ದಿನದ ಸುದ್ದಿ

ಬ್ರೇಕಿಂಗ್ : ‘ತಾಯಿಗೆ ಕೆಟ್ಟದಾಗಿ ಸನ್ನೆಮಾಡಿ ಕರೆದ ವ್ಯಕ್ತಿ’ಯ ರುಂಡ ಕತ್ತರಿಸಿದ ಮಗ..!

Published

on

ಸುದ್ದಿದಿನ, ಮಂಡ್ಯ : ತನ್ನ ತಾಯಿಗೆ ಕೆಟ್ಟದಾಗಿ ಕಣ್ ಹೊಡೆದು ಸನ್ನೆಮಾಡಿದ್ದಕ್ಕೆ ಕೋಪಗೊಂಡು ಆತನ ತಲೆ ಕಡಿದು ಪೋಲಿಸ್ ಸ್ಟೇಷನ್ ನಲ್ಲಿ ಶರಣಾಗಿರುವ ಘಟನೆ ಮಂಡ್ಯ ಜಿಲ್ಲೆ‌ ಮಳವಳ್ಳಿ ತಾಲೂಕಿನ ಚಿಕ್ಕ ಬಾಗಿಲು ಗ್ರಾಮದಲ್ಲಿ ನಡೆದಿದೆ.

ಗಿರೀಶ್ (38) ಕೊಲೆಯಾದ ವ್ಯಕ್ತಿಯಾಗಿದ್ದು, ಪಶುಪತಿ(28) ಹತ್ಯೆಗೈದ ವ್ಯಕ್ತಿಯಾಗಿದ್ದಾನೆ. ತಾಯಿಗೆ ಕೆಟ್ಟದಾಗಿ ಸನ್ನೆಮಾಡಿ ಕರೆದಿದ್ದಕ್ಕೆ ಕೋಪಗೊಂಡ ಮಗ ಪಶುಪತಿ ಈ ಕೃತ್ಯವೆಸಗಿದ್ದಾನೆ. ತನ್ನ ತಾಯಿಯನ್ನು ಕೆಟ್ಟದ್ದಾಗಿ ಸನ್ನೆ ಮಾಡಿದವನ ಬಿಟ್ಟರೆ ನಾನು ಬದುಕಿದ್ದು ಸತ್ತಂತೆ, ಹೀಗಾಗಿ ಗಿರೀಶ್ ನ‌ ಹತ್ಯೆ ಮಾಡಿದೆ ಎಂದು ಪೊಲೀಸರ ಬಳಿ ಕೊಲೆಗೆ ಕಾರಣ ತಿಳಿಸಿದ್ದಾನೆ.

ಮಳವಳ್ಳಿ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಹಿಂದೆ ಚಿಕ್ಕಮಗಳೂರು, ಕೋಲಾರ ಜಿಲ್ಲೆಗಳಲ್ಲೂ ಇತ್ತೀಚೆಗೆ ರುಂಡ ಕಡಿದಿದ್ದ ಘಟನೆ ನಡೆದಿತ್ತು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version