ರಾಜಕೀಯ

ಬಳ್ಳಾರಿ ಲೋಕ‌ಸಭಾ ಉಪಚುನಾವಣೆ ಮತ‌‌ ಎಣಿಕೆಗೆ ಕ್ಷಣಗಣನೆ : 144 ಸೆಕ್ಷನ್ ಜಾರಿ

Published

on

ಸುದ್ದಿದಿನ,ಬಳ್ಳಾರಿ : ಜಿಲ್ಲಾಧಿಕಾರಿ ರಾಮ್ ಪ್ರಸಾದ್ – ಎಸ್.ಪಿ. ಅರುಣ್ ರಂಗರಾಜನ್ ಜಂಟಿ ಸುದ್ದಿಗೋಷ್ಠಿ, ಲೋಕಸಭಾ ಉಪ ಚುನಾವಣೆ ಮತದಾನ ಹಿನ್ನೆಲೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ಕ್ಷೇತ್ರದಾದ್ಯಂತ 61.12ರಷ್ಟು ಮತದಾನವಾಗಿದೆ, ವಿಕಲಚೇನರಿಗೆ ವಿಶೇಷ ವ್ಯವಸ್ಥೆ ಮಾಡಲಾಗಿತ್ತು, ಕೌಂಟಿಂಗ್ ಸಿದ್ದತೆ ಮಾಡಿಕೊಳ್ಳಲಾಗಿದೆ, 120 ಟೇಬಲ್ ಗಳಿದ್ದು 8 ಕೊಠಡಿಯಲ್ಲಿ ವ್ಯವಸ್ಥೆ ಮಾಡಲಾಗಿದೆ,
ಪ್ರತಿಯೊಂದು ಟೇಬಲ್ ಗೂ ಅಬ್ಸರ್ವರ್ ಇರುತ್ತಾರೆ, 8 ಗಂಟೆಯಿಂದ ಮತ ಎಣಿಕೆ ಆರಂಭಬಾಗಿ 12 ಗಂಟೆ ಹೊತ್ತಿಗೆ ಪೂರ್ಣಗೊಳ್ಳಬಹುದು‌ ಎಂದು ಜಿಲ್ಲಾಧಿಕಾರಿ ಹೇಳಿದರು.

ನಂತರ ಮಾತನಾಡಿದ ಅವರು 14 ರಿಂದ 16 ಸುತ್ತಿನಲ್ಲಿ ಮತ ಎಣಿಕೆ ನಡೆಯಲಿದೆ, ಸಿಸಿ ಟಿವಿ ವ್ಯವಸ್ಥೆ ಮಾಡಲಾಗಿದೆ, ಮೆರವಣಿಗೆಗೆ ಅವಕಾಶವಿಲ್ಲ, ಪಟಾಕಿ ಸಿಡಿಸುವಂತಿಲ್ಲ, ನಿಯಮ ಉಲ್ಲಂಘಿಸಿದರೆ ಪ್ರಕರಣ ದಾಖಲಿಸಲಾಗುವುದು ಎಂದರು.

ಇದೇ ಸಂದರ್ಭದಲ್ಲಿ ಎಸ್.ಪಿ ಮಾತನಾಡಿ, ವಿಶೇಷ ಭದ್ರತಾ ವ್ಯವಸ್ಥೆ ಮಾಡಲಾಗಿದೆ, 5 ಹೆಚ್ಚುವರಿ ಕೆಎಸ್ಸಾರ್ಪಿ ತುಕಡಿಯನ್ನು ನಿಯೋಜನೆ ಮಾಡಲಾಗಿದೆ, ಮೂರು ಶಿಫ್ಟ್ ನಲ್ಲಿ ಭದ್ರತೆ ‌ನೀಡಲಾಗಿದೆ, 500ಕ್ಕೂ ಹೆಚ್ಚು ಪೊಲೀಸ್ ರನ್ನು ನಿಯೋಜಿಸಲಾಗಿದೆ, ಕೌಂಟಿಂಗ್ ಸೆಂಟರ್ ಸುತ್ತಲೂ 144 ಸೆಕ್ಷನ್ ಜಾರಿಮಾಡಲಾಗಿದೆ,ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version