ಸಿನಿ ಸುದ್ದಿ
ಗೋಕಾಕ್ ಚಳವಳಿ ಸ್ಮರಣಾರ್ಥ ಡಾ.ರಾಜ್ ಪುತ್ಥಳಿ ಅನಾವರಣ : ಜೊತೆಯಾಗಲಿದ್ದಾರೆ ನಟ ಯಶ್ ; ವೀಡಿಯೋ ನೋಡಿ
ಸುದ್ದಿದಿನ, ಬೆಂಗಳೂರು : ಗೋಕಾಕ್ ಚಳವಳಿ ಸ್ಮರಣಾರ್ಥ #ಕನ್ನಡರಾಜ್ಯೋತ್ಸವ ದಂದು ರಾಕಿಂಗ್ ಸ್ಟಾರ್ ಯಶ್ ಮಲ್ಲೇಶ್ವರಂನಲ್ಲಿ ನಡೆಯುವ ಸಾಂಸ್ಕೃತಿಕ ಮೆರವಣಿಗೆಯಲ್ಲಿ ಹಾಗೂ ವಿಶೇಷ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
ಅಂದು ಗೋಕಾಕ್ ಚಳವಳಿಯಲ್ಲಿ ಭಾಗವಹಿಸಿದ್ದ ಮಹನೀಯರಿಗೆ ಗೌರವ ಸಲ್ಲಿಸಲಿದ್ದು, ಮಲ್ಲೇಶ್ವರಂ ಅಲ್ಲಿ ಒಂದು ವೃತ್ತ ಹಾಗೂ ಡಾ.ರಾಜ್ ಪುತ್ಥಳಿಯನ್ನು ಅನಾವರಣ ಗೊಲಳಿಸಲಾಗುವುದು.
ಈ ಕಾರ್ಯಕ್ರಮಕ್ಕೆ ಕನ್ನಡಪರ ಹೋರಾಟಗಾರು, ಸಾಹಿತಿಗಳು , ಸಿನೆಮಾ ನಟ-ನಟಿಯರು, ಕನ್ನಡ ಅಭಿಮಾನಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಲಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401