ದಿನದ ಸುದ್ದಿ
ವಿಜಯಪುರ : ವಿದ್ಯುತ್ ಶಾರ್ಟ್ ಸರ್ಕೂಟ್ ನಿಂದ ಏಳು ಎಕರೆ ಕಬ್ಬಿಗೆ ಬೆಂಕಿ..! ವೀಡಿಯೋ ನೋಡಿ
ಸುದ್ದಿದಿನ,ವಿಜಯಪುರ : ಜಿಲ್ಲೆಯ ನಿಡಗುಂದಿ ತಾಲೂಕಿನ ಯಲಗೂರ ಕ್ರಾಸ್ ಬಳಿ ಜಮೀನಿನಲ್ಲಿ ವಿದ್ಯುತ್ ಶಾರ್ಟ್ ಸರ್ಕೂಟ್ ನಿಂದ ಏಳು ಎಕರೆ ಕಬ್ಬಿಗೆ ಬೆಂಕಿ ಬಿದ್ದಿರುವ ಘಟನೆ ನಡೆದಿದೆ.
ರೈತ ಚಂದ್ರಪ್ಪ ದಳವಾಯಿ ಎಂಬುವರ ಕಬ್ಬಿನ ಗದ್ದೆಗೆ ಬೆಂಕಿಬಿದ್ದಿದ್ದು ಬೆಂಕಿ ನಂದಿಸಿದ್ದಾರೆ ಮುದ್ದೇಬಿಹಾಳ ಅಗ್ನಿಶಾಮಕ ಠಾಣೆಯ ಸಿಬ್ಬಂದಿ. ಈ ಹಿನ್ನೆಲೆ ಸುಮಾರು 7 ಲಕ್ಷ ರೂಪಾಯಿ ಬೆಳೆ ಹಾನಿಯಾಗಿದೆ. ಇದರಿಂದ ಕಂಗಾಲಾಗಿದ್ದಾರೆ ರೈತ ಚಂದ್ರಪ್ಪ ದಳವಾಯಿ. ನಿಡಗುಂದಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401