ಬಹಿರಂಗ

ಕರ್ನಾಟಕದ ಅಂಬೇಡ್ಕರ್ ಪ್ರೊ.ಬಿ. ಕೃಷ್ಣಪ್ಪ ಕುರಿತ ಬರಹ : ಮಿಸ್ ಮಾಡ್ದೆ ಓದಿ

Published

on

ಜೂನ್ 9 : ಕರ್ನಾಟಕದ ಅಂಬೇಡ್ಕರ್.ಪ್ರೊ.ಬಿ. ಕೃಷ್ಣಪ್ಪ ಅವರ ಜನ್ಮದಿನದ ಶುಭಾಶಯಗಳು

ಪ್ರೊ. ಕೃಷ್ಣಪ್ಪ ಅವರ ಬದುಕು
ಇಂದಿನ ನಮ್ಮ ನಿಮ್ಮ ಬದುಕಿಗಿಂತ ತುಂಬಾ ದುಸ್ಥಿತಿಯಲ್ಲಿತ್ತು. ಅವರ ದುಸ್ಥಿತಿಯ ಒಂದರೆಡು ವಿಷಯಗಳನ್ನು ಪ್ರಸ್ತಾಪಿಸುವುದಾದರೆ.

ಅತ್ಯಂತ ಬಡತನದ ಕುಟುಂಬದಲ್ಲಿ ಹುಟ್ಟಿದ್ದ ಕೃಷ್ಣಪ್ಪ ಅವರಿಗೆ ಯಾವುದೇ ರೀತಿಯ ಸಾಮಾಜಿಕ ಮತ್ತು ಆರ್ಥಿಕ ಬಲವಿರಲಿಲ್ಲ. ಮೂರು ಜನ ತಂಗಿಯರು ಹಾಗೂ ಮೂರು ಜನ ಸೋದರಿಯರ ಕೂಲಿ ಕುಟುಂಬದಲ್ಲಿ ಜೀವನ ನಡೆಸಿದವರು. ತಾವು ಬದುಕಿದ ಊರಲ್ಲಿದ್ದ ವಿಪರೀತ ಅಸ್ಪೃಶತಾವಾದಿಗಳ ನಡುವೆ ಬದುಕಿದವರು. ಮೆಡಿಕಲ್ ಓದಲು ಮನಸ್ಸಿದ್ದರೂ ತನ್ನ ಆರ್ಥಿಕ ಪರಿಸ್ಥಿತಿಯ ಕಾರಣದಿಂದ ಹಿಂದೆ ಬಿದ್ದವರು. ದಲಿತ ಜನಾಂಗದಲ್ಲಿ ಹುಟ್ಟದ ಕಾರಣಕ್ಕೆ ತನ್ನ ಕೊನೆಗಾಲದವರೆಗೂ ಸಾಕಷ್ಟು ನೋವನ್ನುಂಡವರು.

‘ಚಿತ್ರದುರ್ಗ ಜಿಲ್ಲೆಯ ಹರಿಹರದ’ “ಬಸಪ್ಪ ಮತ್ತು ಚೌಡಮ್ಮ”ನವರ ಹಿರಿಯ ಮಗನಾಗಿ ‘ಪ್ರೊ.ಬಿ. ಕೃಷ್ಣಪ್ಪನವರು 1938, ಜೂನ್ 9″ ರಂದು ಜನಿಸಿದರು. ಕೃಷಿ ಕೂಲಿ ಮಾಡಿಕೊಂಡು ಕಡು ಬಡತನದ ಜೀವನವನ್ನು ಸಾಗಿಸುತ್ತಿದ್ದರು. ಹಸಿವು ಮತ್ತು ಬಡತನದ ಕಾರಣ ದಿಂದ ಹೊಟೇಲ್ ಒಂದರಲ್ಲಿ ಬಾಲ ಕಾರ್ಮಿಕನಾಗಿ ದುಡಿದು, ಶ್ರೀಮಂತರ ದಬ್ಬಾಳಿಕೆ ಮತ್ತು ಗುಲಾಮಗಿರಿಯ ನೋವನ್ನು ಅನುಭವಿಸಿದರು.

ಇಂಥ ಕಷ್ಟಕರವಾದ ಬದುಕನ್ನು ಸಾಗಿಸಿದ ಬಿ.ಕೆ ಅವರು ಸಾಮಾನ್ಯರಂತೆ ತನಗೆ ಬಂದ ಬಾಳಿನ ಕರ್ಮವೆಂದು ಭಾವಿಸದ್ದರೆ ಈ ಹೊತ್ತು ನಾವೆಲ್ಲರು ಸೇರಿ ಅವರ ಬಗ್ಗೆ ಮಾತನಾಡುತ್ತಿರಲಿಲ್ಲ. ಶ್ರೀಯುತರು ಬಾಳಿನ ಪ್ರತೀ ನೋವಿನ ಸಂದರ್ಭದಲ್ಲೂ ತನ್ನ ನೋವನ್ನು ತನ್ನದು ಮಾತ್ರವೆಂದು ತಿಳಿಯದೇ ನನ್ನ ನೋವು ನನ್ನ ಸಮುದಾಯಗಳ ಎಲ್ಲರ ನೋವು ಎಂದು ಭಾವಿಸಿ, ಆ ನೋವಿಗೆ ಕಾರಣರಾದವರ ವಿರುದ್ಧ ಸಿಡಿದೆದ್ದು ಪ್ರತಿಭಟನಾ ಆಂದೋಳನಗಳನ್ನು ಕಟ್ಟಿ ಬೆಳೆಸಿದರು. ಇವರ ಅಂಥ ನೂರಾರು ಪ್ರಯತ್ನಗಳು ಕರ್ನಾಟಕದ ದಲಿತ ಸಮುದಾಯಗಳ ಬಿಡುಗಡೆಯ ಮಾರ್ಗಗಳಾದವು. ಕೃಷ್ಣಪ್ಪನವರು ದಲಿತರ ಆಶಾಕಿರಣವಾದರು.

ಮುಂದೆ ತಮ್ಮದೇ ಪಕ್ವ ಮತ್ತು ಪ್ರಬುದ್ಧ ವ್ಯಕ್ತಿತ್ವವನ್ನು ರೂಪಿಸಿಕೊಂಡು ಸಮಾಜವಾದಿ ಚಳುವಳಿಯ ಹೋರಾಟಗಳಲ್ಲಿ ತಮ್ಮನ್ನು ಗುರುತಿಸಿಕೊಂಡ ನಿಷ್ಠುರ ವ್ಯಕ್ತಿತ್ವದ ಬಿ.ಕೃಷ್ಣಪ್ಪ ಬುದ್ಧ, ಅಂಬೇಡ್ಕರ್, ಮಾರ್ಕ್ಸ್, ಲೋಹಿಯಾ ಮುಂತಾದವರ ವಿಚಾರಧಾರೆಗಳನ್ನು ಅಧ್ಯಯನ ಮಾಡಿದರು.

ಕೇವಲ ಸಮಾಜವಾದಿ ಸಿದ್ಧಾಂತಕ್ಕೆ ಸೀಮಿತಗೊಳ್ಳದೆ ಅಥವಾ ನಾಲ್ಕು ಗೋಡೆಗಳ ನಡುವೆ ಬೋಧಿಸುವ ಸಾಧಾರಣ ಶಿಕ್ಷಕ ಮಾತ್ರ ತಾನಾಗಿರದೆ ಕಲೆ, ಸಾಹಿತ್ಯ, ಸಂಗೀತ, ಕಾವ್ಯ, ಇತಿಹಾಸ, ಭಾಷಾಶಾಸ್ತ್ರ ಮುಂತಾದ ಸೃಜನಾತ್ಮಕ ಅಭಿರುಚಿ ಹಾಗೂ ಹವ್ಯಾಸಗಳನ್ನು ರೂಢಿಸಿಕೊಂಡು ಶೇಕ್ಸ್ ಪಿಯರ್, ಡಾಂಟೆ, ಕುಮಾರವ್ಯಾಸ, ಕೇಶಿರಾಜ, ಬೇಂದ್ರೆ, ಕುವೆಂಪು, ಅಡಿಗ ಹೀಗೆ ಕನ್ನಡ ಮತ್ತು ಕನ್ನಡೇತರ ಭಾಷೆಗಳ ನಾನಾ ಕವಿ ಸಾಹಿತಿಗಳ ಕೃತಿಗಳನ್ನು ಓದಿ ಜೀರ್ಣಿಸಿಕೊಂಡು ಅಧಿಕಾರವಾಣಿಯಿಂದ ಸಭೆ, ಸಂಕಿರಣ, ಗೋಷ್ಠಿಗಳಲ್ಲಿ ಮಾತನಾಡುವ ಹಾಗೂ ಲೇಖನಗಳನ್ನು ಬರೆಯುವ ಕೌಶಲ್ಯವನ್ನು ಬೆಳೆಸಿಕೊಂಡರು.

ಅಂಬೇಡ್ಕರ್ ರವರು ಪರಿ ನಿರ್ವಾಣದ ನಂತರ ಎರಡು ದಶಕಗಳ ಕಾಲ ಇಡಿ ದೇಶದಲ್ಲಿ ದಲಿತ ಸಮುದಾಯಗಳ ಮೇಲೆ ನಿರಂತರವಾಗಿ ದೌರ್ಜನ್ಯ, ದಬ್ಬಾಳಿಕೆ, ನಡೆದು ಶೋಷಿತರಿಗೆ ಆಶ್ರಯವಿಲ್ಲಾದಂತೆ ಸಂಧರ್ಭದಲ್ಲಿ, ಅಂಬೇಡ್ಕರ್ ರವರ ವಿಚಾರಧಾರೆಗಳ ಮಾನಸಪುತ್ರರಾಗಿ ಜನ್ಮತಾಳಿದ ಮಹಾತ್ಮ ಪ್ರೋ. ಬಿ.ಕೃಷ್ಣಪ್ಪ ಅವರು ಕರ್ನಾಟಕ ದಲಿತ ಸಂಘರ್ಷ ಸಮಿತಿಯನ್ನು (DSS) ಶಿವಮೊಗ್ಗ ಜಿಲ್ಲೆಯ ಭಧ್ರಾವತಿಯಲ್ಲಿ ಸ್ಥಾಪನೆ ಮಾಡಿ ಬಾಬಾ ಸಾಹೆಬರ ಜ್ಞಾನದಜೋತಿಯನ್ನು ಶೋಷಿತರ ಗುಡಿಸಲುಗಳಿಗೆ ತಲುಪಿಸಿ ಸಾಮಾಜಿಕ ಕ್ರಾಂತಿಗೆ ಮುನ್ನುಡಿ ಬರೆದರು. ಸ್ವಾಭಿಮಾನದಿಂದ ಸಂಘರ್ಷ ಮಾಡಿದ್ದರು.

ಸಾಮಾಜಿಕ ವ್ಯವಸ್ಥೆಯಲ್ಲಿ ತುಳಿತಕ್ಕೊಳಪಟ್ಟ ವರಿಗೆ ಪ್ರಜ್ಞೆ ಹುಟ್ಟಿಸಿ, ಸ್ವಾಭಿಮಾನ, ಆತ್ಮಗೌರವ ತುಂಬಿಸಿ ತುಳಿಯುವ ಸಮಾಜದ ವಿರುದ್ಧ ಸಂಘರ್ಷಕ್ಕೆ ಅವರನ್ನು ಸಿದ್ಧಗೊಳಿಸಬೇಕು. ಶೋಷಿತರ ಹಕ್ಕುಗಳಿಗಾಗಿ, ಸಿಡಿ ದೇಳುವ ಹಾಗೆ ಅವರನ್ನು ಪ್ರತಿಭಟನೆ ಮಾಡುವ ಹಾಗೆ ಮಾಡಬೇಕೆಂದು ಭಾವಿ ಸಿದ ಮಾನವೀಯ ಚಿಂತಕ ಪ್ರೊ. ಬಿ. ಕೃಷ್ಣಪ್ಪ.

ಜಾತಿ ರೋಗದ ಸೋಂಕಿನಿಂದ ಗುಣ ಮುಖರಾಗದೆ ಅದರ ಕಠೋರ ಸ್ವಭಾವಕ್ಕೆ ಹುಟ್ಟಿದ ವಿಭಿನ್ನ ಹೆಸರಿನ ಉಪಜಾತಿಗಳಾಗಿ, ಜನಬಲ, ಧನಬಲ, ಬುದ್ಧಿಬಲ ಹೀಗೆ ಮೂರು ಬಲಗಳಿಲ್ಲದೆ, ತಮ್ಮಿಳಗೆ ಒಗ್ಗಟ್ಟು ಇಲ್ಲದೆ ಊರು ಕೇರಿಗಳಲ್ಲಿ ಚೆಲ್ಲಿ ಹೋಗಿ ಅಸಂಘಟಿತರಾದ ದಲಿತರನ್ನು ಒಟ್ಟುಗೂಡಿಸಿ ಅವರಿಗೆ ಸಂಘಟನೆಯ ಅರಿವು ಮೂಡಿಸಿ ಕರ್ನಾಟಕದ ಲಕ್ಷಾಂತರ ಶೋಷಿತರಿಗೆ ಧ್ವನಿಯಾದ ವರು ಪ್ರೊ.ಬಿ. ಕೃಷ್ಣಪ್ಪರು. ಶೋಷಕರ ಮುಂದೆ ನಿಂತು ಮಾತನಾಡಲು ಬಾಯಿ ಇಲ್ಲದವರಿಗೆ ಬಾಯಿಯಾದರು. ದೌರ್ಜನ್ಯಗಳಿಂದ ಹೆದರಿ ನರಳು ತ್ತಿದ್ದ ಕಂಠಗಳಿಗೆ ಗಟ್ಟಿ ಧ್ವನಿಯಿಂದ ಮಾತ ನಾಡುವಂತೆ ಧೈರ್ಯವನ್ನೂ, ಸ್ವಾಭಿ ಮಾನವನ್ನು ತುಂಬಿದವರು.

ಶಿವಮೊಗ್ಗದಲ್ಲಿ ಪತ್ರೆ ಸಂಗಪ್ಪನ ಕಗ್ಗೊಲೆಯನ್ನು ಖಂಡಿಸುವದರ ಮೂಲಕ ಹೊರಾಟ ಆರಂಬಿಸಿದರು, “ರಾಯಚೂರಿನ ಮೆದಿಕಿನಾಳ” ಭೂ ಹೊರಾಟಗಳಲ್ಲಿ ಹಾಗೂ ನಾಗಸಂದ್ರ ಭೂ ಹೋರಾಟದಿಂದ ದಲಿತ ಹಿಂದೂಳಿದ ಕೃಷಿ ಕಾರ್ಮಿಕರಿಗೆ ಭೂಮಿ ಹಕ್ಕು ಪಡೆಯುವ “ಬಗರ್ ಹುಕುಂ” ಕಾಯ್ದೆಜಾರಿಗೆ ತರಲು ಕಾರಣರಾದರು ಮತ್ತು ‘ಸಿದ್ಲಿಪೂರ’ ಭೂ ಹೊರಾಟದ ಪ್ರತಿಫಲವಾಗಿ ‘PTCL’ ಕಾಯ್ದೆ ಜಾರಿಗೆ ಬಂತು,ಮುಂದುವರೆದು ಭೂಸ ಚಳುವಳಿ, ಕುಂಬಾರ ಶೆಷಗಿರಿಯಪ್ಪನ ಕಗ್ಗೊಲೆ, ಹುಣಸಿಕೊಟೆಯ ಜಾಥ, ಬೆಂಡಿಗೆರಿಯ ಮಲ ಪ್ರಕರಣ, ಚಂದ್ರಗುತ್ತಿಯ ಬೆತ್ತಲೆ ಸೆವೆಯ ವಿರುದ್ದ ಹೊರಾಟದ ಕಿಚ್ಚನ್ನು ಹಚ್ಚಿ ಸಂಘಟಿತರಾಗಲು ಸ್ಫೂರ್ತಿಯಾದರು.

ಇಂತಹ ಸಂಘರ್ಷಮಯವಾದ ಹೊರಾಟಗಳನ್ನು ಸಂಘಟಿಸಿ ಲಕ್ಷಾಂತರ ಕಾರ್ಯಕರ್ತರನ್ನು ಬೇಳಿಸಿ ದಲಿತ ಚಳುವಳಿಯನ್ನು ಶೋಷಿತರ ರಕ್ಷಾಕವಚ ವನ್ನಾಗಿ ನಿರ್ಮಿಸಿದರು. ಮತ್ತು ದಲಿತರಿಗೆ ಯಾವುದೇ ಭೂ ಒಡೆತನವಿಲ್ಲದೆ ಕೇವಲ ಜೀತದಾಳಗಳಾಗಿ ದುಡಿಯುತ್ತಿದ್ದ ಸಂದರ್ಭದಲ್ಲಿ ಅವರಿಗೂ “ಭೂ ಒಡೆತನ” ಬೇಕೆಂದು ಹೋರಾಟಗಳನ್ನು ಕಟ್ಟಿ ಸರ್ಕಾರಿ ಭೂಮಿಯನ್ನು ದಲಿತ ಭೂಹೀನರಿಗೆ ಹಂಚುವಂತೆ ಮಾಡಿದ್ದು ಕೃಷ್ಣಪ್ಪ ನವರ ಬಹುದೊಡ್ಡ ಸಾಧನೆ. ಮುಂದೆ ದಲಿತ ಸಂಘರ್ಷ ಸಮಿತಿಯ ವಿಮೋಚನಾ ಹೋರಾಟ ಅಥವಾ ದಲಿತರ ದಂಗೆ ರೂಪುಗೊಂಡ ಪುಟಗಳು ಇಂದು ಇತಿಹಾಸ ಸೇರಿರುವ ಒಂದು ಮಹತ್ವದ ಅಧ್ಯಾಯ.

ಲೇಖನ ಕೃಪೆ : ರವಿ ರಾಮಣ್ಣ ನವಲಹಳ್ಳಿ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version