ರಾಜಕೀಯ

ಕಾಂಗ್ರೆಸ್ ನಲ್ಲಿ ಸಿದ್ದು ಬಗ್ಗೆ ಇದೆ ಸಾಫ್ಟ್ ಕಾರ್ನರ್ !

Published

on

  • ಎಚ್‌ಡಿಕೆಗೆ ಸಿದ್ದು ಗೈಡ್ ಆಗಿರಲಿ
  • ಹಣಕಾಸು ವಿಚಾರದಲ್ಲಿ ಸಿದ್ದರಾಮಯ್ಯ ಅವರಷ್ಟು ಚಾಣಾಕ್ಷರು ಮತ್ತೊಬ್ಬರಿಲ್ಲ
  • ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆಗೆ ಫೇಸ್‌ಬುಕ್‌ನಲ್ಲಿ ಸಿಗುತ್ತಿದೆ ಒಮ್ಮತ
ಸುದ್ದಿದಿನ ವಿಶೇಷ : ಈ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಸೋಲಿನ ಎಲ್ಲ ಜವಾಬ್ದಾರಿಯನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಹೊರಿಸಿದೆ. ಕೆಪಿಸಿಸಿ ಸಭೆಯಲ್ಲಿ ಈ ಕೈ ಮುಖಂಡ ಕೋಳಿವಾಡ ಅವರು ನಡೆದುಕೊಂಡ ವರ್ತನೆಯು ಇದಕ್ಕೆ ಕನ್ನಡಿ ಹಿಡಿದಂತಿತ್ತು.
ಆಡಳಿತ ವಿರೋಧಿ ಅಲೆ ಇಲ್ಲದಿರುವಾಗ ಸಿದ್ದರಾಮಯ್ಯ ಅವರ ಏಕ ಪಕ್ಷೀಯ ನಿರ್ಧಾರಗಳೇ ಸೋಲಿಗೆ ಕಾರಣವಾಯಿತು ಎಂಬ ಚರ್ಚೆಗಳೂ ಚಾಲ್ತಿಯಲ್ಲಿವೆ. ಆದರೆ, ಕೈ ಪಾಳಯದೊಳಗೆ ಸಿದ್ದರಾಮಯ್ಯ ಅವರ ಕುರಿತು ಕೆಲ ಮುಖಂಡರು ಒಳ್ಳೆಯ ಅಭಿಪ್ರಾಯ ಅದರಲ್ಲೂ ಸಾಫ್ಟ್ ಕಾರ್ನರ್ ಹೊಂದಿರುವುದು ಫೇಸ್‌ಬುಕ್‌ನಲ್ಲಿ ವೈರಲ್ ಆಗುತ್ತಿದೆ.
ಫೇಸ್‌ಬುಕ್‌ನಲ್ಲಿ ಬರಹಗಾರ ರಾಜಾರಾಂ ತಳ್ಳೂರ್ ಅವರು ಸ್ಪೀಕರ್ ರಮೇಶ್ ಕುಮಾರ್ ಅವರು ಸಿದ್ದರಾಮಯ್ಯ ಅವರ ಕುರಿತು ವ್ಯಕ್ತಪಡಿಸಿರುವ ಅಭಿಪ್ರಾಯವೊಂದನ್ನು ಹಂಚಿಕೊಂಡಿದ್ದು, ಇದಕ್ಕೆ ಚಿಂತಕರು, ವಾಗ್ಮಿಗಳು, ಬರಹಗಾರರು ಮೊದಲಾದ ಗಣ್ಯರ ಪಡೆಯೇ ಮೆಚ್ಚುಗೆ ವ್ಯಕ್ತಪಡಿಸಿದೆ.

ಪೋಸ್ಟ್ ಹೀಗಿದೆ:

ವಿಶ್ವಾಸ ಗೊತ್ತುವಳಿಯನ್ನು ಮತಕ್ಕೆ ಹಾಕುವ ಮುನ್ನ ಸ್ಪೀಕರ್ ಮಾತನಾಡುತ್ತಾ: ರಾಜನೀತಿ ತಜ್ನನಾಗಿ ಒಂದು ಮಾತು ಹೇಳ್ತೇನೆ. ಇದು ಸ್ಪೀಕರ್ ಕುರ್ಚಿಯಿಂದ ಹೇಳುವ ಮಾತಲ್ಲ ಅಥವಾ ರಾಜಕೀಯ ಪಕ್ಷದ ಪ್ರತಿನಿಧಿ ಆಗಿಯೂ ಹೇಳುವ ಮಾತಲ್ಲ.
ಫಿಸ್ಕಲ್ ರೆಸ್ಪಾನ್ಸಿಬಿಲಿಟಿ ಬಿಲ್ ಸ್ವಲ್ಪವೂ ಉಲ್ಲಂಘನೆ ಆಗದಂತೆ ಹಲವು ಜನಪರ ಕಾರ್ಯಕ್ರಮಗಳನ್ನು ರೂಪಿಸಿ, ಅದಕ್ಕೆ ಹಣಕಾಸನ್ನೂ ವ್ಯವಸ್ಥೆ ಮಾಡಿ, ಯಾವುದೇ ಸರ್ಕಾರಿ ಚೆಕ್ ಬೌನ್ಸ್ ಆಗದಂತೆ ಅದನ್ನೆಲ್ಲ ಜಾರಿ ಮಾಡಿದ ಸಿದ್ದರಾಮಯ್ಯ ಹಣಕಾಸು ಸಚಿವರಾಗಿಯೂ ಹಲವು ಸಂಪುಟಗಳಲ್ಲಿ ಕೆಲಸ ಮಾಡಿ ಅಪಾರ ಅನುಭವ ಇರುವವರು. ಹೆಚ್ಚಿನಂಶ ಪ. ಬಂಗಾಳದ ಕಮ್ಯುನಿಸ್ಟ್ ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದ ಅಶೋಕ್ ಮಿತ್ರಾ ಬಿಟ್ಟರೆ ಇಂತಹ ಹಣಕಾಸಿನ ಶಿಸ್ತು ಹೊಂದಿದ್ದ ದೇಶದ ಮತ್ತೊಬ್ಬ ಹಣಕಾಸು ಸಚಿವರೆಂದರೆ ಸಿದ್ಧರಾಮಯ್ಯ ಎಂದರು. ಜೊತೆಗೆ ಹೊಸ ಮುಖ್ಯಮಂತ್ರಿಗಳಿಗೆ ಸಿದ್ಧರಾಮಯ್ಯ ಅವರಿಂದ ಸಲಹೆಗಳನ್ನು ಪಡೆದು ಮುಂದುವರಿಯಲು ಹೇಳಿದರು.
ಹೆಚ್ಚಿನಂಶ ಮಾಜೀ ಮುಖ್ಯಮಂತ್ರಿಯೊಬ್ಬರು ತನ್ನ ಸಾರ್ವಜನಿಕ ಸೇವೆಗಾಗಿ ಸಂಸದೀಯ ಸೀಟೊಂದರಿಂದ ಪಡೆಯಬಹುದಾದ ಅತಿದೊಡ್ಡ ಮಾತಿನ ಗೌರವ ಇದು.
ರಾಜಾರಾಂ ಅವರ ಈ ಪೋಸ್ಟ್ ಫೇಸ್‌ಬುಕ್‌ನಲ್ಲಿ ಕಂಡ ಕೂಡಲೇ ಹಲವರು ಸಿದ್ದರಾಮಯ್ಯ ಅವರ ಪರ ಭಾವನಾತ್ಮಕವಾದ ಸಾಲುಗಳನ್ನು ಬರೆದಿದ್ದಾರೆ. ಒಂದು ಹಂತದಲ್ಲಿ ಸಿದ್ದರಾಮಯ್ಯ ಅವರು ಅರಸು ಅವರಿಗಿಂತ ಒಂದು ಹೆಜ್ಜೆ ಮುಂದೆ ಇದ್ದಾರೆ ಎಂಬುದಾಗಿಯೂ ಅಭಿಪ್ರಾಯ ವ್ಯಕ್ತವಾಗಿದೆ.  ಫೇಸ್‌ಬುಕ್‌ನಲ್ಲಿ ವ್ಯಕ್ತವಾಗಿರುವ ಕೆಲವು ಕಮೆಂಟ್‌ಗಳು ಇಲ್ಲಿವೆ.

ದಿನೇಶ್ ಅಮಿನ್ ಮಟ್ಟು

ಇದೇ ಮಾತನ್ನು ಮಾಜಿಪ್ರಧಾನಿ ಮನಮಮೋಹನ್ ಸಿಂಗ್ ಬೆಂಗಳೂರಿನಲ್ಲಿ ಹೇಳಿದ್ದರು. ಸಿಂಗ್ ಅವರ ಮಾತಿನಲ್ಲಿ ಸ್ವಲ್ಪ ಪಶ್ಚಾತಾಪ ಮತ್ತು ಸ್ವಲ್ಪ ಅಪರಾಧಿ ಪ್ರಜ್ಞೆ ಕೂಡಾ ಇತ್ತೆಂದು ನನಗನಿಸಿತ್ತು.

ಗೋವಿಂದ ರಾಜ್ ಬೈಚನಕುಪ್ಪೆ

ದೂರದರ್ಶಿತ್ವ, ಮತ್ಸದ್ದಿತನ, ತಾಳ್ಮೆ ಗಾಂಭೀರ್ಯ, ಮಾತು ಮತ್ತು ಮೌನಗಳ ತಿಳುವಳಿಕೆ ಸಿದ್ದರಾಮಯ್ಯ ಅವರಲ್ಲಿ ಅಪಾರವಾಗಿದ್ದವು…( ನಮ್ಮಲ್ಲಿ ಅಧಿಕಾ ಸಿಗಲಿಲ್ಲವೆಂದೂ, ಸಿಕ್ಕ ಅಧಿಕಾರ ಹೋಯ್ತು ಎಂದೂ, ಖಾಸಗಿ ವಿಚಾರಗಳಿಗೂ ಆಶ್ರುಧಾರೆಯರಿಸುವ ರಾಜಕಾರಣಿಗಳು ಬಹಳ ಇದ್ದಾರೆ. ಆದರೆ ಸಿದ್ದು ಆ ಕೆಟಗರಿ ಅಲ್ಲ. ಮಗ ಸತ್ತಾಗ ಕೂಡ ಜನರ ಮುಂದೆ ಕಣ್ಣೀರಾಕಲಿಲ್ಲ. ಸಾಂಸತ್ವನ ಹೇಳಲು ಬಂದುದ್ದವರು ಕಣ್ಣೀರು ಹಾಕಿ ಆಶ್ಚರ್ಯ ಮೂಡಿಸಿದ್ದರು)
ಇನ್ನು ಮ.ಸಿಂಗ್ ಹಾಗೂ ಸಿದ್ದು ಇಬ್ಬರಲ್ಲೂ ಈ ವಿಚಾರದಲ್ಲಿ ಸಾಮ್ಯತೆ ಇದೆ…
ದೇಶ, ಧರ್ಮ, ಹುಟ್ಟು, ಸಾವುಗಳನ್ನೇ ಬಂಡವಾಳ ಮಾಡಿಕೊಂಡು ಭಾವನಾತ್ಮಕ ರಾಜಕಾರಣವವರು ಈ ಇಬ್ಬರಿಂದಲೂ ಕಲಿವುದು ಸಾಕಷ್ಟಿದೆ…

ಮಂಜುನಾಥ್ ಚಾಂದ್

ಮನ್ನಾಗಳ ದೊಡ್ಡ ಸಂತೆಯೇ ಇರುವ ಜೆಡಿಎಸ್ ಪ್ರಣಾಳಿಕೆಯನ್ನು ಈಡೇರಿಸುವುದಲ್ಲ, ನಿಭಾಯಿಸುವುದಕ್ಕೆ ಸಿದ್ದರಾಮಯ್ಯನವರೇ ಮುಂಚೂಣಿಯಲ್ಲಿ ನಿಲ್ಲಬೇಕಾಗುತ್ತದೆ. ಇಲ್ಲವಾದರೆ ಸರಕಾರ ಮಕಾಡೆ ಮಲಗಬೇಕಾಗುತ್ತದೆ.

ರಾಘವೇಂದ್ರ ಹೆಗಡೇಕರ್

 ಸಿದ್ಧರಾಮ್ಯನವರ ಬಡವರ ಪರ ಯೋಜನೆಗಳು ಹೆಚ್ಚು ಪ್ರಚಾರವಾಗದೆ ಮೇಲ್ವರ್ಗದ ಕುರಿತ ಅವರ ಉಡಾಪೆ ಮತ್ತು ವಿರೋಧಿ ನೀತಿಗಳೆ ಅಗತ್ಯಕ್ಕಿಂತ ಹೆಚ್ಚು ಪ್ರಚಾರವಾಗಿ ಅವರಿಗೆ ಮುಳುವಾಯಿತು..

ನವೀನ್ ತೀರ್ಥಹಳ್ಳಿ

ನಿಜಕ್ಕೂ ಸಿದ್ದರಾಮಯ್ಯನವರು ದೇವರಾಜ ಅರಸು ಅವರಂತ ಬಲಿಷ್ಠ ಯೋಗ್ಯ ಮುಖ್ಯಮಂತ್ರಿ ಯಾಗಿದ್ದರು
ಈ ನಾಡಿನ ಮತದಾರ ಜಾತೀವಾದಿಗಳ
ಹುನ್ನಾರ ಕ್ಕೆ ಬಲಿಯಾಗಿ ಕಾಂಗ್ರೆಸ್‌ಗೆ ಕಡಿಮೆ ಮತ ಹಾಕಿದ ಅದರಿಂದ ಸಿದ್ದರಾಮಯ್ಯನವರು ಮತ್ತೊಮ್ಮೆ ಮುಖ್ಯಮಂತ್ರಿ ಯಾಗುವುದು ತಪ್ಪಿ ಹೋಗಿದೆ.

ವೀರಭದ್ರ ಭದ್ರ

 ದೂರದರ್ಶಿತ್ವ, ಮತ್ಸದ್ದಿತನ, ತಾಳ್ಮೆ ಗಾಂಭೀರ್ಯ, ಮಾತು ಮತ್ತು ಮೌನಗಳ ತಿಳುವಳಿಕೆ ಸಿದ್ದರಾಮಯ್ಯ ಅವರಲ್ಲಿ ಅಪಾರವಾಗಿದ್ದವು…( ನಮ್ಮಲ್ಲಿ ಅಧಿಕಾ ಸಿಗಲಿಲ್ಲವೆಂದೂ, ಸಿಕ್ಕ ಅಧಿಕಾರ ಹೋಯ್ತು ಎಂದೂ, ಖಾಸಗಿ ವಿಚಾರಗಳಿಗೂ ಆಶ್ರುಧಾರೆಯರಿಸುವ ರಾಜಕಾರಣಿಗಳು ಬಹಳ ಇದ್ದಾರೆ. ಆದರೆ ಸಿದ್ದು ಆ ಕೆಟಗರಿ ಅಲ್ಲ. ಮಗ ಸತ್ತಾಗ ಕೂಡ ಜನರ ಮುಂದೆ ಕಣ್ಣೀರಾಕಲಿಲ್ಲ. ಸಾಂಸತ್ವನ ಹೇಳಲು ಬಂದುದ್ದವರು ಕಣ್ಣೀರು ಹಾಕಿ ಆಶ್ಚರ್ಯ ಮೂಡಿಸಿದ್ದರು)
ಇನ್ನು ಮ.ಸಿಂಗ್ ಹಾಗೂ ಸಿದ್ದು ಇಬ್ಬರಲ್ಲೂ ಈ ವಿಚಾರದಲ್ಲಿ ಸಾಮ್ಯತೆ ಇದೆ…ದೇಶ, ಧರ್ಮ, ಹುಟ್ಟು, ಸಾವುಗಳನ್ನೇ ಬಂಡವಾಳ ಮಾಡಿಕೊಂಡು ಭಾವನಾತ್ಮಕ ರಾಜಕಾರಣವವರು ಈ ಇಬ್ಬರಿಂದಲೂ ಕಲಿವುದು ಸಾಕಷ್ಟಿದೆ…

ಚೆನ್ನರಾಜು

ಅಗೋರಿಗಳನ್ನು ನಂಬುವ ಯಡ್ಡಿ, ಜೋತಿಷ್ಯವನ್ನು ನಂಬುವ ಕುಮಾರಸ್ವಾಮಿ ಇವರ ನಡುವೆ ಸಿದ್ದರಾಮಯ್ಯ ಎಂಬ ನೈತಿಕ ಗುರುವೊಬ್ಬರಿದ್ದಾರೆ ಎಂದರೆ ನಂಬಲಾಗದು. ಅವರಿಗೆ ಇದುವರೆಗೂ ಯಾವ ಸ್ಥಾನವೂ ನೀಡದೆ ಎಲ್ಲಿ ಮೂಲೆಗುಂಪಾಗಿ ಬಿಡುವರೋ ಎಂಬ ಆತಂಕವಿದೆ. ಒಂದಂತು ನಿಜ ನೈತಿಕ ಸ್ವಾಭಿಮಾನದ ಸಮಾಜವಾದಿ ರಾಜಕಾರಣಿ ಸಿದ್ದರಾಮಯ್ಯ . ಲವ್ ಯು ಎರ್ ಸರ್

ಲೋಕೇಶ್ ಮುನಿಯಪ್ಪ

ಬಹುಶಃ ಭಾರತದ ರಾಜಕೀಯದಲ್ಲಿ ಪ್ರಮಾಣ ವಚನ ಸ್ವೀಕರಿಸುವ ಸಂದರ್ಭದಲ್ಲಿ ತಾನು ಇಷ್ಟು ಮಾಡುತ್ತೇನೆ(ಸಿದ್ದರಾಯ್ಯ ಅದನ್ನು ಚುನಾವಣಾಆಶ್ವಾಸನೆಯಾಗಿ ಹೇಳಿರಲಿಲ್ಲ)ಎಂದು ಹೇಳಿದನ್ನು ಚ್ಯುತಿ ಇಲ್ಲದೇ ಪಾಲಿಸಿದರು. ಖಂಡಿತವಾಗಿಯೂ ಅದು ಎಲ್ಲರಿಗೂ ಸಾದ್ಯವಿರಲಿಲ್ಲ. ನಮಸ್ಕಾರ ಸಾರ ನೀವು ನಮ್ಮ ಜೊತೆಗಿರುತ್ತೀರಾ..

ಚಿದಂಬರ್ ಜೋಷಿ

ಮಾನ್ಯ ಸಿದ್ದರಾಮಯ್ಯ ಸಾಹೇಬರದು ಉನ್ನತ ವ್ಯಕ್ತಿತ್ವ, ಕಳಂಕ ರಹಿತ ಸಮಾಜ ಸೇವೆ, ಇಷ್ಟೊಂದು ವರ್ಷ ರಾಜಕೀಯದಲ್ಲಿದ್ದರೂ ಅವರ ಅಣ್ಣತಮ್ಮಂದಿರುಗಳಿಗೆ ಯಾವುದೇ ಸಹಾಯ ಮಾಡಿರದ ವ್ಯಕ್ಕಿ— ಸನ್ಮಾನ್ಯ ಮೋದೀಜಿಯವರ ಹಾಗೆ, ಚಾಣಾಕ್ಷ ನಡೆ ಹೊಂದಿದವರು, ಐದು ವರ್ಷ ಮುಖ್ಯಮಂತ್ರಿಯಾಗಿ ಯಾವ ಕಪ್ಪು ಚುಕ್ಕೆ ಇಲ್ಲದೇ ಇರುವದು ಸಾಮಾನ್ಯ ಮಾತಲ್ಲ. ಹಗರಣಗಳಂತೂ ಇಲ್ಲವೇ ಇಲ್ಲ.

Leave a Reply

Your email address will not be published. Required fields are marked *

Trending

Exit mobile version