ಅಂತರಂಗ

ಈ ಸಮಯ

Published

on

ನಾವು ಚಿಕ್ಕವರಿದ್ದಾಗ ನಮ್ಮ ಅಪ್ಪ-ಅಮ್ಮ ನಾವು ಬೇಕೆನ್ನುವ ಆಟಿಕೆಗಳನ್ನು ಬಟ್ಟೆಗಳನ್ನು ಕೊಡಿಸುತ್ತಿದ್ದರು ನಾವು ಕೇಳುವ ಪ್ರತಿಯೊಂದನ್ನು ಇಲ್ಲ ಎನ್ನದೆ ಕೊಡಿಸುತ್ತಿದ್ದರು ನಾವು ಅವು ಸಿಕ್ಕಿತು ಎಂದು ಖುಷಿ ಪಡುವಾಗ ನಮ್ಮ ಖುಷಿಯನ್ನು ನೋಡುತ್ತಾ ನಮ್ಮ ತಂದೆ-ತಾಯಿ ಖುಷಿ ಪಡುತ್ತಿದ್ದರು. ಆದರೆ ಯಾರಾದರೂ ಖುಷಿನ ಕೊಂಡುಕೊಳ್ಳಲು ಸಾಧ್ಯವೇ?

ಯಾರೇ ಆಗಲಿ ಖಷಿಯನ್ನು ಎಲ್ಲಿಂದಲಾದರು ಕೊಂಡುಕೊಳ್ಳಲು ಸಾಧ್ಯವೇ ಎಂದು ನೋಡಿದಾಗ ಅದು ತುಂಬಾ ಅಸಾಧ್ಯವಾದುದಾಗಿದೆ. ಖುಷಿಯ ಬಗ್ಗೆ ದಲೈಲಾಮರವರು ಹೀಗೆ ಹೇಳಿದ್ದಾರೆ ಅದೇನೆಂದರೆ ಹ್ಯಾಪಿನೆಸ್ ಈಸ್ ನಾಟ್ ಸಮ್ಥಿಂಗ್ ರೆಡಿಮೇಡ್ ಇಫ್ ಕಮ್ಸ್ ಫ್ರಮ್ ಯುವರ್ ಓನ್ ಆಕ್ಷನ್ (happiness is not something readymade if comes from your own actions) ಎಂದು ಹೇಳುತ್ತಾರೆ ನಾವು ಮಾಡುವ ಕಾರ್ಯಗಳಿಂದ ನಮಗೆ ಖುಷಿ ಸಿಗುತ್ತದೆ ವಿನಃಹ ಕೊಂಡುಕೊಳ್ಳಲು ಸಾಧ್ಯವಿಲ್ಲ.

ನಾವು ಈ ಖುಷಿಯನ್ನು ಹೇಗೆ ಪಡೆಯುತ್ತೇವೆ?
Learn to enjoy little things ಅಷ್ಟೆ. ಮನುಷ್ಯ ಅಂದಮೇಲೆ ಒತ್ತಡ, ದುಃಖ, ಸಂಘರ್ಷ ಇದ್ದೇ ಇರುತ್ತದೆ ಯಾವ ವ್ಯಕ್ತಿಯಾಗಲಿ ನೋಡಲು ಎಷ್ಟೇ ಖುಷಿಯಿಂದ ಇದ್ದರೂ ಮುಖದಲ್ಲಿ ಖುಷಿ ಕಾಣಿಸಿದರು ಹೇಳಿಕೊಂಡರೂ ಆತ ಪ್ರಪಂಚದಿಂದ ರಹಸ್ಯವಾಗಿ ಒಂದಲ್ಲಾ ಒಂದು ನೋವು ದುಃಖವನ್ನು ಮುಚ್ಚಟ್ಟಿರುತ್ತಾನೆ.

ನಾವು ಈ ಆಧುನಿಕ ಜಗತ್ತಿನಲ್ಲಿ ದುಡಿಮೆಯ ಒತ್ತಡದಲ್ಲಿ ನಮಗಾಗಿ ಸ್ವಲ್ಪ ಸಮಯವನ್ನ ಕೊಡುವುದನ್ನ ಮರೆತುಬಿಡುತ್ತೇವೆ. ನಾವು ನಮ್ಮನ್ನ ನಾವು ಪ್ರತಿಸಿಕೊಳ್ಳುವಷ್ಟು ನಮ್ಮಲ್ಲಿ ಸಮಯ ಇಲ್ಲವೆಂದರೆ ನಾವು ಇತರರನ್ನು ಹೇಗೆತಾನೇ ಪ್ರೀತಿಸುತ್ತೇವೆ? ನಾವು ನಮಗೋಸ್ಕರ ಸಮಯ ನೀಡದಷ್ಟು ಬ್ಯುಸಿ (busy) ಆದರೆ ನಮ್ಮ ಪ್ರೀತಿ ಪಾತ್ರರಿಗೆ ಸಮಯ ನೀಡಲು ಹೇಗೆ ಸಾಧ್ಯ? ನಾವು ಖುಷಿ ನೆಮ್ಮದಿಯನ್ನು ಬೇಸಿಕ್ (basic) ಅಂಶಗಳಿಂದ ಪಡೆಯಬಹುದು ಎಂದುಕೊಂಡಿದ್ದರೆ ನಮ್ಮ ಜೀವನದಲ್ಲಿ ಯಾವುದೇ ಮೌಲ್ಯಗಳನ್ನು ಬೆಳೆಸಿಕೊಳ್ಳಲು ಸಾಧ್ಯವಿಲ್ಲ.

ನಿಜ ಕಣ್ರಿ ನಾವು ಈ ಸೋಷಿಯಲ್ ಮೀಡಿಯಾಗಳಿಂದಲೇ ನಮ್ಮ ಮೌಲ್ಯಗಳನ್ನು ಕಳೆದುಕೊಳ್ಳುತ್ತಿದ್ದೇವೆ WhatsApp, Facebook, Instagram, tiktok, gamesಗಳಂತ ಅಂತರ್ಜಾಲದ ಭಲೆಯಲ್ಲಿ ಸಿಲುಕಿಕೊಂಡಿರುವ ನಮ್ಮನ್ನು ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಹಾಳು ಮಾಡುತ್ತಿರುವ ಸೋಷಿಯಲ್ ಮೀಡಿಯಾಗಳು.

ನಮ್ಮ ದಿನವು ಪ್ರಾರಂಭವಾಗುವುದು ಮೊಬೈಲ್ನಿಂದಲೇ ಮೊಬೈಲ್ ಸ್ರ್ಕೀನ್ ನೋಡಿಯೇ ನಮ್ಮ ದಿನ ನಿತ್ಯದ ಕಾರ್ಯಗಳು ಆರಂಭವಾಗುವುದು ನಾವು ಮೊಬೈಲ್ಗೆ ಅಷ್ಟೊಂದು ಅಡಿಕ್ಟ್ ಆಗಿಬಿಟ್ಟಿದ್ದೇವೆ.

ಖುಷಿ ಅನ್ನೋದು ನಾವು ಈ ಸೋಷಿಯಲ್ ಮೀಡಿಯಾಗಳಿಂದಾಗಲಿ ಐಷರಾಮಿ ಜೀವನದಿಂದಾಗಲಿ ಪಡೆಯಲು ಸಾಧ್ಯವಿಲ್ಲ. ನಾವು ನಮ್ಮ ಖುಷಿಯನ್ನು ಇರುವುದರಲ್ಲಿ ಇರುವವರ ಜೊತೆಗೆ ಕಾಣಲು ಬಿಡುತ್ತೇವೆ. ಬೇರೊಂದರಲ್ಲಿ ಹುಡುಕಲು ಹೊರಡುತ್ತೇವೆ. ಮನುಷ್ಯನ ಕೆಟ್ಟ ಗುಣವೋ ಸಹಜ ಗುಣವೋ ನಾ ಕಾಣೇ ಏಕೆಂದರೆ ತಮ್ಮನ್ನ ತಾವು ಯಾವಾಗಲು ಇತರರೊಂದಿಗೆ ಹೋಲಿಸಿಕೊಳ್ಳುತ್ತಾರೆ ಈ ಹೋಲಿಸಿಕೊಳ್ಳುವ ಗುಣವೇ ಮನುಷ್ಯನ ಖುಷಿ, ನೆಮ್ಮದಿಯನ್ನ ಹಾಳು ಮಾಡುತ್ತಾ ಬಂದಿದೆ.

ನಮ್ಮವರಿಗಾಗಿ, ನಮಗಾಗಿ, ನಮ್ಮವರಿಗೋಸ್ಕರ ಬದುಕುವುದಾದರೆ ಅವರಿಗಾಗಿ ಸ್ವಲ್ಪ ಸಮಯ ನೀಡಬೇಕಾಗುತ್ತದೆ. ದಿನದ ೨೪ ಗಂಟೆಗಳಲ್ಲೂ ನಾವು ಬ್ಯುಸಿ ಇರುವುದಿಲ್ಲ ಆದರೆ ಈ ಬ್ಯುಸಿ ಎನ್ನುವ ಉತ್ತರ ಕೊಡುವುದರಲ್ಲಿ ನಾವು ಬ್ಯುಲಸಿಯಾಗುತ್ತೇವೆ ಈ ರೀತಿಯ ಉತ್ತರ ಕೊಡುವುದನ್ನ ಮೊದಲು ನಾವು ನಿಲ್ಲಿಸಿದರೆ ಮುಂದೆ ಒಂದು ದಿನ ಸಾರಿ (sorry) ಎಂದು ಕೇಳಲು ಕೂಡ ನಮ್ಮ ಜೊತೆ ಯಾರು ಇರುವುದಿಲ್ಲ ನಮ್ಮವರಿಗೆ ಸಮಯ ನೀಡುವುದೆಂದರೆ ನಮ್ಮ ಆತ್ಮೀಯರಿಗೆ (ಅಪ್ಪ-ಅಮ್ಮ , ಮಕ್ಕಳು, ಅಕ್ಕ-ತಂಗಿ, ಅಣ್ಣ-ತಮ್ಮ, ಗೆಳಯ-ಗೆಳತಿ, ಗಂಡ-ಹೆಂಡತಿ) ಕೊನೆಗೆ ತಮಗಾಗಿ ಸ್ವಲ್ಪ ಸಮಯವನ್ನು ಕೊಡಲು ಅಭ್ಯಾಸವನ್ನು ಮಾಡಿಕೊಂಡರೆ ನಾವು ನಮ್ಮ ಜೀವನವನ್ನು ಸ್ವಲ್ಪ ತೃಪ್ತಿಯಿಂದ ಸಂತೋಷದಿಂದ ಕಳೆಯಲೂ ಬಹುದು ಹಾಗೆಯೇ ಕೊನೆಗೆ ನಮ್ಮ ಜೀವನವನ್ನು ತೃಪ್ತಿಯಿಂದ ಕಳೆದೆವು ಎಂಬ ಸಂತೃಪ್ತಿಯನ್ನಾದರು ಹೊಂದಬಹುದು.

ಷಕೀಬ್ ಎಸ್ ಕಣದ್ಮನೆ ನವಿಲೇಹಾಳ್.
ಸಂಶೋಧನಾರ್ಥಿ
ಕನ್ನಡ ವಿಶ್ವವಿದ್ಯಾಲಯ ಹಂಪಿ
ಸಂಚಾರಿ: 9743930178

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version