ದಿನದ ಸುದ್ದಿ
ಸಾಹಿತಿ ಶ್ರೀಮತಿ ಶಾಂತ ಜಯಾನಂದ್ ರವರಿಗೆ ರಾಷ್ಟ್ರೀಯ ಬಸವ ಪ್ರಶಸ್ತಿ
ಸುದ್ದಿದಿನ,ಬೆಂಗಳೂರು : ಶ್ರೀಮತಿ ಶಾಂತ ಜಯಾನಂದ್ ರವರ ಸಾಹಿತ್ಯ ಸೇವೆಯನ್ನು ಪರಿಗಣಿಸಿ ಡಾ.ಪಂಡಿತ್ ಪುಟ್ಟರಾಜ ಸೇವಾ ಸಮಿತಿ ದೆಹಲಿ. ಹಾಗೂ ಚೇತನ ಪೌಂಡೇಶನ್ ಕರ್ನಾಟಕ ಧಾರವಾಡ ರವರು ದಿನಾಂಕ 22-05-2022 ರಂದು ಕನ್ನಡ ಸಾಹಿತ್ಯ ಪರಿಷತ್ತಿನ ಕುವೆಂಪು ಸಭಾಂಗಣದಲ್ಲಿ ರಾಷ್ಟ್ರೀಯ ಬಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಶ್ರೀಯುತರು ಈಗಾಗಲೇ ಹುದುಗಿಟ್ಟ ಭಾವಗಳ ಮತ್ತೆ ನುಡಿಸಿ. ಕವನ ಸಂಕಲನ ಲೋಕಾರ್ಪಣೆಗೊಳಿಸಿ ವಿಮರ್ಶಕರಿಂದ ಮೆಚ್ಚುಗೆ ಗಳಿಸಿದ್ದು ಮಿಣುಕು ಹುಳು ಎಂಬ ಇನ್ನೊಂದು ಪುಸ್ತಕ ಲೋಕಾರ್ಪಣೆಗೆ ಸಿದ್ದವಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243