ಸಿನಿ ಸುದ್ದಿ
‘ಕಿಚ್ಚ ಮತ್ತು ಡಿ ಬಾಸ್’ ಮುನಿಸು ಮುರಿಯಲು ಸಜ್ಜಾಯ್ತು ವೇದಿಕೆ..!
ಸುದ್ದಿದಿನ, ಬೆಂಗಳೂರು | ಇದು ಸ್ಯಾಂಡಲ್ವುಡ್ನ ಎಕ್ಸ್ಕ್ಲೂಸಿವ್ ಸುದ್ದಿ.ಚಾಲೆಂಜಿಂಗ್ ಸ್ಟಾರ್ ದರ್ಶನ್, ಕಿಚ್ಚ ಸುದೀಪ್ಗೆ ಸಂಬಂಧಿಸಿದ ಸ್ಫೋಟಕ ಸುದ್ದಿ.
ಹಳೆಯ ಕಹಿ ನೆನಪು ಮರೆತು ಅಪ್ಪುಗೆಗೆ ರೆಡಿಯಾಗಿದ್ದಾರೆ ಹಳೇ ದೋಸ್ತ್ ಗಳು.
ಅಭಿಮಾನಿಗಳಿಗೆ ಸ್ವೀಟ್ ನ್ಯೂಸ್ ಕೊಡಲು ಕಾಯ್ತಿದ್ದಾರೆ ಈ ಬಿಗ್ ಸ್ಟಾರ್ಸ್. ಇವರಿಬ್ಬರನ್ನು ಒಟ್ಟು ಗೂಡಿಸುತ್ತಿರೋದು ಯಾರು..? ಯಾವಾಗ?
ಸುದ್ದಿದಿನದ ಬಳಿ ಇದೆ ಕುಚುಕು ಗೆಳೆಯರು ಒಂದಾಗ್ತಿರೋ ಎಕ್ಸ್ಕ್ಲೂಸಿವ್ ಮಾಹಿತಿ.
ಇದು ಸ್ಯಾಂಡಲ್ವುಡ್ನ ಎಕ್ಸ್ಕ್ಲೂಸಿವ್ ಸುದ್ದಿ.
ಮತ್ತೆ ಒಂದಾಗ್ತಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್, ಕಿಚ್ಚ ಸುದೀಪ್- ಇಬ್ಬರನ್ನೂ ಒಂದು ಮಾಡ್ತಿದ್ದಾರೆ ಮಂಡ್ಯದ ಗಂಡು ಅಂಬರೀಶ್. ಆಗಸ್ಟ್ 10ರಂದೇ ಮುಖಾಮುಖಿ ಆಗಲಿದ್ದಾರೆ ದಚ್ಚು-ಕಿಚ್ಚ.
ಅಂಬಿ ನಿಂಗೆ ವಯಸ್ಸಾಯ್ತೋ ಸಿನಿಮಾದ ಸಾಂಗ್ ರಿಲೀಸ್ನಲ್ಲಿ ಮುಖಾಮುಖಿಯಾಗಲಿದ್ದಾರೆ. ಕಿಚ್ಚ ಸುದೀಪ್ ನಿರ್ಮಾಣದಲ್ಲಿ ಮೂಡಿ ಬರ್ತಿರೋ ಸಿನಿಮಾ-
ಅಂಬರೀಶ್ ಹತ್ತು ವರ್ಷಗಳ ನಂತರ ಹೀರೋ ಆಗಿ ನಟಿಸ್ತಿರೋ ಸಿನಿಮಾ ಸಾಂಗ್ ರಿಲೀಸ್ ಕಾರ್ಯಕ್ರಮಕ್ಕೆ ಬರ್ತಿದ್ದಾರೆ.
ದಕ್ಷಿಣದ ಬಿಗ್ ಸ್ಟಾರ್ಸ್, ರಜಿನಿಕಾಂತ್, ಚಿರಂಜೀವಿ,ಧನುಷ್ ಸೇರಿ ಸಿನಿಮಾ ದಿಗ್ಗಜರಿಗೆ ಆಹ್ವಾನ ನೀಡಿದ್ದು, ಈ ಶುಭ ಸಂದರ್ಭದಲ್ಲೇ ಸುದೀಪ್-ದರ್ಶನ್ ರಾಜಿ ಮಾಡಿಸುವ ಅಂಬರೀಶ್ . ಕನ್ನಡ ಚಿತ್ರರಂಗದ ಎಲ್ಲಾ ಸ್ಟಾರ್ ನಟರಿಗೂ ಈ ಕಾರ್ಯಕ್ರಮಕ್ಕೆ ಆಹ್ವಾನವಿತ್ತಿದ್ದಾರೆ. ಗುರುದತ್ ಗಾಣಿಗಾ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಸಿನಿಮಾವಿದು.
ಸುದ್ದಿದಿನ.ಕಾಂ|ವಾಟ್ಸಾಪ್|9986715401