ದಿನದ ಸುದ್ದಿ

ಸಸಿ ಬೆಳೆಸಿದರೆ ಕೃಪಾಂಕ : ತರಳಬಾಳು ಶ್ರೀ ಜಗದ್ಗುರುವರ್ಯರ ಸಲಹೆಗೆ ಸರ್ಕಾರದ ಒಪ್ಪಿಗೆ

Published

on

ಸುದ್ದಿದಿನ ಡೆಸ್ಕ್ : ಪ್ರತಿಷ್ಠಿತ ಕೇಂದ್ರ ಸರ್ಕಾರದ ಇಂದಿರಾ ಪ್ರಿಯದರ್ಶಿನಿ ವೃಕ್ಷಮಿತ್ರ ಪ್ರಶಸ್ತಿಯನ್ನು 80 ರ ದಶಕದಲ್ಲಿಯೇ ಪಡೆದು ಸಾಮಾಜಿಕ ಅರಣ್ಯೀಕರಣದ ಬಗ್ಗೆ ಭಾಷಣ ಮಾಡದೆ ಸಾವಿರಾರು ಎಕರೆಯ ಮಠದ ಭೂಮಿಯಲ್ಲಿ ಸಸ್ಯ ಕ್ರಾಂತಿ ಮಾಡಿ ಪರಿಸರ ಸಂರಕ್ಷಣೆ ಎಲ್ಲರ ಜವಾಬ್ದಾರಿ ಎಂದು ಮನವರಿಕೆ ಮಾಡಿ, ಲಕ್ಷ ಲಕ್ಷ ಬೀಜದುಂಡೆಗಳನ್ನು ಭೂ ತಾಯಿಯ ಮಡಿಲಿಗೆ ಅರ್ಪಿಸಿ ಕಾಡು ಇದ್ದರೆ ನಾಡು ಎಂಬುದರ ಜಾಗೃತಿ ಮೂಡಿಸಿದವರು ಪರಮಪೂಜನೀಯ ಶ್ರೀ ತರಳಬಾಳು ಜಗದ್ಗುರು ಡಾ.ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿಯವರು.

ಯಾವುದೇ ಖರ್ಚು ಇಲ್ಲದೇ ಸಸಿ ನೆಟ್ಟು ಪೋಷಿಸುವ ಕಾರ್ಯ ಯೋಜನೆಯನ್ನು 25 ವರ್ಷಗಳ ಹಿಂದೆಯೇ ಅಂದಿನ ಮುಖ್ಯ ಮಂತ್ರಿಗಳಾದ ರಾಮಕೃಷ್ಣ ಹೆಗಡೆಯವರಿಗೆ ಶ್ರೀ ಗಳು ಮನವರಿಕೆ ಮಾಡಿಕೊಟ್ಟಿದ್ದರು. ಆದರೆ ಸರ್ಕಾರಕ್ಕೆ ಖರ್ಚು ಮಾಡಿಯೇ ಅಭ್ಯಾಸ ಇರುವಾಗ ವ್ಯಯವಿಲ್ಲದ ಯೋಜನೆಗೆ ಗಮನ ಕೊಡುವ ಮನಸ್ದಿತಿ ಇರಬೇಕಲ್ಲವೇ..? ಇತ್ತೀಚೆಗೆ ಹಿರಿಯ ಶ್ರೀ ತರಳಬಾಳು ಜಗದ್ಗುರು ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ಶ್ರದ್ಧಾಂಜಲಿ ಸಮಾರಂಭಕ್ಕೆ ಆಗಮಿಸಿದ್ದ ರಾಜ್ಯ ಅರಣ್ಯ ಪರಿಸರ ಮತ್ತು ಜೀವಶಾಸ್ತ್ರ ಸಚಿವ ಶರಣ ಆರ್. ಶಂಕರ್ ಅವರಿಗೆ ವ್ಯಯವಿಲ್ಲದೇ ವನ ಬೆಳೆಸುವ ಯೋಜನೆಯ ಕುರಿತು ಸಾವಿರಾರು ಜನರರೆದುರು ಪ್ರಸ್ತಾಪಿಸಿದ್ದರು.

ಎಂಟನೇ ತರಗತಿಯ ವಿದ್ಯಾರ್ಥಿಗಳು ಈ ಯೋಜನೆಯಯ ಫಲಾನುಭವಿಗಳಾಗಿರುತ್ತಾರೆ.ಹತ್ತನೇ ತರಗತಿ ಪೂರ್ಣಗೊಳಿಸುವ ಸಮಯಕ್ಕೆ ಪ್ರತಿ ವಿದ್ಯಾರ್ಥಿ 10 ಸಸಿಗಳನ್ನು ನೆಟ್ಟು ಪೋಷಿಸುವ ಜವಾಬ್ದಾರಿಯವಿದ್ಯಾರ್ಥಿಯದ್ದಾಗಿರುತ್ತದೆ.ಸಸಿಗಳ ಉಪಚರಿಕೆ ,ಬೆಳವಣಿಗೆಯ ಆಧಾರದ ಮೇಲೆ ಹತ್ತನೇ ತರಗತಿಯ ಪರೀಕ್ಷೆ ಯಲ್ಲಿ ವಿಶೇಷ ಅಂಕಗಳನ್ನು ವಿದ್ಯಾರ್ಥಿಗಳಿಗೆ ನೀಡುವ ಮೂಲಕ ಪರಿಸರ ಸಂರಕ್ಷಣೆಯ ಅರಿವು ಮತ್ತು ಮಹತ್ವವನ್ನು ಮೂಡಿಸಿದಂತಾಗುವುದು ಎಂಬುದು ಶ್ರೀಗಳ ಆಶಯ.
ಶಿಕ್ಷಣ ಮತ್ತು ಅರಣ್ಯ ಇಲಾಖೆಗಳ ಸಹಯೋಗದಲ್ಲಿ ಈ ಯೋಜನೆ ಕಾರ್ಯನಿರ್ವಹಣೆಯಾಗಬೇಕೆಂಬುದು ಶ್ರೀ ಗಳ ಸೂಚನೆಯಾಗಿತ್ತು.

ಅಂತೆಯೇ ನಿನ್ನೆ ಕಲ್ಬುರ್ಗಿ ಯಲ್ಲಿ ಜರುಗಿದ ಕೃಷಿ ಅರಣ್ಯ ಕಾರ್ಯಗಾರದಲ್ಲಿ ಈ ಯೋಜನೆಯ ಬಗ್ಗೆ ಮಾನ್ಯ ಸಚಿವರು ಪ್ರಸ್ತಾಪಿಸಿ ತರಳಬಾಳು ಶ್ರೀ ಜಗದ್ಗುರುವರ್ಯರ ಅರಣ್ಯ ಮುಖಿ ಯೋಜನೆಗೆ ಒಪ್ಪಿಗೆ ಸೂಚಿಸಿದುದುರ ಬಗ್ಗೆ ಮಾಹಿತಿ ನೀಡಿ ಅರಣ್ಯ ಮತ್ತು ಶಿಕ್ಷಣ ಇಲಾಖೆಗಳ ಅಧಿಕಾರಿಗಳಲ್ಲಿ ಈಗಾಗಲೇ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಂಡಿದ್ದು ಆರೋಗ್ಯ ಪೂರ್ಣ ಸಸಿ ನೆಟ್ಟು ಪೋಷಿಸಿದ ವಿದ್ಯಾರ್ಥಿಗೆ ಮರವೊಂದಕ್ಕೆ 1ಅಂಕ ನೀಡುವುದಾಗಿ ತಿಳಿಸಿದ್ದಾರೆ.ಸಮಾಜ ಮುಖಿ ಮಹಾಗುರುವಿನ ಅರಣ್ಯ ಮುಖಿಯ ಯೋಜನೆಯ ಸಲಹೆಯಂತೆ ಕಾರ್ಯಮುಖಿಯಾದ ಮಾನ್ಯ ಅರಣ್ಯ ಸಚಿವರ ಕೆಲಸಕ್ಕೆ ತುಂಬು ಹೃದಯದ ಅಭಿನಂಧನೆಗಳು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version