ಅಂತರಂಗ

ಸಾಹಿತ್ಯ ಸಮ್ಮೇಳನದ ಹೆಸರಿನಲ್ಲಿ ಸ್ವಾರ್ಥ ಸಾಧನೆಯೇ ?

Published

on

ಸಾಹಿತ್ಯದ ಸಮೃದ್ದ ಫಸಲನ್ನು ಸಮೃದ್ದವಾಗಿ ನೀಡಲು ಸಮ್ಮೇಳನಗಳು ಶಕ್ತವಾಗುತ್ತವೆ .ಕನ್ನಡ ಸಮ್ಮೇಳನ ಎಂಬುದು ಸಾಹಿತಿಗಳ ಮನಸ್ಸನ್ನು ಕನ್ನಡಿಯಷ್ಟು ಸ್ಪಷ್ಟವಾಗಿ ಹಿಡಿದಿಡುವ ವೇದಿಕೆ .

ಸಾಹಿತ್ಯ ಸಮ್ಮೇಳನಗಳು ಇತ್ತೀಚಿನ ವರ್ಷಗಳಲ್ಲಿ ಜಾತ್ರೆಯ ಸ್ವರೂಪ ತಳೆಯುತ್ತಿವೆ ಇದು ಸತ್ಯಾಂಶದ ಮಾತು ಜಾತ್ರೆಯಲ್ಲಿ ಸಂಭ್ರಮ ಸಡಗರ ಹೆಚ್ಚು ಯಾವುದೇ ಕಾರ್ಯಕ್ರಮದಲ್ಲೂ ಸಡಗರ ಒಳ್ಳೆಯ ಲಕ್ಷಣಗಳು ಆದರೆ ಸಾಹಿತ್ಯ ಸಮ್ಮೇಳನಗಳಲ್ಲಿ ಮೊದಲಿಗೆ ಆಗಬೇಕಾದ ಕೆಲಸ ಆಗದೇ ಇರುವುದು ದುರಂತವೇ ! ಯಾಕೆ ಹೀಗೆ ?

ಕನ್ನಡ ಸಾರಸ್ವತ ಲೋಕವನ್ನು ಕಟ್ಟಿ ಬೆಳೆಸಿದ ಹಿರಿ ತೆಲೆಮಾರಿನ ಸಾಹಿತಿಗಳಿಗೆ ಯುವ ಜನತೆ ಸಾಹಿತ್ಯದಲ್ಲೂ ಮುಂಚೂಣಿಗೆ ಬರಬೇಕೆಂಬ ಕಾಳಜಿ ಕಳಕಳಿ ಇಲ್ಲವೇ ? ಸಾಹಿತ್ಯ ಸಮ್ಮೇಳನಗಳೆಂದರೆ ಬರೀ ಹಿರಿಯರ ಒಡ್ಡೋಲಗವೇ ಆಗಬೇಕೆ.ವಿಚಾರ ಮಂಡಿಸುವ ಪ್ರಬುದ್ಧತೆ ಇಂದಿನ ಯುವಲೇಖಕರಲ್ಲಿ ಇಲ್ಲವೇ ? ಹಿರಿಯರ ಮುಂಚೂಣಿಯಲ್ಲಿ ಕಿರಿಯರನ್ನು ಬೆಳೆಸುವುದು ಅವರುಗಳ ಕರ್ತವ್ಯವಲ್ಲವೇ ..

ಇಂತಹದ್ದೇ ಪ್ರೆಶ್ನೆಗಳು ಕಾಡತೊಡಗಿವೆ ಹೊಸ ತೆಲೆ ಮಾರಿನ ಯುವಜನರನ್ನು ಸಮಗ್ರವಾಗಿ ಬಳಸಿಕೊಳ್ಳಲು ಯಾಕೆ ಸಾಧ್ಯವಾಗುತ್ತಿಲ್ಲ ?
ಇವತ್ತು ಸಾಹಿತ್ಯ ಕ್ಷೇತ್ರದಲ್ಲಿ ಗ್ರಾಮೀಣ ಪ್ರದೇಶದ ಹಲವಾರು ಲೇಖಕರು , ಕವಿಗಳು ಮುಂಚೂಣಿಯಲ್ಲಿರುವರು, ಆದರೂ ಅಧಿಕಾರ ಮೋಹಿಗಳು ಸಮ್ಮೇಳನವನ್ನು ಯಾವ ರೀತಿ ಮಾಡಬೇಕು ಎನ್ನುವುದು ಸಂಘಟಕರಿಗೆ ತಿಳಿದಿರದ ಬೇಕು. ಎಲ್ಲ ಮಗ್ಗಲುಗಳನ್ನು ಪರಿಶೀಲಿಸಿ ಅವಕಾಶ ವಂಚಿತರಿಗೆ ಅವಕಾಶವನ್ನು ಒದಗಿಸುವುದರ ಬಗ್ಗೆ ಚಿಂತಿಸುವುದು ಅನಿವಾರ್ಯ ಗ್ರಾಮೀಣ ಪ್ರದೇಶದವರನ್ನು , ಯುವಜನರನ್ನು ಪ್ರಚೋದಿಸುವ , ಪ್ರೇರೇಪಿಸುವ , ಪ್ರೊತ್ಸಾಹಿಸುವ ಅಗತ್ಯತೆ ಈಗಿನ ಸಂಘಟಿಕರಿಗೆ ಖಂಡಿತ ಇಲ್ಲ .ಇನ್ನೊಬ್ಬರು ಮುಂಚೂಣಿಗೆ ಬಂದರೆ , ತಾವು ಕಡೆಗಣಿಸಲ್ಪಡುತ್ತೇವೆಂಬ ಭಯ ಇರುವುದರಿಂದ ಇಂತಹ ವ್ಯಕ್ತಿಗಳು ಸಾಹಿತ್ಯ ಕ್ಷೇತ್ರದ ಅಧಿಕಾರದಲ್ಲಿ ಇರೋತನಕ ಯುವಜನತೆಗೆ ಹಳ್ಳಿಗಾಡಿನವರಿಗೆ ಸಾಧ್ಯವೇ ಇಲ್ಲ !

ಜನರಲ್ಲಿ ಸಾಂಸ್ಕೃತಿಕ ಕಳಕಳಿಯನ್ನು ವಿಸ್ತರಿಸುವ ಕೆಲಸ ಸಮ್ಮೇಳನಗಳಿಂದ ಆಗಬೇಕು.” ಹಿಂದೆ ಗೋಷ್ಟಿಗಳಲ್ಲಿ ಪಾಲ್ಗೊಂಡವರೇ ಮುಂದಿನ ಸಮ್ಮೇಳನಗಳಲ್ಲಿ ಭಾಗವಹಿಸುತ್ತಿದ್ದಾರೆ ”
ಇಲ್ಲಿ ಪಾಲ್ಗೊಳ್ಳಲು ಅವರ ಜನಪ್ರಿಯತೆ ಕಾರಣಗಳು ಇರುತ್ತವೆ ಆದರೆ ಕನ್ನಡ ಸಂಸ್ಕ್ರತಿಗಳ ಬೆಳವಣಿಗೆಗೆ ಅವರ ಕಾಣಿಕೆ ಏನು ? ಇಂದಿನ ದಿನಮಾನಗಳಲ್ಲಿ ಸಾಹಿತ್ಯ ಕ್ಷೇತ್ರದ ಹಿರಿಯ ಚೇತನಗಳ ಸರಪಳಿಯ ಕೊಂಡಿಗಳು ಒಂದೊಂದಾಗಿಯೇ ಕಳಚಿ ಬೀಳುವುದು ಅತ್ಯಂತ ದುಖದ ಸಂಗತಿಯಾಗಿದೆ ಹಾಗಿರುವಾಗ ಇದ್ದವರಿಗಾದರೂ ಹೊಸ ತೆಲೆಮಾರಿನ ಬರಹಗಾರರನ್ನು , ಗ್ರಾಮೀಣ ಪ್ರದೇಶದವರನ್ನು ಸಮಗ್ರವಾಗಿ ಸಮ್ಮೇಳನದ ಮುಂಚೂಣಿಯಲ್ಲಿ ತೊಡಗಿಸಿಕೊಳ್ಳಲು ಯಾಕೆ ಮುಂದಾಗಿಲ್ಲ. ! ಎನ್ನೋದೆ ! ಹಲವಾರು ಜನಗಳ ಪ್ರೆಶ್ನೆಗಳು .ಸಾಹಿತ್ಯಾಸಕ್ತ ಯುವಬರಹಗಾರರ ಸಂಖ್ಯೆಗೇನೂ ನಮ್ಮಲ್ಲಿ ಈಗಲೂ ಕಮ್ಮಿ ಇಲ್ಲ . ಸಾಹಿತ್ಯ ಲೋಕ ಬರಿದಾಗುವಂತ ದಾರಿದ್ರ್ಯವೂ ಬಂದಿಲ್ಲ ,
ಎಲೆಮರೆಯ ಕಾಯಿಯಂತಿದ್ದು ಕಥೆ , ಕವನ , ಕಾದಂಬರಿ ಲೇಖನಗಳನ್ನು ಬರೆಯುವ ಅಸಂಖ್ಯಾತ ಬರಹಗಾರರಿದ್ದಾರೆ .

ಜನರಲ್ಲಿ ಸಾಂಸ್ಕೃತಿಕ ಕಳಕಳಿಯನ್ನು ವಿಸ್ತರಿಸುವ ಕೆಲಸ ಸಮ್ಮೇಳನಗಳಿಂದ ಆಗಬೇಕು” ಹಿಂದೆ ಗೋಷ್ಟಿಗಳಲ್ಲಿ ಪಾಲ್ಗೊಂಡವರೇ ಮುಂದಿನ ಸಮ್ಮೇಳನಗಳಲ್ಲಿ ಭಾಗವಹಿಸುತ್ತಿದ್ದಾರೆ ”
ಇಲ್ಲಿ ಪಾಲ್ಗೊಳ್ಳಲು ಅವರ ಜನಪ್ರಿಯತೆ ಕಾರಣಗಳು ಇರುತ್ತವೆ ಆದರೆ ಕನ್ನಡ ಸಂಸ್ಕ್ರತಿಗಳ ಬೆಳವಣಿಗೆಗೆ ಅವರ ಕಾಣಿಕೆ ಏನು ? ಇಂದಿನ ದಿನಮಾನಗಳಲ್ಲಿ ಸಾಹಿತ್ಯ ಕ್ಷೇತ್ರದ ಹಿರಿಯ ಚೇತನಗಳ ಸರಪಳಿಯ ಕೊಂಡಿಗಳು ಒಂದೊಂದಾಗಿಯೇ ಕಳಚಿ ಬೀಳುತ್ತಿರುವುದು ಅತ್ಯಂತ ದುಖದ ಸಂಗತಿಯಾಗಿದೆ ಹಾಗಿರುವಾಗ ಇದ್ದವರಿಗಾದರೂ ಹೊಸ ತೆಲೆಮಾರಿನ ಬರಹಗಾರರನ್ನು , ಗ್ರಾಮೀಣ ಪ್ರದೇಶದವರನ್ನು ಸಮಗ್ರವಾಗಿ ಸಮ್ಮೇಳನದ ಮುಂಚೂಣಿಯಲ್ಲಿ ತೊಡಗಿಸಿಕೊಳ್ಳಲು ಯಾಕೆ ಮುಂದಾಗಿಲ್ಲ . ಎನ್ನೋದೇ ಹಲವಾರು ಜನಗಳ ಪ್ರೆಶ್ನೆಗಳು .
ಸಾಹಿತ್ಯಾಸಕ್ತ ಯುವಬರಹಗಾರರ ಸಂಖ್ಯೆಗೇನೂ ನಮ್ಮಲ್ಲಿ ಈಗಲೂ ಕಮ್ಮಿ ಇಲ್ಲ .

ಸಾಹಿತ್ಯ ಲೋಕ ಬರಿದಾಗುವಂತ ದಾರಿದ್ರ್ಯವೂ ಬಂದಿಲ್ಲ , ಎಲೆಮರೆಯ ಕಾಯಿಯಂತಿದ್ದು ಕಥೆ , ಕವನ , ಕಾದಂಬರಿ ಲೇಖನಗಳನ್ನು ಬರೆಯುವ ಅಸಂಖ್ಯಾತ ಬರಹಗಾರರಿದ್ದಾರೆ ..

ಗ್ರಾಮೀಣ ಪ್ರದೇಶದವರನ್ನು ಯುವಜನರನ್ನು ಹುಡುಕಿ ಪ್ರೊತ್ಸಾಹಿಸಿ ಜಿಲ್ಲಾ ಮಟ್ಟ , ರಾಜ್ಯ ಮಟ್ಟದವರೆಗೂ ಪರಿಚಯಿಸುವುದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕರ್ತವ್ಯವಾಗಿರುತ್ತದೆ.
ಇಲ್ಲಿ ಅಂಥದ್ದನ್ನು ಹುಟ್ಟು ಹಾಕುವ ಸಂಸ್ಕ್ರತಿ ಇಲ್ಲದೆ ಇಡೀ ಸಾಹಿತ್ಯ ಸಮ್ಮೇಳನವೇ ಸ್ವಾರ್ಥ ಕತೆಗೆ ಕಾರಣವಾಗುತ್ತಿದೆ ಎಂಬುದು ನಮ್ಮಂಥವರ ಕಾಳಜಿ. ಇಷ್ಟು ಕಾಲ ಉಳಿದು ಬೆಳೆದು ಬಂದ ಕನ್ನಡ ಸಾಹಿತ್ಯ ಸಂಸ್ಕ್ರತಿಗಳ ಬದುಕು ಈಗ ಇಡೀ ಸ್ವಾರ್ಥಿಗಳ ಕೈಗೆ ಸಿಕ್ಕು ಕೆಲನೆಲೆಗೆ ಇಳಿಯುತ್ತಿದೆ. ಎನ್ನುವುದನ್ನು ಗಮನಿಸಿದಾಗ ಮನಸ್ಸು ವಿಷಾಧದಿಂದ ಖಿನ್ನವಾಗುತ್ತದೆ .‌ಗ್ರಾಮೀಣ ಪ್ರದೇಶದ ಸೂಕ್ಷ್ಮ ತೆಗಳಿಗೆ ಅಭಿವ್ಯಕ್ತಿ ಕೊಡಬಲ್ಲದ್ದನ್ನು ಬೆಳೆಸಿ ಅರಳಿಸಬಲ್ಲ ಸಾಹಿತ್ಯ ಸಮ್ಮೇಳನಗಳು ಕ್ರಮೇಣ ಅವರ ಬದುಕಿನಿಂದ ದೂರಸರಿಯುತ್ತಿರುವುದು ವಿಷಾಧಕರ ಎನ್ನಿಸುತ್ತದೆ .. ಗ್ರಾಮೀಣ ಭಾಗದ ಜನರ ಮುಗ್ಧತನ ಅಸಾಹಯಕತೆಯನ್ನೆ ಬಂಡವಾಳ ಮಾಡಿಕೊಂಡು ಕನ್ನಡದ ಹೆಸರಿನಲ್ಲಿ ಬದುಕುವವರ ಸಂಖ್ಯೆ ಬಲುದೊಡ್ಡದು ..
ಸಮ್ಮೇಳನ ಏಂಬ ಹೆಸರಿನಲ್ಲಿ ಸಾಹಿತ್ಯ ಸಮ್ಮೇಳನಗಳು ಸರಕಾರ ಪರಿಷತ್ತು ಮಾಡುವ ಕಾರ್ಯ ಮಾತ್ರ ಅಲ್ಲ . ಇಲ್ಲಿ ಮನಸ್ಸು ಸಾಹಿತ್ಯಗಳನ್ನು ಬಲಾಡ್ಯಗೊಳಿಸುವ ನಾಡುನುಡಿಯ ಬೆಳವಣಿಗಾಗಿ ಭಾಷೆ ಮತ್ತು ಸಾಹಿತ್ಯಕ್ಕೆ ಗೌರವ ತರುವಂತಿರಬೇಕು. ಎಲ್ಲ ಸಾಹಿತ್ಯ ಸಮ್ಮೇಳನಗಳ ಆಶಯ ಒಂದೆ .
ನಮ್ಮ ಭಾಷೆ , ಸಂಸ್ಕ್ರತಿ ಸಾದ ಚಂದವಾಗಿ ಕೊಂಡೊಯ್ಯಬೇಕು ಎನ್ನುವುದು ಇಲ್ಲಿ ಮನಸ್ಸುಗಳನ್ನು ಒಂದುಗೂಡಿಸುವ ಕೆಲಸವಾಗಿರಬೇಕು ಆದರೆ ಈ ಸಮ್ಮೇಳನಗಳು ಎಲ್ಲಾರ ಮನಸ್ಸು ಕೆಡಿಸುತ್ತಿದೆ ..

ಇನ್ನಾದರೂ ಎಲ್ಲ ವರ್ಗದವರಿಗೆ ನಾಡು-ನುಡಿ ಕಟ್ಟುವ ಆಶಯಗಳು ಇರಲಿ ..ವರ್ಗ ಹಿನ್ನೆಲೆಗಳು ಚರ್ಚೆಯಾಗದಿರಲಿ ಕನ್ನಡ ಮತ್ತು ಸಮ್ಮೇಳನವು ಎಲ್ಲರ ಜೀವವೆಂಬಂತೆ ಪರಿಗಣಿಸಿ. ಸಮ್ಮೇಳನ ಎಂಬ ಹೆಸರಿನಲ್ಲಿ ಇದು ಹೀಗೆ ಮುಂದುವರಿದರೆ ಸಾಹಿತ್ಯ ಸಮ್ಮೇಳನಕ್ಕೂ ಯುವಜನತೆಗೂ ಒಂದಕ್ಕೊಂದು ಸಂಬಂಧವಿಲ್ಲದೆ ಅಲ್ಲಲ್ಲಿ ಯುವಸಮ್ಮೇಳನಗಳು ನಡೆಯುವುದರಲ್ಲಿ ಯಾವುದೇ ಅನುಮಾನವಿಲ್ಲ . ಇಂತಹ ಪರಿಸ್ಥಿತಿ ಬರುವ ಮುನ್ನವೆ ಕನ್ನಡ ಸಾಹಿತ್ಯ ಪರಿಷತ್ತು ಏಚ್ಚೆತ್ತುಕೊಳ್ಳಬೇಕಿದೆ. ಸಾಹಿತ್ಯ ಸಮ್ಮೇಳನ ಮುಖವಾಡಗಳ ಹಿಂದೆ ಯಾವ ಸ್ವಾರ್ಥಗಳು , ಸ್ವಾರ್ಥಿಗಳು , ಅಡಗಿದ್ದಾರೆ ಎಂದು ಅರಿತು ಸಾಹಿತ್ಯ ಕೃಷಿಯಲ್ಲಿ ನಿರತವಾಗಿರುವ ಯುವಜನರಿಗೂ ಕನ್ನಡ ಸಂಸ್ಕ್ರತಿ ಸಮ್ಮೇಳನಗಳು ಭಾವಿಷ್ಯದಲ್ಲಿ ಉತ್ತಮ ಮಾರ್ಗದರ್ಶನ ನೀಡಲು ಹೆಚ್ಚಿನ ಗಮನದ ಅಗತ್ಯತೆ ಇದೆ …

ಉದ್ದಕ್ಕೂ ಅಕ್ಷರ, ವಾಕ್ಯ ದೋಷಗಳಿವೆ. ಅಲ್ಪವಿರಾಮ, ಪೂರ್ಣ ವಿರಾಮಗಳು ಇರಬೇಕಾದ ಜಾಗದಲ್ಲಿ ಇಲ್ಲ. ಇದು ನನ್ನ ಆಲೋಚನೆ, ಪ್ರಶ್ನೆಗಳನ್ನು ದೂರ ತಂದು ನಿಲ್ಲಿಸುತ್ತವೆ . ದಯವಿಟ್ಟು ತಿದ್ದಿ ಓದಿ ಟೈಪ್ ಮಾಡುವಾಗ ಆದ ಅವಸರ.

ಇಲ್ಲಿ ಈ ವಿಷಯ ಯಾರಿಗಾದರೂ ಅನ್ವಯಿಸಿದರೆ ನಮ್ಮಗೆ ಸಂಬಂಧ ಪಟ್ಟಿರುವುದಿಲ್ಲ ಇದು ನನ್ನ ಸ್ವಂತ ಅನಿಸಿಕೆ ..

ಕೆ.ಜಿ.ಸರೋಜಾ ನಾಗರಾಜ್
ಪಾಂಡೋಮಟ್ಟಿ

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version