Connect with us

ಬಹಿರಂಗ

ನಕಲಿ ಆದಿವಾಸಿಗಳ ಚಿನ್ನಾಟ : ಅಸಲಿ ಆದಿವಾಸಿಗಳ ಪ್ರಾಣ ಸಂಕಟ

Published

on

ನನ್ನ ಮಾತನ್ನು ಅವನೇಕೆ, ಅವರಪ್ಪನೂ ಕೇಳಬೇಕು’ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ತಂದೆಯಾದ ಮಾಜಿ ಪ್ರಧಾನಿ ದೇವೇಗೌಡರನ್ನು ಕುರಿತು, ರಾಜನಹಳ್ಳಿ ಶ್ರೀ ಮಹರ್ಷಿ ವಾಲ್ಮೀಕಿ ಗುರು ಪೀಠದ ಶ್ರೀ ಪ್ರಸನ್ನಾನಂದ ಪುರಿ ಎಂಬ ಸ್ವಾಮಿ ಒದರಿದ್ದು ಇಡೀ ಕರ್ನಾಟಕ ರಾಜ್ಯವೇ ಕೇಳಿದೆ. ಈ ಸ್ವಾಮಿ ಸಾಂಸ್ಕøತಿಕ ಮತ್ತು ಧಾರ್ಮಿಕ ಪರಂಪರೆಯನ್ನು ಪಾಲಿಸುವ ಬೆಳೆಸುವ ಬದಲು, ರಾಜಕೀಯದಲ್ಲಿ ತನ್ನ ಬಾಲ ಆಡಿಸುವುದೇ ಈತನ ಕಸುಬು. ರಾಜನಹಳ್ಳಿ ಶ್ರೀ ವಾಲ್ಮೀಕಿ ಪೀಠವೆಂಬುದು ಸಂಸ್ಕøತಿ ಮತ್ತು ಧರ್ಮವನ್ನು ಕಾಪಾಡುವ ಮಠವಲ್ಲ, ಇದು ಒಂದು ರಾಜಕಾಣಿಗಳ ಕೂಟ. ನಕಲಿ ಬುಡಕಟ್ಟು ಜನರ, ಅಸಲಿ ಬಣ್ಣ ಮುಚ್ಚುವ ಕವಚ. ನಿಜವಾಗಿ ಪರಿಶಿಷ್ಟ ಪಂಗಡದ ಮೀಲಾತಿಗೆ ಅರ್ಹರಿರುವ ‘ನಾಯಕ ಬುಡಕಟ್ಟಿನ ಜನರಿಗೆ’ ಹಾಕಿರುವ ಬಲೆ.

1991ರಲ್ಲಿ ಶ್ರೀ ಚಂದ್ರಶೇಖರ್‍ರವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ, ಆಗಿನ ಚಳ್ಳಕೆರೆಯ ಮಾಜಿ ಮಂತ್ರಿಗಳಾದ ದಿ. ಶ್ರೀ ತಿಪ್ಪೇಸ್ವಾಮಿಯವರು ಹೆಚ್.ಡಿ ದೇವೇಗೌಡರಿಂದ ಪ್ರದಾನಿಯಾದ ಚಂದ್ರಶೇಖರವರಿಗೆ ಹೇಳಿಸಿ ‘ವಾಲ್ಮೀಕಿ, ನಾಯ್ಕ, ನಾಯಕ್, ಬೇಡ, ಬೇಡರ್,’ ಎಂಬ ಪದಗಳನ್ನು ‘ನಾಯಕ’ ಬುಡಕಟ್ಟಿನ ಸಮನಾರ್ಥಪದಗಳೆಂದು ಎಸ್.ಟಿ ಪಟ್ಟಿಯಲ್ಲಿ ಸೇರಿಸಲಾಯಿತು. ಇದರಲ್ಲಿ ದೇವೇಗೌಡರ ಪರಿಶ್ರಮವು ಸಹ ಇದೆ. ಬಳ್ಳಾರಿ ಜಿಲ್ಲೆಯಲ್ಲಿ ಮ್ಯಾಸ ನಾಯಕರು ತಮ್ಮ ಪಂಗಡದ ಹೆಸರನ್ನು ‘ವಾಲ್ಮೀಕಿ’ ಎಂದು ದಾಖಲೆಗಳಲ್ಲಿ ನಮೂದಿಸಿಕೊಂಡಿದ್ದರು ಮತ್ತು ನಮೂದಿಸಿಕೊಳ್ಳುತ್ತಿದ್ದರು. ಇದನ್ನು ಮೂಲವಾಗಿ ಪ್ರಸ್ತಾವನೆಯನ್ನು ಚಳ್ಳಕೆರೆಯ ಮಾಜಿಮಂತ್ರಿಗಳಾದ ತಿಪ್ಪೇಸ್ವಾಮಿಯವರ ಮೂಲಕ ಬಳ್ಳಾರಿ ಜಿಲ್ಲೆಯವರಿಗೆ ಅನುಕೂಲವಾಗಲೆಂದು ಕೇಳಿಕೊಂಡ ಕಮಲಾಪುರದ ಡಾ. ಪಾಪಯ್ಯನವರಿಗೆ ನೀಡಿದ ಕಾಣಿಕೆಯಂತೆ ಈ ಕೆಲಸ ಮಾಡಿಸಲಾಯಿತು.

ಆದ್ದರಿಂದ ಎಸ್.ಟಿ ಸೌಲಭ್ಯ ಈ ಬುಡಕಟ್ಟು ಜನಾಂಗಕ್ಕೆ ಸೇರಲೆಂದು ಡಾ. ಪಾಪಯ್ಯನವರ ಶ್ರಮವಾಗಿದೆ. ಈ ‘ವಾಲ್ಮೀಕಿ’ ಎಂಬ ಪದವೇ ತಳವಾರದವರಿಗೆ ಎಸ್ ಟಿ ಮೀಸಲಾತಿ ಕದಿಯಲು ಅನುಕೂಲವಾದ ಪದ. ಮತ್ತು ಈ ಡಾ. ಪಾಪಯ್ಯನವರೇ ಈಗ ಮ್ಯಾಸ ನಾಯಕ (ಮ್ಯಾಸ ಬೇಡ) ಬುಡಕಟ್ಟು ಸಂಸ್ಕøತಿ ಸಂರಕ್ಷಣಾ ಸಮಿತಿ (ರಿ)ನ ಅಧ್ಯಕ್ಷರಾಗಿದ್ದಾರೆ ಮತ್ತು ತಳವಾರ ಪರವಾರದವರಿಂದ ಮ್ಯಾಸ ಬೇಡರ ಮುಕ್ತಿಗಾಗಿ ಹೋರಾಡುತ್ತಿದ್ದಾರೆ. 1996 ರಲ್ಲಿ ವಾಲ್ಮೀಕಿ ಮಠ ಸ್ಥಾಪನೆ ಮಾಡಲು ದಿ. ತಿಪ್ಪೇಸ್ವಾಮಿಯವರಿಗೆ ದೇವೇಗೌಡರು ಬೆಂಬಲ ವ್ಯಕ್ತಿಪಡಿಸಿದ್ದರು. ಅಂದು ದೇವೇಗೌಡರು ಸಹಾಯ ಮಾಡದಿದ್ದರೆ ಇಂದು ವಾಲ್ಮೀಕಿ ಗುರು ಪೀಠ ಮತ್ತು ಈ ಪ್ರಸನ್ನಾನಂದ ಪುರಿ ಸ್ವಾಮಿಯೇ ಇರುತ್ತಿರಲಿಲ್ಲ. ಇಂದು ವಾಲ್ಮೀಕಿ ಮಠ ಮತ್ತು ಪೀಠಾಧಿಪತಿ ಎಂದು ಹೇಳಿಕೊಳ್ಳುವುದು ಇದೆ ಎಂದರೆ ಅದರಲ್ಲಿ ದೇವೇಗೌಡರ ಪರಿಶ್ರಮವು ಇದೆ. ಮಠ ಅಭಿವೃದ್ಧಿ ಆದ ಮೇಲೆ ದಿ.ತಿಪ್ಪೇಸ್ವಾಮಿಯವರನ್ನು ಮೂಲೆಗುಂಪು ಮಾಡಿದರು. ಮಠದಲ್ಲಿ ಇಂದು ಸುಳ್ಳು ಜಾತಿ ಪ್ರಮಾಣ ಪತ್ರಕ್ಕೆ ಮಠದ ಲೇಟರ್ ಪ್ಯಾಡ್‍ನಲ್ಲಿ ಶಿಫಾರಸ್ಸು ಮಾಡಲಾಗುತ್ತದೆ. ಈ ನಕಲಿ ಎಸ್ ಟಿ ಗಳಿಗೇನು ಗೊತ್ತು, ಅಸಲಿ ಇತಿಹಾಸ.

ನವ ದೆಹಲಿಯ ರಿಜಿಸ್ಟರ್ ಜನರಲ್ ಆಫ್ ಇಂಡಿಯಾವು 1993 ಮತ್ತು 2004ರ ತನ್ನ ವರದಿಯಲ್ಲಿ ಹೀಗೆ ಹೇಳಿರುತ್ತದೆ: ಕರ್ನಾಟಕದಲ್ಲಿ ಎರಡು ವಿಧದ’ ‘ನಾಯಕ’ ’ಜನಾಂಗ ವಿದೆ. ಒಂದು ಆದಿವಾಸಿ ‘ನಾಯಕ’ ಜನಾಂಗವಾಗಿದ್ದು ಇದು ಮಧ್ಯ ಪ್ರದೇಶದ ‘ಬಿಲ್’’’ಜನಾಂಗವನ್ನು ಹೋಲುತ್ತದೆ. ಮತ್ತು ಈ ಬುಡಕಟ್ಟು ಜನರನ್ನು ಈಗಾಗಲೇ ಪರಿಶಿಷ್ಟ ಪಂಗಡ ಪಟ್ಟಿಯಲ್ಲಿ ಸೇರಿಸಲಾಗಿದೆ (ಇದೇ ಮ್ಯಾಸ ನಾಯಕ ಅಥವಾ ಮ್ಯಾಸ ಬೇಡ ಜನಾಂಗ). ಮತ್ತು ಇನ್ನೊಂದು ‘ನಾಯಕ’ ಜಾತಿ ಎಂದು ಹೇಳಿಕೊಳ್ಳುತ್ತಿದ್ದು, ಅದು ಬೇಂಡರ್, ಬೇರಡ್, ತಳವಾರ ಜಾತಿಯವರು ಸಹ ತಮ್ಮ ಜಾತಿಯನ್ನು ‘ನಾಯಕ’ ಎಂದು ಹೇಳಿಕೊಳ್ಳುತ್ತಾರೆ. ಈ ಜಾತಿಯವರಿಗೆ ಯಾವುದೇ ಬುಡಕಟ್ಟು ಲಕ್ಷಣಗಳು ಇಲ್ಲ ಎಂದು ಹೇಳಿದ್ದಾರೆ. ವಾಸ್ತವ ಹೀಗಿದ್ದರೆ, ಈಗ ನಡೆಯುತ್ತಿರುವ ಎಸ್ ಟಿ ಮೀಸಲಾತಿಯನ್ನು 3%ನಿಂದ 7.5% ಹೆಚ್ಚಿಸಿ ಎಂದು ರಾಜನಹಳ್ಳಿ ಸ್ವಾಮಿ ಮಾಡುತ್ತಿರುವ ಗಲಾಟೆ, ಪರಿಶಿಷ್ಟ ಪಂಗಡಕ್ಕೆ ಸೇರಿದ ಬುಡಕಟ್ಟು ಜನರು ಯಾರೆಂದು ಮುಚ್ಚಿಟ್ಟು, ಈ ತಳವಾರ ಸ್ವಾಮೀನ ಮುಂದಿಟ್ಟು, ಗೋಕಾಕಿನ ಅರ್ಯಾಕ್ ದೊರೆಗಳು ಮಾಡುತ್ತಿರುವ ರಾಜಕೀಯ ಹೈಡ್ರಾಮಾ.

ನಿಜ ಹೇಳಬೇಕೆಂದರೆ, ಕರ್ನಾಟಕದಲ್ಲಿ ಎರಡು ವಿಧದ ‘ನಾಯಕ’ ಜನಾಂಗವಿದೆ. ಒಂದು ‘ನಾಯಕ ಬುಡಕಟ್ಟು’, ಇದರ ಪರ್ಯಾಯ ಹೆಸರುಗಳು ‘ಮ್ಯಾಸ ನಾಯಕ’, ‘ಮ್ಯಾಸ ಬೇಡ’, ‘ವಾಲ್ಮೀಕಿ’ ಬೇಡ, ಬೇಡರ, ‘ನಾಯ್ಕ’ ನಾಯಕ್ ಇತ್ಯಾದಿಗಳು. ಇವರು ಮೂರ್ತಿ ಪೂಜಕರಾಗಿರದೆ ಪಶು ಪೂಜಕರಾಗಿರುತ್ತಾರೆ. ವೈದಿಕ ಧರ್ಮದ ಸಂಪ್ರದಾಯಗಳನ್ನು ಆಚರಿಸುವುದಿಲ್ಲ. ತೆಲಗು ಉಪಭಾಷೆಯಂತಿರುವ ಇವರದೇ ಪ್ರತ್ಯೇಕ ಭಾಷೆ ಇದೆ. ಈ ಬುಡಕಟ್ಟು ಜನರ ಸಾಂಸ್ಕøತಿಕ ಉಡುಗೆಗಳು ಬಿಳಿ ಚಲ್ಲಣ, ಹೆಗಲ ಮೇಲೆ ಕರಿ ಕಂಬಳಿ, ಕೈಯಲ್ಲಿ ಸುಮಾರು 7 ಅಡಿ ಉದ್ದದ ಬಿದಿರು ಕೋಲು. ಇವರು ಮುಖ್ಯವಾಹಿನಿಯಿಂದ ಪ್ರತ್ಯೇಕವಾಗಿ ವಾಸವಾಗಿರುತ್ತಾರೆ ಮತ್ತು ಇವರ ವಾಸ ಸ್ಥಳಗಳನ್ನು ‘ಮ್ಯಾಸರಟ್ಟಿ’ ಎಂದು ಕರೆಯುತ್ತಾರೆ.

ಇವರು ಕುರಿ, ಮೇಕೆ, ಕಾಡುಹಂದಿ, ಕೌಜವನ್ನು ತಿನ್ನುವುದರೊಂದಿಗೆ, ಕೋಣವನ್ನೂ ಸಮಾನ್ಯಾಗಿ ತಿನ್ನುತ್ತಾರೆ. ಆದರೆ ಸಾಕುವ ಕೋಳಿ ತಿನ್ನುವುದಿಲ್ಲ. ಈಚಲ ಚಾಪೆಯನ್ನು ಬಳಸುವುದಿಲ್ಲ. ಚಿತ್ರದುರ್ಗದ ಪಾಳೆಗಾರರು ಈ ಬುಡಕಟ್ಟಿಗೆ ಸೇರಿದವರಾಗಿದ್ದು, ‘ಕಾಮಗೇತಿ’ ಬೆಡಗಿನವರು. ಮ್ಯಾಸ ಬೇಡರು ‘ಮ್ಯಾಸ ಮಂಡಲ’ ವೆಂಬ ಆಂಧ್ರ ಪ್ರದೇಶ ಮತ್ತು ಕರ್ನಾಟಕದ ಗಡಿಭಾಗಗಳಲ್ಲಿರುವ ತಮ್ಮ ಸಾಂಸ್ಕøತಿಕ ರಾಜ್ಯದಲ್ಲಿ ವಾಸಿಸುತ್ತಾರೆ. ಈ ‘ಮ್ಯಾಸ ನಾಯಕರು’ ಹನ್ನೆರಡು ಗುಡಿಕಟ್ಟೆಗಳಲ್ಲಿ ಒಂದೊಂದು ಬೆಡಗಿನ ದೇವರು ಮತ್ತು ಆಯಾ ಗುಡಿಕಟ್ಟೆಗೆ ಸೇರಿದವರೆಂದು ವಿಭಸಿಕೊಂಡಿದ್ದಾರೆ. ಒಂದೊಂದು ಗುಡಿಕಟ್ಟೆಗಳಿಗೆ ಸೇರಿದ ಹತ್ತಾರು ಉಪ ಬೆಡಗುಗಳಿದ್ದು, ಇವರುಗಳನ್ನು ಒಂದು ‘ಮೀಸಲು ಹಡಿಗೆ ಅಥವಾ ಪುಟ್ಟಿಯವರು’ ಎಂದು ವಿಭಜಿಸಲಾಗಿದೆ. ಒಂದೊಂದು ಮೀಸಲು ಪುಟ್ಟಿಗೆ ಐದಾರು ಮನೆತನಗಳು ಸೇರಿರುತ್ತವೆ. ಇವರು ಸಾಮಾನ್ಯವಾಗಿ ಬೇಟೆ, ಪಶುಪಾಲನೆ, ಬೇಸಾಯ, ಕೂಲಿಗಳಾಗಿ ದುಡಿದು ಜೀವನ ಸಾಗಿಸುತ್ತಾರೆ. ಇವರೆಲ್ಲ ಬಡವರಾಗಿದ್ದು, ಇವರಲ್ಲಿ ವಿದ್ಯೆ ಕಡಿಮೆ. ಇವರನ್ನು ಸಮಾಜದಲ್ಲಿ ಅಸ್ಪøಶ್ಯರೆಂದು ಪರಿಗಣಿಸಲಾಗಿದೆ.

ಇನ್ನೊಂದು ‘ನಾಯಕ ಜಾತಿ’ ಎಂದು ಕರೆಯಲಾಗುತ್ತದೆ. ಇವರು ವಿಜಯನಗರ ಕಾಲದಲ್ಲಿ ಅಮರಂ ನಾಯಕತನ ಪದ್ದತಿಯಲ್ಲಿ ನಾಯಕ ಎಂದು ಬಿರುದು ಪಡೆದುಕೊಂಡವರು ಈ ‘ನಾಯಕ’ ಜಾತಿಯನ್ನು ತಳವಾರ, ಪರಿವಾರ, ಊರು ನಾಯಕ ಎಂದು ಕರೆಯುತ್ತಾರೆ. ಇವರೆಲ್ಲ ಮೂಲತಃ ಗಂಗಮತ ಮತ್ತು ಬೆಸ್ತ ಜಾತಿಯ ಮೂಲದವರಾಗಿದ್ದು, ಸಮಾಜದ ಮುಖ್ಯವಾಹಿಯಲ್ಲಿ ಬೆರೆತು ಊರುಗಳಲ್ಲಿ ಬದುಕುತ್ತಾರೆ. ವಿಜಯನಗರ ಕಾಲದಲ್ಲಿನ ಆಯಗಾರ ಪದ್ಧತಿಯಲ್ಲಿ ಒಂದಾದ, ತಳವಾರಿಕೆ ಇವರು ವೃತ್ತಿಯಾಗಿತ್ತು. ಇವರು ವೈದಿಕ ಸಂಪ್ರದಾಯದ ದೇವರುಗಳನ್ನೇ ಆರಾದಿಸುತ್ತಾರೆ. ಇವರು ಮ್ಯಾಸ ನಾಯಕರಿಗಿಂತ ಸಾಮಾಜಿ, ರಾಜಕೀಯದಲ್ಲಿ ಉನ್ನತ ಸ್ಥಾನಗಳಿಸುರುತ್ತಾರೆ. ಇವರಲ್ಲಿ ಉನ್ನತ ವಿದ್ಯಾವಂತರೂ ದನಿಕರೂ ಇದ್ದಾರೆ. ಈ ಜಾತಿ ನಾಯಕರೇ, ಬುಡಕಟ್ಟು ನಾಯಕರು, ವಾಲ್ಮೀಕಿ ಜನಾಂಗದವರು ಎಂದು ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದು ಮೆರೆಯುತ್ತಿರುವುದು.

ಎಲ್ಲಾ ನಾಯಕರೂ ಒಂದೇ ಎಂದು ಹೇಳುತ್ತಾ ಬುಡಕಟ್ಟು ಜನರಾದ ಮ್ಯಾಸ ನಾಯಕರಿಗೆಲ್ಲದೇ ದೇಶದ ಇಡೀ ಬುಡಕಟ್ಟು ಜನರಿಗೆ ಪಂಗನಾಮ ಹಾಕಿರುವುದು. ಮ್ಯಾಸ ನಾಯಕ ರಾಜಕಾರಣಿಗಳಿಂದಲೇ ರಾಜನಹಳ್ಳಿಯಲ್ಲಿ ಶ್ರೀ ವಾಲ್ಮೀಕಿ ಗುರು ಪೀಠ ಮಾಡಿಸಿ, ತಳವಾರ ಪರಿವಾರದವರೇ ಇದರ ಆಡಳಿತವನ್ನು ಕಿತ್ತುಕೊಂಡು, ಬೆಸ್ತರ ತಳವಾರ ಜಾತಿಯ ಶ್ರೀ ಪ್ರಸನ್ನಾನಂದ ಪುರಿ ಸ್ವಾಮಿಯೇ ಎಡಬಿಡಂಗಿ ಕಥಾನಾಯಕ. ಜಾರಕಿಹೊಳೆ ಸಹೋದರರ, ಬಳ್ಳಾರಿಯ ಬೋಯಾ ಶ್ರೀರಾಮುಲು ಸಂಬಂಧಿಕರ ತಾಳಕ್ಕೆ ಕುಣಿಯುತ್ತಿರುವ ಆಸಾಮಿ ಈ ರಾಜನಹಳ್ಳಿ ಸ್ವಾಮಿ. ಈ ಸ್ವಾಮಿಗೆ ಮ್ಯಾಸ ಮಂಡಲದಲ್ಲಿ ಕಿಂಚಿತ್ತೂ ಮರ್ಯಾದೆ ಕೊಡುವುದಿಲ್ಲ.

ಮ್ಯಾಸ ಬೇಡರ ಸಂಸ್ಕøತಿಯಲ್ಲಿ ದೇವರ ಎತ್ತು ಕಾಯುವ ಕಿಲಾರಿಗಳನ್ನು ‘ಪದಿ ಪೂಜಾರಿ’ ಎಂದು ಕರೆಯುತ್ತಾರೆ. ಮ್ಯಾಸ ಬೇಡರು ಇವರನ್ನು ದೇವರ ಸ್ವರೂಪವೆಂದು ಕಾಲಿಗೆ ಬಿದ್ದು ನಮಸ್ಕರಿಸುತ್ತಾರೆ. ಇವರನ್ನು ವಿಶೇಷ ಮರ್ಯಾದೆಯಿಂದ ಕಾಣುತ್ತಾರೆ ಮತ್ತು ಉನ್ನತ ಸ್ಥಾನದಲ್ಲಿ ಕುಳ್ಳಿರಿಸುತ್ತಾರೆ. ಇಂತಹ, ಮ್ಯಾಸ ಬೇಡರ ಸಾಂಸ್ಕøತಿಕ ಉಡುಪು ಧರಿಸಿದ್ದ ಕಿಲಾರಿಗಳಿಗೆ ಆಮಿಷತೋರಿಸಿ, ಕಳ್ಳತನದಿಂದ ಕರೆಯಿಸಿ, ಅವರ ಜೊತೆಯಲ್ಲಿ ಅವರ ಮಧ್ಯೆ ಕುಳಿತು ಈ ಸ್ವಾಮಿಗಳು ಫೋಟೋ ತೆಗಸಿಕೊಳ್ಳುತ್ತಿದ್ದಾರೆ. ಇದು ಮ್ಯಾಸ ಬೇಡರ ಬುಡಕಟ್ಟು ಲಕ್ಷಣಗಳನ್ನು ಕದಿಯುವ ಪ್ರಯತ್ನವಾಗಿದೆ. ಇದು ನಮ್ಮ ‘ನಾಯಕ’ ಬುಡಕಟ್ಟಿಗೆ ಅಷ್ಟೇ ಅಲ್ಲದೆ, ಇಡೀ ಭಾರತ ದೇಶದ ಆದಿವಾಸಿಗಳಿಗೆ ಮಾಡುತ್ತಿರುವ ಅನ್ಯಾಯವಲ್ಲವೇ?

‘ನಾಯಕ’ ಬುಡಕಟ್ಟಿಗೆ ಸೇರಿದವರಲ್ಲದವರೂ ಸಹ ತಮ್ಮ ನಿಜ ಜಾತಿಗಳನ್ನು ಬರೆಸದೆ, ಜನಗಣತಿ ಮಾಡುವವರಿಗೆ ಸುಳ್ಳು ಮಾಹಿತಿ ನೀಡಿ ‘ನಾಯಕ, ವಾಲ್ಮೀಕಿ’ ಎಂದು ಮಾಹಿತಿ ಬರೆಯಿಸುತ್ತಿರುವುದರಿಂದ ನಿಜವಾದ, ಪರಿಶಿಷ್ಟ ಪಂಗಡಕ್ಕೆ ಸೇರಿದ ಆದಿವಾಸಿಗಳ ಜನಸಂಖ್ಯೆಯೇ ಲಭ್ಯವಿಲ್ಲ. ಕರ್ನಾಟಕದಲ್ಲಿ ಎಸ್. ಟಿ. ಮೀಸಲಾತಿಯನ್ನು ಈಗಿನ 3%ನಿಂದ 7.5%ಗೆ ಹೆಚ್ಚಿಸು ಎಂದು ಕೇಳುವುದು ಎಷ್ಟರ ಮಟ್ಟಿಗೆ ಸರಿ? ಈ ಸ್ವಾಮಿ ‘ಎಮ್ಮೆಯನ್ನು ನೀರಲ್ಲಿ ಮಲಗಿಸಿ, ಆ ಎಮ್ಮೆ ವ್ಯಾಪಾರ ಹೇಳುತ್ತಿದ್ದೀದ್ದಾರೆ’. ಈ ಸ್ವಾಮಿ ಈಗ ಮಾಡಿರುವ ಪಾದ ಯಾತ್ರೆಯು ಸರ್ಕಾರಕ್ಕೆ ತಮ್ಮ ಜನಸಂಖ್ಯಾ ಪ್ರಾಭಲ್ಯ, ರಾಜಕೀಯ ಬಲ ತೋರಿಸುವುದು, ಮತ್ತು ರಾಜ್ಯ ಸಭೆಯಲ್ಲಿ ‘ತಳವಾರ ಮತ್ತು ಪರಿವಾರ’’ಜಾತಿಯ ಹೆಸರುಗಳನ್ನು, ಇವು ‘ನಾಯಕ’ ಬುಡಕಟ್ಟಿನ ಸಮಾನಾರ್ಥ ಪದಗಳೆಂದು ಸುಳ್ಳು ವರದಿಗಳ ಮೇಲೆ ತಯಾರಿಸಿರುವ ಮತ್ತು ಈಗ ಸಂಸತ್ತಿನ ರಾಜ್ಯಸಭೆಯಲ್ಲಿರುವ ಬಿಲ್ಲನ್ನು ಪಾಸುಮಾಡಿಸುವುದು ಆಗಿದೆ.

ಈ ಬಿಲ್ಲು ಏನಾದರೂ ಪಾಸಾದರೆ, ಅದು ಮ್ಯಾಸ ನಾಯಕರಿಗೆ ಮತ್ತು ಇತರೆ ಬುಡಕಟ್ಟು ಜನಾಂಗಕ್ಕೆ ಮರಣ ಶಾಸನವಾಗಲಿದೆ. ಏಕೆಂದರೆ ಕಾನೂನು ಬಾಹಿರವಾಗಿ ಮ್ಯಾಸ ನಾಯಕ ಎಂಬ ಪದವನ್ನು ರಾಜ್ಯದ ಜಾತಿ ಪಟ್ಟಿಯಲ್ಲಿ ಕೆಟಗರಿ-1ರಲ್ಲಿ ಮತ್ತು ಕೇಂದ್ರ ಓಬಿಸಿ ಪಟ್ಟಿಯಲ್ಲಿ ಸೇರಿಸಿದ್ದಾರೆ. ಆದ್ದರಿಂದ ಆ ಬಿಲ್ಲು ಪಾಸಾದರೆ, ತಳವಾರ ಮತ್ತು ಪರಿವಾರದವರೇ ನಿಜವಾದ ಪರಿಶಿಷ್ಟ ಪಂಗಡದ ‘ನಾಯಕ’ ಎಂದು ಹೇಳಿ, ಮ್ಯಾಸ ಬೇಡರಿಗೆ ಎಸ್ ಟಿ ಮೀಸಲಾತಿ ಬಾಗಿಲು ಬಂದ್ ಮಾಡಿಸುತ್ತಾರೆ. ಆದ್ದರಿಂದ, 7.5% ಎಸ್ ಟಿ ಮೀಸಲಾತಿ ಎಂಬ ಮಂಕುಬೂದಿ ಎರಚಿ, ಮ್ಯಾಸ ಬೇಡರ ಅಸ್ಥಿತ್ವವನ್ನು ನಾಶಮಾಡುವುದು, ಮತ್ತು ಅವರ ಬುಡಕಟ್ಟು ಲಕ್ಷಣಗಳನ್ನು ಅಪಹರಿಸುವುದು, ಸಂಸ್ಕøತಿ ಕದಿಯುವುದು ಇದರ ಒಳಗುಟ್ಟು.

ಈ ತಳವಾರ ಪರಿವಾರದವರ ಗುರುವಾದ ಶ್ರೀ ಪ್ರಸನ್ನಾನಂದ ಸ್ವಾಮಿಗೆ ಬೆಂಬಲವಾಗಿ, ಆಧಿಕಾರದ ಲಾಲಸೆಯಿಂದ ರಾಜಕೀಯದಲ್ಲಿ ಬೇಳೆ ಬೇಯಿಸಿ ಕೊಳ್ಳಲು, ಸ್ವಜನರ ಭವಿಷ್ಯವನ್ನು ಒತ್ತೆಹಿಡಲು ಹೊರಟಿರುವ ಕೆಲವು ಮ್ಯಾಸ ಬೇಡ ರಾಜಕಾರಣಿಗಳು ಇದ್ದಾರೆ. ತಮ್ಮ ಮೂಲ ಸಂಸ್ಕøತಿಯನ್ನು ಬಿಡುವುದೇ ನಾಗರೀಕತೆ ಎಂದು ತಿಳಿದು, ತಳವಾರ ಮತ್ತು ಪರಿವಾರದವರೊಡನೆ ವೈವಾಹಿಕ ಸಂಬಂಧ ಬೆಳೆಸಿರುವ ಅಲ್ಪ ವಿದ್ಯೆ ಕಲಿತ ಅವಿವೇಕಿ ಕೆಲವು ಮ್ಯಾಸ ನಾಯಕರುಗಳು ಏನೂ ಗೊತ್ತಿಲ್ಲದ ಮಳ್ಳರಂತೆ ಸ್ವಾಮಿ ಪಾದ ನೆಕ್ಕುತ್ತಿದ್ದಾರೆ. ಸ್ವಾಭಿಮಾನದಿಂದ ಬದುಕದೆ, ತಳವಾರ ಮತ್ತು ಪರಿವಾರದವರು ಕೊಡುವ ಎಂಜಲು ಕಾಸಿಗಾಗಿ ಬಾಯಿತೆರೆದು ಕುಳಿತಿರುವ ನಾಚಿಕೆ ಇಲ್ಲದ ಕೆಲವು ಮ್ಯಾಸ ನಾಯಕರು. ತಳವಾರ, ಪರಿವಾರ, ಎಲ್ಲಾ ನಾಯಕರೂ ಒಂದೇ ಎಂದು ಕಳಪೆ ಇತಿಹಾಸ ಮತ್ತು ಸಾಹಿತ್ಯ ಬರೆದಿರುವ, ಮತ್ತು ತಾವು ಮಾಡಿರುವ ತಪ್ಪೇ ಸರಿಯೆಂದು ವಿತಂಡವಾದಕ್ಕೆ ನಿಂತಿರುವ, ಅಪ್ರಭುದ್ಧ ಕೆಲವು ಮ್ಯಾಸ ಬೇಡ ಜನಾಂಗದ ಸಾಹಿತಿಗಳು ಬರಹಗಾರರು, ಮುಖ ತೋರಿಸಲಾಗದೆ ತಲೆಬಗ್ಗಿಸಿ ಸ್ವಾಮಿ ಹಿಂದೆ ಹೆಜ್ಜೆ ಹಾಕುತ್ತಿದ್ದಾರೆ.

Empty vessel make loud noise’ ಎಂಬುದನ್ನು ಇಲ್ಲಿ ನೆನಪುಮಾಡಿಕೊಳ್ಳ ಬಹುದು. ಈ ಸ್ವಾಮಿಯ ಅನುಯಾಯಿಗಳು ಎಸ್ ಟಿ ಮೀಸಲಾತಿಗೆ ಹಕ್ಕುದಾರರೇ ಅಲ್ಲ. ತಳವಾರ ಮತ್ತು ಪರಿವಾರದವರನ್ನು ಸೇರಿಸಿಕೊಂಡು ಸುಳ್ಳನ್ನೇ ನಿಜವೆಂದು ಒದರಿ, ಸತ್ಯವೆಂದು ಸಾಬೀತು ಪಡಿಸಲು ಹೊರಟಿರುವ ದುಸ್ಸಾಹಸಿ. ಬೆದರಿಸಿ ಪಡೆಯುವುದು ಹಕ್ಕನಲ್ಲ, ಪರರ ಸೊತ್ತನ್ನು. ಸರ್ಕಾರವನ್ನು ಇಕ್ಕಟ್ಟಿಗೆ ಸಿಕ್ಕಿಸುವುದು, ಬೀಳಿಸುತ್ತೇವೆಂದು ಹೆದರಿಸುವುದು ಇವರಿಗೆ ಪ್ರಜಾಭುತ್ವದ ಬಗ್ಗೆ ಇರುವ ಅಗೌರವನ್ನು ತೋರಿಸುತ್ತಿದೆ.

ದೊಡ್ಡಮನಿ ಪ್ರಸಾದ್
ವಕೀಲರು

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

Mysuru Dasara Elephants: ದಸರಾ ಗಜಪಡೆಯ ತೂಕ ಪರೀಕ್ಷೆ: ಶ್ರೀಕಂಠ ಭಾರೀ ಗಜ, ಏಕಲವ್ಯಕ್ಕೆ 2ನೇ ಸ್ಥಾನ; ಅಂಬಾರಿ ಆನೆ ಆಯ್ಕೆ ಇನ್ನೂ ಬಾಕಿ

Published

on

mysuru-dasara-elephants-srikanta-5790-kg-ekalavya-elephant-weight
Mysuru Dasara Elephants: 5,790 ಕೆಜಿ ತೂಕದ ಶ್ರೀಕಂಠ ನಂಬರ್ 1; ಗಜಪಡೆಯ ಆನೆಗಳ ತೂಕ ಎಷ್ಟು?

ಸುದ್ದಿದಿನ,ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸಿದ್ಧತೆಗಳು ಆರಂಭವಾಗಿದ್ದು, ಮೊದಲ ಹಂತದಲ್ಲಿ ಆಗಮಿಸಿರುವ 9 ಆನೆಗಳಿಗೆ ಸಾಂಪ್ರದಾಯಿಕ ತೂಕ ಪರೀಕ್ಷೆ ನಡೆಸಲಾಗಿದೆ. ಈ ಬಾರಿ ಮತ್ತಿಗೋಡು ಶಿಬಿರದ 57 ವರ್ಷದ ಶ್ರೀಕಂಠ 5,790 ಕೆಜಿ ತೂಕದೊಂದಿಗೆ ಗಜಪಡೆಯಲ್ಲೇ ಅತ್ಯಂತ ಭಾರವಾದ ಆನೆಯಾಗಿ ಮೊದಲ ಸ್ಥಾನ ಪಡೆದುಕೊಂಡಿದ್ದಾನೆ. ಭೀಮನಕಟ್ಟೆ ಶಿಬಿರದ 41 ವರ್ಷದ ಏಕಲವ್ಯ 5,600 ಕೆಜಿ ತೂಗಿ ಎರಡನೇ ಸ್ಥಾನದಲ್ಲಿದ್ದಾನೆ.

ನಗರದ ಧನ್ವಂತರಿ ರಸ್ತೆಯಲ್ಲಿರುವ ಎಲೆಕ್ಟ್ರಾನಿಕ್ ವೇ ಬ್ರಿಡ್ಜ್‌ನಲ್ಲಿ ಭಾನುವಾರ ಬೆಳಗ್ಗೆ ಎಲ್ಲ 9 ಆನೆಗಳ ತೂಕ ಪರೀಕ್ಷೆ ನಡೆಸಲಾಯಿತು. ಕಳೆದ ವರ್ಷ ಭೀಮ ಮತ್ತು ಅಭಿಮನ್ಯು ಕ್ರಮವಾಗಿ ಮೊದಲ ಎರಡು ಸ್ಥಾನದಲ್ಲಿದ್ದರು. ಆದರೆ ಈ ಬಾರಿ ಇವರಿಬ್ಬರನ್ನೂ ದಸರಾಗೆ ಕರೆತಂದಿಲ್ಲ. ಹೀಗಾಗಿ ಶ್ರೀಕಂಠನ ತೂಕವೇ ಈ ವರ್ಷದ ಗಜಪಡೆಯ ಗಮನ ಸೆಳೆದಿದೆ.

ಹೈಲೈಟ್ಸ್: 57 ವರ್ಷದ ಶ್ರೀಕಂಠನೇ ಗಜಪಡೆಯ ತೂಕದ ಬಾದ್‌ಷಾ

  • ಶ್ರೀಕಂಠ 5,790 ಕೆಜಿ ತೂಕದೊಂದಿಗೆ ಮೊದಲ ಸ್ಥಾನ
  • ಏಕಲವ್ಯ 5,600 ಕೆಜಿ ತೂಕದೊಂದಿಗೆ ಎರಡನೇ ಸ್ಥಾನ
  • ಮೊದಲ ಹಂತದಲ್ಲಿ ಒಟ್ಟು 9 ಆನೆಗಳಿಗೆ ತೂಕ ಪರೀಕ್ಷೆ
  • ಆನೆಗಳ ತೂಕದ ಆಧಾರದ ಮೇಲೆ ಆಹಾರ ಮತ್ತು ತಾಲೀಮು ನಿರ್ಧಾರ
  • ಅಂತಿಮ ತಾಲೀಮಿನ ಬಳಿಕವೇ ಚಿನ್ನದ ಅಂಬಾರಿ ಆನೆ ಆಯ್ಕೆ

http://Visit : www.suddidina.com

ಗಂಡಾನೆಗಳ ತೂಕ 5 ಸಾವಿರ ಕೆಜಿಗೂ ಅಧಿಕ

ಈ ಬಾರಿಯ ಮೊದಲ ಹಂತದ ಗಜಪಡೆಯ ವಿಶೇಷತೆಯೆಂದರೆ ಬಹುತೇಕ ಗಂಡಾನೆಗಳು 5 ಸಾವಿರ ಕೆಜಿಗೂ ಹೆಚ್ಚು ತೂಕ ಹೊಂದಿರುವುದು. ಆದರೆ ಆನೆಗಳ ತೂಕ ಹೆಚ್ಚಿಸುವುದೇ ಅರಣ್ಯ ಇಲಾಖೆಯ ಮುಖ್ಯ ಗುರಿಯಲ್ಲ. ಬದಲಿಗೆ ಅವುಗಳ ಆರೋಗ್ಯ, ದೈಹಿಕ ಸಾಮರ್ಥ್ಯ ಮತ್ತು ತಾಲೀಮಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.

ಡಿಸಿಎಫ್ ಡಾ. ಐ.ಬಿ. ಪ್ರಭುಗೌಡ ಅವರ ಪ್ರಕಾರ, ಆನೆಗಳ ತೂಕದ ಆಧಾರದ ಮೇಲೆ ಅವುಗಳಿಗೆ ನೀಡಬೇಕಾದ ಆಹಾರದ ಪ್ರಮಾಣ ಮತ್ತು ಪೌಷ್ಟಿಕ ಆಹಾರವನ್ನು ನಿರ್ಧರಿಸಲಾಗುತ್ತದೆ. ಪ್ರತಿಯೊಂದು ಆನೆಯ ದೈಹಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ತಾಲೀಮು ರೂಪಿಸಲಾಗುತ್ತದೆ.

9 ಆನೆಗಳ ತೂಕದ ಆಧಾರದಲ್ಲೇ ಆಹಾರ

ದಸರಾ ಗಜಪಡೆಯಲ್ಲಿರುವ ಆನೆಗಳ ಆರೋಗ್ಯ ಕಾಪಾಡುವುದು ಪ್ರಮುಖ ಆದ್ಯತೆಯಾಗಿದೆ. ತೂಕ ಪರೀಕ್ಷೆಯ ಮೂಲಕ ಆನೆಗಳ ದೈಹಿಕ ಸ್ಥಿತಿಯ ಬಗ್ಗೆ ಅಗತ್ಯ ಮಾಹಿತಿ ಪಡೆಯಲಾಗುತ್ತದೆ. ಅದರ ಆಧಾರದ ಮೇಲೆ ಪೌಷ್ಟಿಕ ಆಹಾರ, ದಿನನಿತ್ಯದ ಚಟುವಟಿಕೆ ಹಾಗೂ ತಾಲೀಮಿನಲ್ಲಿ ಅಗತ್ಯ ಬದಲಾವಣೆ ಮಾಡಲಾಗುತ್ತದೆ.

ಅರಣ್ಯ ಇಲಾಖೆ ಅಧಿಕಾರಿಗಳ ಪ್ರಕಾರ, ಈಗಿರುವ ಎಲ್ಲ ಆನೆಗಳೂ ಅಂಬಾರಿ ಹೊರುವ ಸಾಮರ್ಥ್ಯ ಹೊಂದಿವೆ. ಅನುಭವಿ ಆನೆಗಳಾಗಿರುವುದರಿಂದ ಅಂತಿಮ ತಾಲೀಮು ಅತ್ಯಂತ ಮಹತ್ವ ಪಡೆಯಲಿದೆ.

ಅಂಬಾರಿ ಆನೆ ಯಾರು? ಕುತೂಹಲ

ಈ ಬಾರಿಯ ದಸರಾ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊರುವ ಆನೆ ಯಾರು ಎಂಬ ಕುತೂಹಲ ಈಗಾಗಲೇ ಹೆಚ್ಚಾಗಿದೆ. ಕೇವಲ ತೂಕದ ಆಧಾರದ ಮೇಲೆ ಅಂಬಾರಿ ಆನೆಯನ್ನು ಆಯ್ಕೆ ಮಾಡುವುದಿಲ್ಲ. ಆನೆಯ ಆರೋಗ್ಯ, ಸಾಮರ್ಥ್ಯ, ಅನುಭವ, ತಾಲೀಮು ಮತ್ತು ಅಂತಿಮ ಹಂತದ ಪ್ರದರ್ಶನವನ್ನು ಪರಿಗಣಿಸಿ ಆಯ್ಕೆ ಮಾಡಲಾಗುತ್ತದೆ.

ಮೊದಲ ಹಂತದ ತಾಲೀಮು ಮುಗಿದ ಬಳಿಕ ನಡೆಯುವ ಅಂತಿಮ ತಾಲೀಮಿನ ನಂತರವೇ ಚಿನ್ನದ ಅಂಬಾರಿ ಹೊರುವ ಆನೆಯನ್ನು ಅಂತಿಮಗೊಳಿಸಲಾಗುತ್ತದೆ. ಹೀಗಾಗಿ ಶ್ರೀಕಂಠ ತೂಕದಲ್ಲಿ ನಂಬರ್‌ 1 ಆಗಿದ್ದರೂ, ಅಂಬಾರಿ ವಿಚಾರದಲ್ಲಿ ಅಂತಿಮ ನಿರ್ಧಾರ ಇನ್ನೂ ಬಾಕಿಯಿದೆ.

ಆನೆಗಳ ಬಳಿ ಸಾರ್ವಜನಿಕರಿಗೆ ನಿರ್ಬಂಧ

ದಸರಾ ಆನೆಗಳ ವೀಕ್ಷಣೆಗೆ ಯಾವುದೇ ಟಿಕೆಟ್‌ ವ್ಯವಸ್ಥೆ ಮಾಡಿಲ್ಲ ಎಂದು ಡಿಸಿಎಫ್ ಸ್ಪಷ್ಟಪಡಿಸಿದ್ದಾರೆ. ಸಾರ್ವಜನಿಕರು ಆನೆಗಳ ಬಳಿ ತೆರಳದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ದಸರಾ ಆನೆಗಳ ಕುರಿತು ಸುಳ್ಳು ಮಾಹಿತಿ ಹರಡಿದರೆ ಕ್ರಮ ಕೈಗೊಳ್ಳುವುದಾಗಿಯೂ ಅರಣ್ಯ ಇಲಾಖೆ ಎಚ್ಚರಿಕೆ ನೀಡಿದೆ.

“ಆನೆಗಳಿಗೆ ಹಂತ ಹಂತವಾಗಿ ತಾಲೀಮು ಮಾಡಲಾಗುತ್ತದೆ. ಸದ್ಯಕ್ಕೆ ಎಲ್ಲ ಆನೆಗಳ ಆರೋಗ್ಯ ಚೆನ್ನಾಗಿದೆ. ಅಂತಿಮ ಹಂತದ ತಾಲೀಮಿನ ಬಳಿಕ ಅಂಬಾರಿ ಹೊರುವ ಆನೆ ಆಯ್ಕೆ ಮಾಡಲಾಗುವುದು.”

                                                   – ಡಾ.ಐ.ಬಿ.ಪ್ರಭುಗೌಡ, ಡಿಸಿಎಫ್‌ 

ದಸರಾ ಗಜಪಡೆಯ ತೂಕದ ವಿವರ

  • ಶ್ರೀಕಂಠ: 5,790 ಕೆಜಿ
  • ಏಕಲವ್ಯ: 5,600 ಕೆಜಿ
  • ಧನಂಜಯ: 5,530 ಕೆಜಿ
  • ಮಹೇಂದ್ರ: 5,490 ಕೆಜಿ
  • ಪ್ರಶಾಂತ: 5,205 ಕೆಜಿ
  • ಗೋಪಿ: 5,170 ಕೆಜಿ
  • ಶ್ರೀರಾಮ: 4,820 ಕೆಜಿ
  • ಲಕ್ಷ್ಮೀ: 3,990 ಕೆಜಿ
  • ಕಾವೇರಿ: 3,075 ಕೆಜಿ
Continue Reading

ದಿನದ ಸುದ್ದಿ

ಬೆಂಗಳೂರು ಕಟ್ಟಡ ತೆರವು ಕಾರ್ಯಾಚರಣೆ: 18 ಅಂತಸ್ತಿನ ಅಪಾರ್ಟ್‌ಮೆಂಟ್‌ಗೆ ‘ಡೆಮಾಲಿಷನ್’ ಶುರು!

Published

on

bengaluru-koodlugate-snn-raj-eternia-18-floor-building-demolition
ಕೂಡ್ಲುಗೇಟ್‌ನ ಎಸ್‌ಎನ್‌ಎನ್‌ ರಾಜ್‌ ಎಟರ್ನಿಯಾ ಸಂಕೀರ್ಣದ 49 ಫ್ಲ್ಯಾಟ್‌ಗಳ ತೆರವು; ₹200 ಕೋಟಿ ವೆಚ್ಚದ ಕಟ್ಟಡಕ್ಕೆ ಹೊಸ ರೂಪ

ಕೂಡ್ಲುಗೇಟ್‌ನ ಎಸ್‌ಎನ್‌ಎನ್‌ ರಾಜ್‌ ಎಟರ್ನಿಯಾ ಸಂಕೀರ್ಣದ 49 ಫ್ಲ್ಯಾಟ್‌ಗಳ ತೆರವು; ₹200 ಕೋಟಿ ವೆಚ್ಚದ ಕಟ್ಟಡಕ್ಕೆ ಹೊಸ ರೂಪ


ಸುದ್ದಿದಿನ,ಬೆಂಗಳೂರು:
ನಗರದ ಪ್ರಮುಖ ವಸತಿ ಯೋಜನೆಗಳಲ್ಲಿ ಒಂದಾಗಿರುವ ಕೂಡ್ಲುಗೇಟ್‌ನ ಎಸ್‌ಎನ್‌ಎನ್‌ ಎಸ್ಟೇಟ್‌ ಒಡೆತನದ 18 ಅಂತಸ್ತಿನ ಕಟ್ಟಡದ ತೆರವು ಕಾರ್ಯಾಚರಣೆ ಶುಕ್ರವಾರದಿಂದ ಆರಂಭವಾಗಿದೆ. ಬೆಂಗಳೂರಿನ ಗಮನ ಸೆಳೆದಿದ್ದ ಈ ಪ್ರಕರಣದಲ್ಲಿ ಎಸ್‌ಎನ್‌ಎನ್‌ ರಾಜ್‌ ಕಾರ್ಪ್‌ ಸಂಸ್ಥೆಯು ಎಚ್‌ಎಸ್‌ಆರ್‌ ಲೇಔಟ್‌ನಲ್ಲಿರುವ ತನ್ನ ಎಸ್‌ಎನ್‌ಎನ್‌ ರಾಜ್‌ ಎಟರ್ನಿಯಾ ಪ್ರೀಮಿಯಂ ವಸತಿ ಸಂಕೀರ್ಣದ 49 ಅಪಾರ್ಟ್‌ಮೆಂಟ್‌ ಘಟಕಗಳನ್ನು ನಿಯಂತ್ರಿತ ರೀತಿಯಲ್ಲಿ ಕೆಡವುವ ಪ್ರಕ್ರಿಯೆಗೆ ಚಾಲನೆ ನೀಡಿದೆ.

ಒಟ್ಟು 972 ಮನೆಗಳನ್ನು ಹೊಂದಿರುವ ಈ ವಸತಿ ಯೋಜನೆಯಲ್ಲಿನ 49 ಘಟಕಗಳ ತೆರವು ಈಗ ಭಾರಿ ಕುತೂಹಲ ಮೂಡಿಸಿದೆ. ಕಟ್ಟಡದ ಸುರಕ್ಷತೆ ಕುರಿತು ತಾಂತ್ರಿಕ ಪರಿಶೀಲನೆ ನಡೆಸಿದ ಬಳಿಕ ಈ ಕ್ರಮಕ್ಕೆ ಮುಂದಾಗಲಾಗಿದೆ.

₹200 ಕೋಟಿ ವೆಚ್ಚದ ಕಟ್ಟಡದಲ್ಲಿ ದೋಷ ಪತ್ತೆ

ಸುಮಾರು ₹200 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಕಟ್ಟಡ ಇದಾಗಿದೆ. ತಾಂತ್ರಿಕ ಪರಿಶೀಲನೆ ವೇಳೆ ಕಟ್ಟಡದ ರಚನೆಯಲ್ಲಿ ಹಾನಿಯಾಗಿರುವುದು ಹಾಗೂ ಕಟ್ಟಡ ವಾಲಿರುವುದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ನಿವಾಸಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕಟ್ಟಡದ ನಿರ್ದಿಷ್ಟ ಭಾಗಗಳನ್ನು ತೆರವುಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ.

ತೆರವು ಕಾರ್ಯಾಚರಣೆಯನ್ನು ಯಾವುದೇ ರೀತಿಯ ಆತಂಕ ಅಥವಾ ಅಪಾಯ ಉಂಟಾಗದಂತೆ ಅತ್ಯಂತ ನಿಯಂತ್ರಿತ ರೀತಿಯಲ್ಲಿ ನಡೆಸಲಾಗುತ್ತಿದೆ. ಕಟ್ಟಡ ತೆರವು ಸಂದರ್ಭದಲ್ಲಿ ಸುತ್ತಮುತ್ತಲಿನ ಪ್ರದೇಶಕ್ಕೂ ಸಮಸ್ಯೆಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಮುಂಬೈ ಮೂಲದ ಖಾಸಗಿ ಕಂಪನಿಗೆ ಗುತ್ತಿಗೆ

ತೆರವು ಕಾರ್ಯವನ್ನು ಮುಂಬೈ ಮೂಲದ ಖಾಸಗಿ ಕಂಪನಿಗೆ ಗುತ್ತಿಗೆ ನೀಡಲಾಗಿದೆ ಎಂದು ಎಸ್‌ಎನ್‌ಎನ್‌ ಅಪಾರ್ಟ್‌ಮೆಂಟ್‌ ನಿರ್ದೇಶಕ ಅನೂಜ್‌ ತಿಳಿಸಿದ್ದಾರೆ. ಫ್ಲ್ಯಾಟ್‌ಗಳನ್ನು ಹಂತ ಹಂತವಾಗಿ ತೆರವುಗೊಳಿಸುವ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಈ ಕುರಿತು ಮಾತನಾಡಿರುವ ಅವರು, ಬಿಬಿಎಂಪಿಗೂ ಸಂಸ್ಥೆಯ ವತಿಯಿಂದ ಪತ್ರ ಬರೆಯಲಾಗಿದೆ ಎಂದು ತಿಳಿಸಿದ್ದಾರೆ. ಯಾವುದೇ ರೀತಿಯ ಸಮಸ್ಯೆ ಉಂಟಾಗದಂತೆ ತೆರವು ಕಾರ್ಯ ನಡೆಸಲಾಗುವುದು ಎಂಬ ಭರವಸೆಯನ್ನೂ ನೀಡಿದ್ದಾರೆ.

ಅದೇ ಜಾಗದಲ್ಲಿ ಹೊಸ ಅಪಾರ್ಟ್‌ಮೆಂಟ್‌ ನಿರ್ಮಾಣ

ಪ್ರಸ್ತುತ ಕಟ್ಟಡದ ತೆರವು ಕಾರ್ಯ ಪೂರ್ಣಗೊಂಡ ಬಳಿಕ ಅದೇ ಜಾಗದಲ್ಲಿ ಹೊಸ ಅಪಾರ್ಟ್‌ಮೆಂಟ್‌ ನಿರ್ಮಿಸುವ ಯೋಜನೆ ಇದೆ ಎಂದು ಸಂಸ್ಥೆ ತಿಳಿಸಿದೆ. ಈಗಾಗಲೇ ಕೆಲವು ಫ್ಲ್ಯಾಟ್‌ಗಳು ಮುಂಗಡವಾಗಿ ಬುಕ್‌ ಆಗಿದ್ದ ಹಿನ್ನೆಲೆಯಲ್ಲಿ ಖರೀದಿದಾರರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಪರಿಹರಿಸುವುದಾಗಿ ಸಂಸ್ಥೆ ಹೇಳಿದೆ.

ಯಾರಿಗೂ ತೊಂದರೆಯಾಗದಂತೆ ಸಂಪೂರ್ಣ ಪ್ರಕ್ರಿಯೆ ನಡೆಸುವುದಾಗಿ ಸ್ಪಷ್ಟಪಡಿಸಿರುವ ಸಂಸ್ಥೆ, ನಿವಾಸಿಗಳು ಹಾಗೂ ಖರೀದಿದಾರರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಕ್ರಮ ಕೈಗೊಳ್ಳಲಿದೆ.

Continue Reading

ದಿನದ ಸುದ್ದಿ

ಪಾಕ್‌ ಗಡಿಯಿಂದ ಡ್ರೋನ್ ಎಂಟ್ರಿ ಶಂಕೆ: ಪೂಂಚ್‌ನಲ್ಲಿ ಹೈ ಅಲರ್ಟ್, 3 ಜಿಲ್ಲೆಗಳಲ್ಲಿ ಭದ್ರತಾ ಪಡೆಗಳ ಬೃಹತ್ ಬೇಟೆ

Published

on

ಪಾಕ್‌ ಗಡಿಯಿಂದ ಡ್ರೋನ್ ಎಂಟ್ರಿ ಶಂಕೆ: ಪೂಂಚ್‌ನಲ್ಲಿ ಹೈ ಅಲರ್ಟ್, 3 ಜಿಲ್ಲೆಗಳಲ್ಲಿ ಭದ್ರತಾ ಪಡೆಗಳ ಬೃಹತ್ ಬೇಟೆ

ಸುದ್ದಿದಿನ,ಜಮ್ಮುಕಾಶ್ಮೀರ: ಜಮ್ಮು-ಕಾಶ್ಮೀರದ ಗಡಿ ಪ್ರದೇಶದಲ್ಲಿ ಮತ್ತೆ ಡ್ರೋನ್ ಹಾರಾಟದ ಆತಂಕ ಎದುರಾಗಿದೆ. ಪೂಂಚ್ ಜಿಲ್ಲೆಯ ಮೆಂಧರ್ ಸೆಕ್ಟರ್‌ನಲ್ಲಿ ಪಾಕಿಸ್ತಾನ ಮೂಲದ್ದೆಂದು ಶಂಕಿಸಲಾದ ಡ್ರೋನ್‌ವೊಂದು ಕಾಣಿಸಿಕೊಂಡಿರುವುದು ಭದ್ರತಾ ಪಡೆಗಳನ್ನು ಅಲರ್ಟ್ ಮಾಡಿದೆ. ಗಡಿಯಾಚೆಯಿಂದ ನಡೆಯಬಹುದಾದ ಯಾವುದೇ ಅನುಮಾನಾಸ್ಪದ ಚಟುವಟಿಕೆಗಳನ್ನು ತಡೆಯಲು ಸೇನೆ ಹಾಗೂ ಭದ್ರತಾ ಪಡೆಗಳು ನಿಗಾ ಮತ್ತಷ್ಟು ಬಿಗಿಗೊಳಿಸಿವೆ.

ಹೈಲೈಟ್ಸ್

  • ಪೂಂಚ್‌ನ ಮೆಂಧರ್ ಸೆಕ್ಟರ್‌ನಲ್ಲಿ ಶಂಕಿತ ಡ್ರೋನ್ ಹಾರಾಟ
  • 🇵🇰 ಡ್ರೋನ್ ಪಾಕಿಸ್ತಾನದ ದಿಕ್ಕಿಗೆ ವಾಪಸ್ ತೆರಳಿದ ಶಂಕೆ
  • ಡ್ರೋನ್‌ನಿಂದ ವಸ್ತುಗಳನ್ನು ಕೆಳಗೆ ಹಾಕಲಾಗಿದೆಯೇ ಎಂದು ಶೋಧ
  • ಉಧಂಪುರ, ಕಥುವಾ, ರಾಜೌರಿಯಲ್ಲಿ ಜಂಟಿ ಸರ್ಚ್ ಆಪರೇಷನ್
  • ಶಸ್ತ್ರಸಜ್ಜಿತ ವ್ಯಕ್ತಿಗಳ ಮಾಹಿತಿ ಹಿನ್ನೆಲೆ ರಾಜೌರಿಯಲ್ಲೂ ಹೈ ಅಲರ್ಟ್

http://Visit : www.suddidina.com

ಬೆಹ್ರೂಟಿ ಗ್ರಾಮದ ಬಳಿ ಕಾಣಿಸಿಕೊಂಡ ಶಂಕಿತ ಡ್ರೋನ್

ಶುಕ್ರವಾರ ಸಂಜೆ ಬಾಲಕೋಟೆ ಪ್ರದೇಶದ ಬೆಹ್ರೂಟಿ ಗ್ರಾಮದ ಸಮೀಪ ಆಕಾಶದಲ್ಲಿ ಶಂಕಿತ ಡ್ರೋನ್ ಹಾರಾಟ ನಡೆಸಿರುವುದು ಸ್ಥಳೀಯರ ಹಾಗೂ ಭದ್ರತಾ ಪಡೆಗಳ ಗಮನಕ್ಕೆ ಬಂದಿದೆ. ಬಳಿಕ ಅದು ಮಂಗಲ್ನಾರ್-ದಬ್ರೋಟ್ ಪ್ರದೇಶದತ್ತ, ಅಂದರೆ ಗಡಿ ಪ್ರದೇಶದ ಸಮೀಪಕ್ಕೆ ತೆರಳಿ ಪಾಕಿಸ್ತಾನದ ದಿಕ್ಕಿನಲ್ಲಿ ವಾಪಸ್ ಹೋಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಡ್ರೋನ್ ಕಾಣಿಸಿಕೊಂಡ ಮಾಹಿತಿ ಸಿಗುತ್ತಿದ್ದಂತೆ LoC ವ್ಯಾಪ್ತಿಯಲ್ಲಿ ಭದ್ರತಾ ಕ್ರಮಗಳನ್ನು ತೀವ್ರಗೊಳಿಸಲಾಗಿದೆ. ಬೆಳಗ್ಗೆಯಿಂದಲೇ ಸರ್ಚ್ ಆಪರೇಷನ್ ಆರಂಭಿಸಲಾಗಿದ್ದು, ಡ್ರೋನ್ ಮೂಲಕ ಯಾವುದೇ ವಸ್ತು, ಶಸ್ತ್ರಾಸ್ತ್ರ ಅಥವಾ ಅನುಮಾನಾಸ್ಪದ ಸಾಮಗ್ರಿಗಳನ್ನು ಕೆಳಗೆ ಇಳಿಸಲಾಗಿದೆಯೇ ಎಂಬುದರ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ.

3 ಜಿಲ್ಲೆಗಳಲ್ಲಿ ಭದ್ರತಾ ಪಡೆಗಳ ಬೃಹತ್ ಶೋಧ

ಡ್ರೋನ್ ಆತಂಕದ ನಡುವೆಯೇ ಜಮ್ಮು-ಕಾಶ್ಮೀರದ ಉಧಂಪುರ, ಕಥುವಾ ಮತ್ತು ರಾಜೌರಿ ಜಿಲ್ಲೆಗಳ ವಿಶಾಲ ಅರಣ್ಯ ಪ್ರದೇಶಗಳಲ್ಲೂ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ತೀವ್ರಗೊಳಿಸಿವೆ.

ಉಧಂಪುರ-ಕಥುವಾ ಅರಣ್ಯ ಪ್ರದೇಶದ ಖುಬನ್, ನಾಗೈನ್, ಖ್ಟ್ರೈಲ್, ಗೋಡು ಫಲಾಲ್, ಪದೇತಾರ್, ಚೋರ್ ಮೊಟ್ಟು, ಕಿಯಾ, ಖೇಬಾ, ಭೇದ್, ಮಾರ್ತಾ ಹಾಗೂ ಜೋಫರ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಪೊಲೀಸರು, ಸೇನೆ ಮತ್ತು ಅರೆಸೇನಾ ಪಡೆಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿವೆ.

ರಾಜೌರಿಯಲ್ಲಿ ಶಸ್ತ್ರಸಜ್ಜಿತರ ಶಂಕೆ

ರಾಜೌರಿ ಜಿಲ್ಲೆಯ ಗೈಬಾಸ್, ಮಿಥಿಯಾನಿ, ಮೊಗ್ಲಾ ಮತ್ತು ನಾರ್ಲಾ ಪ್ರದೇಶಗಳಲ್ಲೂ ಪ್ರತ್ಯೇಕ ಸರ್ಚ್ ಆಪರೇಷನ್ ಕೈಗೊಳ್ಳಲಾಗಿದೆ. ಇಬ್ಬರು ಶಸ್ತ್ರಸಜ್ಜಿತ ವ್ಯಕ್ತಿಗಳು ಸಂಚರಿಸುತ್ತಿರುವುದನ್ನು ಗ್ರಾಮಸ್ಥರು ಗಮನಿಸಿ ಭದ್ರತಾ ಪಡೆಗಳಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ಮಾಹಿತಿ ಆಧರಿಸಿ ಭದ್ರತಾ ಪಡೆಗಳು ವ್ಯಾಪಕ ಶೋಧ ನಡೆಸಿದರೂ, ಇದುವರೆಗೆ ಯಾವುದೇ ಶಂಕಿತ ವ್ಯಕ್ತಿಗಳು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗಡಿಯಲ್ಲಿ ಹೆಚ್ಚಿದ ಕಣ್ಗಾವಲು

ಡ್ರೋನ್ ಹಾರಾಟ ಹಾಗೂ ಅರಣ್ಯ ಪ್ರದೇಶಗಳಲ್ಲಿ ಶಂಕಿತ ವ್ಯಕ್ತಿಗಳ ಚಲನವಲನದ ಮಾಹಿತಿ ಹಿನ್ನೆಲೆಯಲ್ಲಿ ಗಡಿ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬಂದರೂ ತಕ್ಷಣ ಮಾಹಿತಿ ನೀಡುವಂತೆ ಸ್ಥಳೀಯರಿಗೂ ಸೂಚನೆ ನೀಡಲಾಗಿದೆ.

ಪ್ರಸ್ತುತ ಕಾರ್ಯಾಚರಣೆಯ ಪ್ರಮುಖ ಉದ್ದೇಶ ಗಡಿಯಾಚೆಯಿಂದ ಸಂಭವಿಸಬಹುದಾದ ಒಳನುಸುಳುವಿಕೆ ಅಥವಾ ಅನುಮಾನಾಸ್ಪದ ಸಾಗಾಟವನ್ನು ತಡೆಯುವುದು ಮತ್ತು ಪ್ರದೇಶದಲ್ಲಿ ಭದ್ರತೆಯನ್ನು ಖಚಿತಪಡಿಸಿಕೊಳ್ಳುವುದಾಗಿದೆ.

Continue Reading
Advertisement

Title

ದಿನದ ಸುದ್ದಿ6 hours ago

ಗೃಹ ಜ್ಯೋತಿ ಯೋಜನೆಗೆ 3 ವರ್ಷಗಳ ಸಂಭ್ರಮ – 1.65 ಕೋಟಿ ಕುಟುಂಬಗಳ ಬದುಕಿಗೆ ಬೆಳಕು!

ಸುದ್ದಿದಿನ, ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹ ಜ್ಯೋತಿ ಯೋಜನೆ ತನ್ನ 3 ವರ್ಷಗಳ ಸಾರ್ಥಕ ಪಯಣವನ್ನು ಪೂರ್ಣಗೊಳಿಸಿದೆ. `ಕುಟುಂಬಗಳ ಆರ್ಥಿಕ...

ದಿನದ ಸುದ್ದಿ9 hours ago

ರೈಲ್ವೆ ಪ್ರಯಾಣಿಕರಿಗೆ ಭರ್ಜರಿ ಗುಡ್ ನ್ಯೂಸ್ – 20 ಸಾವಿರ ಕೋಟಿ ರೂ. ವೆಚ್ಚದ 8 ಬಹು ಟ್ರ್ಯಾಕಿಂಗ್ ಯೋಜನೆಗಳಿಗೆ ಕೇಂದ್ರದ ಅಸ್ತು!

ಸುದ್ದಿದಿನ, ಹೊಸದಿಲ್ಲಿ: ದೇಶದ ರೈಲ್ವೆ ಮೂಲಸೌಕರ್ಯಕ್ಕೆ ಬೃಹತ್ ಉತ್ತೇಜನ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಕರ್ನಾಟಕ ಸೇರಿದಂತೆ ಒಂಬತ್ತು ರಾಜ್ಯಗಳ 20ಕ್ಕೂ ಹೆಚ್ಚು...

ದಿನದ ಸುದ್ದಿ9 hours ago

ಡಿಕೆಶಿ ಸರ್ಕಾರಕ್ಕೆ 100 ದಿನಗಳ ಸಂಭ್ರಮ – `ದೃಢ ಕರ್ನಾಟಕದ ಸಂಕಲ್ಪ’ ಕಾರ್ಯಕ್ರಮಕ್ಕೆ ವಿಧಾನಸೌಧ ಸಜ್ಜು

ಸುದ್ದಿದಿನ, ಬೆಂಗಳೂರು: ಕರ್ನಾಟಕ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರವು ತನ್ನ ಆಡಳಿತದ 100 ದಿನಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ....

ದಿನದ ಸುದ್ದಿ10 hours ago

ಇಂದಿನ ರಾಶಿ ಭವಿಷ್ಯ: ಯಾವ ರಾಶಿಗೆ ಶುಭ? ಯಾವ ರಾಶಿಗೆ ಎಚ್ಚರಿಕೆ? ಇಲ್ಲಿದೆ 12 ರಾಶಿಗಳ ಸಂಪೂರ್ಣ ಭವಿಷ್ಯ!

ಸುದ್ದಿದಿನ,ನಿತ್ಯಭವಿಷ್ಯ: ಸೆಪ್ಟೆಂಬರ್ 10, 2026 ರ ನಿಮ್ಮ ಜಾತಕವನ್ನು ಅನ್ವೇಷಿಸಿ. ವೃತ್ತಿ, ಹಣ, ಪ್ರೀತಿ ಮತ್ತು ಆರೋಗ್ಯದ ಸಂಪೂರ್ಣ ಭವಿಷ್ಯವಾಣಿಗಳನ್ನು ಓದಿ. http://Visit : www.suddidina.com ಮೇಷ:...

ದಿನದ ಸುದ್ದಿ10 hours ago

ದೇಶದಲ್ಲಿ ಏಕರೂಪ ರಾಷ್ಟ್ರೀಕೃತ ಶಿಕ್ಷಣ ವ್ಯವಸ್ಥೆ ಜಾರಿಯಾಗಬೇಕು: ಡಾ.ಮೂಡ್ನಾಕೂಡು ಚಿನ್ನಸ್ವಾಮಿ

ಕೆಪಿಸಿಎಲ್ ಹಾಗೂ ಕೆಪಿಸಿಎಲ್ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ನೌಕರರ ಸಂಘದಿಂದ ಅಂಬೇಡ್ಕರ್ ಜಯಂತಿ ಆಚರಣೆ ಎಸ್ಎಸ್ಎಲ್ ಸಿ, ಪಿಯುಸಿಯಲ್ಲಿ ಶೇ. 90ಕ್ಕಿಂತ ಹೆಚ್ಚು ಅಂಕ...

ದಿನದ ಸುದ್ದಿ22 hours ago

5 ವರ್ಷದಿಂದ PFಗೆ ಹಣ ಜಮಾ ಮಾಡಿಲ್ಲ, ಬಡ್ಡಿ ಸಿಗುತ್ತಾ? ಇಲ್ಲಿದೆ EPFO ನಿಯಮದ ಸ್ಪಷ್ಟ ಮಾಹಿತಿ!

ಸುದ್ದಿದಿನ, ಬೆಂಗಳೂರು: ಉದ್ಯೋಗಿ ಭವಿಷ್ಯ ನಿಧಿ ಸಂಸ್ಥೆ (EPFO) ಚಂದಾದಾರರಲ್ಲಿ ಬಹುದಿನಗಳಿಂದ ಒಂದು ದೊಡ್ಡ ಗೊಂದಲವಿದೆ. ನಾನು ಕೆಲಸ ಬಿಟ್ಟಿದ್ದೇನೆ, ಕಳೆದ 5 ವರ್ಷಗಳಿಂದ ಪಿಎಫ್ ಖಾತೆಗೆ...

ದಿನದ ಸುದ್ದಿ22 hours ago

ಬಿಎಂಟಿಸಿ ಪ್ರಯಾಣಿಕರಿಗೆ ಗುಡ್ ನ್ಯೂಸ್ – ಇನ್ಮುಂದೆ ಓಲಾ, ಉಬರ್ ಆ್ಯಪ್‌ನಲ್ಲೇ ಬಿಎಂಟಿಸಿ ಬಸ್ ಟ್ರ್ಯಾಕಿಂಗ್ ಮತ್ತು ಟಿಕೆಟ್ ಬುಕಿಂಗ್!

ಸುದ್ದಿದಿನ, ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಲಕ್ಷಾಂತರ ಬಿಎಂಟಿಸಿ ಪ್ರಯಾಣಿಕರಿಗೆ ಸಾರಿಗೆ ಸಂಸ್ಥೆ ಭರ್ಜರಿ ಸಿಹಿ ಸುದ್ದಿ ನೀಡಿದೆ. ಇನ್ನು ಮುಂದೆ ಬಸ್‌ಗಾಗಿ ಬಸ್ ನಿಲ್ದಾಣದಲ್ಲಿ ಗಂಟೆಗಟ್ಟಲೆ...

ದಿನದ ಸುದ್ದಿ22 hours ago

ಬರ ನಿರ್ವಹಣೆಗೆ ಸಚಿವ ಸಂಪುಟ ಉಪಸಮಿತಿ ಸಭೆ – ದಾವಣಗೆರೆಯಲ್ಲಿ ಕುಡಿಯುವ ನೀರು, ಮೇವು ಕೊರತೆ ಬಗ್ಗೆ ಸಚಿವ ಮಲ್ಲಿಕಾರ್ಜುನ್ ಪ್ರಸ್ತಾಪ

ಸುದ್ದಿದಿನ,ಬೆಂಗಳೂರು: ರಾಜ್ಯದಲ್ಲಿ ಮಳೆ ಕೊರತೆಯಿಂದ ಎದುರಾಗಿರುವ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸುವ ಮತ್ತು ಪರಿಹಾರ ಕಾರ್ಯಗಳನ್ನು ಪರಿಣಾಮಕಾರಿಯಾಗಿ ಕೈಗೊಳ್ಳುವ ಕುರಿತು ವಿಧಾನಸೌಧದಲ್ಲಿ ಇಂದು ಸಚಿವ ಸಂಪುಟ ಉಪಸಮಿತಿ...

ನಿವೃತ್ತ ನೌಕರರ ಸಂಘದಿಂದ ತೀಕ್ಷ್ಣ ಅಂಧ ಮಕ್ಕಳ ಶಾಲೆಗೆ ಸಂಗೀತ ವಾದ್ಯಗಳ ಕೊಡುಗೆ; ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬುವುದು ಸಮಾಜದ ಕರ್ತವ್ಯ ನಿವೃತ್ತ ನೌಕರರ ಸಂಘದಿಂದ ತೀಕ್ಷ್ಣ ಅಂಧ ಮಕ್ಕಳ ಶಾಲೆಗೆ ಸಂಗೀತ ವಾದ್ಯಗಳ ಕೊಡುಗೆ; ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬುವುದು ಸಮಾಜದ ಕರ್ತವ್ಯ
ದಿನದ ಸುದ್ದಿ22 hours ago

ವಿಶೇಷ ಚೇತನ ಮಕ್ಕಳು ದೇವರ ಮಕ್ಕಳು – ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್

ಸುದ್ದಿದಿನ,ಚಿತ್ರದುರ್ಗ: ದೈವಿಕ ಕೊರತೆ ಹಾಗೂ ವಿಕಲಚೇತನ ಹೊಂದಿರುವ ಮಕ್ಕಳು ದೇವರ ಮಕ್ಕಳೆಂದೇ ಪರಿಗಣಿಸಲ್ಪಡುತ್ತಾರೆ. ಅಂತಹ ಮಕ್ಕಳಿಗೆ ಪ್ರೀತಿ, ವಾತ್ಸಲ್ಯ ನೀಡುವ ಮೂಲಕ ಅವರಲ್ಲಿ ಆತ್ಮವಿಶ್ವಾಸ ತುಂಬಿ, ಸ್ವಾವಲಂಬಿ...

ದಿನದ ಸುದ್ದಿ22 hours ago

ಭದ್ರೆ ಆಗಮನದಿಂದ ರೈತರಲ್ಲಿ ಹೊಸ ಭರವಸೆ – ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ

ಸುದ್ದಿದಿನ,ಚಿತ್ರದುರ್ಗ: ಜಿಲ್ಲೆಯ ಬಹುದಿನಗಳ ನೀರಾವರಿ ಕನಸಾಗಿರುವ ಭದ್ರಾ ಮೇಲ್ದಂಡೆ ಯೋಜನೆಯ ನೀರು ಚಿತ್ರದುರ್ಗ ಜಿಲ್ಲೆಗೆ ಹರಿದುಬಂದಿರುವುದು ರೈತರಲ್ಲಿ ಹೊಸ ಭರವಸೆ ಮೂಡಿಸಿದೆ. ಜಿಲ್ಲೆಯ ಬರಪೀಡಿತ ಪ್ರದೇಶಗಳಿಗೆ ನೀರಾವರಿ...

Trending