ಭಾವ ಭೈರಾಗಿ

ಕವಿತೆ | ಪಿಟೀಲು ಬಿಟ್ಟು ಏಳುತ್ತಿಲ್ಲ

Published

on

  • ಸಂತೋಷ್ ಉಂಡಾಡಿ

ರೋಮ್ ಹೊತ್ತಿ ಉರಿಯುತ್ತಿರುವಾಗ
ನೀರೊ ಪಿಟೀಲು ನುಡಿಸುತ್ತಿದ್ದನಂತೆ
ಪ್ರಜೆಗಳು ಸಂಭ್ರಮಿಸುತಿದ್ದರಂತೆ
ಇಲ್ಲಿಯೂ ಹಾಗೆ..!!
ಹೊತ್ತಿ ಉರಿಯುತಿದೆ ರಾಜ್ಯ
ದ್ವೇಷ ಕಾರುತಿವೆ ಮನಸುಗಳು
ಆದರೆ ನಮ್ಮ ನೀರೊ..!!!

ದಾಡಿ ನೀವಿಕೊಳ್ಳುತ್ತಿದ್ದಾನೆ, ವೇಷ ಬದಲಿಸುತ್ತಿದ್ದಾನೆ ನವಿಲಿಗೆ ಅಕ್ಕಿ ತಿನ್ನಿಸುತ್ತಾ ಹಾಯಾಗಿ ಕುಳಿತಿದ್ದಾನೆ..!!

ಮುಂದಿನ ಚುನಾವಣೆಗಾಗಿ ತಯಾರಿ ನಡೆಸಿದ್ದಾನೆ
ಸಮರ ಸೇನಾನಿ, ಹುಡುಕುತ್ತಿದ್ದಾನೆ ಹೊಸ ಕತೆಯ
ಹಾವಭಾವಕ್ಕೆನೂ ಕಮ್ಮಿಯಿಲ್ಲ, ಆವೇಶಕ್ಕೂ ಕೊರತೆ ಇಲ್ಲ..!!!

ಹೊಗಳು ಭಟರು, ವಂದಿಮಾಗಧರು
ಪುಂಖಾನುಪುಂಖವಾಗಿ, ಜಯಕಾರ ಹಾಕುತ್ತಿದ್ದಾರೆ
ಅಗ್ನಿ ಜ್ವಾಲೆಗಳು ಮಾತ್ರ ನಿಲ್ಲುತ್ತಿಲ್ಲ..!!!

ಕರುಣೆ ಒಲವುಗಳ ಮಾತೇ ಇಲ್ಲ.
ಸತ್ಯದ ದಹನ ಮಾತ್ರ ನಿತ್ಯ ನಿರಂತರ
ಆದರೂ ನಮ್ಮ ನೀರೊ ಪಿಟೀಲು ಬಿಟ್ಟು ಏಳುತ್ತಿಲ್ಲ, ನವಿಲು ನರ್ತಿಸುತ್ತಿಲ್ಲ…!!!

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Trending

Exit mobile version