಿಎಸ್
- ಎಚ್.ಕೆ.ಕುಮಾರಸ್ವಾಮಿ-ಸಕಲೇಶಪುರ-ಜೆಡಿಎಸ್.