ಅಂತರಂಗ
‘ಪ್ರೀತಿಯಲ್ಲಿ ಗೆದ್ದವ ಚುನಾವಣೆಯಲ್ಲಿ ಗೆದ್ದು ಗದ್ದುಗೆಯೇರಿದ’..!
- ಷಕೀಬ್ ಎಸ್ ಕಣದ್ಮನೆ ನವಿಲೇಹಾಳ್
ಜೀವನ ಎಂಬುದು ಕಲಿಕಾ ತೋಟ, ಪ್ರತಿದಿನ ಹೊಸ ಚಿಗುರಿನ ತರಹ ನಮ್ಮ ಸುತ್ತ-ಮುತ್ತಲಿನ ಪರಿಸರದಲ್ಲಿ ನಮ್ಮ ಮಾನಸಿಕ ಸ್ಥಿತಿಗಳಲ್ಲಾ ಹೊಸ ಹೊಸ ಚಿಗುರಿನಿಂದ ಕೂಡಿರುತ್ತವೆ, ಈ ತೆರನಾದ ಕಲಿಕಾ ತೋಟದಲ್ಲಿ ನಮ್ಮಗಳ ಗಿಡವು ಬಹುಪಾಲು ಪ್ರೀತಿ ಎಂಬ ನೀರುಣಿಸುತ್ತಾ ಬೆಳೆಯಲು ಸಹಕಾರಿಯಾಗುತ್ತದೆ, ಜಗತ್ತಿನಲ್ಲಿ ಪ್ರೀತಿ ಇಲ್ಲದ ಮನಸ್ಸು ಇಲ್ಲದಿರುವುದಿಲ್ಲ ಎಂಬುದು ಅಸಾಧ್ಯದ ಮಾತು ಎಂದರೆ ತಪ್ಪಾಗಲಾರದು.
ಇಲ್ಲಿ ಹೇಳಲ್ಹೊರಟಿರುವುದು ಈ ಪ್ರೀತಿ ಬಗೆಗಿನ ಒಂದು ವಿಚಿತ್ರ ಮತ್ತು ಸಚಿತ್ರವಾದ ಸಂಗತಿ ಇದು ಬರಿಯ ಯೌವನದಲ್ಲಿನ ಪ್ರೀತಿಯ ಪರಿಪಾಡು ಎನ್ನಲಾಗದು ಏಕೆಂದರೆ ವೃತ್ತಿಯಲ್ಲಿ ಒಬ್ಬ ವ್ಯವಸಾಯದ ಹಿನ್ನಲೆಯನ್ನೊಳಗೊಂಡ ‘ಸಂಪತ್’ ಎಂಬ ಯುವಕನ ತಂದೆ ಜಮೀನಿನಲ್ಲಿ ಕೆಲಸ ಮಾಡುತ್ತಾ ಯಾರ ಗೋಜಿಗೂ ಹೋಗದೆ ತಾನಾಯ್ತು ತನ್ನ ಪಾಡಾಯ್ತು ಎಂಬ ಸರಳ ಸಜ್ಜನಿಕೆಯ ವ್ಯಕ್ತಿಯಾಗಿ ಊರಿನಲ್ಲಿ ಕಾಣಿಸಿಕೊಂಡವರು ಇವರಿಗೆ ಮೂರು ಹೆಣ್ಣು ಮಕ್ಕಳೊಟ್ಟಿಗೆ ಜನಿಸಿದ ಸುರ ಸುಂದರ ಸುಪುತ್ರನೇ ಸಂಪತ್ ಎಂಬ ಯುವಕ.
ಇವನನ್ನು ಬಹುಪಾಲು ರಾಜಕುಮಾರನಂತೆ ಸಾಕಿದ್ದರು ಸಂಪತ್ ಕೂಡ ಚಿಕ್ಕಂದಿನಿಂದಲೂ ಅಷ್ಟೆ ಚೂಟಿಯಾದವನು ಶಾಲಾ ಹಂತವಾದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದ ಹಂತದಲ್ಲಿ ಶಾಲೆಯ ನೆಚ್ಚಿನ ವಿದ್ಯಾರ್ಥಿಯಾಗಿ ತಾಲ್ಲೂಕಿಗೆ ಉತ್ತಮವಾದ ಅಂಕಗಳೊಂದಿಗೆ ಉನ್ನತ ಶ್ರೇಣಿಯೊಂದಿಗೆ ತೇರ್ಗಡೆಯಾಗಿ ಊರಿಗೆ ಕೀರ್ತಿತಂದವನು, ಮುಂದೆ ಪದವಿ ಪೂರ್ವ ಮತ್ತು ಪದವಿ ಹಂತವನ್ನು ಮುಗಿಸಿದ ಸಂಪತ್ ಡಿ,ಇಡಿ ಪದವಿದರನಾಗಿ ಶಿಕ್ಷಕ ವೃತ್ತಿ ಜೀವನಕ್ಕೆ ಕಾಲಿಡಬೇಕಿದ್ದವನಿಗೆ ಸರಕಾರ ಯಾವುದೇ ತರಹದ ಹುದ್ದೆಗಳನ್ನೂ ಕರೆಯದ ಸಂದರ್ಭ ಸಂಪತ್ ಮಾನಸಿಕ ಸ್ಥಿತಿ ಸ್ವಲ್ಪ ಮಟ್ಟಿಗೆ ಏರುಪೇರಾಗಿರುತ್ತದೆ
ಈ ಮಧ್ಯ ಮೊಬೈಲ್ ಎಂಬುದು ಉತ್ತಮವಾದ ಸ್ನೇಹಿತನಾಗಿ ತನ್ನ ಮನಸ್ಸಿಗೆ ಹೊಗ್ಗಿಕೊಡಿರುತ್ತದೆ ಹೀಗಿರುವಾಗ ಒಮ್ಮೆ ಅಚಾನಕ್ ಆಗಿ ಒಂದು ಅಪರಿಚಿತ ಸಂಖ್ಯೆಯಿಂದ ಕರೆ ಬರುತ್ತದೆ ಆದರೆ ಅದು ತಪ್ಪಿದ ಕರೆಯಾಗಿರುತ್ತೆ (ಮಿಸ್ ಕಾಲ್) ಕೆಲಸವಿಲ್ಲದೆ ಖಾಲಿ ಕೂತಿದ್ದ ಸಂಪತ್ಗೆ ಈ ಕರೆ ಒಂದು ಬ್ರೇಕ್ ತರ ಯಾವುದಿರಬಹುದು ಈ ನಂಬರ್ ಎಂದು ಮನಸ್ಸಿನಲ್ಲಿ ಕ್ಯರ್ಯಾಸಿಟಿ ಹುಟ್ಟತೊಡಗಿ ಪಟ್ಟನೆ ಮೊಬೈಲ್ ಎತ್ತಿಕೊಂಡು ಆ ನಂರ್ಗೆ ಕರೆ ಮಾಡಿದಾಗ ಸಂಪತ್ ಮೂಖ ವಿಸ್ಮಿತನಾಗುತ್ತಾನೆ.
ಯಾಕಂದ್ರೆ ಆ ಕರೆಯಲ್ಲಿದ್ದ ಧ್ವನಿ ಸುಂದರ ಸುಮಧುರವಾದ ಕೋಗಿಲೆಗೂ ಮಿಗಿಲಾದ ವಾಯ್ಸ್ ಸಂಪತ್ ಕಿವಿಗಳಿಗೆ ಬೀಳುತ್ತಿದ್ದಂತೆ ತಟ್ಟನೆ ಕಿವಿ ನಿಮಿರಿ ಮನಸ್ಸು ಅಲ್ಲೋಲ ಕಲ್ಲೋಲವಾಗಿ ‘ಲವ್ ಈಸ್ ಬ್ಲೈಂಡ್’ ಅನ್ನೋ ಮಾತಿನಂತೆಯೇ ನಮ್ಮ ಸಂಪತ್ಗೆ ಆ ಮೊದಲ ಕರೆಯ ಹಾಯ್ ಎಂಬ ಮಾತಿನೊಂದಿಗೆ ಪ್ರೇಮಾಕುರವಾಗಿಯೇ ಬಿಡ್ತು.
ಮೊದ ಮೊದಲು ಪ್ರೀತಿ ಇಲ್ಲದಂತೆ ನಟಿಸಿದರೂ ನಂತರದಲ್ಲಿ ಸಂಜುಗೂ ಸಂಪತ್ ಮೇಲಿನ ಪ್ರೇಮ ಸ್ಫೊಟವಾಯ್ತು, ಅಲ್ಲಿಂದ ಶುರುವಾದ ಮೊಬೈಲ್ ಪ್ರೀತಿಯೂ ಒಮ್ಮೆಯೂ ಮುಖ ನೋಡದ ಸಂಜು ಮತ್ತು ಸಂಪತ್ ಇಬ್ಬರು ನೇರ ಭೇಟಿಗಾಗಿ ಒಂದು ದಿನ ಗೊತ್ತುಮಾಡಿಕೊಂಡರು ಅದರಂತೆ ಭೇಟಿ ಮಾಡಿದರು ಅದುವೆ ‘ಕುರುಡು ಪ್ರೀತಿಯ ಮೊದಲ ಭೇಟಿ’, ಇಲ್ಲಿಂದ ಇವರಿಗೆ ಪ್ರತಿದಿನ ಸಂಕಷ್ಟಗಳ ಸರಮಾಲೆ ಶುರುವಾದವು ಅದಾಗಲೆ ಇವರ ಈ ಪ್ರೀತಿ ಇಬ್ಬರ ಮನೆಯಲ್ಲೂ ಗೊತ್ತಾಗಿತ್ತು. ಸಂಪತ್ ಮನೆಯಲ್ಲಿ ಅಷ್ಟು ಕಿರಿಕಿರಿ ಇಲ್ಲವಾದರು ಸಂಜು ಮನೆಯಲ್ಲಿ ಇದೊಂದು ದೊಡ್ಡ ಸಮಸ್ಸೆಯಾಗಿ ಪರಿಣಮಿಸಿತ್ತು. ಅಡೆತಡೆ ಇಲ್ಲದ ಪ್ರೀತಿಗೆ ಸ್ಟೇಟಸ್ ಎಂಬುದು ಅಡ್ಡಿಯಾಗಿ ಪ್ರೇಮಿಗಳನ್ನ ವಿರಹಿಗಳಾಗಿಸಿತ್ತು,
ಇದೆಲ್ಲದರ ಮಧ್ಯೆ ಸಂಪತ್ ಜೊತೆ ಸಂಜು ಕೊನೆವರೆಗೂ ಜೀವಿಸಬೇಕೆಂಬ ಹಂಬಲದಿಂದ ಮನೆಬಿಟ್ಟು ಸಂಪತ್ ಊರಿಗೆ ಬರುವಳು ಮನೆಯಲ್ಲಿ ಮಗಳು ಕಾಣದಿರುವುದ ತಿಳಿದ ಸಂಜುವಿನ ತಂದೆ ವೃತ್ತಿಯಲ್ಲಿ ಪೋಲಿಸ್ ಅಧಿಕಾರಿಯಾಗಿದ್ದ ಅಷ್ಟೇ ಅಲ್ಲದೆ ಇಡೀ ಕುಟುಂಬಕ್ಕೆ ಕುಟುಂಬವೆ ಪೋಲಿಸ್ ಅಧಿಕಾರಿಗಳಾಗಿದ್ದರು ಈ ಅಧಿಕಾರದಿಂದ ಸಂಪತ್ ಮೇಲೆ ಸಂಜುವಿನ ಕಿಡ್ನಾಪ್ ದೂರು ನೀಡಿದರು.
ಈ ವಿಷಯ ತಿಳಿದಂತೆ ಸಂಪತ್ ಜೊತೆ ಇದ್ದ ಊರಿನ ಕೆಲವರು ಪೋಲಿಸ್ ಫ್ಯಾಮಿಲಿ ಸಹವಾಸ ನಮ್ಗಾಕೆ ಏನಾದ್ರೂ ಮಾಡ್ತರೆ ಈ ಪೋಲಿಸ್ ಅವರು ಎನ್ನುತ್ತ, ಸಂಪತ್ಗೆ ಸಹಾಯ ಮಾಡಲು ಯಾರು ಮುಂದೆ ಬರುವುದಿಲ್ಲ ಈ ಪರಿಸ್ಥಿತಿಯಲ್ಲಿ ಸಂಪತ್ ಒಬ್ಬನೇ ಈ ಸಮಸ್ಸೆ ಎದುರಿಸಿದನಾದರು ಅಡೆತಡೆಗಳು ವಿಪರೀತವಾಗಿದ್ದವು,
ಇದೆಲ್ಲದರ ನಡುವೆ ಮತ್ತೆ ಸಂಜು ಮತ್ತು ಸಂಪತ್ ಯಾರಿಗೂ ಗೊತ್ತಾಗದಂತೆ ಸಂಜುವಿನ ಸ್ಟೇಟ್ಮೆಂಟಿನೊಂದಿಗೆ ರಿಜಿಸ್ಟರ್ ಮ್ಯಾರೇಜ್ ಆಗಿ ಊರಿಗೆ ಬಂದರಾದರೂ ಇಲ್ಲಿಗೆ ನೆಮ್ಮದಿ ಬಂದೊದಗಲಿಲ್ಲ ಸಂಪತ್ನ ಮನೆಯವರೆಲ್ಲರೂ ದಿನ ಕಿರಿಕಿರಿ ಮಾಡುತ್ತಾ ಇವನಿಗೆ ಅಂಗಿಸುತ್ತಿದ್ದರು ಈ ನಡುವೆ ಕೆಲಸ ಇಲ್ಲದೇ ಖಾಲಿ ಇದ್ದ ಸಂಪತ್ ಕೂಲಿ ಕೆಲಸಕ್ಕೆ ಹೋಗಲೂ ಶುರುಮಾಡುತ್ತಾನೆ.
ಹೀಗೆ ಸ್ನೇಹಿತರೊಟ್ಟಿಗೆ ಸೇರಿ ಕೆಲವು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಜೀವನ ಸಾಗಿಸುತ್ತಿರುವಾಗ ಸರಕಾರ ಗ್ರಾಮ ಪಂಚಾಯ್ತಿ ಚುನಾವಣೆಯ ಅದಿಸೂಚನೆ ಹೊರಡಿಸುವುದು ಊರಿನ ಕೆಲ ಹಿರಿಯರ ಸಲಹೆಯಂತೆ ಸಂಪತ್ ತನ್ನೂರಿನ ಒಂದು ವಾರ್ಡ್ನ ಅಭ್ಯಾರ್ಥಿಯೆಂದು ತೀರ್ಮಾನಿಸಿದರು ಆದರೆ ಅಲ್ಲಿ ಮಹಿಳಾ ಅಭ್ಯಾರ್ಥಿ ಬಂದ ಕಾರಣ ಸಂಜುವಿನ ಹೆಸರು ಕೇಳಿ ಬರುತ್ತದೆ ಇದರಂತೆ ಚುನಾವಣೆಯಲ್ಲಿ ಭರ್ಜರಿ ಬಹುಮತದೊಂದಿಗೆ ಗೆಲುವು ಕೊಟ್ಟ ಜನತೆ ಮುಂದೆ ಅಧ್ಯಕ್ಷ ಸ್ಥಾನವನ್ನು ಸಂಜುಳನ್ನ ಆಯ್ಕೆ ಮಾಡುತ್ತಾರೆ.
ತಾನು ಮುಖ ನೋಡದೇನೆ ಪ್ರೀತಿಸಿ ಮದುವೆಯಾದ ತನ್ನೊಡತಿಯನ್ನ ಅಧ್ಯಕ್ಷಳನ್ನಾಗಿಸಿ ತನ್ನ ಪ್ರೀತಿಯನ್ನು ಮೇಲ್ಮಟ್ಟಕ್ಕೇರಿಸಿದ ಈ ಯುವಕನ ಸಾಧನೆಯು ಸುಲಭದ ಮಾತಲ್ಲ. ‘ಪ್ರೀತಿಯಲ್ಲಿ ಗೆದ್ದವ ಚುನಾವಣೆಯಲ್ಲಿ ಗೆದ್ದು ಗದ್ದುಗೆಯೇರಿದ’.
ಎಲ್ಲಾ ಕೆಟ್ಟ ಪರಿಸ್ಥಿತಿಗಳಿಗೆಲ್ಲಾ ಸರಿಯದ ಸಮಯಕ್ಕೆ ಉತ್ತರಿಸುತ್ತಾ ಪ್ರೀತಿ ಎಂಬ ಹೆಸರಲ್ಲಿ ಮೋಹಕ್ಕೆ ಬಲಿಯಾಗುವವರಿರುವವರ ಜೊತೆ ಸಂಪತ್ ಮತ್ತು ಸಂಜು ಇಬ್ಬರೂ ತಮ್ಮ ಪ್ರೀತಿಯನ್ನು ಪಡೆಯುವಲ್ಲಿ ಸಕ್ಸಸ್ ಆಗಿದ್ದಾರೆ ಇವರಿಗೀಗ ಸುಂದರವಾದ ಮೂರು ಮಕ್ಕಳು, ಎರಡು ಹೆಣ್ಣು, ಒಂದು ಗಂಡು ಮಗು. ಸಂಪತ್ ಸಂಜು ಸುಖಕರವಾದ ಸಂಸಾರದಲ್ಲಿ ಸಮಾಜ ಸೇವೆಯನ್ನು ಮಾಡಲ್ಹೊರಟ್ಟಿದ್ದಾರೆ ಇವರಿಗೆ ಇವರ ಕುಟುಂಬಕ್ಕೆ ಒಳ್ಳೆಯದಾಗಲಿ ಎಂದು ಹಾರೈಸುತ್ತಾ..
ಇಲ್ಲಿ ಪ್ರೀತಿ, ಪ್ರೇಮ, ಆಸೆ, ಆಕಾಂಕ್ಷೆಗಳು ಅಪ್ಪ, ಅಮ್ಮ, ಕುಟುಂಬದ ಸದಸ್ಯರು ಊರು, ಊರಿನ ಜನರ ಮನಸ್ಥಿತಿ ಇದೆಲ್ಲದರ ನಡುವೆ ತನ್ನ ಒಂದು ಪಾಸಿಟಿವ್ ಥಿಂಕಿಂಗ್ ಎಂಬುದು ಸಂಪತ್ ಎಂಬ ಯುವಕನ ಜೀವನದ ದಿಕ್ಕನ್ನೇ ಸೀರಿಯಸ್ ಆಗಿ ಬದಲಿಸುತ್ತದೆ, ಇರುವ ಕಷ್ಟದ ಜೊತೆ ಬರುತಿದ್ದ ಕಷ್ಟಗಳನ್ನೇಲ್ಲಾ ಎದರಿಸುತ್ತಾ ಬದಲಾದ ಸಂಪತ್, ಪ್ರೀತಿ ಮಾಡಿ ಸಾಯುವ ಕೆಲ ಯುವಕ ಯುವತಿಯರಿಗೆ ಒಂದು ನಿದರ್ಶನವಾಗಿದ್ದಾನೆ ಎಂದು ಹೇಳುತ್ತಾ ಈ ಬರಹಕ್ಕೆ ಪೂರ್ಣವಿರಾಮವನ್ನಿಡುತ್ತಿದ್ದೇನೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243