ದಿನದ ಸುದ್ದಿ

ಆಪರೇಷನ್ ಕಾವೇರಿ : ಸುಡಾನ್‌ನಲ್ಲಿ ಸುಲುಕಿದ್ದ ಪ್ರಯಾಣಿಕರು ಭಾರತಕ್ಕೆ

Published

on

ಸುದ್ದಿದಿನ ಡೆಸ್ಕ್ : ಸುಡಾನ್‌ನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ 392 ಪ್ರಯಾಣಿಕರನ್ನು ಭಾರತೀಯ ವಾಯುಪಡೆಯ ಸಿ-17 ವಿಮಾನದ ಮೂಲಕ ನಿನ್ನೆ ನವದೆಹಲಿಗೆ ಕರೆ ತರಲಾಯಿತು.

ಅಲ್ಲದೇ, 362ಭಾರತೀಯರಿದ್ದ ಮತ್ತೊಂದು ವಿಮಾನ ಬೆಂಗಳೂರಿಗೆ ಆಗಮಿಸಿದೆ. ಈ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಟ್ವೀಟ್‌ನಲ್ಲಿ ಮಾಹಿತಿ ನೀಡಿದ್ದಾರೆ. ಈ ಮಧ್ಯೆ, 270ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಭಾರತೀಯ ವಾಯುಪಡೆಯ ಎರಡು ವಿಮಾನಗಳು ನಿನ್ನೆ ರಾತ್ರಿ ಜೆಡ್ಡಾ ತಲುಪಿವೆ.

ಆಪರೇಷನ್ ಕಾವೇರಿ ಮೂಲಕ ಸುಡಾನ್‌ನಲ್ಲಿ ಸುಲುಕಿದ್ದ ಸುಮಾರು 2 ಸಾವಿರದ 400 ಭಾರತೀಯರನ್ನು 13ತಂಡಗಳಲ್ಲಿ ಸುರಕ್ಷಿತವಾಗಿ ಸ್ಥಳಾಂತರಿಸಿ ಭಾರತಕ್ಕೆ ಕರೆ ತರಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿದಂಮ್ ಬಗ್ಚಿ ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version