ಭಾಮಿನಿ

SavE GirL ChiLD

Published

on

ನಮ್ಮದಲ್ಲದ ತಪ್ಪಿಗೆ ನಾವೇಕೆ ನೋವಿಗೀಡಾಗಬೇಕು !!?

ಯವಿಟ್ಟು ನನ್ನ ಸಾಯಿಸ್ಬೇಡಿ… ಅಪ್ಪ ನಾನು ಈ ಭೂಮಿನ ನೋಡ್ಬೇಕು ನಿಮ್ ಜೊತೆ ಬದುಕಬೇಕು , ನಿಮ್ಮ ಮಗಳಾಗಿ ದೊಡ್ಡ ಸಾಧನೆ ಮಾಡ್ಬೇಕು. ಅಮ್ಮ ನಾನು ನಿನ್ನ ಮಡಿಲಲ್ಲಿ ಮಲಗಿ ಅಮ್ಮನ ಪ್ರೀತಿನ ಅನುಭವಿಸಬೇಕು.ನಿಮ್ಮ ಮುದ್ದಿನ ಮಗಳಾಗಿ ಬೆಳಿಬೇಕು. ಪ್ಲೀಸ್ ಅಮ್ಮ ಪ್ಲೀಸ್ ಅಪ್ಪ ನನ್ನ ಸಾಯಿಸಬೇಡಿ. ಹೌದು ಹೊಟ್ಟೆಯೊಳಗೆ ಸಾವಿನಂಚಿನಲ್ಲಿರುವ ಹೆಣ್ಣು ಕಂದಮ್ಮನ ನೋವಿನ ದನಿಯಿದು.

ಹೌದು . ಹೆಣ್ಣು ಭ್ರೂಣ ಹತ್ಯೆ ಈ ಪದವನ್ನ ಕೇಳಿದ ತಕ್ಷಣ ಕರುಳು ಕಿತ್ತು ಬರುತ್ತದೆ.ಮತ್ತೊಂದೆಡೆ ರಕ್ತ ಕುದಿಯುತ್ತದೆ. ಇನ್ನೂ ಪ್ರಪಂಚಕ್ಕೆ ಕಾಲಿಡದ ಮಗುವನ್ನು ಹೊಟ್ಟೆಯಲ್ಲೇ ಸಾಯಿಸುವುದಕ್ಕಿಂತ ಹೇಯ ಕೃತ್ಯ ಬಹುಶಃ ಮತ್ತಾವುದೂ ಇಲ್ಲ.ಅಷ್ಟಕ್ಕೂ ಆ ಮಗುವಿನ ತಪ್ಪೇನು ? ಗಂಡು ಮಗುವೇ ಬೇಕೆಂಬ ಕುರುಡು ನಂಬಿಕೆಗೆ ಹೆಣ್ಣು ಮಗುವನ್ನು ಬಲಿಪಶು ಮಾಡುವುದು ಎಷ್ಟು ಸರಿ ? ಹೆಣ್ಣು ಭ್ರೂಣ ಹತ್ಯೆಗೆ ನೇರ ಮತ್ತು ಮುಖ್ಯ ಕಾರಣವೆಂದರೆ, ಹೆಣ್ಣು ಮಗುವನ್ನು ಸಮಾಜದಲ್ಲಿ ಒಂದು ಸಾಮಾಜಿಕ ಹೊರೆಯೆಂದೇ ಪರಿಗಣಿಸಲಾಗುತ್ತದೆ. ವರದಕ್ಷಿಣೆ ಕುಟುಂಬದ ಮಾರ್ಯಾದೆ, ಅವಳನ್ನು ಮದುವೆ ಮಾಡಿಕೊಡಬೇಕೆಂಬ ತಾಪತ್ರಯ ಇಂತಹ ಕೆಲವು ಸಣ್ಣ ಕಾರಣಗಳಿಂದ ಹೆಣ್ಣು ಮಗುವೇ ಬೇಡ ಎಂಬ ಕೆಟ್ಟ ನಿರ್ಧಾರಕ್ಕೆ ಬಂದು ಬಿಡುತ್ತಾರೆ. ನಿಮಗೆ ಹೆಣ್ಣು ತಾಯಿಯಾಗಿ ,ತಂಗಿಯಾಗಿ, ಹೆಂಡತಿಯಾಗಿ ಬೇಕು. ಆದರೆ ಮಗಳಾಗಿ ಏಕೆ ಬೇಡ. ಅವಳೂ ನಿಮ್ಮ ಕರುಳ ಬಳ್ಳಿಯೇ ಅಲ್ವಾ .ಅಷ್ಟಕ್ಕೂ ನಮ್ಮದಲ್ಲದ ತಪ್ಪಿಗೆ ನಾವೇಕೆ ನೋವಿಗೀಡಾಗಬೇಕು !??
ಕೇವಲ ಹಿಂದಿನವರಷ್ಟೇ ಅಲ್ಲ ಇಂದಿನ ವಿದ್ಯಾವಂತರಲ್ಲೂ ಕೆಲವು ಮಂದಿ ಗಂಡು ಮಕ್ಕಳೇ ಬೇಕೆಂದು ಹೆಣ್ಣು ಭ್ರೂಣ ಹತ್ಯೆಗೆ ಮುಂದಾಗಿರುವುದು ವಿಷಾದನೀಯ.ಸಮಾನತೆ ಸಮಾನತೆ ಎಂದು ಬಾಯಿ ಬಡಿದುಕೊಳ್ಳುವವರೆಲ್ಲಾ ಹೆಣ್ಣು ಭ್ರೂಣ ಹತ್ಯೆ ತಡೆಯಲು ಏಕೆ ಮುಂದಾಗುತ್ತಿಲ್ಲ.. ಎಲೆಕ್ಷನ್ ಸಮಯದಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಬಿಡುಗಡೆ ಮಾಡುವ ಪ್ರಣಾಳಿಕೆಯಲ್ಲಿ ಹೆಣ್ಣು ಭ್ರೂಣ ಹತ್ಯೆ ನಿಷೇಧಿಸುವ ಅಂಶ ಅಷ್ಟು ಪರಿಣಾಮಕಾರಿಯಾಗಿ ಯಾಕೆ ಯಾವ ಪಕ್ಷದ ಪ್ರಣಾಳಿಕೆಯಲ್ಲೂ ಘೋಷಣೆಯಾಗಿಲ್ಲ ?
ಆಸ್ಪತ್ರೆಗಳಲ್ಲಿ ಮಗುವಿನ ಲಿಂಗ ಪತ್ತೆ ಹಚ್ಚುವಂತಿಲ್ಲ ಎಂಬ ಬೋರ್ಡ್ ಗಳು ರಾರಾಜಿಸುತ್ತಿವೆ. ಆದರೆ ನಿಜವಾಗಲೂ ಅಲ್ಲಿ ಲಿಂಗ ಪತ್ತೆ ಮಾಡುತ್ತಿಲ್ಲವಾ…!!! ನಾನು ಗರ್ಭಿಣಿ ಮಹಿಳೆಯೊಬ್ಬಳನ್ನು ತುಂಬಾ ಹತ್ತಿರದಿಂದ ಕಂಡಾಗ ಒಂದು ಕಟು ಸತ್ಯದ ಅರಿವಾಯ್ತು. ಸ್ಕ್ಯಾನಿಂಗ್ ಗೆಂದು ಬರುವ ಕೇಸ್ ಗಳಲ್ಲಿ ಕನಿಷ್ಠ 5 ಮಹಿಳೆಯಾರಾದರೂ ಯಾವ ಮಗು ಅಂತ ಹೇಳಿ ಡಾಕ್ಟ್ರೇ ಅಂತಾರೆ ಡಾಕ್ಟರ್ ಗಳಿಗೆ ದುಡ್ಡಿನ ಆಮಿಷ ಒಡ್ತಾರೆ ದಂಬಾಲು ಬೀಳ್ತಾರೆ – [ ಬಹುತೇಕ ನಿಷ್ಠಾವಂತ ಡಾಕ್ಟರ್ಸ್ ಈ ಆಮಿಷಗಳಿಗೆ ಒಳಗಾಗುವುದಿಲ್ಲ ಎಂಬುದಂತು ಸತ್ಯ – ಅವರ ಬಗ್ಗೆ ನನಗೆ ಅಪಾರ ಗೌರವವಿದೆ ] .ಯಾಕಂದ್ರೆ ಈ ಸಲಾನೂ ನಂಗೆ ಹೆಣ್ಣು ಮಗುನೇ ಆದ್ರೆ ನನ್ನ ಗಂಡ ಮನೆಗೆ ಸೇರಿಸೊಲ್ಲ ಅಂತ ಹೇಳ್ತಾರೆ.ಹಾಗಾದರೆ ಇಲ್ಲಿ ಗಂಡು ಮಗುವೇ ಬೇಕೆಂದು ಬಯಸುತ್ತಿರುವಳು ತಾಯಿಯಲ್ಲ. ಆಕೆಯ ಗಂಡ ಮತ್ತು ಆತನ ಕುಟುಂಬಸ್ಥರು ಎಂಬುದು ಸ್ಪಷ್ಟ. ಅಷ್ಟಕ್ಕೂ ಗಂಡು ಮಕ್ಕಳಿಗೆ ಯಾಕಿಷ್ಟು ಪ್ರಾಶಸ್ತ್ಯ ?? ಹೆಣ್ಣು ಮಕ್ಕಳು ಗಂಡು ಮಕ್ಕಳಿಗಿಂತ ಯಾವುದರಲ್ಲಿ ಕಮ್ಮಿ ಇದ್ದಾರೆ ಹೇಳಿ. ಎಲ್ಲಾ ಕ್ಷೇತ್ರಗಳಲ್ಲೂ ಗಂಡು ಮಕ್ಕಳನ್ನು ಮೀರಿಸಿ ಬೆಳೆದಿದ್ದಾರೆ. ಸಾಕಷ್ಟುಸಾಧನೆ ಮಾಡಿದ್ದಾರೆ.ಅಷ್ಟೇ ಯಾಕೆ ದೇಶದ ಪ್ರಥಮ ಪ್ರಜೆ ಅಂದರೆ ರಾಷ್ಟ್ರಪತಿಯಾಗಿ ಆಡಳಿತ ನಡೆಸಿ ಇಡೀ ದೇಶವೇ ಹುಬ್ಬೇರಿಸುವಂತೆ ಮಾಡಿದ್ದ ಶ್ರೀಮತಿ ಪ್ರತಿಭಾ ದೇವಿ ಸಿಂಗ್ ಪಾಟೀಲ್ ಕೂಡ ಓರ್ವ ಹೆಣ್ಣು ಮಗಳೇ ಅಲ್ವಾ ।…

ಹೆಣ್ಣು ಭ್ರೂಣ ಹತ್ಯೆ ತಡೆಯಲು ಹಲವು ಕಾನೂನುಗಳನ್ನು ಜಾರಿಗೆ ತರಲಾಗಿದೆ ಆದರೆ ಆ ಕಾನೂನುಗಳು ಅಷ್ಟು ಪರಿಣಾಮಕಾರಿಯಾಗಿ ಜಾರಿಯಾಗದೇ ಇರುವುದು ಲಿಂಗಾನುಪಾತದ ಅಸಮಾನತೆಗೆ ಕಾರಣವಾಗಿದೆ. ಪಿಸಿ ಪಿಎನ್ ಡಿಟಿ ಕಾಯ್ದೆಯ ಪ್ರಕಾರ ಭ್ರೂಣ ಪತ್ತೆ ಮಾಡುವುದು ಕಾನೂನು ಬಾಹಿರ.. ಭ್ರೂಣ ಲಿಂಗ ಪತ್ತೆ ಮಾಡಿದ ವೈದ್ಯರು ಹಾಗೂ ಲಿಂಗ ಪತ್ತೆಗೆ ಪ್ರೇರೇಪಿಸಿದ ಗರ್ಭಿಣಿ ಸ್ತ್ರೀಯ ಕುಟುಂಬ ವರ್ಗದವರು ಕಾನೂನಿನಡಿ ಕಠಿಣ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಮೊದಲ ಬಾರಿಯ ಅಪರಾಧಕ್ಕೆ 3 ವರ್ಷ ಜೈಲು ಶಿಕ್ಷೆ ಹಾಗೂ 50 ಸಾವಿರ ರೂ ದಂಡ ವಿಧಿಸಲಾಗುತ್ತದೆ .ಜೊತೆಗೆ ಲಿಂಗ ಪತ್ತೆ ಮಾಡಿದ ವೈದ್ಯರ ಹೆಸರನ್ನು 5 ವರ್ಷದ ಅವಧಿವರೆಗೆ ರಾಜ್ಯ ವೈದ್ಯಕೀಯ ಮಂಡಳಿಯಿಂದ ಅವರ ಸದಸ್ಯತ್ವವನ್ನು ರದ್ದು ಪಡಿಸಲಾಗುತ್ತದೆ. ಇಷ್ಟೆಲ್ಲಾ ಕಾನೂನುಗಳಿದ್ದರೂ ಹೆಣ್ಣು ಭ್ರೂಣ ಹತ್ಯೆಯನ್ನು ಸಂಪೂಣರ್ಣವಾಗಿ ತಡೆಯಲು ಸಾಧ್ಯವಾಗಿಲ್ಲ ಯಾಕೆಂದರೆ ಹೆಣ್ಣು ಭ್ರೂಣ ಹತ್ಯೆ ತಡೆಯುವಲ್ಲಿ ಕೇವಲ ಕಾನೂನು ಗಳಷ್ಟೇ ಸಾಲದು, ಜನರ ದೃಷ್ಟಿಕೋನವೂ ಬದಲಾಗಬೇಕು.ಹೆಣ್ಣು ಮಕ್ಕಳ ಕುರಿತು ಅವರಿಗಿರುವ ನಿಲುವುಗಳು ಬದಲಾಗಬೇಕು.ಈ ಕುರಿತು ಸಾಮಾಜಿಕ ಜಾಗೃತಿ ಮೂಡಿಸಬೇಕು.ಎಲ್ಲಿಯವರೆಗೆ ನಾವು ಗಂಡಿಗೆ ಸಮಾನವಾದ ಪ್ರಾಮುಖ್ಯತೆಯನ್ನು ಹೆಣ್ಣಿಗೆ ಕೊಡುವುದಿಲ್ಲವೋ ಅಲ್ಲಿಯವರೆಗೆ ಹೆಣ್ಣು ಭ್ರೂಣ ಹತ್ಯೆ ತಪ್ಪಿಸುವುದು ಸಾಧ್ಯವಿಲ್ಲದ ಮಾತು. ಹೀಗೆಯೇ ಹೆಣ್ಣುಭ್ರೂಣದ ಮಾರಣಹೋಮ ಮುಂದುವರಿದರೆ ಮುಂದೊಂದು ದಿನ ಗಂಡು ಮಗುವನ್ನ ಹೆರಲು ಹೆಣ್ಣು ಮಕ್ಕಳೇ ಇರುವುದಿಲ್ಲ !!
ಆದ್ದರಿಂದ ಬನ್ನಿ ನಾವೆಲ್ಲರೂ ಈ ಹೆಣ್ಣು ಭ್ರೂಣ ಹತ್ಯೆ ಪಿಡುಗಿನ ವಿರುದ್ಧ ಒಟ್ಟಾಗಿ ನಿಂತು ಹೋರಾಡೋಣ.
ಕೊನೆಯದಾಗಿ ಎಲ್ಲರಿಗೂ ನಾನು ಕೇಳಿಕೊಳ್ಳುವುದೇನೆಂದರ…

Dear parents, Girls are capable of doing anything, just let them to born
believe in your daughters, surely one day they will make u proud.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version