ದಿನದ ಸುದ್ದಿ
ನವಿಲೇಹಾಳು | ‘ಸ್ನೇಹ ಬಳಗ’ ದಿಂದ ಕೊರೊನಾ ವಾರಿಯರ್ಸ್; ಗ್ರಾ.ಪಂ ನೂತನ ಸದಸ್ಯರು ಹಾಗೂ ಯುವಕವಿಗೆ ಸನ್ಮಾನ
ಸುದ್ದಿದಿನ, ದಾವಣಗೆರೆ-ಚನ್ನಗಿರಿ: ನವಿಲೇಹಾಳ್ ಗ್ರಾಮದಲ್ಲಿ ಮಾ. 07ರ ಭಾನುವಾರ ಮೊಟ್ಟಮೊದಲ ಬಾರಿಗೆ ಗ್ರಾಮ ಪಂಚಾಯಿತಿಯ ನೂತನ ಸದಸ್ಯರಿಗೆ ಸನ್ಮಾನ ಸಮಾರಂಭದ ಜೊತೆಗೆ ಕರೋನಾ ವಾರಿಯರ್ಸ್ ಮತ್ತು ‘ಮೋಹದ ಮೋಡಗಳು’ ಚೊಚ್ಚಲ ಕೃತಿಯ ಯುವಕವಿಗೆ ಸನ್ಮಾನ ಕಾರ್ಯಕ್ರಮವನ್ನು ನವಿಲೇಹಾಳಿನ ‘ಸ್ನೇಹ ಬಳಗ’ದ ವತಿಯಿಂದ ನಡೆಸಲಾಯಿತು.
ಈ ಸಂದರ್ಭದಲ್ಲಿ ಮುಖ್ಯ ಅಥಿತಿಗಳಾಗಿ ಆಗಮಿಸಿದ್ದ ಶಾಂತ ಗಂಗಾಧರವರು ಊರಿನ ಪರಂಪರೆ, ಸಾಹಿತ್ಯ, ಸಂಸ್ಕೃತಿ, ಸಹಬಾಳ್ವೆ ಬಗ್ಗೆ ತಿಳಿಸುತ್ತ ನೂತನ ಗ್ರಾಮ ಪಂಚಾಯ್ತಿ ಸದಸ್ಯರುಗಳ ಕೆಲಸ ಕರ್ತವ್ಯಗಳು ಆರೋಗ್ಯಕರವಾಗಿರಬೇಕು ಯಾವುದೇ ತರಹದ ದ್ವೇಷ ಆರೋಪಗಳು ಪೋಲಿಸ್ ಸ್ಟೇಷನ್ ವರೆಗೆ ಹೋಗದಂತೆ ಗ್ರಾಮದಲ್ಲಿಯೇ ಸಮಸ್ಯೆಗಳನ್ನು ಬಗೆಹರಿಸಬೇಕು.ಮತ್ತು ಜಾತಿ ಧರ್ಮಗಳನ್ನ ಬಿಟ್ಟು ಎಲ್ಲರೂ ಒಂದು ಕುಟುಂಬವೆಂದು ಬದುಕಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಮತ್ತೋರ್ವ ಅಥಿತಿಗಳಾದ ಡಾ॥ ಹುಸೇನ್ ಮೀಯ ಅವರು ನೂತನ ಸದಸ್ಯರಿಗೆ ಶುಭ ಹಾರೈಸಿ ಪಂಚಾಯಿತಿ ವ್ಯಾಪ್ತಿಯ ಕೆಲಸಗಳು ಮತ್ತು ಅದರ ಉಪಯೋಗದ ಬಗ್ಗೆ ಗ್ರಾಮಸ್ತರಿಗೆ ಅರಿವು ಮೂಡಿಸುವ ಕಾರ್ಯಗಳನ್ನು ಹಮ್ಮಿಕೊಳ್ಳುವ ನಿಟ್ಟಿನಲ್ಲಿ ಕೆಲಸ ಕೈಗೊಳ್ಳಬೇಕು ಎಂದರು.
ಜತೆಗೆ ನವಿಲೇಹಾಳನ್ನು ಸುವರ್ಣಗ್ರಾಮವನ್ನಾಗಿ ಮಾಡುವ ಕನಸಿಟ್ಟಕೊಂಡು ಆ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಮಾಡಿ ಮಾದರಿ ಗ್ರಾಮವೆನ್ನುವ ಪ್ರಶಸ್ತಿಯನ್ನು ಮುಖ್ಯಮಂತ್ರಿಗಳಿಂದ ತೆಗೆದುಕೊಳ್ಳಬೇಕು ಆಗ ನಿಮ್ಮ ಕೆಲಸಕ್ಕೆ ಫಲ ಸಿಕ್ಕಂತಾಗುವುದು ಈ ಎಲ್ಲಾ ರೀತಿಯ ಕೆಲಸಗಳಿಗೂ ನನ್ನ ಪೂರ್ಣಪ್ರಮಾಣದ ಸಹಕಾರ ಬೆಂಬಲ ಎಂದಿಗೂ ಇರುವುದು ಎಂದು ಗ್ರಾಮದವರಲ್ಲಿ ವಿಶ್ವಾಸವನ್ನು ತುಂಬಿದರು.
ಸಭೆಯನ್ನುದ್ದೇಶಿಸಿ ಗಣ್ಯರಾದ ಎಂ. ಶಿವಮೂರ್ತಿ ನಿವೃತ್ತ ಶಿಕ್ಷಕರು ನವಿಲೇಹಾಳ್, ರುದ್ರಪ್ಪ ನಿವೃತ್ತ ಶಿಕ್ಷಕರು ನವಿಲೇಹಾಳ್, ಬಾಲಣ್ಣ ದೊಡ್ಡಘಟ್ಟ, ದಾದಪೀರ್ ನವಿಲೇಹಾಳ್ ಮಾತನಾಡುತ್ತ ಗ್ರಾಮದ ಸಾದಕ ಬಾದಕಗಳಬಗ್ಗೆ ಹೇಳಿದರು.
ಕಾರ್ಯಕ್ರಮದ ಸ್ವಾಗತವನ್ನು ಇಸ್ಮಯಿಲ್ ಕಣದ್ಮನೆ ಅವರು ನಿರ್ವಹಿಸಿದರು. ನಿರೂಪಣೆಯನ್ನು ಜೆ ದಾದಪೀರ್ ನಡೆಸಿಕೊಟ್ಟರು. ಶರ್ಮತ್ ಕಣದಮನಿ, ದೂದ್ ಪೀರ್, ದಾದಪೀರ್, ಬಶೀರ್, ಮೋಸಿಮ್ ಅಕೀಲ್, ಮೋಹನ್, ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243