ದಿನದ ಸುದ್ದಿ
ಗಣರಾಜ್ಯೋತ್ಸವ ಪರೇಡ್ | ಕರ್ನಾಟಕಕ್ಕೆ ಎರಡನೇ ಅತ್ಯುತ್ತಮ ಸ್ಥಬ್ದಚಿತ್ರ ಬಿರುದು
ಸುದ್ದಿದಿನ ಡೆಸ್ಕ್ : ಜನವರಿ 26 ರಂದು ನಡೆದ ಗಣರಾಜ್ಯೋತ್ಸವ ಪರೇಡ್ನಲ್ಲಿ ಭಾಗವಹಿಸಿದ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸ್ಥಬ್ದಚಿತ್ರಗಳಲ್ಲಿ ಕರ್ನಾಟಕಕ್ಕೆ ಎರಡನೇ ಅತ್ಯುತ್ತಮ ಸ್ಥಬ್ದಚಿತ್ರ ಎನ್ನುವ ಬಿರುದು ಸಿಕ್ಕಿದ್ದು ಈ ಕುರಿತು ರಕ್ಷಣಾ ಸಚಿವಾಲಯ ಶುಕ್ರವಾರ ತಿಳಿಸಿದೆ.
‘ಸಾಂಪ್ರದಾಯಿಕ ಕರಕುಶಲ ವಸ್ತುಗಳ ತೊಟ್ಟಿಲು’ ಆಧಾರಿತ ಸ್ಥಬ್ದಚಿತ್ರಕ್ಕೆ ಕರ್ನಾಟಕಕ್ಕೆ ಎರಡನೇ ಸ್ಥಾನ ಲಭಿಸಿದೆ.
ಸಾಂಪ್ರದಾಯಿಕ ಕರಕುಶಲ ವಸ್ತುಗಳ ತೊಟ್ಟಿಲು’ ಎಂಬ ಗಣರಾಜ್ಯೋತ್ಸವ 2022 ರಲ್ಲಿ ಕರ್ನಾಟಕದ ಸ್ಥಬ್ದಚಿತ್ರ 2 ನೇ ಸ್ಥಾನವನ್ನು ಗೆದ್ದಿರುವುದು ಹೆಮ್ಮೆಯ ವಿಷಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.
"ಗಣರಾಜ್ಯೋತ್ಸವ ಪರೇಡ್ ನಲ್ಲಿ ಭಾಗವಹಿಸಿದ್ದ, ಕರ್ನಾಟಕದ ಸ್ತಭ್ದ ಚಿತ್ರ 'ಸಾಂಪ್ರದಾಯಕ ಕರಕುಶಲ ವಸ್ತುಗಳ ತೊಟ್ಟಿಲು' ಎರಡನೇ ಸ್ಥಾನಗಳಿಸಿರುವುದು ಹೆಮ್ಮೆಯ ವಿಷಯವಾಗಿದೆ.
ಈ ಗೌರವವೂ ನಮ್ಮೆಲ್ಲರನ್ನು #VocalForLocal ಆಗಲು ಪ್ರೇರೇಪಿಸಲಿ, ಮತ್ತು ನಮ್ಮ ರಾಜ್ಯದ ಕರಕುಶಲಕರ್ಮಿಗಳಿಗೆ ಹೆಚ್ಚಿನ ಅವಕಾಶ ಸೃಷ್ಟಿಸಲಿ,
1/2 pic.twitter.com/noC4v2v2XU— CM of Karnataka (@CMofKarnataka) February 4, 2022
ಉತ್ತರ ಪ್ರದೇಶದ ‘ಒಂದು ಜಿಲ್ಲೆ ಒಂದು ಉತ್ಪನ್ನ ಮತ್ತು ಕಾಶಿ ವಿಶ್ವನಾಥ ಧಾಮ’ ಥೀಮ್ ಅನ್ನು ಆಧರಿಸಿದ್ದು ಇದಕ್ಕೆ ಮೊದಲನೇ ಸ್ಥಾನ ಸಿಕ್ಕಿದೆ ಮತ್ತು ಮೇಘಾಲಯವು ಮೂರನೇ ಸ್ಥಾನವನ್ನು ಪಡೆದುಕೊಂಡಿದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243