ಬಹಿರಂಗ

ನಕಲಿ ಆದಿವಾಸಿಗಳ ಚಿನ್ನಾಟ : ಅಸಲಿ ಆದಿವಾಸಿಗಳ ಪ್ರಾಣ ಸಂಕಟ

Published

on

ನನ್ನ ಮಾತನ್ನು ಅವನೇಕೆ, ಅವರಪ್ಪನೂ ಕೇಳಬೇಕು’ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ತಂದೆಯಾದ ಮಾಜಿ ಪ್ರಧಾನಿ ದೇವೇಗೌಡರನ್ನು ಕುರಿತು, ರಾಜನಹಳ್ಳಿ ಶ್ರೀ ಮಹರ್ಷಿ ವಾಲ್ಮೀಕಿ ಗುರು ಪೀಠದ ಶ್ರೀ ಪ್ರಸನ್ನಾನಂದ ಪುರಿ ಎಂಬ ಸ್ವಾಮಿ ಒದರಿದ್ದು ಇಡೀ ಕರ್ನಾಟಕ ರಾಜ್ಯವೇ ಕೇಳಿದೆ. ಈ ಸ್ವಾಮಿ ಸಾಂಸ್ಕøತಿಕ ಮತ್ತು ಧಾರ್ಮಿಕ ಪರಂಪರೆಯನ್ನು ಪಾಲಿಸುವ ಬೆಳೆಸುವ ಬದಲು, ರಾಜಕೀಯದಲ್ಲಿ ತನ್ನ ಬಾಲ ಆಡಿಸುವುದೇ ಈತನ ಕಸುಬು. ರಾಜನಹಳ್ಳಿ ಶ್ರೀ ವಾಲ್ಮೀಕಿ ಪೀಠವೆಂಬುದು ಸಂಸ್ಕøತಿ ಮತ್ತು ಧರ್ಮವನ್ನು ಕಾಪಾಡುವ ಮಠವಲ್ಲ, ಇದು ಒಂದು ರಾಜಕಾಣಿಗಳ ಕೂಟ. ನಕಲಿ ಬುಡಕಟ್ಟು ಜನರ, ಅಸಲಿ ಬಣ್ಣ ಮುಚ್ಚುವ ಕವಚ. ನಿಜವಾಗಿ ಪರಿಶಿಷ್ಟ ಪಂಗಡದ ಮೀಲಾತಿಗೆ ಅರ್ಹರಿರುವ ‘ನಾಯಕ ಬುಡಕಟ್ಟಿನ ಜನರಿಗೆ’ ಹಾಕಿರುವ ಬಲೆ.

1991ರಲ್ಲಿ ಶ್ರೀ ಚಂದ್ರಶೇಖರ್‍ರವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ, ಆಗಿನ ಚಳ್ಳಕೆರೆಯ ಮಾಜಿ ಮಂತ್ರಿಗಳಾದ ದಿ. ಶ್ರೀ ತಿಪ್ಪೇಸ್ವಾಮಿಯವರು ಹೆಚ್.ಡಿ ದೇವೇಗೌಡರಿಂದ ಪ್ರದಾನಿಯಾದ ಚಂದ್ರಶೇಖರವರಿಗೆ ಹೇಳಿಸಿ ‘ವಾಲ್ಮೀಕಿ, ನಾಯ್ಕ, ನಾಯಕ್, ಬೇಡ, ಬೇಡರ್,’ ಎಂಬ ಪದಗಳನ್ನು ‘ನಾಯಕ’ ಬುಡಕಟ್ಟಿನ ಸಮನಾರ್ಥಪದಗಳೆಂದು ಎಸ್.ಟಿ ಪಟ್ಟಿಯಲ್ಲಿ ಸೇರಿಸಲಾಯಿತು. ಇದರಲ್ಲಿ ದೇವೇಗೌಡರ ಪರಿಶ್ರಮವು ಸಹ ಇದೆ. ಬಳ್ಳಾರಿ ಜಿಲ್ಲೆಯಲ್ಲಿ ಮ್ಯಾಸ ನಾಯಕರು ತಮ್ಮ ಪಂಗಡದ ಹೆಸರನ್ನು ‘ವಾಲ್ಮೀಕಿ’ ಎಂದು ದಾಖಲೆಗಳಲ್ಲಿ ನಮೂದಿಸಿಕೊಂಡಿದ್ದರು ಮತ್ತು ನಮೂದಿಸಿಕೊಳ್ಳುತ್ತಿದ್ದರು. ಇದನ್ನು ಮೂಲವಾಗಿ ಪ್ರಸ್ತಾವನೆಯನ್ನು ಚಳ್ಳಕೆರೆಯ ಮಾಜಿಮಂತ್ರಿಗಳಾದ ತಿಪ್ಪೇಸ್ವಾಮಿಯವರ ಮೂಲಕ ಬಳ್ಳಾರಿ ಜಿಲ್ಲೆಯವರಿಗೆ ಅನುಕೂಲವಾಗಲೆಂದು ಕೇಳಿಕೊಂಡ ಕಮಲಾಪುರದ ಡಾ. ಪಾಪಯ್ಯನವರಿಗೆ ನೀಡಿದ ಕಾಣಿಕೆಯಂತೆ ಈ ಕೆಲಸ ಮಾಡಿಸಲಾಯಿತು.

ಆದ್ದರಿಂದ ಎಸ್.ಟಿ ಸೌಲಭ್ಯ ಈ ಬುಡಕಟ್ಟು ಜನಾಂಗಕ್ಕೆ ಸೇರಲೆಂದು ಡಾ. ಪಾಪಯ್ಯನವರ ಶ್ರಮವಾಗಿದೆ. ಈ ‘ವಾಲ್ಮೀಕಿ’ ಎಂಬ ಪದವೇ ತಳವಾರದವರಿಗೆ ಎಸ್ ಟಿ ಮೀಸಲಾತಿ ಕದಿಯಲು ಅನುಕೂಲವಾದ ಪದ. ಮತ್ತು ಈ ಡಾ. ಪಾಪಯ್ಯನವರೇ ಈಗ ಮ್ಯಾಸ ನಾಯಕ (ಮ್ಯಾಸ ಬೇಡ) ಬುಡಕಟ್ಟು ಸಂಸ್ಕøತಿ ಸಂರಕ್ಷಣಾ ಸಮಿತಿ (ರಿ)ನ ಅಧ್ಯಕ್ಷರಾಗಿದ್ದಾರೆ ಮತ್ತು ತಳವಾರ ಪರವಾರದವರಿಂದ ಮ್ಯಾಸ ಬೇಡರ ಮುಕ್ತಿಗಾಗಿ ಹೋರಾಡುತ್ತಿದ್ದಾರೆ. 1996 ರಲ್ಲಿ ವಾಲ್ಮೀಕಿ ಮಠ ಸ್ಥಾಪನೆ ಮಾಡಲು ದಿ. ತಿಪ್ಪೇಸ್ವಾಮಿಯವರಿಗೆ ದೇವೇಗೌಡರು ಬೆಂಬಲ ವ್ಯಕ್ತಿಪಡಿಸಿದ್ದರು. ಅಂದು ದೇವೇಗೌಡರು ಸಹಾಯ ಮಾಡದಿದ್ದರೆ ಇಂದು ವಾಲ್ಮೀಕಿ ಗುರು ಪೀಠ ಮತ್ತು ಈ ಪ್ರಸನ್ನಾನಂದ ಪುರಿ ಸ್ವಾಮಿಯೇ ಇರುತ್ತಿರಲಿಲ್ಲ. ಇಂದು ವಾಲ್ಮೀಕಿ ಮಠ ಮತ್ತು ಪೀಠಾಧಿಪತಿ ಎಂದು ಹೇಳಿಕೊಳ್ಳುವುದು ಇದೆ ಎಂದರೆ ಅದರಲ್ಲಿ ದೇವೇಗೌಡರ ಪರಿಶ್ರಮವು ಇದೆ. ಮಠ ಅಭಿವೃದ್ಧಿ ಆದ ಮೇಲೆ ದಿ.ತಿಪ್ಪೇಸ್ವಾಮಿಯವರನ್ನು ಮೂಲೆಗುಂಪು ಮಾಡಿದರು. ಮಠದಲ್ಲಿ ಇಂದು ಸುಳ್ಳು ಜಾತಿ ಪ್ರಮಾಣ ಪತ್ರಕ್ಕೆ ಮಠದ ಲೇಟರ್ ಪ್ಯಾಡ್‍ನಲ್ಲಿ ಶಿಫಾರಸ್ಸು ಮಾಡಲಾಗುತ್ತದೆ. ಈ ನಕಲಿ ಎಸ್ ಟಿ ಗಳಿಗೇನು ಗೊತ್ತು, ಅಸಲಿ ಇತಿಹಾಸ.

ನವ ದೆಹಲಿಯ ರಿಜಿಸ್ಟರ್ ಜನರಲ್ ಆಫ್ ಇಂಡಿಯಾವು 1993 ಮತ್ತು 2004ರ ತನ್ನ ವರದಿಯಲ್ಲಿ ಹೀಗೆ ಹೇಳಿರುತ್ತದೆ: ಕರ್ನಾಟಕದಲ್ಲಿ ಎರಡು ವಿಧದ’ ‘ನಾಯಕ’ ’ಜನಾಂಗ ವಿದೆ. ಒಂದು ಆದಿವಾಸಿ ‘ನಾಯಕ’ ಜನಾಂಗವಾಗಿದ್ದು ಇದು ಮಧ್ಯ ಪ್ರದೇಶದ ‘ಬಿಲ್’’’ಜನಾಂಗವನ್ನು ಹೋಲುತ್ತದೆ. ಮತ್ತು ಈ ಬುಡಕಟ್ಟು ಜನರನ್ನು ಈಗಾಗಲೇ ಪರಿಶಿಷ್ಟ ಪಂಗಡ ಪಟ್ಟಿಯಲ್ಲಿ ಸೇರಿಸಲಾಗಿದೆ (ಇದೇ ಮ್ಯಾಸ ನಾಯಕ ಅಥವಾ ಮ್ಯಾಸ ಬೇಡ ಜನಾಂಗ). ಮತ್ತು ಇನ್ನೊಂದು ‘ನಾಯಕ’ ಜಾತಿ ಎಂದು ಹೇಳಿಕೊಳ್ಳುತ್ತಿದ್ದು, ಅದು ಬೇಂಡರ್, ಬೇರಡ್, ತಳವಾರ ಜಾತಿಯವರು ಸಹ ತಮ್ಮ ಜಾತಿಯನ್ನು ‘ನಾಯಕ’ ಎಂದು ಹೇಳಿಕೊಳ್ಳುತ್ತಾರೆ. ಈ ಜಾತಿಯವರಿಗೆ ಯಾವುದೇ ಬುಡಕಟ್ಟು ಲಕ್ಷಣಗಳು ಇಲ್ಲ ಎಂದು ಹೇಳಿದ್ದಾರೆ. ವಾಸ್ತವ ಹೀಗಿದ್ದರೆ, ಈಗ ನಡೆಯುತ್ತಿರುವ ಎಸ್ ಟಿ ಮೀಸಲಾತಿಯನ್ನು 3%ನಿಂದ 7.5% ಹೆಚ್ಚಿಸಿ ಎಂದು ರಾಜನಹಳ್ಳಿ ಸ್ವಾಮಿ ಮಾಡುತ್ತಿರುವ ಗಲಾಟೆ, ಪರಿಶಿಷ್ಟ ಪಂಗಡಕ್ಕೆ ಸೇರಿದ ಬುಡಕಟ್ಟು ಜನರು ಯಾರೆಂದು ಮುಚ್ಚಿಟ್ಟು, ಈ ತಳವಾರ ಸ್ವಾಮೀನ ಮುಂದಿಟ್ಟು, ಗೋಕಾಕಿನ ಅರ್ಯಾಕ್ ದೊರೆಗಳು ಮಾಡುತ್ತಿರುವ ರಾಜಕೀಯ ಹೈಡ್ರಾಮಾ.

ನಿಜ ಹೇಳಬೇಕೆಂದರೆ, ಕರ್ನಾಟಕದಲ್ಲಿ ಎರಡು ವಿಧದ ‘ನಾಯಕ’ ಜನಾಂಗವಿದೆ. ಒಂದು ‘ನಾಯಕ ಬುಡಕಟ್ಟು’, ಇದರ ಪರ್ಯಾಯ ಹೆಸರುಗಳು ‘ಮ್ಯಾಸ ನಾಯಕ’, ‘ಮ್ಯಾಸ ಬೇಡ’, ‘ವಾಲ್ಮೀಕಿ’ ಬೇಡ, ಬೇಡರ, ‘ನಾಯ್ಕ’ ನಾಯಕ್ ಇತ್ಯಾದಿಗಳು. ಇವರು ಮೂರ್ತಿ ಪೂಜಕರಾಗಿರದೆ ಪಶು ಪೂಜಕರಾಗಿರುತ್ತಾರೆ. ವೈದಿಕ ಧರ್ಮದ ಸಂಪ್ರದಾಯಗಳನ್ನು ಆಚರಿಸುವುದಿಲ್ಲ. ತೆಲಗು ಉಪಭಾಷೆಯಂತಿರುವ ಇವರದೇ ಪ್ರತ್ಯೇಕ ಭಾಷೆ ಇದೆ. ಈ ಬುಡಕಟ್ಟು ಜನರ ಸಾಂಸ್ಕøತಿಕ ಉಡುಗೆಗಳು ಬಿಳಿ ಚಲ್ಲಣ, ಹೆಗಲ ಮೇಲೆ ಕರಿ ಕಂಬಳಿ, ಕೈಯಲ್ಲಿ ಸುಮಾರು 7 ಅಡಿ ಉದ್ದದ ಬಿದಿರು ಕೋಲು. ಇವರು ಮುಖ್ಯವಾಹಿನಿಯಿಂದ ಪ್ರತ್ಯೇಕವಾಗಿ ವಾಸವಾಗಿರುತ್ತಾರೆ ಮತ್ತು ಇವರ ವಾಸ ಸ್ಥಳಗಳನ್ನು ‘ಮ್ಯಾಸರಟ್ಟಿ’ ಎಂದು ಕರೆಯುತ್ತಾರೆ.

ಇವರು ಕುರಿ, ಮೇಕೆ, ಕಾಡುಹಂದಿ, ಕೌಜವನ್ನು ತಿನ್ನುವುದರೊಂದಿಗೆ, ಕೋಣವನ್ನೂ ಸಮಾನ್ಯಾಗಿ ತಿನ್ನುತ್ತಾರೆ. ಆದರೆ ಸಾಕುವ ಕೋಳಿ ತಿನ್ನುವುದಿಲ್ಲ. ಈಚಲ ಚಾಪೆಯನ್ನು ಬಳಸುವುದಿಲ್ಲ. ಚಿತ್ರದುರ್ಗದ ಪಾಳೆಗಾರರು ಈ ಬುಡಕಟ್ಟಿಗೆ ಸೇರಿದವರಾಗಿದ್ದು, ‘ಕಾಮಗೇತಿ’ ಬೆಡಗಿನವರು. ಮ್ಯಾಸ ಬೇಡರು ‘ಮ್ಯಾಸ ಮಂಡಲ’ ವೆಂಬ ಆಂಧ್ರ ಪ್ರದೇಶ ಮತ್ತು ಕರ್ನಾಟಕದ ಗಡಿಭಾಗಗಳಲ್ಲಿರುವ ತಮ್ಮ ಸಾಂಸ್ಕøತಿಕ ರಾಜ್ಯದಲ್ಲಿ ವಾಸಿಸುತ್ತಾರೆ. ಈ ‘ಮ್ಯಾಸ ನಾಯಕರು’ ಹನ್ನೆರಡು ಗುಡಿಕಟ್ಟೆಗಳಲ್ಲಿ ಒಂದೊಂದು ಬೆಡಗಿನ ದೇವರು ಮತ್ತು ಆಯಾ ಗುಡಿಕಟ್ಟೆಗೆ ಸೇರಿದವರೆಂದು ವಿಭಸಿಕೊಂಡಿದ್ದಾರೆ. ಒಂದೊಂದು ಗುಡಿಕಟ್ಟೆಗಳಿಗೆ ಸೇರಿದ ಹತ್ತಾರು ಉಪ ಬೆಡಗುಗಳಿದ್ದು, ಇವರುಗಳನ್ನು ಒಂದು ‘ಮೀಸಲು ಹಡಿಗೆ ಅಥವಾ ಪುಟ್ಟಿಯವರು’ ಎಂದು ವಿಭಜಿಸಲಾಗಿದೆ. ಒಂದೊಂದು ಮೀಸಲು ಪುಟ್ಟಿಗೆ ಐದಾರು ಮನೆತನಗಳು ಸೇರಿರುತ್ತವೆ. ಇವರು ಸಾಮಾನ್ಯವಾಗಿ ಬೇಟೆ, ಪಶುಪಾಲನೆ, ಬೇಸಾಯ, ಕೂಲಿಗಳಾಗಿ ದುಡಿದು ಜೀವನ ಸಾಗಿಸುತ್ತಾರೆ. ಇವರೆಲ್ಲ ಬಡವರಾಗಿದ್ದು, ಇವರಲ್ಲಿ ವಿದ್ಯೆ ಕಡಿಮೆ. ಇವರನ್ನು ಸಮಾಜದಲ್ಲಿ ಅಸ್ಪøಶ್ಯರೆಂದು ಪರಿಗಣಿಸಲಾಗಿದೆ.

ಇನ್ನೊಂದು ‘ನಾಯಕ ಜಾತಿ’ ಎಂದು ಕರೆಯಲಾಗುತ್ತದೆ. ಇವರು ವಿಜಯನಗರ ಕಾಲದಲ್ಲಿ ಅಮರಂ ನಾಯಕತನ ಪದ್ದತಿಯಲ್ಲಿ ನಾಯಕ ಎಂದು ಬಿರುದು ಪಡೆದುಕೊಂಡವರು ಈ ‘ನಾಯಕ’ ಜಾತಿಯನ್ನು ತಳವಾರ, ಪರಿವಾರ, ಊರು ನಾಯಕ ಎಂದು ಕರೆಯುತ್ತಾರೆ. ಇವರೆಲ್ಲ ಮೂಲತಃ ಗಂಗಮತ ಮತ್ತು ಬೆಸ್ತ ಜಾತಿಯ ಮೂಲದವರಾಗಿದ್ದು, ಸಮಾಜದ ಮುಖ್ಯವಾಹಿಯಲ್ಲಿ ಬೆರೆತು ಊರುಗಳಲ್ಲಿ ಬದುಕುತ್ತಾರೆ. ವಿಜಯನಗರ ಕಾಲದಲ್ಲಿನ ಆಯಗಾರ ಪದ್ಧತಿಯಲ್ಲಿ ಒಂದಾದ, ತಳವಾರಿಕೆ ಇವರು ವೃತ್ತಿಯಾಗಿತ್ತು. ಇವರು ವೈದಿಕ ಸಂಪ್ರದಾಯದ ದೇವರುಗಳನ್ನೇ ಆರಾದಿಸುತ್ತಾರೆ. ಇವರು ಮ್ಯಾಸ ನಾಯಕರಿಗಿಂತ ಸಾಮಾಜಿ, ರಾಜಕೀಯದಲ್ಲಿ ಉನ್ನತ ಸ್ಥಾನಗಳಿಸುರುತ್ತಾರೆ. ಇವರಲ್ಲಿ ಉನ್ನತ ವಿದ್ಯಾವಂತರೂ ದನಿಕರೂ ಇದ್ದಾರೆ. ಈ ಜಾತಿ ನಾಯಕರೇ, ಬುಡಕಟ್ಟು ನಾಯಕರು, ವಾಲ್ಮೀಕಿ ಜನಾಂಗದವರು ಎಂದು ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದು ಮೆರೆಯುತ್ತಿರುವುದು.

ಎಲ್ಲಾ ನಾಯಕರೂ ಒಂದೇ ಎಂದು ಹೇಳುತ್ತಾ ಬುಡಕಟ್ಟು ಜನರಾದ ಮ್ಯಾಸ ನಾಯಕರಿಗೆಲ್ಲದೇ ದೇಶದ ಇಡೀ ಬುಡಕಟ್ಟು ಜನರಿಗೆ ಪಂಗನಾಮ ಹಾಕಿರುವುದು. ಮ್ಯಾಸ ನಾಯಕ ರಾಜಕಾರಣಿಗಳಿಂದಲೇ ರಾಜನಹಳ್ಳಿಯಲ್ಲಿ ಶ್ರೀ ವಾಲ್ಮೀಕಿ ಗುರು ಪೀಠ ಮಾಡಿಸಿ, ತಳವಾರ ಪರಿವಾರದವರೇ ಇದರ ಆಡಳಿತವನ್ನು ಕಿತ್ತುಕೊಂಡು, ಬೆಸ್ತರ ತಳವಾರ ಜಾತಿಯ ಶ್ರೀ ಪ್ರಸನ್ನಾನಂದ ಪುರಿ ಸ್ವಾಮಿಯೇ ಎಡಬಿಡಂಗಿ ಕಥಾನಾಯಕ. ಜಾರಕಿಹೊಳೆ ಸಹೋದರರ, ಬಳ್ಳಾರಿಯ ಬೋಯಾ ಶ್ರೀರಾಮುಲು ಸಂಬಂಧಿಕರ ತಾಳಕ್ಕೆ ಕುಣಿಯುತ್ತಿರುವ ಆಸಾಮಿ ಈ ರಾಜನಹಳ್ಳಿ ಸ್ವಾಮಿ. ಈ ಸ್ವಾಮಿಗೆ ಮ್ಯಾಸ ಮಂಡಲದಲ್ಲಿ ಕಿಂಚಿತ್ತೂ ಮರ್ಯಾದೆ ಕೊಡುವುದಿಲ್ಲ.

ಮ್ಯಾಸ ಬೇಡರ ಸಂಸ್ಕøತಿಯಲ್ಲಿ ದೇವರ ಎತ್ತು ಕಾಯುವ ಕಿಲಾರಿಗಳನ್ನು ‘ಪದಿ ಪೂಜಾರಿ’ ಎಂದು ಕರೆಯುತ್ತಾರೆ. ಮ್ಯಾಸ ಬೇಡರು ಇವರನ್ನು ದೇವರ ಸ್ವರೂಪವೆಂದು ಕಾಲಿಗೆ ಬಿದ್ದು ನಮಸ್ಕರಿಸುತ್ತಾರೆ. ಇವರನ್ನು ವಿಶೇಷ ಮರ್ಯಾದೆಯಿಂದ ಕಾಣುತ್ತಾರೆ ಮತ್ತು ಉನ್ನತ ಸ್ಥಾನದಲ್ಲಿ ಕುಳ್ಳಿರಿಸುತ್ತಾರೆ. ಇಂತಹ, ಮ್ಯಾಸ ಬೇಡರ ಸಾಂಸ್ಕøತಿಕ ಉಡುಪು ಧರಿಸಿದ್ದ ಕಿಲಾರಿಗಳಿಗೆ ಆಮಿಷತೋರಿಸಿ, ಕಳ್ಳತನದಿಂದ ಕರೆಯಿಸಿ, ಅವರ ಜೊತೆಯಲ್ಲಿ ಅವರ ಮಧ್ಯೆ ಕುಳಿತು ಈ ಸ್ವಾಮಿಗಳು ಫೋಟೋ ತೆಗಸಿಕೊಳ್ಳುತ್ತಿದ್ದಾರೆ. ಇದು ಮ್ಯಾಸ ಬೇಡರ ಬುಡಕಟ್ಟು ಲಕ್ಷಣಗಳನ್ನು ಕದಿಯುವ ಪ್ರಯತ್ನವಾಗಿದೆ. ಇದು ನಮ್ಮ ‘ನಾಯಕ’ ಬುಡಕಟ್ಟಿಗೆ ಅಷ್ಟೇ ಅಲ್ಲದೆ, ಇಡೀ ಭಾರತ ದೇಶದ ಆದಿವಾಸಿಗಳಿಗೆ ಮಾಡುತ್ತಿರುವ ಅನ್ಯಾಯವಲ್ಲವೇ?

‘ನಾಯಕ’ ಬುಡಕಟ್ಟಿಗೆ ಸೇರಿದವರಲ್ಲದವರೂ ಸಹ ತಮ್ಮ ನಿಜ ಜಾತಿಗಳನ್ನು ಬರೆಸದೆ, ಜನಗಣತಿ ಮಾಡುವವರಿಗೆ ಸುಳ್ಳು ಮಾಹಿತಿ ನೀಡಿ ‘ನಾಯಕ, ವಾಲ್ಮೀಕಿ’ ಎಂದು ಮಾಹಿತಿ ಬರೆಯಿಸುತ್ತಿರುವುದರಿಂದ ನಿಜವಾದ, ಪರಿಶಿಷ್ಟ ಪಂಗಡಕ್ಕೆ ಸೇರಿದ ಆದಿವಾಸಿಗಳ ಜನಸಂಖ್ಯೆಯೇ ಲಭ್ಯವಿಲ್ಲ. ಕರ್ನಾಟಕದಲ್ಲಿ ಎಸ್. ಟಿ. ಮೀಸಲಾತಿಯನ್ನು ಈಗಿನ 3%ನಿಂದ 7.5%ಗೆ ಹೆಚ್ಚಿಸು ಎಂದು ಕೇಳುವುದು ಎಷ್ಟರ ಮಟ್ಟಿಗೆ ಸರಿ? ಈ ಸ್ವಾಮಿ ‘ಎಮ್ಮೆಯನ್ನು ನೀರಲ್ಲಿ ಮಲಗಿಸಿ, ಆ ಎಮ್ಮೆ ವ್ಯಾಪಾರ ಹೇಳುತ್ತಿದ್ದೀದ್ದಾರೆ’. ಈ ಸ್ವಾಮಿ ಈಗ ಮಾಡಿರುವ ಪಾದ ಯಾತ್ರೆಯು ಸರ್ಕಾರಕ್ಕೆ ತಮ್ಮ ಜನಸಂಖ್ಯಾ ಪ್ರಾಭಲ್ಯ, ರಾಜಕೀಯ ಬಲ ತೋರಿಸುವುದು, ಮತ್ತು ರಾಜ್ಯ ಸಭೆಯಲ್ಲಿ ‘ತಳವಾರ ಮತ್ತು ಪರಿವಾರ’’ಜಾತಿಯ ಹೆಸರುಗಳನ್ನು, ಇವು ‘ನಾಯಕ’ ಬುಡಕಟ್ಟಿನ ಸಮಾನಾರ್ಥ ಪದಗಳೆಂದು ಸುಳ್ಳು ವರದಿಗಳ ಮೇಲೆ ತಯಾರಿಸಿರುವ ಮತ್ತು ಈಗ ಸಂಸತ್ತಿನ ರಾಜ್ಯಸಭೆಯಲ್ಲಿರುವ ಬಿಲ್ಲನ್ನು ಪಾಸುಮಾಡಿಸುವುದು ಆಗಿದೆ.

ಈ ಬಿಲ್ಲು ಏನಾದರೂ ಪಾಸಾದರೆ, ಅದು ಮ್ಯಾಸ ನಾಯಕರಿಗೆ ಮತ್ತು ಇತರೆ ಬುಡಕಟ್ಟು ಜನಾಂಗಕ್ಕೆ ಮರಣ ಶಾಸನವಾಗಲಿದೆ. ಏಕೆಂದರೆ ಕಾನೂನು ಬಾಹಿರವಾಗಿ ಮ್ಯಾಸ ನಾಯಕ ಎಂಬ ಪದವನ್ನು ರಾಜ್ಯದ ಜಾತಿ ಪಟ್ಟಿಯಲ್ಲಿ ಕೆಟಗರಿ-1ರಲ್ಲಿ ಮತ್ತು ಕೇಂದ್ರ ಓಬಿಸಿ ಪಟ್ಟಿಯಲ್ಲಿ ಸೇರಿಸಿದ್ದಾರೆ. ಆದ್ದರಿಂದ ಆ ಬಿಲ್ಲು ಪಾಸಾದರೆ, ತಳವಾರ ಮತ್ತು ಪರಿವಾರದವರೇ ನಿಜವಾದ ಪರಿಶಿಷ್ಟ ಪಂಗಡದ ‘ನಾಯಕ’ ಎಂದು ಹೇಳಿ, ಮ್ಯಾಸ ಬೇಡರಿಗೆ ಎಸ್ ಟಿ ಮೀಸಲಾತಿ ಬಾಗಿಲು ಬಂದ್ ಮಾಡಿಸುತ್ತಾರೆ. ಆದ್ದರಿಂದ, 7.5% ಎಸ್ ಟಿ ಮೀಸಲಾತಿ ಎಂಬ ಮಂಕುಬೂದಿ ಎರಚಿ, ಮ್ಯಾಸ ಬೇಡರ ಅಸ್ಥಿತ್ವವನ್ನು ನಾಶಮಾಡುವುದು, ಮತ್ತು ಅವರ ಬುಡಕಟ್ಟು ಲಕ್ಷಣಗಳನ್ನು ಅಪಹರಿಸುವುದು, ಸಂಸ್ಕøತಿ ಕದಿಯುವುದು ಇದರ ಒಳಗುಟ್ಟು.

ಈ ತಳವಾರ ಪರಿವಾರದವರ ಗುರುವಾದ ಶ್ರೀ ಪ್ರಸನ್ನಾನಂದ ಸ್ವಾಮಿಗೆ ಬೆಂಬಲವಾಗಿ, ಆಧಿಕಾರದ ಲಾಲಸೆಯಿಂದ ರಾಜಕೀಯದಲ್ಲಿ ಬೇಳೆ ಬೇಯಿಸಿ ಕೊಳ್ಳಲು, ಸ್ವಜನರ ಭವಿಷ್ಯವನ್ನು ಒತ್ತೆಹಿಡಲು ಹೊರಟಿರುವ ಕೆಲವು ಮ್ಯಾಸ ಬೇಡ ರಾಜಕಾರಣಿಗಳು ಇದ್ದಾರೆ. ತಮ್ಮ ಮೂಲ ಸಂಸ್ಕøತಿಯನ್ನು ಬಿಡುವುದೇ ನಾಗರೀಕತೆ ಎಂದು ತಿಳಿದು, ತಳವಾರ ಮತ್ತು ಪರಿವಾರದವರೊಡನೆ ವೈವಾಹಿಕ ಸಂಬಂಧ ಬೆಳೆಸಿರುವ ಅಲ್ಪ ವಿದ್ಯೆ ಕಲಿತ ಅವಿವೇಕಿ ಕೆಲವು ಮ್ಯಾಸ ನಾಯಕರುಗಳು ಏನೂ ಗೊತ್ತಿಲ್ಲದ ಮಳ್ಳರಂತೆ ಸ್ವಾಮಿ ಪಾದ ನೆಕ್ಕುತ್ತಿದ್ದಾರೆ. ಸ್ವಾಭಿಮಾನದಿಂದ ಬದುಕದೆ, ತಳವಾರ ಮತ್ತು ಪರಿವಾರದವರು ಕೊಡುವ ಎಂಜಲು ಕಾಸಿಗಾಗಿ ಬಾಯಿತೆರೆದು ಕುಳಿತಿರುವ ನಾಚಿಕೆ ಇಲ್ಲದ ಕೆಲವು ಮ್ಯಾಸ ನಾಯಕರು. ತಳವಾರ, ಪರಿವಾರ, ಎಲ್ಲಾ ನಾಯಕರೂ ಒಂದೇ ಎಂದು ಕಳಪೆ ಇತಿಹಾಸ ಮತ್ತು ಸಾಹಿತ್ಯ ಬರೆದಿರುವ, ಮತ್ತು ತಾವು ಮಾಡಿರುವ ತಪ್ಪೇ ಸರಿಯೆಂದು ವಿತಂಡವಾದಕ್ಕೆ ನಿಂತಿರುವ, ಅಪ್ರಭುದ್ಧ ಕೆಲವು ಮ್ಯಾಸ ಬೇಡ ಜನಾಂಗದ ಸಾಹಿತಿಗಳು ಬರಹಗಾರರು, ಮುಖ ತೋರಿಸಲಾಗದೆ ತಲೆಬಗ್ಗಿಸಿ ಸ್ವಾಮಿ ಹಿಂದೆ ಹೆಜ್ಜೆ ಹಾಕುತ್ತಿದ್ದಾರೆ.

Empty vessel make loud noise’ ಎಂಬುದನ್ನು ಇಲ್ಲಿ ನೆನಪುಮಾಡಿಕೊಳ್ಳ ಬಹುದು. ಈ ಸ್ವಾಮಿಯ ಅನುಯಾಯಿಗಳು ಎಸ್ ಟಿ ಮೀಸಲಾತಿಗೆ ಹಕ್ಕುದಾರರೇ ಅಲ್ಲ. ತಳವಾರ ಮತ್ತು ಪರಿವಾರದವರನ್ನು ಸೇರಿಸಿಕೊಂಡು ಸುಳ್ಳನ್ನೇ ನಿಜವೆಂದು ಒದರಿ, ಸತ್ಯವೆಂದು ಸಾಬೀತು ಪಡಿಸಲು ಹೊರಟಿರುವ ದುಸ್ಸಾಹಸಿ. ಬೆದರಿಸಿ ಪಡೆಯುವುದು ಹಕ್ಕನಲ್ಲ, ಪರರ ಸೊತ್ತನ್ನು. ಸರ್ಕಾರವನ್ನು ಇಕ್ಕಟ್ಟಿಗೆ ಸಿಕ್ಕಿಸುವುದು, ಬೀಳಿಸುತ್ತೇವೆಂದು ಹೆದರಿಸುವುದು ಇವರಿಗೆ ಪ್ರಜಾಭುತ್ವದ ಬಗ್ಗೆ ಇರುವ ಅಗೌರವನ್ನು ತೋರಿಸುತ್ತಿದೆ.

ದೊಡ್ಡಮನಿ ಪ್ರಸಾದ್
ವಕೀಲರು

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version