ದಿನದ ಸುದ್ದಿ
ಆನೆಯನ್ನು ಕುಣಿಯಲು ಆಹ್ವಾನಿಸಿದ ಡ್ರ್ಯಾಗನ್ : ಪಿ ಚಿದಂಬರಂ ಅವರ ವಿಶೇಷ ಬರಹ
ಕಳೆದ ವಾರವಷ್ಟೇ ನಾವು ಭಾರತದ ಭೌಗೋಳಿಕ ಪ್ರದೇಶಗಳ ಬಗ್ಗೆ ಇನ್ನಷ್ಟು ತಿಳಿದುಕೊಂಡೆವು. ನಮಗೇ ಗೊತ್ತಿಲ್ಲದೆ ದೇಶದ ಭೂಪಟದಲ್ಲಿರುವ ಊರುಗಳ ಹೆಸರನ್ನು ಕೇಳಿದ್ದೆವು. ಗಲ್ವಾನ್ ಕಣಿವೆ, ಪ್ಯಾಂಗೋಂಗ್, ಗೊರ್ಗಾ ಇವೇ ಮೊದಲಾದ ಸ್ಥಳಗಳ ಬಗ್ಗೆ ನಾವು ಯಾವತ್ತಾದರೂ ಹುಡುಕಿದ್ದೆವಾ? ಈ ಪ್ರದೇಶಗಳ ಹೆಸರು ಇನ್ಮುಂದೆ ನಮಗೆ ಬಾಯಿ ಪಾಠವಾಗಲಿದೆ.
ಒಳನುಸುಳುವಿಕೆ
ಭಾರತ-ಚೀನಾ ನಡುವಿನ ಸಂಬಂಧ ಹಳಸಿರುವುದನ್ನು ಮೇ 5ರಂದು ಪ್ಯಾಂಗಾಂಗ್ ಟಿಎಸ್ಒನಲ್ಲಿ ನಡೆದ ಘರ್ಷಣೆಯಿಂದ ಅರಿಯಬಹುದು. ಈದಿನದವರೆಗೂ ಉಭಯ ದೇಶಗಳ ನಡುವಿನ ಸಂಘರ್ಷ ಮುಂದುವರಿಯುತ್ತಲೇ ಬಂದಿದೆ. ಆದರೆ, ಚೀನಾ ಸೇನೆ ಭಾರತದ ಭೂಪ್ರದೇಶದೊಳಗೆ ಬಂದಿದೆ ಎಂಬುದನ್ನು ಸರ್ಕಾರ ಒಪ್ಪಿಕೊಳ್ಳಲು ಸಿದ್ಧವಿಲ್ಲ.
ಚೀನಾ ಸೇನಯು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಗುಲ್ವಾನ್, ಪ್ಯಾಂಗಾಂಗ್ ಟಿಎಸ್ಒ ಹಾಗೂ ಲಡಾಖ್ನ ಗೊರ್ಗಾ ಪ್ರದೇಶಕ್ಕೆ ನುಗ್ಗಿದೆ. ಲಡಾಖ್ನಲ್ಲಿರುವ ಗಲ್ವಾನ್, ಸಿಕ್ಕಿಂನ ನಕು ಲಾ ಪ್ರದಶಗಳನ್ನು ಈವರೆಗೆ ಚೀನಾ ವಿವಾದಿತ ಪ್ರದೇಶ ಎಂದು ಘೋಷಿಸಿಲ್ಲ. ಈ ಹಿಂದೆ ಈ ಪ್ರದೇಶಗಳಿಗಾಗಿ ಯಾವಾಗಲೂ ಭಾರತ- ಚೀನಾ ನಡುವೆ ಬಿಕ್ಕಟ್ಟು ಉದ್ಭವಿಸಿಲ್ಲ. ಇದರಿಂದ ತಿಳಿದುಬರುವ ಒಂದೇ ವಿಷಯವೆಂದರೆ ಚೀನಾ ತನ್ನ ವಿವಾದಿತ ಪ್ರದೇಶಗಳನ್ನು ವಿಸ್ತರಿಸುತ್ತಾ ಬರುತ್ತಿದೆ.
ಉಭಯ ದೇಶಗಳ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಈ ಬೃಹತ್ ಪ್ರದೇಶವನ್ನು ತನ್ನದೆಂದು ಚೀನಾ ತನ್ನದೆಂದು ಹೇಳಿಕೊಂಡರೆ, ಭಾರತ ತನ್ನದೆಂದು ಹೇಳಿಕೊಳ್ಳುತ್ತಿದೆ. ಇದೇ ಮೊದಲಬಾರಿಗೆ ಉಭಯ ದೇಶಗಳ ಸೇನಾ ಮುಖ್ಯಸ್ಥರ ನಡುವೆ ನಡೆಯುತ್ತಿದ್ದ ಶಾಂತಿ ಮಾತುಕತೆ ವಿಶೇಷ ರಾಜತಾಂತ್ರಿಕ ಪ್ರತಿನಿಧಿಗಳ ನಡುವೆ ನಡೆದಿದೆ.
ಪೂರ್ಣ ಪ್ರಮಾಣದ ಯುದ್ಧವಲ್ಲ
ಭಾರತ ಹಾಗೂ ಚೀನಾ ಪೂರ್ಣ ಪ್ರಮಾಣದ ಯುದ್ಧ ಮಾಡಲು ಈಗ ಸಿದ್ಧವಾಗಿವೆ ಎಂದು ನಂಬುವುದು ಕಷ್ಟ. ಈ ಸಮಯದಲ್ಲಿ ಗಡಿ ಸಮಸ್ಯೆ ಒಂದು ತಲೆನೋವೇ ಹೊರತು ಇನ್ನೇನೂ ಅಲ್ಲ. ಉಭಯ ದೇಶಗಳ ನಡುವಿನ ಗಡಿ ಬಿಕ್ಕಟ್ಟನ್ನು ನೋಡುವುದಾದರೆ 1962ರಲ್ಲಿ ನಡೆದ ಪೂರ್ಣ ಪ್ರಮಾಣದ ಯುದ್ಧ ನೆನಪಾಗುತ್ತದೆ. ಆ ಸಮಯದಿಂದ ಆಗಾಗ್ಗೆ ಗಡಿ ಸಮಸ್ಯೆ ಸೃಷ್ಟಿಯಾಗುತ್ತಲೇ ಇದೆ.
ಆದರೆ, ಮಾತುಕತೆಯಲ್ಲೇ ಅದು ಮುಗಿದುಹೋಗುತ್ತಿದೆ. ಈಗ ಕೊರೊನಾ ವಿರುದ್ಧ ಹೋರಾಡುತ್ತಿರುವ ಎರಡು ದೇಶಗಳು 2020-21ರ ವಿತ್ತೀಯ ವರ್ಷದಲ್ಲಿ ಆರ್ಥಿಕ ಸಮಸ್ಯೆ ಎದುರಿಸುವ ಭೀತಿಯಲ್ಲಿವೆ. ಹಾಗಾಗಿ ಎರಡೂ ದೇಶಗಳೂ ವಿಶ್ವದ ಯಾವುದೇ ದೇಶವನ್ನು ಎದುರುಹಾಕಿಕೊಳ್ಳದೇ ಶಾಂತ ರೀತಿಯಲ್ಲಿ ಇತ್ಯರ್ಥಮಾಡಿಕೊಳ್ಳಲು ನಿರ್ಧರಿಸುತ್ತವೆ.
ಚೀನಾಗೆ ತನ್ನ ಮಿಲಿಟರಿ ಸಾಮರ್ಥ್ಯದ ಬಗ್ಗೆ ಅಗಾಧವಾದ ವಿಶ್ವಾಸವಿದೆ. ಹಾಗೆಯೇ ಭಾರತಕ್ಕೂ ಕೂಡ. ಭಾರತ 1962ರಲ್ಲಿ ಶಸ್ತ್ರಾಸ್ತ್ರಗಳು, ಸೈನಿಕರ ಕೊರತೆ ಎದುರಿಸುತ್ತಿತ್ತು. ಆಗ ಚೀನಾ ಯುದ್ಧದಲ್ಲಿ ಗೆದ್ದಿದೆ ಎಂದು ಸ್ಪಷ್ಟವಾಗಿ ಹೇಳಿಕೊಂಡಿತ್ತು.
ಆದರೆ, ಇದೀಗ ಆ ಪರಿಸ್ಥಿತಿ ಇಲ್ಲ. ಚೀನಾದ ಸೇನಾ ತಜ್ಞರ ಪ್ರಕಾರ ಈಗಿರುವ ಪರಿಸ್ಥಿತಿಯಲ್ಲಿ ಚೀನಾ ಪೂರ್ಣ ಪ್ರಮಾಣದ ಯುದ್ಧ ಮಾಡಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಭಿನ್ನಾಭಿಪ್ರಾಯಗಳು-ಬಿಕ್ಕಟ್ಟು
ಭಾರತ ಚೀನಾ ನಡುವೆ ಜೂನ್ 6ರಂದು ಮಾತುಕತೆ ನಡೆದಿದೆ. ಆದರೆ, ಎರಡೂ ದೇಶಗಳ ರಾಜತಾಂತ್ರಿಕ ಪ್ರತಿನಿಧಿಗಳ ನಡುವೆ ಭಿನ್ನಾಭಿಪ್ರಾಯಗಳಿರುವುದು ಸ್ಪಷ್ಟವಾಗಿದೆ. ಈ ಭಿನ್ನಾಭಿಪ್ರಾಯಗಳೇ ಬಿಕ್ಕಟ್ಟಾಗಿ ಪರಿಣಮಿಸಿವೆ. ಮೇ.5ರಂದು ಲಡಾಖ್ನಲ್ಲಿ ಬಿಕ್ಕಟ್ಟು ಉದ್ಭವಿಸುವ ಮುನ್ನವೂ ಇದೇ ರೀತಿ ಭಿನ್ನಾಭಿಪ್ರಾಯಗಳಿದ್ದವು. ಆದರೆ ಆ ಪೈಕಿ ಗಲ್ವಾನ್ ಹಾಗೂ ನಕು ಲಾ ಪಾಸ್ ಸೇರ್ಪಡೆಗೊಂಡಿರಲಿಲ್ಲ.
ಗಡಿ ಬಿಕ್ಕಟ್ಟಿಗಿಂತ ವ್ಯಾಪಾರವೇ ಹೆಚ್ಚಾಯಿತಾ?
2018ರಲ್ಲಿ ವುಹಾನ್ ಹಾಗೂ 2019ರಲ್ಲಿ ಮಹಾಬಲಿಪುರಂನಲ್ಲಿ ಬಿಟ್ಟರೆ ಮೋದಿ ಹಾಗೂ ಕ್ಸಿ ಜಿನ್ಪಿಂಗ್ ಅವರು ಇನ್ಯಾವುದೇ ಮಾತುಕತೆಯಲ್ಲಿ ಪಾಲ್ಗೊಳ್ಳಲಿಲ್ಲ. ಭಾರತ, ಚೀನಾ ಎರಡೂ ದೇಶಗಳು ಮಾತುಕತೆ ವ್ಯಾಪಾರಕ್ಕಷ್ಟೇ ಸೀಮಿತವಾಗಿತ್ತೇ ಹೊರತು ಅದರ ಹೊರತಾದ ಇನ್ಯಾವುದೇ ಪ್ರಗತಿ ಸಾಧಿಸಲಿಲ್ಲ.
ಚೀನಾಗೆ ತನ್ನ ಉತ್ಪನ್ನಗಳ ಮಾರಾಟಕ್ಕೆ ಭಾರತದಂತಹ ದೇಶ ಬೇಕಾಗಿತ್ತು. ಭಾರತಕ್ಕೂ ಕಡಿಮೆ ಬೆಲೆಯಲ್ಲಿ ಅಗತ್ಯ ಉತ್ಪನ್ನಗಳನ್ನು ಪೂರೈಸಲು ಚೀನಾ ನೆರವು ಬೇಕಾಗಿತ್ತು. ಎರಡು ದೇಶಗಳ ನಡುವಿನ ಮಾತುಕತೆ ವ್ಯಾಪಾರಕ್ಕಷ್ಟೇ ಸೀಮಿತವಾಗಿ ಅದು ಗಡಿ ಬಿಕ್ಕಟ್ಟನ್ನು ತಲುಪಲಿಲ್ಲ. ಈ ಮಧ್ಯೆ ಚೀನಾ ತನ್ನ ರಾಜಕೀಯ ಪ್ರಭಾವ ಬೀರಲು ನೇಪಾಳವನ್ನು ಬಳಸಿಕೊಂಡರೆ, ಆರ್ಥಿಕತೆ ಬಿಗಿಗೊಳಿಸಲು ಶ್ರೀಲಂಕಾವನ್ನು ನೆಲೆಯಾಗಿಸಿಕೊಂಡಿತು.
ಈ ಪ್ರಕ್ರಿಯೆಯಲ್ಲಿ ಭಾರತವನ್ನು ಚೀನಾ ಕಡೆಗಣಿಸಿತು. ಭಾರತ ಈ ಮಧ್ಯೆ ಮಾಲ್ಡೀವ್ಸ್ ಜೊತೆಗಿನ ತನ್ನ ಸಂಬಂಧವನ್ನು ಗಟ್ಟಿಗೊಳಿಸಿಕೊಂಡಿತು. ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ತನ್ನ ಪ್ರದೇಶದಲ್ಲಿ ಅಕ್ರಮವಾಗಿ ಸಂಚರಿಸುತ್ತಿರುವುದನ್ನು ಭಾರತ ಆಕ್ಷೇಪಿಸುತ್ತಲೇ ಇದೆ ಆದರೆ, ಚೀನಾ ಅದಕ್ಕೆ ಕ್ಯಾರೆ ಎನ್ನುತ್ತಿಲ್ಲ.
ಡಿಸ್ಪಾಂಗ್ ಅಥವಾ ದೋಕ್ಲಾಮ್?
ಭಾರತ ಹಾಗೂ ಚೀನಾ ಶಾಂತಿಯುತವಾಗಿ ಮಾತುಕತೆ ನಡೆಸಬೇಕೆಂದರೆ ಚೀನಾ ಮೇ 5ರಂದು ಅತಿಕ್ರಮಿಸಿಕೊಂಡಿರುವ ಭಾರತದ ಭೂಪ್ರದೇಶದಲ್ಲಿ ಯಥಾ ಸ್ಥಿತಿ ಕಾಯ್ದುಕೊಳ್ಳಬೇಕು. (ಸ್ಟೇಟಸ್ ಕ್ಯೂ ಆಂಟೆ- ಅಂತಿಮ ನಿರ್ಧಾರಬರುವವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳುವುದು) ಹಾಗೇನಾದರೂ ಆದರೆ ಚೀನಾಗಿಂತ ಪರಮಸುಖಿ ಇನ್ನೊಬ್ಬರಿಲ್ಲ. 2013ರಲ್ಲಿ ಡಿಸ್ಪಾಂಗ್ ಹಾಗೂ 2017ರಲ್ಲಿ ದೊಕ್ಲಾಮ್ನಲ್ಲಿ ಆಗಿದ್ದು ಅದೇ. ನಾನು ಹೇಳುವುದನ್ನು ಬರೆದಿಟ್ಟುಕೊಳ್ಳಿ, ಡ್ರ್ಯಾಗನ್ ಮತ್ತು ಆನೆ ಎರಡೂ ಗಲ್ವಾನ್, ಹಾಟ್ ಸ್ಪ್ರಿಂಗ್ಸ್ ಮತ್ತು ಪ್ಯಾಂಗಾಂಗ್ ಟಿಎಸ್ಓನಲ್ಲಿ ಪರಸ್ಪರ ಗುರಾಯಿಸುತ್ತಿವೆ.
ಹಾಗೆ ನೋಡಿದರೆ ಮೋದಿ ಹಾಗೂ ಕ್ಸಿ ಜಿನ್ಪಿಂಗ್ ಅವರು ಕೆಲವು ಸಾಮ್ಯತೆಗಳನ್ನು ಹೊಂದಿದ್ದಾರೆ. ಇಬ್ಬರೂ ನಾಯಕರನ್ನು ಬದಲಾಯಿಸುವುದು ಅಸಾಧ್ಯ. ಮೋದಿ ಅವರು ಮುಂದಿನ ನಾಲ್ಕು ವರ್ಷಗಳ ಕಾಲ ಆಡಳಿತ ನಡೆಸುವುದು ಸ್ಪಷ್ಟ. ಆದರೆ, ಕ್ಸಿ ಅವರು ಪಿಎಲ್ಎ ಪಕ್ಷದ ಪಾಲಿಟ್ ಬ್ಯೂರೊ ಬೆಂಬಲಿಸುವವರೆಗೆ ಮಾತ್ರ ಅಧ್ಯಕ್ಷರಾಗಿ ಮುಂದುವರಿಯುತ್ತಾರೆ. ಎರಡೂ ದೇಶಗಳಲ್ಲಿ ನಾಯಕರ ವಿರುದ್ಧ ಟೀಕೆಗಳು ವ್ಯಕ್ತವಾಗುತ್ತಿದ್ದರೂ ಅವರು ಅದನ್ನು ಕಡೆಗಣಿಸುತ್ತಿದ್ದಾರೆ.
ಭಾರತ ಹಾಗೂ ಚೀನಾದಲ್ಲಿ ಪ್ರತ್ಯೇಕ ಕಾನೂನುಗಳಡಿ ಆಳಲ್ಪಟ್ಟಿವೆ. ಯಾವುದೇ ಸಂದರ್ಭದಲ್ಲಿ ಸರ್ಕಾರವನ್ನು ಬೆಂಬಲಿಸುವ ಸಂಪ್ರದಾಯವನ್ನು ಮೊದಲಿನಿಂದಲೂ ಪಾಲಿಸಿಕೊಂಡು ಬಂದಿದೆ. ಅದೇ ಬೆಂಬಲದಿಂದ ಮೋದಿ ಅವರು ಭಾರತ-ಚೀನಾ ನಡುವಿನ ಬಿಕ್ಕಟ್ಟನ್ನು ಇತ್ಯರ್ಥ ಮಾಡಿಕೊಳ್ಳುತ್ತಾರೆ. ಆದರೆ, ಗಡಿಯಲ್ಲಿ ಏನಾಗುತ್ತಿದೆ ಎಂಬ ಪಾರದರ್ಶಕತೆಯನ್ನು ಮೋದಿ ಅವರು ಕಾಪಾಡಿಕೊಳ್ಳಬೇಕು. ವಾಸ್ತವ ಸ್ಥಿತಿ ಏನಿದೆಯೋ ಅದನ್ನು ದೇಶದ ಜನರಿಗೆ ತಿಳಿಸಬೇಕು.
ಈ ಚದುರಂಗದ ಆಟದಲ್ಲಿ ಚೀನಾ ರಹಸ್ಯವನ್ನು ಕಾಯ್ದುಕೊಂಡಿದೆ. ಅದರ ಫಲ ಇನ್ನಷ್ಟು ರಹಸ್ಯವಾಗಿಯೇ ಉಳಿಯಲಿದೆ.
ಕೃಪೆ: pchidambaram.in, Indian express
Twitter @Pchidambaram_IN
ಸುದ್ದಿದಿನ.ಕಾಂ|ವಾಟ್ಸಾಪ್|9980346243