ದಿನದ ಸುದ್ದಿ
ಯುವ ಕವಿ ಮತ್ತು ಗಾಯಕ ರುಜುವಾನ್ ಕೆ. ಮತ್ತು ನಾಗೇಂದ್ರಪ್ಪ ಅವರಿಗೆ ಉದಯೋನ್ಮುಖ ಕಲಾ ಚೇತನಾ ರಾಜ್ಯ ಪ್ರಶಸ್ತಿ
ಸುದ್ದಿದಿನ, ಚಿತ್ರದುರ್ಗ : ಹೊಳಲ್ಕೆರೆ ತಾಲ್ಲೂಕಿನ ಅಂದನೂರು ಗ್ರಾಮದ ಯುವ ಕವಿ ಮತ್ತು ಗಾಯಕರಾದ ರುಜುವಾನ್ ಕೆ ಅವರಿಗೆ ಉದಯೋನ್ಮುಖ ಕಲಾ ಚೇತನಾ ರಾಜ್ಯ ಪ್ರಶಸ್ತಿ. ಮತ್ತು ಶಿಕ್ಷಕರಾದ ನಾಗೇಂದ್ರಪ್ಪ ಅವರಿಗೆ ಉದಯೋನ್ಮುಖ ಕಾವ್ಯ ಚೇತನಾ ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.
ನಗರದ ರೋಟರಿ ಬಾಲಭವನದಲ್ಲಿ ಭಾನುವಾರ ಸೂಲೇನಹಳ್ಳಿಯ ತನುಶ್ರೀ ಪ್ರಕಾಶನ ಸಂಸ್ಥೆ ವತಿಯಿಂದ ರಂದು ಆಯೋಜಿಸಿದ್ದ ತನುಶ್ರೀ ಪ್ರಕಾಶನ ಉಧ್ಘಾಟನೆ ಮತ್ತು ಲೋಗೋ ಲೋಕಾರ್ಪಣೆ, ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ರಾಜ್ಯ ಮಟ್ಟದ ಕವಿಗೋಷ್ಠಿ, ಸ್ಥಳೀಯ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಪ್ರಶಸ್ತಿಗಳನ್ನು ವಿತರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಅಂಜನ್ ಕುಮಾರ್ ರಾಜ್ಯಾಧ್ಯಕ್ಷರು ವಿಚಾರ ಮಂಟಪ ಸಾಹಿತ್ಯ ವೇದಿಕೆ ತುಮಕೂರು. ಷಕೀಬ್ ಎಸ್ ಕಣದ್ಮನೆ ನವಿಲೇಹಾಳ್ ಯುವ ಸಾಹಿತಿಗಳು ಮತ್ತು ಸಂಶೋಧಕರು. ಶ್ರೀಧರ ಕೆ ಕಾದಂಬರಿಕಾರರು ಮತ್ತು ಯುವ ಕವಿಗಳು. ರಾಜುಸೂಲೇನಹಳ್ಳಿ ಕಾದಂಬರಿಕಾರರು. ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243