ಭಾವ ಭೈರಾಗಿ
ಕವಿತೆ | ಬೆಸ್ತರು
ಮಚಾಡೋ ಹೇಳಿದ ಹಾಗೆ
ಕವಿ ಬೆಸ್ತ :
ನಿರಂತರದ ಹೊಳೆಯಲ್ಲಿ ಹಿಡಿದ ಮೀನು
ಐದು ನಿಮಿಷದ ಹಿಂದೆ ಬಳುಕಿ ಮಿಂಚಿದ ಮೀನು
ಹೊರಗೂ ಬದುಕಬೇಕೆನ್ನುವ ನಿಮಿಷದಾಚೆಯ ಬೆಸ್ತ.
ಕೆಲವರ ಕೈ ರಾಶಿ,
ಈ ಪವಾಡ ಕೂಡ ಅವರಿಗೆ ಸಿದ್ಧಿ.
ನಮ್ಮಂಥವರ ಕೈಯಲ್ಲಿ ಅವು
ಸತ್ತು ಎವೆಯಿಕ್ಕದೆ
ನಾರುವ ಮೀನು:
ಮತ್ತೆ ಕೆಲವರಿಗೆ
ರಾತ್ರಿ ಊಟ
ಕೈ ಗರಿಗರಿ ಕರಿದ ಮೀನು
ಹರಿವ ನೀರಿನ ಸಾರು.
–ಎ.ಕೆ.ರಾಮಾನುಜನ್
( ಎ.ಕೆ.ರಾಮಾನಜನ್ ಅವರ ‘ಕುಂಟೋ ಬಿಲ್ಲೆ’ ಕವನ ಸಂಕಲನದಿಂದ ಈ ಕವಿತೆ ತೆಗೆದುಕೊಳ್ಳಲಾಗಿದೆ)
ಸುದ್ದಿದಿನ.ಕಾಂ|ವಾಟ್ಸಾಪ್|9980346243