ದಿನದ ಸುದ್ದಿ
ಉಕ್ರೇನ್ – ರಷ್ಯ ಸಮರ | ಮಗನ ಸಾವಿಗೆ ಸರ್ಕಾರವೇ ಕಾರಣ : ಮೃತ ವಿದ್ಯಾರ್ಥಿ ನವೀನ್ ತಂದೆ
ಸುದ್ದಿದಿನ,ಹುಬ್ಬಳ್ಳಿ: ರಾಯಭಾರಿ ಕಚೇರಿಗೆ ನಮ್ಮ ಮಗ ಪೋನ್ ಮಾಡಿದರೂ ಅಲ್ಲಿಂದ ಯಾವುದೇ ರೀತಿಯ ಸರಿಯಾದ ಪ್ರತಿಕ್ರಿಯೆ ಸಿಗಲಿಲ್ಲ. ನಮ್ಮ ಮಗನ ಸಾವಿಗೆ ಈ ಸರ್ಕಾರವೇ ಕಾರಣ ಎಂದು ವಿದ್ಯಾರ್ಥಿ ನವೀನ್ ಗ್ಯಾನಗೌಡರ್ ತಂದೆ ಶೇಖರಗೌಡ ಎಂದು ಗದ್ಗದಿಸಿದರು.
ಮಾದ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ಮಗನ ಜೊತೆಗೆ ಬೆಳಗ್ಗೆ 10 ಗಂಟೆಗೆ ಮಾತನಾಡಿದ್ದೇನೆ. ನಂತರ ಫೋನ್ ಮಾಡಿದಾಗ ರಿಂಗ್ ಆಯಿತು, ಆದರೆ ಕರೆ ಸ್ವೀಕರಿಸಲಿಲ್ಲ. ಇದಾದ ಕೆಲವೇ ಗಂಟೆಯಲ್ಲಿ ನಮ್ಮ ಮಗನ ಸಾವಿನ ಸುದ್ದಿಯನ್ನ ರಾಯಭಾರಿ ಕಚೇರಿ ತಿಳಿಸಿತು. ನಮ್ಮ ಮಗನ ಸಾವಿಗೆ ಈ ಸರ್ಕಾರವೇ ಕಾರಣ. ನಮ್ಮ ಮಗ ರಾಯಭಾರಿ ಕಚೇರಿಗೆ ಪೋನ್ ಮಾಡಿದ್ರೆ ಅಲ್ಲಿಂದ ಸರಿಯಾದ ಪ್ರತಿಕ್ರಿಯೆ ಸಿಗಲಿಲ್ಲ.
ಅಲ್ಲಿಂದ ಪ್ರತಿಕ್ರಿಯೆ ಬಂದಿದ್ದರೆ ನಮ್ಮ ಸಾಯುತ್ತಿರಲಿಲ್ಲ. ನಾವು ನಮ್ಮ ಮಗನನ್ನ ಕಳೆದುಕೊಂಡಿದ್ದೇವೆ. ನಮಗಾದ ಸ್ಥಿತಿ ಬೇರೆ ಪೋಷಕರಿಗೆ ಆಗೋದು ಬೇಡ. ಆ ಮಕ್ಕಳನ್ನಾದ್ರೂ ಸರ್ಕಾರ ಸುರಕ್ಷಿತವಾಗಿ ಕರೆತರಲಿ ಎಂದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243