ದಿನದ ಸುದ್ದಿ
ಮೈಸೂರು ಜಂಬೂಸವಾರಿ ರದ್ದು..!
ಸುದ್ದಿದಿನ, ಮೈಸೂರು:ಕಳೆದ 26 ವರ್ಷಗಳಲ್ಲಿ 3ನೇ ಬಾರಿ ಮೈಸೂರಿನ ಜಂಬೂಸವಾರಿ ಅರಮನೆಯ ಹೊರಗೆ ರದ್ದಾಗಿದೆ. ಈ ಬಾರಿ ಕೊರೋನಾ ಬಿಕ್ಕಟಿನಿಂದ ಜಂಜೂಸವಾರಿಯನ್ನು ಅರಮನೆ ಆವರಣದಲ್ಲಿ ನಡೆಸಲು ಸರ್ಕಾರ ತೀರ್ಮಾನಿಸಿದೆ.
1994ರಲ್ಲಿ ಎಲ್ಲೆಡೆ ಪ್ಲೇಗ್ ಆತಂಕ ಆರಂಭವಾಗಿತ್ತು. ಮೈಸೂರಿನಲ್ಲಿ ಇಲಿಗಳು ಸತ್ತಿದ್ದವು. ಇದರಿಂದ ಮುನ್ನೆಚ್ಚರಿಕೆಯಾಗಿ ಜಂಬೂಸವಾರಿ ಅರಮನೆ ಆವರಣಕ್ಕೆ ಸೀಮಿತವಾಯಿತು. 2002ರಲ್ಲಿ ಕಾವೇರಿ ಬಿಕಟ್ಟು, ಬರಗಾಲ ಇದ್ದ ಕಾರಣ ಅಂದಿನ ಸರ್ಕಾರ ಜಂಜೂಸವಾರಿಯನ್ನು ಅರಮನೆ ಆವರಣಕ್ಕೆ ಸೀಮಿತಗೊಳಿಸಿತ್ತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243