ಸಿನಿ ಸುದ್ದಿ
ಪಾಂಡ್ಯ ಮತ್ತೆ ಬೌಲಿಂಗ್ ಮಾಡಲಿದ್ದಾರೆ : ಸೌರವ್ ಗಂಗೂಲಿ
ಸುದ್ದಿದಿನ ಡೆಸ್ಕ್ : ಟಿ20 ವಿಶ್ವಕಪ್ ಬಳಿಕ ಕ್ರಿಕೆಟ್ನಿಂದ ವಿರಾಮ ತೆಗೆದುಕೊಂಡಿರುವ ಪಾಂಡ್ಯ ಬೆಂಗಳೂರಿನ ಎನ್ಸಿಎ ಪುನರ್ವಸತಿ ಕೇಂದ್ರದಲ್ಲಿ ಬೆವರು ಸುರಿಸಿ ಫಿಟ್ನೆಸ್ ಕಾಯ್ದುಕೊಂಡಿದ್ದು, ಅದ್ಭುತ ಕಂಬ್ಯಾಕ್ ಮಾಡುವ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅಲ್ಲದೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಕೂಡ ಪಾಂಡ್ಯ ಎಲ್ಲಾ ಮೂರು ವಿಭಾಗಗಳಲ್ಲಿ ಮೊದಲಿನಂತೆ ಮಿಂಚುವುದನ್ನ ನೋಡಲು ಬಯಸುತ್ತಾರೆ.
30 days for the start of the women's World Cup in NZ ..wish the Indian team and the rest of the teams all the very best …@ICC @BCCI pic.twitter.com/ep8gkbCncJ
— Sourav Ganguly (@SGanguly99) February 4, 2022
“ಹಾರ್ದಿಕ್ ಗಾಯಗೊಂಡಿದ್ದಾರೆ ಮತ್ತು ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಅವರಿಗೆ ವಿರಾಮ ನೀಡಲಾಯಿತು, ಇದರಿಂದಾಗಿ ಅವರು ದೀರ್ಘಕಾಲದವರೆಗೆ ಭಾರತೀಯ ಕ್ರಿಕೆಟ್ಗೆ ಸೇವೆ ಸಲ್ಲಿಸಬಹುದು. ಅವರು ಕೆಲವು ರಣಜಿ ಟ್ರೋಫಿಯನ್ನು ಆಡಬಹುದು ಎಂದು ನಾನು ನಂಬುತ್ತೇನೆ, “ಎಂದು ಗಂಗೂಲಿ ಹೇಳಿದರು .
ಇದರ ಜೊತೆಗೆ ಪಾಂಡ್ಯ ಮುಂಬರುವ ದಿನಗಳಲ್ಲಿ ಇನ್ನಷ್ಟು ಬೌಲಿಂಗ್ ಮಾಡುವ ನಿರೀಕ್ಷೆಯಿದೆ ಎಂದು ಭಾರತದ ಮಾಜಿ ನಾಯಕ ಸೌರವ್ ಹೇಳಿದ್ದಾರೆ.
“ಅವರು ಹೆಚ್ಚಿನ ಓವರ್ಗಳನ್ನು ಬೌಲ್ ಮಾಡಲಿದ್ದಾರೆ ಮತ್ತು ಅವರ ದೇಹವು ಬಲಗೊಳ್ಳುತ್ತದೆ ಎಂದು ನಾನು ನಿರೀಕ್ಷಿಸುತ್ತೇನೆ. ಅವರು ಈಗ ಐಪಿಎಲ್ನಲ್ಲಿ ಅಹಮದಾಬಾದ್ನ ನಾಯಕರಾಗಿದ್ದಾರೆ ಮತ್ತು ಅವರ ಫಾರ್ಮ್ ಮತ್ತು ಫಿಟ್ನೆಸ್ ಅನ್ನು ಆಯ್ಕೆದಾರರು ಪರಿಶೀಲಿಸುವ ವೇದಿಕೆಯಾಗಿದೆ. ಅದರಂತೆ, ಆತ ಉತ್ತಮ ಆಟವಾಡುವ ನಿರೀಕ್ಷೆಯಿದೆ”ಎಂದು ಅವರು ಹೇಳಿದರು.
ಐಪಿಎಲ್ನಲ್ಲಿ 91 ಪಂದ್ಯಗಳಲ್ಲಿ 153.91 ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿರುವ ಪಾಂಡ್ಯ 1476 ರನ್ ದಾಖಲಿಸಿದ್ದಾರೆ. ಅಹಮದಾಬಾದ್ ಫ್ರಾಂಚೈಸಿ ಇವರನ್ನ ಬರೋಬ್ಬರಿ 15 ಕೋಟಿ ರೂಪಾಯಿ ನೀಡಿ ತಮ್ಮ ತಂಡಕ್ಕೆ ಸೇರಿಸಿಕೊಂಡಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243