ದಿನದ ಸುದ್ದಿ
ರಾಜವಂಶಸ್ಥೆ ಪುಟ್ಟ ಚೆನ್ನಮ್ಮಣ್ಣಿ ನಿಧನ ಹಿನ್ನೆಲೆ : ದಶಮಿ ಕಾರ್ಯಕ್ರಮಗಳ ಮುಂದೂಡಿಕೆ
ಸುದ್ದಿದಿನ ಡೆಸ್ಕ್ : ರಾಜ ವಂಶಸ್ಥೆ ಪ್ರಮೋದಾದೇವಿ ತಾಯಿ ನಿಧನ ಹಿನ್ನೆಲೆ ಮೈಸೂರು ಅರಮನೆ ದಶಮಿ ಕಾರ್ಯಕ್ರಮಗಳನ್ನುಮುಂದೂಡಲಾಗಿದೆ.ಅಕ್ಟೋಬರ್ 22ಕ್ಕೆ ದಶಮಿ ಕಾರ್ಯಕ್ರಮಗಳು ಮುಂದೂಡಿಕೆಯಾಗಿವೆ ಎಂದು ಸುದ್ದಿದಿನಕ್ಕೆ ಅರಮನೆ ಮೂಲಗಳು ತಿಳಿಸಿವೆ.
ಮುಂದೂಡಿದ ಕಾರ್ಯಕ್ರಮಗಳು
ಬೆಳಗ್ಗೆ 9.25ರಿಂದ 9.35ರೊಳಗೆ ಉತ್ತರ ಪೂಜೆ
ಖಾಸ್ ಆಯುಧಗಳಿಗೆ ಉತ್ತರ ಪೂಜೆ.ಅರಮನೆಯ ಕಲ್ಯಾಣ ಮಂಟಪದಲ್ಲಿ ನಡೆಯಲಿರುವ ಪೂಜೆ.ಬೆಳಗ್ಗೆ 10.05ರಿಂದ 10.25ಕ್ಕೆ ಆಯುಧಗಳ ನಿರ್ಗಮನ.
ಶ್ರೀ ಭುವನೇಶ್ವರಿ ದೇವಾಲಯಕ್ಕೆ ಹೋಗಲಿರುವ ಆಯುಧಗಳು.ಬೆಳಗ್ಗೆ 10 ಗಂಟೆ ಸುಮಾರಿಗೆ ವಜ್ರಮುಷ್ಠಿ ಕಾಳಗಬೆಂಗಳೂರು, ಚಾಮರಾಜನಗರ, ಮೈಸೂರಿನ ಜಟ್ಟಿಗಳಿಂದ ಕುಸ್ತಿ. ವಜ್ರ ಮುಷ್ಠಿ ಹಿಡಿದು ಮಟ್ಟಿ ಮೇಲೆ ಕುಸ್ತಿ ಮಾಡಲಿರುವ ಜಟ್ಟಿಗಳು. ಜಟ್ಟಿಗಳ ತಲೆಯಿಂದ ರಕ್ತ ಚಿಮ್ಮಿದ ಮೇಲೆ ವಿಜಯ ಯಾತ್ರೆಗಳು.
ಹಾಗೂ ಬೆಳ್ಳಿ ರಥದಲ್ಲಿ ವಿಜಯ ಯಾತ್ರೆ ಮಾಡಲಿರುವ ರಾಜವಂಶಸ್ಥಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಂದ ವಿಜಯ ಯಾತ್ರೆ. ಬೆಳ್ಳಿ ರಥದಲ್ಲಿ ಕುಳಿತು ದೇವಾಲಯಕ್ಕೆ ಯಾತ್ರೆ. ಬನ್ನಿ ಮರಕ್ಕೆ ಪೂಜೆ ಸಲ್ಲಿಸಲಿರುವ ಯದುವೀರ್. ವಿಜಯ ಯಾತ್ರೆ ನಂತರ ಶ್ರೀ ಚಾಮುಂಡೇಶ್ವರಿ ಪ್ರತಿಮೆ ಸ್ಥಳಾಂತರ.ಕನ್ನಡಿ ತೊಟ್ಟಿಯಿಂದ ಚಾಮುಂಡಿ ತೊಟ್ಟಿಗೆ ಬಿಜಯ ಮಾಡಲಿರುವ ಪ್ರತಿಮೆ.ನಂತರ ಜಂಬೂ ಸವಾರಿಗೆ ತೆರಳಲಿರುವ ಉತ್ಸವ ಮೂರ್ತಿ ಈ ಎಲ್ಲಾ ಕಾರ್ಯಕ್ರಮಗಳು ಮುಂದೂಡಿಕೆಯಾಗಿವೆ.