ಭಾವ ಭೈರಾಗಿ

ಕವಿತೆ | ಬೆಸ್ತರು

Published

on

 

ಮಚಾಡೋ ಹೇಳಿದ ಹಾಗೆ
ಕವಿ ಬೆಸ್ತ :

ನಿರಂತರದ ಹೊಳೆಯಲ್ಲಿ ಹಿಡಿದ ಮೀನು
ಐದು ನಿಮಿಷದ ಹಿಂದೆ ಬಳುಕಿ ಮಿಂಚಿದ ಮೀನು
ಹೊರಗೂ ಬದುಕಬೇಕೆನ್ನುವ ನಿಮಿಷದಾಚೆಯ ಬೆಸ್ತ.

ಕೆಲವರ ಕೈ ರಾಶಿ,
ಈ ಪವಾಡ ಕೂಡ ಅವರಿಗೆ ಸಿದ್ಧಿ.
ನಮ್ಮಂಥವರ ಕೈಯಲ್ಲಿ ಅವು
ಸತ್ತು ಎವೆಯಿಕ್ಕದೆ
ನಾರುವ ಮೀನು:

ಮತ್ತೆ ಕೆಲವರಿಗೆ

ರಾತ್ರಿ ಊಟ
ಕೈ ಗರಿಗರಿ ಕರಿದ ಮೀನು
ಹರಿವ ನೀರಿನ ಸಾರು.

ಎ.ಕೆ.ರಾಮಾನುಜನ್

( ಎ.ಕೆ.ರಾಮಾನಜನ್ ಅವರ ‘ಕುಂಟೋ ಬಿಲ್ಲೆ’ ಕವನ ಸಂಕಲನದಿಂದ ಈ ಕವಿತೆ ತೆಗೆದುಕೊಳ್ಳಲಾಗಿದೆ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version