ರಾಜಕೀಯ
ಒಡಿಶಾದ ಸನ್ಯಾಸಿಗೆ ಒಲಿದ ಸಚಿವ ಸ್ಥಾನ
ಸುದ್ದಿದಿನ,ನವದೆಹಲಿ: ಸಜ್ಜನಿಕೆ, ಸರಳ ಜೀವಿ, ಸಾಮಾನ್ಯರ ನೇತಾ ಪ್ರತಾಪ್ ಸರಂಗಿ ಅವರಿಗೂ ಮೋದಿ ಸಂಪುಟದಲ್ಲಿ ಸ್ಥಾನ ನೀಡಲಾಗಿದೆ. ಗುರುವಾರ ರಾಷ್ಟ್ರಪತಿ ಭವನದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಒಡಿಶಾದ ಬಲಸೂರ್ ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸರಂಗಿ ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ಪ್ರತಿಜ್ಞಾವಿಧಿ ಸ್ವೀಕಾರ ಕಾರ್ಯಕ್ರಮದಲ್ಲಿ ಇವರ ಹೆಸರನ್ನ ಹೇಳುತ್ತಿದ್ದಂತೆ ಗಣ್ಯರು ಚಪ್ಪಾಳಿ ತಟ್ಟಿ, ಹರ್ಷ ವ್ಯಕ್ತಪಡಿಸಿದರು.
ಒಡಿಶಾದ ‘ಮೋದಿ’
ಪ್ರತಾಪ್ ಸರಂಗಿ ಒಡಿಶಾದ ಮೋದಿ ಅಂತಾ ಫೇಮಸ್. ಪ್ರತಾಪ್ ಸರಂಗಿ ಶ್ರೀಮಂತರಂತೂ ಅಲ್ಲ. ನಿಲಗಿರಿ ವಿಧಾನಭಾ ಕ್ಷೇತ್ರದಿಂದ ಎರಡು ಬಾರಿ (2004-2009 & 2009-2014) ಶಾಸಕರಾಗಿ ಆಯ್ಕೆಯಾಗಿದ್ರೂ ಕೂಡಾ, ವಾಸಿಸಲು ಇವರಿಗೆ ಸ್ವಂತ ಮನೆಯೂ ಇಲ್ಲ.
ಅವಿವಾಹಿತ ಪ್ರತಾಪ್ ಸರಂಗಿ, ಕಳೆದ ವರ್ಷ ತನ್ನ ತಾಯಿಯನ್ನು ಕಳೆದುಕೊಂಡಿದ್ರು. ಬರೀ ಸೈಕಲ್ನಲ್ಲಿ ಕ್ಷೇತ್ರದೆಲ್ಲೆಡೆ ಸುತ್ತಿ, ತಳ ಮಟ್ಟದಿಂದ ಪಕ್ಷವನ್ನು ಸಂಘಟನೆ ಮಾಡಿದ್ರು. ಅವರ ಪರಿಶ್ರಮ ಮೆಚ್ಚಿದ ಬಿಜೆಪಿ ಈ ಬಾರಿ ಬಲಸೂರ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿಸಿತ್ತು. ಪ್ರತಾಪ್ ಸರಂಗಿಯವರ ಶಿಸ್ತು, ಕೆಲಸವನ್ನು ಮೆಚ್ಚಿದ್ದ ಕಾರ್ಯಕರ್ತರು ಹಾಗೂ ಮತದಾರರು ಈ ಬಾರಿ ಗೆಲ್ಲಿಸಿ, ಸಂಸತ್ಗೆ ಕಳುಹಿಸಿಕೊಟ್ಟಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243