ಭಾವ ಭೈರಾಗಿ

ಕವಿತೆ | ಮತ್ತೊಮ್ಮೆ ಗಾಂಧಿ

Published

on

  • ದಿವಾಕರ್. ಡಿ ಮಂಡ್ಯ

ತ್ತೊಮ್ಮೆ ಗಾಂಧಿ
ನೆನಪಿಗೆ ಬಂದ
ಅಹಿಂಸೆಯೇ ಗೆಲುವೆಂದ;
ಬೆತ್ತಲಿನ ಮಡಿಯ ಅಚ್ಚ
ಬಿಳುಪಿನ ವಸ್ತ್ರದ ನೊಡೋಕೆ ಚಂದ;

ದಟ್ಟ ದರಿದ್ರರ ಬಾಳಿಗೆ
ಹೊಸ ಆಶಾಕಿರಣ ತಂದ
ನಾವೆಲ್ಲರೂ ಸಮಾನರೆಂದ;
ಸಕಲರನ್ನು ಗೌರವಿಸಿ ಶತೃಗಳನ್ನು
ಕ್ಷಮಿಸಿ ಸಹೃದತೆಯ ಮೆರೆಯಿರೆಂದ;

ದೀನ ದಲಿತರ ಅಸೂಯಗೆ
ಕೊನೆಯೇ ಇಲ್ಲವೆಂದು
ಅಸ್ಪೃಶ್ಯತೆ ಶಾಪವೆಂದ;
ನಾವೆಲ್ಲರೂ ಭಾರತೀಯರು
ಧರ್ಮ ಜಾತಿ ಮೇಲು ಕೀಳು
ಕೊನೆಗಾಣಿಸಬೇಕೆಂದ:

ಬುದ್ಧ- ಬಸವಣ್ಣ, ಗಾಂಧಿ- ಅಂಬೇಡ್ಕರ್ ಸಮಾನತೆಯ
ಹರಿಕಾರರೆಂದ, ಹರಿದು ಹಂಚಿ
ಹೋದ ಮನುಜರೆದೆಯಲಿ
ಮಾನವೀಯತೆ ಬೆಳೆಯಲಿ ಎಂದ;

ದೇಶದಲ್ಲಿ ಅಬಲೆಯರ ಕಗ್ಗೊಲೆ
ಸಹಿಸದಿರಿ ಎಂದ ಸರ್ಕಾರವೇ ಕಣ್ಮುಚ್ಚಿ ಕುಳಿತರೇ ಬಾಯಿ
ಮುಚ್ಚಿಕೊಂಡಿರದಿರಿ ಎಂದ
ಹಿಂಸೆಗೆ ಪ್ರತಿಹಿಂಸೆ ಔಷದವಲ್ಲವೆಂದ;

ಮತ್ತೊಮ್ಮೆ ಗಾಂಧಿ ನೆನಪಿಗೆ
ಬಂದ ಹಿಂಸೆಯ ಆರಾಧಕರ
ಶುಭಾಶಯ ಕೇಳೋದೆ ಚಂದ;
ಹಾರ ತುರಾಯಿ ಸಮಾಧಿ ಮೇಲೆ
ಕಪಟಿ ದ್ಯಾನಸಕ್ತನಂತೆ ಕೈ ಮುಗಿಯೋದು ನೋಡೋಕೆ ಚಂದ;

ಮತ್ತೊಮ್ಮೆ ಗಾಂಧಿ
ನೆನಪಿಗೆ ಬಂದ;
ಮುಂದಿನ ಹುಟ್ಟು ಹಬ್ಬಕ್ಕಾದರೂ
ಭಾರತೀಯರ ಬದುಕನ್ನು ಸಿಹಿ ಮಾಡಿರೆಂದು ಹೋದ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version