ರಾಜಕೀಯ
ವಿಧಾನಸಭೆ | ಪ್ರಶ್ನೋತ್ತರ ಕಲಾಪ : “ನನ್ನ ತಲೆ ಮೇಲೆ ತಕ್ಕಡಿ ಇದೆ” ಎಂದ ಸ್ಪೀಕರ್ ರಮೇಶ್ ಕುಮಾರ್
ಸುದ್ದಿದಿನ,ಬೆಳಗಾವಿ : ನಾನು ಆಯ್ಕೆಯಾಗುವ ಸಂದರ್ಭದಲ್ಲಿ ಪ್ರತಿಪಕ್ಷ ನಾಯಕರು ದೂರವಾಣಿ ಕರೆ ಮಾಡಿ ನನ್ನ ಮೇಲಿನ ಗೌರವಕ್ಕೆ ಅಭ್ಯರ್ಥಿ ಹಾಕುತ್ತಿಲ್ಲ ಎಂದು ಹೇಳಿದ್ದರು, ಹಾಗಾಗಿ ನನ್ನ ಮೇಲೆ ಎಷ್ಟು ಜವಾಬ್ದಾರಿ ಇದೆ. ಪ್ರತಿಕ್ಷಣವೂ ಭಯದಿಂದಲೇ ಕಾರ್ಯನಿರ್ವಹಿಸುತ್ತೇನೆ. ವಿಧಾನಸಭೆಯ ಎಲ್ಲ ಶಾಸಕರೂ ನನಗೆ ಸಮಾನರು ಎಂದು ಬೆಳಗಾವಿ ಅಧಿವೇಶನದಲ್ಲಿ ಸ್ಪೀಕರ್ ರಮೇಶ್ ಹೇಳಿದರು.
ಸ್ನೇಹ ಬೇರೆ , ನಿಯಮ ಬೇರೆ ಎಂದ ರಮೇಶ ಕುಮಾರ್ ಅವರು ಕೆಸಿ ವ್ಯಾಲಿ ನೀರಾವರಿ ಯೋಜನೆಯಿಂದ ಮಹದೇವಪುರ ರಸ್ತೆಗಳು ಹಾಳಾದ ಬಗ್ಗೆ ಸಣ್ಣ ನೀರಾವರಿ ಸಚಿವ ಸಿ ಎಸ್ ಪುಟ್ಟರಾಜು ಅವ್ರಿಗೆ ಪ್ರಶ್ನೆ ಕೇಳಿದ್ದರು ಅರವಿಂದ್ ಲಿಂಬಾವಳಿ. ಅಧಿವೇಶನದ ಬಳಿಕ ಕ್ಷೇತ್ರಕ್ಕೆ ಬಂದು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಮಸ್ಯೆ ಪರಿಹಾರದ ಭರವಸೆ ಕೊಟ್ಟರು ಸಚಿವ ಪುಟ್ಟರಾಜು. ಆ ಸಂದರ್ಭ ಸ್ಪೀಕರ್ ಅರವಿಂದ್ ಲಿಂಬಾವಳಿ ಅವ್ರಿಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕೆಲಸ ಮಾಡಿ ಕೊಡ್ತಾರೆ ಅಂತಾ ಭರವಸೆ ಕೊಟ್ರು. ಸ್ಪೀಕರ್ ಹೇಳಿದ್ದನ್ನ ನಾನು ನಂಬ್ತೇನೆ, ಸರ್ಕಾರದ ಮೇಲೆ ನಂಬಿಕೆ ಇಲ್ಲ ಎಂದ ಲಿಂಬಾವಳಿ. ಲಿಂಬಾವಳಿ ಹೇಳಿದಾರೆ ಆದರೆ ನನ್ನ ಮೇಲೆ ತಕ್ಕಡಿ ಇದೆ ಎಂದರು ಸ್ಪೀಕರ್ ರಮೇಶ್ ಕುಮಾರ್.
ಸುದ್ದಿದಿನ.ಕಾಂ|ವಾಟ್ಸಾಪ್|9986715401