ಲೋಕಾರೂಢಿ

ಸಿಎಎ – ಎನ್ ಆರ್ ಸಿ ಗೊಂದಲ ಮತ್ತು ಪಾಕಿಸ್ತಾನ – ಭಾರತ ವಿಭಜನೆ

Published

on

  • ರಘೋತ್ತಮ ಹೊ.ಬ

ಪ್ರಸ್ತುತದ ಸಮಸ್ಯೆಗೆ ಕನ್ನಡಿ ಹಿಡಿಯುವ ಬಾಬಾಸಾಹೇಬ್ ಅಂಬೇಡ್ಕರ್ ರ ಈ ಕೃತಿ “Pakistan or The Partition of India” (ಪಾಕಿಸ್ತಾನ ಅಥವಾ ಭಾರತದ ವಿಭಜನೆ) ಪ್ರತಿಯೊಬ್ಬರೂ ಓದಬೇಕು. ಒಬ್ಬ ನ್ಯಾಯಾಧೀಶರ ಮಾದರಿಯಲ್ಲಿ ಒಂದು ಕಡೆ ಮುಸ್ಲಿಮರು ಮತ್ತೊಂದು ಕಡೆ ಹಿಂದೂಗಳು ಇಬ್ಬರನ್ನೂ ಕಕ್ಷಿದಾರರ ರೀತಿ ಇರಿಸಿ ಅಂಬೇಡ್ಕರ್ ಈ ಕೃತಿ ಬರೆಯುತ್ತಾ ಹೋಗುತ್ತಾರೆ.

ಸಮಚಿತ್ತದ ನ್ಯಾಯ. ಹೇಗೆಂದರೆ ಅಂಬೇಡ್ಕರರ ಈ ಕೃತಿಯನ್ನು ಹಿಂದೂಗಳು ಒಪ್ಪಲಿಲ್ಲ ಮುಸ್ಲಿಮರು ಕೂಡ ಒಪ್ಪಲಿಲ್ಲ. ಇಬ್ಬರೂ ಒಪ್ಪದ ಈ ಕೃತಿಯನ್ನು ಅಂಬೇಡ್ಕರರು ತನ್ನ ಬರಹದ ದಿಗ್ವಿಜಯ ಎನ್ನುತ್ತಾರೆ. 80 ವರ್ಷಗಳ ಹಿಂದೆ ಅವರು ಬರೆದ ಈ ಕೃತಿ ಒಂದು ರೀತಿಯ ಬಾಬಾಸಾಹೇಬರ ದೇಶಪ್ರೇಮದ ಕೊಡುಗೆಯಾಗಿದೆ.

ಆ ಮೂಲಕ ಈ ದೇಶದ ಬಗ್ಗೆ, ಇದರ ಒಳಿತಿನ ಬಗ್ಗೆ ಅಂಬೇಡ್ಕರರಿಗೆಷ್ಟು ಕಾಳಜಿ ಇತ್ತು, ಇದೆ ಎಂಬುದು ಈ ಕೃತಿಯಿಂದ ಸಾಬೀತಾಗುತ್ತದೆ. ಅದರಲ್ಲೂ CAA ಮತ್ತು NCR ಗೊಂದಲದ ಈ ದಿನಗಳಲ್ಲಿ ಪರಿಹಾರ ಪರಿಣಾಮ ಏನಾಗಬಹುದು ಎಂಬ ಬಗ್ಗೆ ತಿಳಿಯಲು ಪ್ರತಿಯೊಬ್ಬರೂ ಈ ಕೃತಿ ಓದಲೇಬೇಕು.

ಗೆಳೆಯರೊಬ್ಬರು “ಅಂಬೇಡ್ಕರ್ ಮುಸ್ಲಿಮರು ಪಾಕಿಸ್ತಾನಕ್ಕೆ ಹೋಗಬೇಕು ಎಂದಿದ್ದರು” ಎಂದು ಜನಸಾಮಾನ್ಯರಿಗೆ ತಪ್ಪು ಸಂದೇಶ ನೀಡಲು ಯತ್ನಿಸಿದ್ದಾರೆ. ಆ ಮೂಲಕ ಬಾಬಾಸಾಹೇಬರಿಗೆ ಕೆಟ್ಟ ಹೆಸರು ತರುವ ಕೆಲಸವನ್ನು ಸದರಿಯವರು ಮಾಡಲೆತ್ನಿಸಿದ್ದಾರೆ.

ಈ ನಿಟ್ಟಿನಲ್ಲಿ ಸದರಿಯವರ ಬೌದ್ಧಿಕ ದಿವಾಳಿತನಕ್ಕೆ ಏನನ್ನಬೇಕೋ ತಿಳಿಯುತ್ತಿಲ್ಲ. ಆದ್ದರಿಂದ ವಾಸ್ತವದ ಉತ್ತರ ತಿಳಿಯಲು ಪ್ರತಿಯೊಬ್ಬರೂ ಈ ಕೃತಿ ಓದಿ. ಆ ಮೂಲಕ ಒಂದು ದೇಶ ಧರ್ಮದ ಆಧಾರದ ಮೇಲೆ ಕಚ್ಚಾಡುತ್ತ ಕುಳಿತರೆ ಆ ದೇಶದ ಕತೆ ಏನಾಗಬಹುದು? ಈ ಹಿನ್ನೆಲೆಯಲ್ಲಿ ದೇಶಪ್ರೇಮಿಗಳೆಲ್ಲರೂ ಅಂಬೇಡ್ಕರ್ ರ ಅಪ್ರತಿಮ ದೇಶ ಪ್ರೇಮದ ಅಪರೂಪದ ಈ ಕಾಣ್ಕೆಯ ದರ್ಶನ ಪಡೆಯಿರಿ. ಆ ಮೂಲಕ ನಿಮ್ಮ ದೇಶಪ್ರೇಮವನ್ನೂ ಹೆಚ್ಚಿಸಿಕೊಳ್ಳಿ ಎಂಬುದು ಕಳಕಳಿಯ ಮನವಿ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version